AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್​ಗೆ ಮುಂದಿದೆ ಇನ್ನಷ್ಟು ಕಷ್ಟದ ದಿನಗಳು? ಸಿಗಲ್ಲ ಸಿನಿಮಾ ಆಫರ್?

ಶಂಕರ್ ಅವರ ಚಿತ್ರಗಳು ಒಂದು ಕಾಲದಲ್ಲಿ ಬ್ರಾಂಡ್ ಆಗಿದ್ದವು. ಆದರೆ ಇತ್ತೀಚಿನ ಚಿತ್ರಗಳಾದ 'ಇಂಡಿಯನ್ 2' ಮತ್ತು 'ಗೇಮ್ ಚೇಂಜರ್' ನಿರೀಕ್ಷೆಗಳನ್ನು ತಲುಪಿಲ್ಲ. ಇದರಿಂದ ನಿರ್ಮಾಪಕರು ಅವರ ಮುಂಬರುವ ಚಿತ್ರಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. 'ವೀರಯುಗ ನಾಯಗನ್ ವೇಲ್ಪಾರಿ' ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ ಆದರೆ 'ಗೇಮ್ ಚೇಂಜರ್' ಯಶಸ್ಸು ಇದಕ್ಕೆ ನಿರ್ಣಾಯಕವಾಗಿದೆ.

ಶಂಕರ್​ಗೆ ಮುಂದಿದೆ ಇನ್ನಷ್ಟು ಕಷ್ಟದ ದಿನಗಳು? ಸಿಗಲ್ಲ ಸಿನಿಮಾ ಆಫರ್?
ಶಂಕರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 12, 2025 | 6:30 AM

Share

ನಿರ್ದೇಶಕ ಶಂಕರ್ ಅವರ ಹೆಸರು ಒಂದು ಕಾಲದಲ್ಲಿ ಬ್ರಾಂಡ್ ಆಗಿತ್ತು. ಅವರ ಸಿನಿಮಾಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ ಹಲವಾರು ವರ್ಷಗಳಿಂದ ಅವರ ರೇಂಜ್​ನಲ್ಲಿ ಒಂದೇ ಒಂದು ಸಿನಿಮಾ ಬರಲಿಲ್ಲ. ವಿಕ್ರಮ್ ಅಭಿನಯದ ‘ಐ’ ಚಿತ್ರದ ನಂತರ ಶಂಕರ್ ಅವರ ‘ನಂಬನ್’ ಸಿನಿಮಾ ಬಂದು ಹೆಚ್ಚು ಗಮನ ಸೆಳೆದಿಲ್ಲ. ಭಾರೀ ನಿರೀಕ್ಷೆಗಳ ನಡುವೆ ಬಂದ ‘2.0’ ಅಷ್ಟಾಗಿ ಗಮನ ಸೆಳೆದಿಲ್ಲ. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರ್ಮಾಪಕರಿ ಭಯ ಶುರುವಾಗಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು ಮುಂದೆ ಬರುತ್ತಿಲ್ಲ.

ಕಳೆದ ವರ್ಷ ರಿಲೀಸ್ ಆದ ‘ಇಂಡಿಯನ್ 2’ ತೀವ್ರವಾಗಿ ಸೋತಿತ್ತು. ಬಿಗ್ ಬಜೆಟ್​ನಲ್ಲಿ ಬಂದ ಸಿನಿಮಾ ನಷ್ಟ ಉಂಟು ಮಾಡಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಗೇಮ್ ಚೇಂಜರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಫಲಿತಾಂಶದ ಮೇಲೆ ಶಂಕರ್ ಅವರ ವೃತ್ತಿ ಜೀವನ ನಿಂತಿದೆ ಎನ್ನಲಾಗಿದೆ. ಇತ್ತೀಚಿಗೆ ಹೆಚ್ಚಾಗಿ ವಿಎಫ್ ಎಕ್ಸ್ ಚಿತ್ರಗಳನ್ನು ಮಾಡುತ್ತಿರುವ ಶಂಕರ್ ಬಹಳ ವರ್ಷಗಳ ನಂತರ ರಾಜಕೀಯ ಸಿನಿಮಾ ಮಾಡಿದ್ದಾರೆ.

‘ಗೇಮ್ ಚೇಂಜರ್’ ನಂತರ ‘ಇಂಡಿಯನ್ 3’ ಮಾಡಬೇಕಿದೆ. ಸದ್ಯ ಈ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ. ಒಂದು ವೇಳೆ ‘ಗೇಮ್ ಚೇಂಜರ್’ ಮೂಲಕ ನಷ್ಟ ಆದರೆ ‘ಇಂಡಿಯನ್ 3’ ಸೆಟ್ಟೇರುವುದು ಅನುಮಾನ ಆಗಲಿದೆ. ‘ಇಂಡಿಯನ್ 2’ ದುರಂತ ಆಗಿರುವುದರಿಂದ ಮೂರನೇ ಭಾಗಕ್ಕಾಗಿ ಯಾರೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಲ್ಲ. ಶಂಕರ್ ಈಗಾಗಲೇ ಮೂರನೇ ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಂಕರ್ ಅವರು ‘ವೀರಯುಗ ನಾಯಗನ್ ವೇಲ್ಪಾರಿ’ ಪುಸ್ತಕವನ್ನು ಆಧರಿಸಿ 3 ಭಾಗಗಳ ಚಿತ್ರವನ್ನು ಮಾಡಲು ಯೋಜಿಸಿದ್ದಾರೆ.

ಇದನ್ನೂ ಓದಿ: ಶಂಕರ್​ನಾಗ್ ಸ್ಟೈಲ್​ನಲ್ಲಿ ಮಾತನಾಡಿದ್ದ ಯಶ್; ಎಷ್ಟು ಪರ್ಫೆಕ್ಟ್ ಮಿಮಿಕ್ರಿ ನೋಡಿ

ವಾಸ್ತವವಾಗಿ ‘ವೀರಯುಗ ನಾಯಗನ್ ವೇಲ್ಪಾರಿ’ ಶಂಕರ್ ಅವರ ಕನಸಿನ ಯೋಜನೆಯಾಗಿದೆ. ಶಂಕರ್ ಕೂಡ ಈ ಸಿನಿಮಾವನ್ನು ಖಚಿತಪಡಿಸಿದ್ದಾರೆ. ಆದರೆ, ಈಗ ಶಂಕರ್ ಅವರ ಚಾರ್ಮ್ ನೋಡಿದರೆ ನಿರ್ಮಾಪಕರಿಗೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ. ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ