ಜಾತಿ ಧರ್ಮ ಮೀರಿದ ಅಪ್ಪಟ ನಟ ಝೈದ್ ಖಾನ್; ತಿಮ್ಮಪ್ಪನ ದರ್ಶನ ಪಡೆದು ಪ್ರಚಾರ ಆರಂಭ

| Updated By: ರಾಜೇಶ್ ದುಗ್ಗುಮನೆ

Updated on: Oct 15, 2022 | 10:39 PM

ಝೈದ್ ಖಾನ್ ಬನಾರಸ್ ಸಿನಿಮಾ ಮಾಡಿದಾಗಿನಿಂದಲೂ ಒಬ್ಬ ಕಲಾವಿದನಾಗಿಯೇ ಎಲ್ಲರೊಟ್ಟಿಗೂ ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮ-ಜಾತಿ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವವರಲ್ಲ.

ಜಾತಿ ಧರ್ಮ ಮೀರಿದ ಅಪ್ಪಟ ನಟ ಝೈದ್ ಖಾನ್; ತಿಮ್ಮಪ್ಪನ ದರ್ಶನ ಪಡೆದು ಪ್ರಚಾರ ಆರಂಭ
ಜೈದ್ ಖಾನ್-ಸೋನಲ್
Follow us on

‘ಬನಾರಸ್’ ಸಿನಿಮಾ (Banaras Movie) ರಿಲೀಸ್ ಡೇಟ್ ಸನಿಹವಾಗುತ್ತಿದೆ. ಇದು ಝೈದ್ ಖಾನ್ (Zaid Khan) ಮೊದಲ ಬಾರಿಗೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ. ಅದರಲ್ಲೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ರೆಡಿಯಾಗಿದ್ದಾರೆ. ಮುಂದಿನ ತಿಂಗಳು ಅಂದರೆ ನವೆಂಬರ್ 4ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಮೇಲೆ ಅಬ್ಬರಿಸಲಿದೆ. ಹೀಗಾಗಿ ಸಿನಿಮಾದ ಪ್ರಚಾರ ಕಾರ್ಯವೂ ಅಷ್ಟೇ ಅಬ್ಬರದಿಂದ ಶುರುವಾಗಿದೆ.

ಝೈದ್ ಖಾನ್ ಬನಾರಸ್ ಸಿನಿಮಾ ಮಾಡಿದಾಗಿನಿಂದಲೂ ಒಬ್ಬ ಕಲಾವಿದನಾಗಿಯೇ ಎಲ್ಲರೊಟ್ಟಿಗೂ ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮ-ಜಾತಿ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವವರಲ್ಲ. ಎಲ್ಲಾ ದೇವರಿಗೂ ನಾನು ಭಕ್ತನೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗಣೇಶೋತ್ಸವ ಮಾಡಿ ಎಲ್ಲರ ಗಮನ ಸೆಳೆದಿದ್ದ ಝೈದ್ ಖಾನ್ ಇದೀಗ ತಿರುಪತಿ ತಿಮ್ಮಪ್ಪನ ದರುಶನವನ್ನು ಪಡೆದಿದ್ದಾರೆ.

ಹೌದು, ‘ಬನಾರಸ್’​​ಗಾಗಿ ಎಲ್ಲಾ ರಾಜ್ಯಗಳನ್ನು ಸುತ್ತಿ, ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಾ, ಒಂದಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭಕ್ತಿ ಭಾವದಿಂದ ವಿಸಿಟ್ ಕೊಡುತ್ತಿದ್ದಾರೆ. ಅದರ ಭಾಗವಾಗಿಯೇ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಝೈದ್ ಖಾನ್ ಮತ್ತು ನಟಿ ಸೋನಲ್ ಭೇಟಿ ನೀಡಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆದು, ಸಿನಿಮಾ ಸಕ್ಸಸ್​​ಗಾಗಿ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ
‘ಬನಾರಸ್​’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಝೈದ್ ಖಾನ್ ಮಾತು
ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದ ಲೈವ್ ನೋಡಿ
Zaid Khan: ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಜಮೀರ್​ ಪುತ್ರ ಝೈದ್​ ಖಾನ್​ ಭೇಟಿ; ‘ಬನಾರಸ್​​’ ಬಿಡುಗಡೆಗೆ ಸಜ್ಜು
Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​

ಅದಾದ ಬಳಿಕ ನಲ್ಲೂರಿಗೆ ಭೇಟಿ ನೀಡಿ, ದರ್ಗಾದ ಒಳಗೂ ಪೂಜೆ ಸಲ್ಲಿಸಿದ್ದಾರೆ. ಸೋನಲ್ ಹಾಗೂ ಝೈದ್ ದರ್ಗಾದೊಳಗೆ ಭೇಟಿ ನೀಡಿ, ಅಲ್ಲಿನ ನೀತಿ ನಿಯಮದಂತೆ ಪೂಜೆ ಮಾಡಿ ಬಂದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ನ ಖ್ಯಾತ ಪನೋರಮಾ ಸ್ಟುಡಿಯೋಸ್ ಪಾಲಾದ ‘ಬನಾರಸ್’ ಸಿನಿಮಾ ವಿತರಣೆ ಹಕ್ಕು

ಹೀಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ದೇವರ ಪ್ರಾರ್ಥನೆ ಮಾಡುತ್ತಾ ಬನಾರಸ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ಸಿನಿಮಾ ಟೀಂ ತೊಡಗಿದೆ. ನವೆಂಬರ್ 4ಕ್ಕೆ ಸಿನಿಮಾ ತೆರೆಗೆ ಬರಲಿದೆ. ಜಯತೀರ್ಥ ನಿರ್ದೇಶನ ಮಾಡಿದ್ದು, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಝೈದ್ ಖಾನ್ ಮತ್ತು ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಅಲಿ, ಚಿರಂತ್, ರೋಹಿತ್ ಮುಂತಾದವರ ತಾರಾಗಣ ಇದೆ. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.