ಬಿಗ್​ ಬಾಸ್​ ಮನೆಗೆ ಹಿರಿಯ ನಟ ಅವಿನಾಶ್​? ಈಡೇರುತ್ತಾ ಸ್ಪರ್ಧಿಗಳ ಬೇಡಿಕೆ?

ಪ್ರಶಾಂತ್​ ಸಂಬರಗಿ ಮನೆ ಒಳಗೆ ಬರುತ್ತಿದ್ದಂತೆಯೇ ಯಾರೂ ಅವರನ್ನು ಗಮನಿಸಿಲ್ಲ. ಅವರು ಇದ್ದರೂ ಇಲ್ಲದಂತೆ ಸ್ಪರ್ಧಿಗಳು ನಡೆದುಕೊಂಡಿದ್ದಾರೆ. ಇದನ್ನು ನೋಡಿದ ಪ್ರಶಾಂತ್​ಗೆ ಸಾಕಷ್ಟು ಹಿಂಸೆ ಆಗಿದೆ.

ಬಿಗ್​ ಬಾಸ್​ ಮನೆಗೆ ಹಿರಿಯ ನಟ ಅವಿನಾಶ್​? ಈಡೇರುತ್ತಾ ಸ್ಪರ್ಧಿಗಳ ಬೇಡಿಕೆ?
ನಟ ಅವಿನಾಶ್
Follow us
| Updated By: ಮದನ್​ ಕುಮಾರ್​

Updated on: Jun 29, 2021 | 7:28 AM

ದೊಡ್ಮನೆಗೆ ಯಾರನ್ನು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಡಿಸಬೇಕು ಎಂಬದನ್ನು ನಿರ್ಧಾರ ಮಾಡುವ ಆಯ್ಕೆ ಸ್ಪರ್ಧಿಗಳ ಕೈಯಲ್ಲಿ ಇಲ್ಲ. ಅದನ್ನು, ಬಿಗ್​ ಬಾಸ್​ ನಿರ್ಧರಿಸುತ್ತಾರೆ. ಆದರೆ, ಈಗ ಸ್ಪರ್ಧಿಗಳು ಬಿಗ್​ ಬಾಸ್​ ಎದುರು ಹೊಸ ಬೇಡಿಕೆ ಇಟ್ಟಿದ್ದಾರೆ.  ಹಿರಿಯ ನಟ ಅವಿನಾಶ್​ ಅವರನ್ನು ಮನೆ ಒಳಗೆ ಕಳಿಸುವಂತೆ ಕೋರಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಅವರನ್ನು ಪ್ರ್ಯಾಂಕ್​ ಮಾಡಲಾಗಿದೆ. ಪ್ರಶಾಂತ್ ಅವರನ್ನು ಮೊದಲು ಎಲಿಮಿನೇಟ್​ ಮಾಡಲಾಯಿತು. ಅವರು ಮನೆಯಿಂದ ಹೊರ ಹೋಗುತ್ತಿದ್ದಂತೆಯೇ ಬಿಗ್ ಬಾಸ್​ನ 11 ಸ್ಪರ್ಧಿಗಳಿಗೆ ಸುದೀಪ್ ಸೂಚನೆ ಒಂದನ್ನು ನೀಡಿದ್ದರು. ‘ಪ್ರಶಾಂತ್ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ, ಅವರು ಬಂದ ಕೂಡಲೇ ಪ್ರಶಾಂತ್ ಕಾಣಿಸುತ್ತಿಲ್ಲ ಎಂಬ ರೀತಿಯಲ್ಲಿ ಆ್ಯಕ್ಟ್ ಮಾಡಿ’ ಎಂದು ಕಿಚ್ಚ ಸಲಹೆ ನೀಡಿದರು.

ಪ್ರಶಾಂತ್​ ಮನೆ ಒಳಗೆ ಬರುತ್ತಿದ್ದಂತೆಯೇ ಯಾರೂ ಅವರನ್ನು ಗಮನಿಸಿಲ್ಲ. ಅವರು ಇದ್ದರೂ ಇಲ್ಲದಂತೆ ಸ್ಪರ್ಧಿಗಳು ನಡೆದುಕೊಂಡಿದ್ದಾರೆ. ಇದನ್ನು ನೋಡಿದ ಪ್ರಶಾಂತ್​ಗೆ ಸಾಕಷ್ಟು ಹಿಂಸೆ ಆಗಿದೆ. ತಮ್ಮನ್ನು ಯಾರೂ ಮಾತನಾಡಿಸದೇ ಇದ್ದಿದ್ದನ್ನು ನೋಡಿ ತುಂಬಾನೇ ಬೆಸರಗೊಂಡರು. ಅಲ್ಲದೆ, ಅತ್ತರು ಕೂಡ. ಆದರೂ ಮನೆಯವರು ಸುದೀಪ್​ ಮಾತನ್ನು ಮೀರಿಲ್ಲ.

ಇನ್ನು ರಾತ್ರಿ ವೇಳೆ ಪ್ರಶಾಂತ್​ ಬಂದು ಎಲ್ಲರಿಗೂ ಹಿಂಸೆ ಕೊಡೊಕೇ ಆರಂಭಿಸಿದರು. ಆಗ ಮನೆ ಮಂದಿಯೆಲ್ಲ ‘ಬಿಗ್​ ಬಾಸ್​ ಮನೆಯಲ್ಲಿ ಕೆಟ್ಟ ಶಕ್ತಿ ಇದೆ’  ಕೂಗಿಕೊಂಡರು. ಇದನ್ನು ಕೇಳಿ ಪ್ರಶಾಂತ್​ ಒಮ್ಮೆ ತಲೆಕೆರೆದುಕೊಂಡರು.

ಮರುದಿನ ಗಾರ್ಡನ್​ ಎರಿಯಾದಲ್ಲಿ ಎಲ್ಲರೂ ಕೂತು ಮಾತನಾಡುವಾಗ ಶಮಂತ್​ ಅವರನ್ನು ಪ್ರಶಾಂತ್​ ಟಚ್​ ಮಾಡಿದರು. ‘ನನ್ನನ್ನು ಯಾರೋ ಮುಟ್ಟಿದಂತಾಗುತ್ತಿದೆ. ಆದರೆ, ಯಾರು ಎಂದು ಗೊತ್ತಾಗುತ್ತಿಲ್ಲ’​  ಎಂದು ಶಮಂತ್​ ಕ್ಯಾಮೆರಾ ಮುಂದೆ ಅಳಲು ತೋಡಿಕೊಂಡರು. ಆಗ ಮನೆ ಮಂದಿಯೆಲ್ಲ ‘ಆಪ್ತ ಮಿತ್ರ’ ಸಿನಿಮಾದಲ್ಲಿ ಬರುವ ಹಿರಿಯ ನಟ ಅವಿನಾಶ್​ ಅವರ ಪಾತ್ರವನ್ನು ನೆನೆದರು. ಅಲ್ಲದೆ, ಬಿಗ್​ ಬಾಸ್ ಮನೆ ಒಳಗೂ ಅವರನ್ನು ಕರೆಸುವಂತೆ ಬೇಡಿಕೆ ಇಟ್ಟರು.

ಇದನ್ನೂ ಓದಿ:

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ