Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ

2021ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ 100ಕ್ಕೂ ಅಧಿಕ! ಡಬ್ಬಿಂಗ್​ ಚಿತ್ರಗಳು ಮತ್ತು ಡಿಸೆಂಬರ್​ ಕೊನೇ ವಾರದಲ್ಲಿ ರಿಲೀಸ್​ ಆಗುವ ಸಿನಿಮಾಗಳನ್ನೂ ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ.

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ
Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು
Follow us
TV9 Web
| Updated By: ಮದನ್​ ಕುಮಾರ್​

Updated on: Dec 25, 2021 | 4:11 PM

ಸಿನಿಮಾ ಎಂದರೆ ಮಾಯಾಲೋಕ. ಇಲ್ಲಿನ ವ್ಯವಹಾರವೂ ಕೆಲವೊಮ್ಮೆ ಮಾಯೆಯಾಗಿಯೇ ಕಾಣುತ್ತದೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡಿ ಗೆಲ್ಲುವುದು ಸುಲಭವಲ್ಲ. ವಾತಾವರಣ ಸರಿಯಿದ್ದಾಗಲೇ ಜನರನ್ನು ಥಿಯೇಟರ್​ಗೆ ಕರೆತರುವುದು ಕಷ್ಟದ ಕೆಲಸ. ಅಂಥದ್ದರಲ್ಲಿ ಕೊರೊನಾದಂತಹ ವಿಘ್ನಗಳು ಎದುರಾದರೆ ದೇವರೇ ಗತಿ. ಅದರ ನಡುವೆಯೂ ಧೈರ್ಯ ಮಾಡಿ ಬಿಡುಗಡೆಯಾದ ಕನ್ನಡ ಸಿನಿಮಾಗಳ ಸಂಖ್ಯೆ 100ಕ್ಕೂ ಅಧಿಕ! ಡಬ್ಬಿಂಗ್​ ಚಿತ್ರಗಳು ಮತ್ತು ಡಿಸೆಂಬರ್​ ಕೊನೇ ವಾರದಲ್ಲಿ ರಿಲೀಸ್​ ಆಗುವ ಸಿನಿಮಾಗಳನ್ನೂ ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಆದರೆ ಗೆಲ್ಲಲು ಸಾಧ್ಯವಾಗಿದ್ದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಆ ಫೈಕಿ ಗಮನ ಸೆಳೆದ ಕನ್ನಡ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ..

ಹೇಗಿತ್ತು ವರ್ಷದ ಆರಂಭ?

2021ರ ವರ್ಷಾರಂಭ ಕನ್ನಡ ಚಿತ್ರರಂಗದ ಪಾಲಿಗೆ ಅಷ್ಟೇನೂ ಆಶಾದಾಯಕ ಆಗಿರಲಿಲ್ಲ. ಜನವರಿ ತಿಂಗಳಲ್ಲಿ ಯಾವುದೇ ಬಿಗ್​ ಸಿನಿಮಾ ತೆರೆಕಾಣಲಿಲ್ಲ. ನಂತರ ಫೆಬ್ರವರಿ ತಿಂಗಳಲ್ಲಿ ಪ್ರಜ್ವಲ್ ​ದೇವರಾಜ್​ ನಟನೆಯ ‘ಇನ್​​ಪೆಕ್ಟರ್​ ವಿಕ್ರಮ್​’ ಚಿತ್ರ ಕೊಂಚ ಸದ್ದು ಮಾಡಿತು. ಫೆ.19ರಂದು ತೆರೆಕಂಡ ‘ಪೊಗರು’ ಸಿನಿಮಾಗೆ ಭರ್ಜರಿ ಓಪನಿಂಗ್​ ಸಿಕ್ಕಿತು. ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆಯ ಕಲೆಕ್ಷನ್​ ಮಾಡುವಲ್ಲಿ ಈ ಸಿನಿಮಾ ಯಶಸ್ವಿ ಆಯಿತು.

ಧೂಳೆಬ್ಬಿಸಿದ ‘ರಾಬರ್ಟ್​’

ಮೊದಲ ಲಾಕ್​ಡೌನ್​ ಬಳಿಕ ಮಂಕಾಗಿದ್ದ ಚಿತ್ರರಂಗಕ್ಕೆ ‘ರಾಬರ್ಟ್​’ ಸಿನಿಮಾದಿಂದ ದೊಡ್ಡ ಚೇತರಿಕೆ ಸಿಕ್ಕಿತು. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರಕ್ಕೆ ಜನರು ಫಿದಾ ಆದರು. ಮಾಸ್​ ಕಥೆಯ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್​, ಫ್ರೆಂಡ್​ಶಿಪ್​ ಮುಂತಾದ ಅಂಶಗಳನ್ನು ಸೇರಿಸಿ ಈ ಚಿತ್ರವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದರು. ಈ ವರ್ಷದ ಬ್ಲಾಕ್​ಬಸ್ಟರ್​ ಚಿತ್ರವಾಗಿ ‘ರಾಬರ್ಟ್​’ ಹೊರಹೊಮ್ಮಿತು.

ಏನಾಯಿತು ‘ಹೀರೋ’ ಕಥೆ?

ರಿಷಬ್​ ಶೆಟ್ಟಿ ನಿರ್ದೇಶನದ ‘ಹೀರೋ’ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಟ್ರೇಲರ್​ನಿಂದ ಗಮನ ಸೆಳೆದಿದ್ದ ಈ ಚಿತ್ರ ಹಾಡುಗಳ ಮೂಲಕವೂ ಮೋಡಿ ಮಾಡಿತ್ತು. ಆದರೆ ಥಿಯೇಟರ್​ನಲ್ಲಿ ‘ಹೀರೋ’ ಆಟ ಅಷ್ಟೇನೂ ಯಶಸ್ವಿ ಆಗಲಿಲ್ಲ. ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್​ ಅವರು ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು.

ಕೊರೊನಾ ಹೊಡೆತಕ್ಕೆ ಸಿಕ್ಕ ‘ಯುವರತ್ನ’

ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಏಪ್ರಿಲ್​ 1ರಂದು ತೆರೆಕಂಡಿತು. ಆದರೆ ಆ ಚಿತ್ರದ ಮೇಲೆ ಕೊರೊನಾದ ಕರಿನೆರಳು ಆವರಿಸಿತು. ಚಿತ್ರ ಬಿಡುಗಡೆ ಆಗುತ್ತಿದ್ದಂತೆಯೇ ಕೊವಿಡ್​ ಎರಡನೇ ಅಲೆ ಜೋರಾಯಿತು. ರಾಜ್ಯ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಿತು. ಅದರ ಪರಿಣಾಮವಾಗಿ ‘ಯುವರತ್ನ’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ.

ಮೆಚ್ಚುಗೆ ಸಿಕ್ಕರೂ ಹಣ ಮಾಡಲಿಲ್ಲ ‘ಪುಕ್ಸಟ್ಟೆ ಲೈಫು’

ಸಂಚಾರಿ ವಿಜಯ್​ ನಟನೆಯ ‘ಪುಕ್ಸಟ್ಟೆ ಲೈಫು’ ಸಿನಿಮಾ ಸೆ.24ರಂದು ತೆರೆಕಂಡಿತು. ಅರವಿಂದ್​ ಕುಪ್ಲೀಕರ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಮರ್ಶಕರಿಂದ ‘ಪುಕ್ಸಟ್ಟೆ ಲೈಫು’ ಸಿನಿಮಾಗೆ ಮೆಚ್ಚುಗೆ ಸಿಕ್ಕಿತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸುವಲ್ಲಿ ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿ.

‘ಸಲಗ’, ‘ಕೋಟಿಗೊಬ್ಬ 3’, ‘ಭಜರಂಗಿ 2’

ಅಕ್ಟೋಬರ್​ ತಿಂಗಳಲ್ಲಿ ಚಂದನವನದ ಚಟುವಟಿಕೆಗಳು ಗರಿಗೆದರಿದ್ದವು. ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ಸಿನಿಮಾಗಳು ತೆರೆಕಂಡವು. ಕಿಚ್ಚ ಸುದೀಪ್​ ನಟನೆಯ ‘ಕೋಟಿಗೊಬ್ಬ 3’ ಚಿತ್ರ ಆಂತರಿಕ ಕಾರಣಗಳಿಂದಾಗಿ ಮೊದಲ ದಿನ ರಿಲೀಸ್​ ಆಗಲು ಸಾಧ್ಯವಾಗಲಿಲ್ಲ. ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಒಂದು ದಿನ ತಡವಾಗಿ ಈ ಚಿತ್ರ ಬಿಡುಗಡೆ ಆಯಿತು. ಸುದೀಪ್​ ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡರು. ಈ ವರ್ಷ ಭರ್ಜರಿ ಗೆಲುವು ದಾಖಲಿಸಿದ ಸಿನಿಮಾಗಳ ಪಟ್ಟಿಯಲ್ಲಿ ‘ಸಲಗ’ ಚಿತ್ರ ಮುಂಚೂಣಿಯಲ್ಲಿದೆ. ದುನಿಯಾ ವಿಜಯ್​ ನಟನೆ, ನಿರ್ದೇಶನದ ಈ ಚಿತ್ರಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿತು. ಅ.29ರಂದು ‘ಭಜರಂಗಿ 2’ ಸಿನಿಮಾ ತೆರೆಕಂಡಿತು. ಮಾರ್ನಿಂಗ್​ ಶೋ ಎಲ್ಲ ಕಡೆ ಹೌಸ್​ ಫುಲ್ ಪ್ರದರ್ಶನ ಕಾಣುತ್ತಿತ್ತು. ಅದರ ಬೆನ್ನಲೇ ಪುನೀತ್​ ನಿಧನದ ಸುದ್ದಿ ಸಿಡಿಲಿನಂತೆ ಬಡಿಯಿತು. ಅದು ಕನ್ನಡ ಚಿತ್ರರಂಗ ಪಾಲಿಗೆ ಕರಾಳ ದಿನವಾಯಿತು.

ಓಟಿಟಿಯಲ್ಲಿ ‘ರತ್ನನ್​ ಪ್ರಪಂಚ’ಕ್ಕೆ ಗೆಲುವು

ಡಾಲಿ ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಯಿತು. ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಪ್ರಸಾರವಾದ ಈ ಚಿತ್ರವನ್ನು ಸಿನಿಪ್ರಿಯರು ಮೆಚ್ಚಿಕೊಂಡರು.

‘ಗರುಡ ಗಮನ ವೃಷಭ ವಾಹನ’ ಮತ್ತು ‘100’

ನಿರ್ದೇಶಕ ರಾಜ್​ ಬಿ. ಶೆಟ್ಟಿ ಅವರ ಬತ್ತಳಿಕೆಯಿಂದ ಬಂದ (ನ.19) ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುವಲ್ಲಿ ಈ ಚಿತ್ರ ಯಶಸ್ವಿ ಆಯಿತು. ಅದೇ ದಿನ ತೆರೆಕಂಡ ‘100’ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನಬೆಂಬಲ ಸಿಗಲಿಲ್ಲ. ವಿಮರ್ಶೆಯ ದೃಷ್ಟಿಯಿಂದ ಆ ಚಿತ್ರ ಗಮನ ಸೆಳೆಯಿತು.

ಸಖತ್​, ದೃಶ್ಯ 2, ಬಡವ ರಾಸ್ಕಲ್​, ರೈಡರ್​, ಮದಗಜ:

ಗಣೇಶ್​ ನಟನೆಯ ‘ಸಖತ್​’ ಸಿನಿಮಾವನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ‘ಮದಗಜ’ ಚಿತ್ರಕ್ಕೆ ಮಾಸ್​ ಓಪನಿಂಗ್​ ಸಿಕ್ಕರೂ ಕೂಡ ನಂತರದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಯಿತು. ‘ದೃಶ್ಯ 2’ ಸಿನಿಮಾಗೆ ವಿಮರ್ಶಕರಿಂದ ಉತ್ತಮ ರೇಟಿಂಗ್​ ಸಿಕ್ಕಿತು. ಆದರೆ ಥಿಯೇಟರ್​ನಲ್ಲಿ ಹೆಚ್ಚು ಮೋಡಿ ಮಾಡಲಿಲ್ಲ. ಡಿ.24ರಂದು ಬಿಡುಗಡೆ ಆಗಿರುವ ‘ಬಡವ ರಾಸ್ಕಲ್​’ ಮತ್ತು ‘ರೈಡರ್​’ ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ:

Drishya 2 Movie Review: ಕೊನೇ ದೃಶ್ಯದವರೆಗೂ ಕೊಲೆ ಕೌತುಕ; ಈ ಬಾರಿ ಕ್ಲೈಮ್ಯಾಕ್ಸ್​ ಇನ್ನಷ್ಟು ರೋಚಕ

100 Movie Review: ಮೆಸೇಜ್​ ಮಾಡಿ ಮೈ ಮರೆಯುವ ಎಲ್ಲರಿಗೂ ‘100’ ಚಿತ್ರವೇ ಒಂದು ಮೆಸೇಜ್​

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್