AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ
ಪುನೀತ್​ ರಾಜಕುಮಾರ್
TV9 Web
| Edited By: |

Updated on: Nov 01, 2021 | 6:09 PM

Share

ಪುನೀತ್​ ರಾಜ್​ಕುಮಾರ್​ ಅವರು 46ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಓರ್ವ ಸ್ಟಾರ್​ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್​ ನಿಧನದ ನಂತರ ಸಾಕಷ್ಟು ವಿಚಾರಗಳು ವೈರಲ್​ ಆಗುತ್ತಿವೆ. ಅವರು ಮಂತ್ರಾಲಯಕ್ಕೆ ತೆರಳಿದಾಗ ವೀಣೆ ಅಲುಗಾಡಿದ್ದು ಅಪಶಕುನದ ಸೂಚಕವಾಗಿತ್ತು ಎಂದು ಬಣ್ಣಿಸಲಾಗುತ್ತಿದೆ. ಈಗ ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾದ ಜೆರ್ಸಿ ಫೋಟೋ ವೈರಲ್​ ಆಗುತ್ತಿದೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು. ‘ಯುವರತ್ನ’ ಅಪ್ಪು ಹೀರೋ ಆಗಿ ನಟಿಸಿದ 29ನೇ ಸಿನಿಮಾ. ಈ ಕಾರಣಕ್ಕೆ ಜೆರ್ಸಿಗೆ ಈ ಸಂಖ್ಯೆ ನೀಡಲಾಗಿತ್ತು. ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು (ಅಕ್ಟೋಬರ್​ 29) ಪುನೀತ್​ ಮೃತಪಟ್ಟಿದ್ದಾರೆ.

46 ವರ್ಷಕ್ಕೆ ಅಪ್ಪು ನಿಧನ ಹೊಂದಿದ್ದಾರೆ. ಅವರು ಮೃತಪಟ್ಟ ದಿನಾಂಕ ಹಾಗೂ ಅವರು ಹುಟ್ಟಿದ ದಿನಾಂಕ ಸೇರಿಸಿದರೆ ಬರುವ ಸಂಖ್ಯೆ ಕೂಡ 46! ಪುನೀತ್​ ಹುಟ್ಟಿದ್ದು ಮಾರ್ಚ್​ 17ರಂದು. ಮೃತಪಟ್ಟಿದ್ದು ಅಕ್ಟೋಬರ್ 29. 29+17= 46. ಅಪ್ಪು ಹುಟ್ಟಿದಾಗ ಅಣ್ಣಾವ್ರ ವಯಸ್ಸು ಕೂಡ 46 ಆಗಿತ್ತು.

ಇನ್ನು, 17ನೇ ತಾರೀಕಿನಂದು ಹುಟ್ಟುವುದು ಅದೃಷ್ಟವಲ್ಲ ಎಂಬ ಥಿಯರಿಯೂ ಹರಿದಾಡುತ್ತಿದೆ. ಪುನೀತ್​ ರಾಜ್​ಕುಮಾರ್​ ಜನಿಸಿದ್ದು ಮಾರ್ಚ್​ 17ರಂದು. ಅವರ ರೀತಿಯೇ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್​ 17ರಂದು. ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್​ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಟ ರಘುವೀರ್​ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೇ ಮೃತಪಟ್ಟಿದ್ದು ಎಂಬುದು ಕಾಕತಾಳೀಯ.

ಇದನ್ನೂ ಓದಿ: Puneeth Rajkumar: ಒಂದೇ ದಿನಾಂಕದಲ್ಲಿ ಜನಿಸಿದ ವಿಜಯ್​, ಅಪ್ಪು, ಚಿರುಗೆ ಇದೆಂಥ ದುರ್ವಿಧಿ; ಕಂಟಕವಾಯ್ತಾ ಸಂಖ್ಯೆ 17?

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು