AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಂಜಿ ರಸ್ತೇಲಿ ಯಶ್ ಮನೆ, ಸೈಟ್ ಕೊಡ್ಸಿದ್ದಾನೆ’; ಯಾರಿಗೂ ಗೊತ್ತಿಲ್ಲದ ವಿಚಾರ ಹೇಳಿದ ಪುಷ್ಪಾ

ಯಶ್ ಮತ್ತು ಅವರ ತಾಯಿ ಪುಷ್ಪಾ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗಿತ್ತು. ಪುಷ್ಪಾ ಅವರು ಯಶ್ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದಕ್ಕೆ ಪುಷ್ಪಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಮಗ ತಮಗಾಗಿ ಕೊಡಿಸಿದ ಮನೆ ಹಾಗೂ ಸೈಟ್ ಬಗ್ಗೆ ಪುಷ್ಪಾ ಮಾತನಾಡಿದ್ದಾರೆ.

‘ಎಂಜಿ ರಸ್ತೇಲಿ ಯಶ್ ಮನೆ, ಸೈಟ್ ಕೊಡ್ಸಿದ್ದಾನೆ’; ಯಾರಿಗೂ ಗೊತ್ತಿಲ್ಲದ ವಿಚಾರ ಹೇಳಿದ ಪುಷ್ಪಾ
ಯಶ್-ಪುಷ್ಪಾ
ರಾಜೇಶ್ ದುಗ್ಗುಮನೆ
|

Updated on:Jul 11, 2025 | 11:30 AM

Share

ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ತಾಯಿ ಪುಷ್ಪಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಕಾರಣ ಪುಷ್ಪಾ (Pushpa) ಅವರು ಮಾತನಾಡುತ್ತಿರುವ ರೀತಿ. ಮಗನ ಸಿನಿಮಾಗೆ ಹಾಗೂ ಮಗನಿಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದರು. ಆದರೆ, ಅವರು ಹೀಗೆ ನಡೆದುಕೊಳ್ಳುವುದಕ್ಕೂ ಒಂದು ಕಾರಣ ಇದೆ ಎಂದು ಪುಷ್ಪಾ ಹೇಳಿದ್ದಾರೆ. ಅಲ್ಲದೆ, ಎಂಜಿ ರಸ್ತೆಯಲ್ಲಿ ಯಶ್ ಮನೆ ಕೊಡಿಸಿರುವ ವಿಚಾರವನ್ನೂ ಅವರು ರಿವೀಲ್ ಮಾಡಿದ್ದಾರೆ.

ಯಶ್ ಬಗ್ಗೆ ಪುಷ್ಪಾ ನೆಗೆಟಿವ್ ಮಾತನಾಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರ ಅವರ ಕಿವಿಗೂ ಬಿದ್ದಿದೆಯಂತೆ. ‘ನಾವು ಯಾರಿಗೋಸ್ಕರವೂ ಬದುಕಬಾರದು. ಮನುಷ್ಯರ ಬಾಯಿ ಮುಚ್ಚಿಸಲಾಗದು. ಕೆಲವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಏನಿದು ತಾಯಿ ಆಗಿ ಮಗನ ಬಗ್ಗೆ ಈ ರೀತಿ ಮಾತನಾಡುತ್ತಾರಲ್ಲ ಎಂದು ಅನೇಕರಿಗೆ ಅನಿಸಿರಬಹುದು. ನಾನು ಹಾಗೂ ಯಶ್ ಜಗಳ ಆಡೋದು ಗುರಡ ರಾಮ್​ಗೂ ಇಷ್ಟ ಆಗುತ್ತಿರಲಿಲ್ಲ. ನಾನು ಯಾಕೆ ಹಾಗೆ ಮಾಡುತ್ತಿದ್ದೆ ಅನ್ನೋದು ಈಗ ರಾಮ್​ಗೆ ಗೊತ್ತಾಗಿದೆ. ನಾನು ಯಶ್​ನ ಪ್ಯಾಂಪರ್​ ಮಾಡಲ್ಲ. ಜೊತೆಗೆ ಅವನಿಗೆ ಕಷ್ಟ ಕೊಡಬಾರದು ಅನ್ನೋದು ನನ್ನ ಪಾಲಿಸಿ. ಪ್ರತಿ ವಿಚಾರವನ್ನು ಜನರು ಟೀಕೆ ಮಾಡುತ್ತಾರೆ. ಅವನು ಬೇರೆ ಸಾಧನೆ ಮಾಡುತ್ತಾ ಇದ್ದಾನೆ. ಅವನಿಗೆ ಈ ಕಷ್ಟ ಕೊಟ್ಟರೆ ಹೇಗೆ’ ಎಂದಿದ್ದಾರೆ ಅವರು.

ಪುಷ್ಪಾ ಮಾತನಾಡಿದ ವಿಡಿಯೋ

‘ನಾನು ಹಾಸನದವಳು. ನಾನು ಹುಟ್ಟಿದ್ದು ಹಾಡವಳ್ಳಿ. ಅಲ್ಲಿ ನನ್ನ ತಂದೆ ರೈಲ್ವೆಯಲ್ಲಿ ಇದ್ದರು. ಈಗ ಹಾಸನದ ಎಂಜಿ ರೋಡ್​ನಲ್ಲಿ ಯಶ್ ಮನೆ ಕೊಡಿಸಿದ್ದಾನೆ. ನಾನು ಅಲ್ಲಿಯೇ ಇರೋದು. ಮನೆ ಪಕ್ಕದಲ್ಲೇ ದೊಡ್ಡ ಸೈಟ್ ಕೂಡ ಇದೆ. ಅದನ್ನೂ ಯಶ್ ಕೊಡಿಸಿದ್ದಾನೆ. ಅಮ್ಮ ಇದೆಲ್ಲ ಬೇಕಾ ಎಂದು ಕೇಳಿದ. ಬೇಕು ಕೊಡಿಸು ಎಂದೆ, ಮರುಮಾತಾಡದೆ ಕೊಡಿಸಿದ’ ಎಂದು ಪುಷ್ಪಾ ಹೇಳಿದ್ದಾರೆ. ಹಾಸನದ ಪಾಶ್ ಏರಿಯಾಗಳಲ್ಲಿ ಈ ಎಂಜಿ ರಸ್ತೆ ಇದೆ.

ಇದನ್ನೂ ಓದಿ
Image
ನಟ ದರ್ಶನ್ ಬಳಿಯೂ ಇತ್ತು ಹಮ್ಮರ್; ಮಾರಿದ್ದು ಏಕೆ?
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ತಿರುವು; ಭೂಮಿಕಾಗೆ ಅವಳಿ ಮಕ್ಕಳು
Image
‘ಕೆಡಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಬಾಲಿವುಡ್ ಬಗ್ಗೆ ಸಂಜಯ್ ದತ್ ಬೇಸರ
Image
TRPಯಲ್ಲಿ ಇತಿಹಾಸ; ಮೊದಲ ವಾರ ಎರಡಂಕಿ ರೇಟಿಂಗ್ ಪಡೆದು ನಂಬರ್ 1 ಆದ ‘ಕರ್ಣ’

ಇದನ್ನೂ ಓದಿ: ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?

ಪುಷ್ಪಾ ಅವರು ಹಾಸನದಲ್ಲಿ ತೋಟ ಮಾಡಿದ್ದಾರೆ. ಅಲ್ಲಿ ಅವರು ತೋಟದ ಕೆಲಸಗಳನ್ನು ಮಾಡುತ್ತಾರೆ. ಈ ಕಾರಣಕ್ಕೆ ಅವರು ಹಾಸನದಲ್ಲೇ ಇರುತ್ತಾರೆ. ಅಲ್ಲಿ ಬಾಡಿಗೆ ಮನೆಯಲ್ಲಿ ಇರೋಕೆ ಪುಷ್ಪಾಗೆ ಇಷ್ಟ ಇಲ್ಲ. ಹೀಗಾಗಿ, ಸ್ವಂತ ಮನೆ ಖರೀದಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:36 am, Fri, 11 July 25

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?