‘ಒದೆ ತಿಂತೀಯ, ಅವನನ್ನ ಬದುಕೋಕೆ ಬಿಡಲ್ಲ’: ಚೇತನ್ ವಿರುದ್ಧ ಸಾರಾ ಕೆಂಡ
Sa Ra Govindu-Chetan Ahimsa: ಚೇತನ್ ಅಹಿಂಸ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ. ಇದೀಗ ರಾಜ್ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ಬಾರಿ ಚೇತನ್ಗೆ ಒದೆ ಬೀಳುವುದು ಖಂಡಿತ’ ಎಂದಿದ್ದಾರೆ.

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ನಿನ್ನೆ ಡಾ ರಾಜ್ಕುಮಾರ್ (Dr Rajkumar) ಸಮಾಧಿಯ ಬಗ್ಗೆ ಮಾಡಿರುವ ಪೋಸ್ಟ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚೇತನ್ ಅಹಿಂಸ ವಿರುದ್ಧ ಈಗಾಗಲೇ ಕೆಲ ಕನ್ನಡಪರ ಸಂಘಟನೆಗಳು, ರಾಜ್ಕುಮಾರ್ ಅಭಿಮಾನಿಗಳ ಸಂಘಗಳು ಪೊಲೀಸ್ ಠಾಣೆಯಲ್ಲಿ ಮತ್ತು ಚಲನಚಿತ್ರ ಸಂಘಗಳಿಗೆ ದೂರು ನೀಡಿವೆ. ಇದೀಗ ರಾಜ್ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ಬಾರಿ ಚೇತನ್ಗೆ ಒದೆ ಬೀಳುವುದು ಖಂಡಿತ’ ಎಂದಿದ್ದಾರೆ.
‘ಈ ಹಿಂದೆ ಗೌರಿ ಹತ್ಯೆ ನಡೆದ ಸಂದರ್ಭದಲ್ಲಿ ಆತ ವಾಟಾಳ್ ನಾಗರಾಜ್ ಜೊತೆಗೆ ನಡೆದುಕೊಂಡ ರೀತಿಗೆ ಅಂದೇ ನನ್ನ ಕೈಯಲ್ಲಿ ಒದೆ ತಿನ್ನುತ್ತಿದ್ದ ಆದರೆ ಅಂದು ಪೊಲೀಸರು ಆತನನ್ನು ಕಾಪಾಡಿದರು. ಆದರೆ ಈಗ ಖಂಡಿತ ಒದೆ ತಿನ್ನುತ್ತಾನೆ. ಆತ ಮಾತನಾಡಿರುವುದು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ ರಾಜ್ಕುಮಾರ್ ಅವರ ಬಗ್ಗೆ. ಅವರ ಸಾಧನೆ, ಸೇವೆಯ ಬಗ್ಗೆ ಎಳ್ಳಷ್ಟೂ ಸಹ ಆತನಿಗೆ ಗೊತ್ತಿಲ್ಲ. ಈ ಬಾರಿ ಜನ, ಅಭಿಮಾನಿಗಳು ಸುಮ್ಮನೆ ಬಿಡಲ್ಲ. ಸಾಮಾಜಿಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಅವನನ್ನು ಕೂಡಲೇ ಗಡಿಪಾರು ಮಾಡಬೇಕು, ಅವನು ರಾಜ್ಯದಲ್ಲೇ ಇದ್ದರೆ ಅವನನ್ನು ಬದುಕಲು ಬಿಡಲ್ಲ’ ಎಂದು ಸಾರಾ ಗೋವಿಂದು ಹೇಳಿದ್ದಾರೆ.
‘ಬಹಳಷ್ಟು ಜನರನ್ನು ಆತನ ಮಾತು ಕೆರಳಿಸಿದೆ. ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಕರ್ನಾಟಕಕ್ಕೆ ಅವನ (ಚೇತನ್ ಅಹಿಂಸ) ಕೊಡುವೆ ಏನು? ಎಷ್ಟು ಸಿನಿಮಾ ಮಾಡಿದ್ದಾನೆ ಅವನು? ತಿರ್ಕೋಂಡು ತಿಂತಿದ್ದಾನೆ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಿದ್ದೀಯ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ಆತನೊಬ್ಬ ನಿರುದ್ಯೋಗಿ, ಕೈಯಲ್ಲಿ ಮಾಡೋಕೆ ಕೆಲಸ ಇಲ್ಲ, ಮೊದಲು ಕೆಲಸ ಹುಡುಕಿಕೊ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು’ ಎಂದಿದ್ದಾರೆ.
‘ಹೊರದೇಶದಲ್ಲಿ ಹುಟ್ಟಿಬಂದು ಅಲ್ಲಿನ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾನೆ. ಅವನಿಗೆ ಇಲ್ಲಿನ ಸಂಸ್ಕೃತಿ, ಸಂಸ್ಕಾರ ಇಲ್ಲ. ಅಣ್ಣಾವ್ರಿಗೆ ಕೊಟ್ಟಿರುವ ಪ್ರಶಸ್ತಿಗಳ ಬಗ್ಗೆ ಮಾತನಾಡುತ್ತಾನೆ ಅವನು. ಭಾವನಾತ್ಮಕವಾಗಿ ನೋಡಬೇಡಿ ಅನ್ನೋದು ಸಹ ತಪ್ಪು. ನಾವು ಭಾವನಾತ್ಮಕವಾಗಿಯೇ ನೋಡುವುದು. ಅಣ್ಣಾವ್ರು, ವಿಷ್ಣುವರ್ಧನ್ ಅವರಂಥಹಾವರನ್ನು ಸಹ ನಾವು ನೆನಪಿಸಿಕೊಳ್ಳದೇ ಹೋದರೆ ಹೇಗೆ? ಚೇತನ್, ಅಣ್ಣಾವ್ರ ಬಗ್ಗೆ ಮಾತನಾಡಿ ಬಹಳ ಚಿಕ್ಕವನಾಗಿದ್ದಾನೆ. ಅವನೊಬ್ಬ ಶುದ್ಧ ಹುಚ್ಚ, ಪ್ರಚಾರ ಪಡೆಯಲು ಮಾತ್ರವೇ ಆತ ಹೀಗೆಲ್ಲ ಮಾಡ್ತಿದ್ದಾನೆ. ನಿಜವಾಗಿಯೂ ಕನ್ನಡಪರ ಆಗಿದ್ದರೆ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವವರ ಮುಂದೆ ಹೋಗಿ ಧರಣಿ ಮಾಡು, ನಿನ್ನ ಹಿಂದೆ ನಾಲ್ಕು ಜನ ಇಲ್ಲ’ ಎಂದೆಲ್ಲ ಕಟುವಾಗಿಯೇ ಸಾರಾ ಗೋವಿಂದು ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




