ಚಿಂತಾಜನಕ ಸ್ಥಿತಿಯಲ್ಲಿ ನಟ ಸತ್ಯಜಿತ್​; ಕಡುಕಷ್ಟದಲ್ಲೂ ಬರಲಿಲ್ಲ ಮಗಳು

TV9 Digital Desk

| Edited By: ಮದನ್​ ಕುಮಾರ್​

Updated on:Oct 09, 2021 | 3:30 PM

ಹಿರಿಯ ನಟ ಸತ್ಯಜಿತ್​ ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು.

ಚಿಂತಾಜನಕ ಸ್ಥಿತಿಯಲ್ಲಿ ನಟ ಸತ್ಯಜಿತ್​; ಕಡುಕಷ್ಟದಲ್ಲೂ ಬರಲಿಲ್ಲ ಮಗಳು
ಸತ್ಯಜಿತ್​
Follow us


ಕನ್ನಡದ ಹಿರಿಯ ನಟ ಸತ್ಯಜಿತ್​ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಇಂದು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಆರೋಗ್ಯ ಕೈಕೊಟ್ಟಿತು. ಚಿಕಿತ್ಸೆಗೆ ಹಣ ಇಲ್ಲದೇ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇದರ ಜೊತೆಗೆ ಕುಟುಂಬದ ಸದಸ್ಯರ ಜೊತೆಗೂ ಮನಸ್ತಾಪ ಆಗಿದೆ. ಈಗ ಸತ್ಯಜಿತ್​ ಆರೋಗ್ಯ ತೀರಾ ಹದಗೆಟ್ಟಿದೆ ಇಂಥ ಸಂದರ್ಭದಲ್ಲಿಯೂ ಅವರ ಪುತ್ರಿ ಆಗಮಿಸಿಲ್ಲ.

ಈ ಬಗ್ಗೆ ಸತ್ಯಜಿತ್​ ಅವರ ಪುತ್ರ ಆಕಾಶ್​ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ಸ್ಟ್ರೋಕ್ ಆಗಿರೋ ಕಾರಣ ಐಸಿಯುನಲ್ಲಿ ಅಡ್ಮಿಟ್ ಮಾಡಿದ್ದೇವೆ. ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ಹಾರ್ಟ್ ಸ್ಟ್ರೋಕ್ ಆಗಿದೆ. ಹಾರ್ಟ್ ರೇಟ್ ತುಂಬಾ ಕಡಿಮೆ ಆಗಿದೆ. ಬಿಪಿ ಫುಲ್ ಲೋ ಆಗಿದೆ. ಮಾನಸಿಕವಾಗಿ ತುಂಬಾ ನೊಂದಿದ್ದಾರೆ’ ಎಂದು ಆಕಾಶ್​ ಹೇಳಿದ್ದಾರೆ.

‘ಮಗಳ ವಿಷಯದಲ್ಲಿ ತುಂಬಾ ನೋವು ಪಟ್ಟಿದ್ದರು. ಇಂತಹ ಟೈಂನಲ್ಲೂ ಮಗಳು ಬಂದಿಲ್ಲ. ಸದ್ಯ ಅಪ್ಪ ಏನೂ ಮಾತಾಡ್ತಿಲ್ಲ. ಡಯಾಲಿಸಿಸ್ ಮಾಡಲೂ ಆಗುತ್ತಿಲ್ಲ. ಯಾವುದೇ ಚಿಕಿತ್ಸೆ ಪ್ರಯೋಜನ ಆಗ್ತಿಲ್ಲ ಅಂತ ಡಾಕ್ಟರ್ ಸಹ ಹೇಳಿದ್ದಾರೆ. ಆರೋಗ್ಯ ಕ್ಷಣ ಕ್ಷಣಕ್ಕೂ ಚಿಂತಾಜನಕವಾಗುತ್ತಿದೆ’ ಎಂದು ಸತ್ಯಜಿತ್​ ಪುತ್ರ ಆಕಾಶ್​ ಮಾಹಿತಿ ನೀಡಿದ್ದಾರೆ.

ಸತ್ಯಜಿತ್​ ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಈಗ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ ಸತ್ಯಜಿತ್​ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿದೆ. ಹಲವು ದಿನಗಳಿಂದ ಸತ್ಯಜಿತ್​ಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ.​ ಒಂದು ಕಾಲದಲ್ಲಿ ಅವರು ಬಹು ಬೇಡಿಕೆಯ ಫೋಷಕ ನಟನಾಗಿದ್ದರು. ನೂರಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಇದನ್ನೂ ಓದಿ:

ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada