AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ
ಪುನೀತ್​ ರಾಜಕುಮಾರ್
TV9 Web
| Edited By: |

Updated on: Nov 01, 2021 | 6:09 PM

Share

ಪುನೀತ್​ ರಾಜ್​ಕುಮಾರ್​ ಅವರು 46ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಓರ್ವ ಸ್ಟಾರ್​ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್​ ನಿಧನದ ನಂತರ ಸಾಕಷ್ಟು ವಿಚಾರಗಳು ವೈರಲ್​ ಆಗುತ್ತಿವೆ. ಅವರು ಮಂತ್ರಾಲಯಕ್ಕೆ ತೆರಳಿದಾಗ ವೀಣೆ ಅಲುಗಾಡಿದ್ದು ಅಪಶಕುನದ ಸೂಚಕವಾಗಿತ್ತು ಎಂದು ಬಣ್ಣಿಸಲಾಗುತ್ತಿದೆ. ಈಗ ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾದ ಜೆರ್ಸಿ ಫೋಟೋ ವೈರಲ್​ ಆಗುತ್ತಿದೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು. ‘ಯುವರತ್ನ’ ಅಪ್ಪು ಹೀರೋ ಆಗಿ ನಟಿಸಿದ 29ನೇ ಸಿನಿಮಾ. ಈ ಕಾರಣಕ್ಕೆ ಜೆರ್ಸಿಗೆ ಈ ಸಂಖ್ಯೆ ನೀಡಲಾಗಿತ್ತು. ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು (ಅಕ್ಟೋಬರ್​ 29) ಪುನೀತ್​ ಮೃತಪಟ್ಟಿದ್ದಾರೆ.

46 ವರ್ಷಕ್ಕೆ ಅಪ್ಪು ನಿಧನ ಹೊಂದಿದ್ದಾರೆ. ಅವರು ಮೃತಪಟ್ಟ ದಿನಾಂಕ ಹಾಗೂ ಅವರು ಹುಟ್ಟಿದ ದಿನಾಂಕ ಸೇರಿಸಿದರೆ ಬರುವ ಸಂಖ್ಯೆ ಕೂಡ 46! ಪುನೀತ್​ ಹುಟ್ಟಿದ್ದು ಮಾರ್ಚ್​ 17ರಂದು. ಮೃತಪಟ್ಟಿದ್ದು ಅಕ್ಟೋಬರ್ 29. 29+17= 46. ಅಪ್ಪು ಹುಟ್ಟಿದಾಗ ಅಣ್ಣಾವ್ರ ವಯಸ್ಸು ಕೂಡ 46 ಆಗಿತ್ತು.

ಇನ್ನು, 17ನೇ ತಾರೀಕಿನಂದು ಹುಟ್ಟುವುದು ಅದೃಷ್ಟವಲ್ಲ ಎಂಬ ಥಿಯರಿಯೂ ಹರಿದಾಡುತ್ತಿದೆ. ಪುನೀತ್​ ರಾಜ್​ಕುಮಾರ್​ ಜನಿಸಿದ್ದು ಮಾರ್ಚ್​ 17ರಂದು. ಅವರ ರೀತಿಯೇ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್​ 17ರಂದು. ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್​ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಟ ರಘುವೀರ್​ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೇ ಮೃತಪಟ್ಟಿದ್ದು ಎಂಬುದು ಕಾಕತಾಳೀಯ.

ಇದನ್ನೂ ಓದಿ: Puneeth Rajkumar: ಒಂದೇ ದಿನಾಂಕದಲ್ಲಿ ಜನಿಸಿದ ವಿಜಯ್​, ಅಪ್ಪು, ಚಿರುಗೆ ಇದೆಂಥ ದುರ್ವಿಧಿ; ಕಂಟಕವಾಯ್ತಾ ಸಂಖ್ಯೆ 17?

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ