‘ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು’; ವೈರಲ್ ಆಯ್ತು ರವಿ ಬಸ್ರೂರು ಹೇಳಿದ್ದ ಮಾತು

‘ಸಲಾರ್’ ಸಿನಿಮಾದ ಟ್ರೇಲರ್ ನೋಡಿದ ಅನೇಕರಿಗೆ ‘ಉಗ್ರಂ’ ಸಿನಿಮಾ ನೆನಪಾಗಿದೆ. ಆ ಚಿತ್ರದಲ್ಲಿ ಇದ್ದ ಫ್ರೆಂಡ್​ಶಿಪ್ ಕಥೆ ‘ಸಲಾರ್’ ಸಿನಿಮಾದ ಟ್ರೇಲರ್​ನಲ್ಲೂ ಹೈಲೈಟ್ ಆಗಿದೆ. ಕೆಲವು ವರ್ಷಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ ಮಾತನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ.

‘ಉಗ್ರಂ ರಿಮೇಕ್ ಅನ್ನೋದು ಎಲ್ಲರಿಗೂ ಗೊತ್ತು’; ವೈರಲ್ ಆಯ್ತು ರವಿ ಬಸ್ರೂರು ಹೇಳಿದ್ದ ಮಾತು
ರವಿ ಬಸ್ರೂರ್, ಪ್ರಶಾಂತ್​ ನೀಲ್, ಪ್ರಭಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 02, 2023 | 11:30 AM

ಶ್ರೀಮುರಳಿ, ತಿಲಕ್ ಶೇಖರ್, ಹರಿಪ್ರಿಯಾ ಮೊದಲಾದವರು ನಟಿಸಿದ್ದ ‘ಉಗ್ರಂ’ ಸಿನಿಮಾ (Ugram Movie) ರಿಲೀಸ್ ಆಗಿದ್ದು 2014ರಲ್ಲಿ. ಈ ಚಿತ್ರ ಥಿಯೇಟರ್​ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆದರೆ, ಪೈರಸಿ ಕಾಪಿ ಎಲ್ಲಾ ಮೊಬೈಲ್​ಗಳಲ್ಲಿ ಹರಿದಾಡಿತು. ಸಿನಿಮಾ ಯೂಟ್ಯೂಬ್​ನಲ್ಲಿ ರಿಲೀಸ್ ಆಯಿತು. ಆಗ ಜನರು ಸಿನಿಮಾ ಇಷ್ಟಪಟ್ಟರು. ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತು. ಆ ಬಳಿಕ ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಮಾಡಿದರು. ಈ ಸಿನಿಮಾಗಳಿಂದ ಇತಿಹಾಸವೇ ಸೃಷ್ಟಿ ಆಯಿತು. ಈಗ ಅವರ ನಿರ್ದೇಶನದ ‘ಸಲಾರ್’ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ. ಈ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ‘ಉಗ್ರಂ’ ಶೇಡ್ ಎದ್ದು ಕಾಣಿಸಿದೆ.

ಅಗಸ್ತ್ಯ ಎನ್ನುವ ವ್ಯಕ್ತಿ ಗೆಳೆಯ ಬಾಲಾನಿಗಾಗಿ ಜೀವನವನ್ನೇ ಸವೆಸುತ್ತಾನೆ. ಬಾಲನಿಗೋಸ್ಕರ ಅಗಸ್ತ್ಯ ರೌಡಿಸಂ ಆರಂಭಿಸುತ್ತಾನೆ. ಈ ಸಿನಿಮಾ ಸಖತ್ ರಗಡ್ ಆಗಿತ್ತು. ‘ಕೆಜಿಎಫ್ 2’ ರಿಲೀಸ್​ಗೂ ಮೊದಲೇ ‘ಸಲಾರ್’ ಸೆಟ್ಟೇರಿತ್ತು. ಇದು ‘ಉಗ್ರಂ’ ಸಿನಿಮಾ ರಿಮೇಕ್ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ತಂಡ ಇದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಆದರೆ, ರವಿ ಬಸ್ರೂರು ಮಾತ್ರ ಅಸಲಿ ವಿಚಾರವನ್ನು ಒಪ್ಪಿಕೊಂಡಿದ್ದರು.

‘ಉಗ್ರಂ’ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಪ್ರಶಾಂತ್ ನೀಲ್ ಜೊತೆ ಸಂಗೀತ ನಿರ್ದೇಶಕನಾಗಿ ರವಿ ಬಸ್ರೂರು ಕೆಲಸ ಮಾಡಿದರು. ‘ಸಲಾರ್’ ಚಿತ್ರಕ್ಕೂ ಅವರದ್ದೇ ಸಂಗೀತ ಸಂಯೋಜನೆ ಇದೆ. ‘ಸಲಾರ್’ ಸೆಟ್ಟೇರಿದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರವಿ ಬಸ್ರೂರು ಅವರಿಗೆ ಪ್ರಶ್ನೆ ಒಂದು ಎದುರಾಗಿತ್ತು. ‘ಇದು ಉಗ್ರಂ ರಿಮೇಕ್​ ಹೌದಾ’ ಎಂದು ಪ್ರಶ್ನೆ ಕೇಳಲಾಯಿತು.

ಇದಕ್ಕೆ ರವಿ ಬಸ್ರೂರು ಅವರು ನೇರ ಮಾತುಗಳಲ್ಲಿ ಉತ್ತರ ನೀಡಿದ್ದರು. ‘ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ರಿಮೇಕ್ ಆದರೂ ಇವರು ಹೇಗೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಿದೆ’ ಎಂದಿದ್ದರು ರವಿ ಬಸ್ರೂರು. ಟ್ರೇಲರ್ ನೋಡಿದ ಅನೇಕರು ಈ ಮಾತನ್ನು ನೆನಪಿಸಿಕೊಳ್ಳುತ್ತಿದ್ದಾರೆ.

‘ಉಗ್ರಂ’ ಸಿನಿಮಾದಲ್ಲಿರುವ ಫ್ರೆಂಡ್​ಶಿಪ್ ಕಥೆಯನ್ನು ಬೇರೆ ರೀತಿಯಲ್ಲಿ ಹೇಳುವ ಪ್ರಯತ್ನವನ್ನು ಪ್ರಶಾಂತ್ ನೀಲ್ ಮಾಡುತ್ತಿರಬಹುದು ಎಂದು ಟ್ರೇಲರ್ ನೋಡಿದವರು ಊಹಿಸಿದ್ದಾರೆ. ‘ಸಲಾರ್’ ಟ್ರೇಲರ್​ನಲ್ಲಿ ‘ಉಗ್ರಂ’ ಸಿನಿಮಾದ ಛಾಯೆ ಕಾಣಿಸಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಸಲಾರ್’ ಸಿದ್ಧವಾಗಿದೆ.

‘ಸಲಾರ್’ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಂಡಿಲ್ಲ. ಪ್ರಭಾಸ್, ಪೃಥ್ವಿರಾಜ್ ಗೆಳೆಯರಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿ ಪಾತ್ರ ಮಾಡುತ್ತಿದ್ದಾರೆ. ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕೆ ಇದೆ. ಅದ್ದೂರಿ ಸೆಟ್​ಗಳು ಗಮನ ಸೆಳೆದಿವೆ. ಮೇಕಿಂಗ್ ಅದ್ದೂರಿಯಾಗಿದ್ದರೂ ‘ಕೆಜಿಎಫ್ 2’ ಶೇಡ್ ಕಾಣಿಸಿರುವುದರಿಂದ ಅನೇಕರು ಬೇಸರಗೊಂಡಿದ್ದಾರೆ. ಡಿಸೆಂಬರ್ 22ರಂದು ಸಿನಿಮಾ ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ಉಗ್ರಂ’ನಿಂದ ‘ಸಲಾರ್’ ಚಿತ್ರದವರೆಗೆ: ಪ್ರಶಾಂತ್ ನೀಲ್​ ಸಿನಿಮಾಗೆ ಈ ಹೀರೋ ಪಾತ್ರಗಳೇ ಸ್ಫೂರ್ತಿ

ಇತ್ತೀಚೆಗೆ ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾ ಮೇಕಿಂಗ್ ಬಗ್ಗೆ ಮಾತನಾಡಿದ್ದರು. ‘ಹೀರೋನ ವಿಲನ್ ರೀತಿ ತೋರಿಸೋದು ನನಗೆ ಇಷ್ಟ. ಅದುವೇ ನನ್ನ ಸಿನಿಮಾದ ಶಕ್ತಿ ಎಂದಿದ್ದರು. ಅದು ‘ಸಲಾರ್’ ಸಿನಿಮಾದಲ್ಲೂ ಮುಂದುವರಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:08 am, Sat, 2 December 23

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು