AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ.

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
| Edited By: |

Updated on:Apr 29, 2021 | 2:57 PM

Share

ಯಶ್​ ಹಾಗೂ ರಾಧಿಕಾ ಪಂಡಿತ್​ ನಟನೆಯ ಮೊಗ್ಗಿನ ಮನಸು ಸಿನಿಮಾದಲ್ಲಿ ಶುಭಾ ಪೂಂಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​-ಡೂಪರ್​ ಹಿಟ್​ ಆಗಿತ್ತು. ದುನಿಯಾ ವಿಜಯ್​ ನಟನೆಯ ಚಂಡ ಸಿನಿಮಾ ಮೂಲಕ ಶುಭಾ ಪೂಂಜಾ ಹೆಚ್ಚು ಗುರುತಿಸಿಕೊಂಡರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಂಗಕ್ಕೇರಿದ್ದ ಶುಭಾ ಪೂಂಜಾ ನಂತರ ಜೀರೋಗೆ ಬಂದು ಬಿಟ್ಟಿದ್ದರಂತೆ. ಈ ಬಗ್ಗೆ ಶುಭಾ ಅವರೇ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಎರಡುವರೆ ವರ್ಷ ಕಷ್ಟಪಟ್ಟಿದ್ದೆ. ನನ್ನ ನಟನೆಯ ಚಂಡ ಹಾಗೂ ಮೊಗ್ಗಿನ ಮನಸು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆಗ ನನಗೆ ನನ್ನ ಸ್ಟ್ರಗಲ್​ ಮರೆತೇ ಹೋಯಿತು. ಹಣ ಹಾಗೂ ಆಫರ್​ ಎರಡೂ ಹೆಚ್ಚೇ ಬಂದವು. ಆದರೆ, ದೊಡ್ಡ ಸಕ್ಸಸ್​ ನೋಡಿ ಜೀರೋಗೆ ಬರುವುದು ಇದೆಯಲ್ಲ ಅದು ಕಷ್ಟ ಎಂದು ಭಾವುಕರಾದರು ಶುಭಾ.

ದೊಡ್ಡ ಸಕ್ಸಸ್​ ಕಂಡಿದ್ದ ನನ್ನ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು. ನಾನು ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳಲಿಲ್ಲ. ಆಗ ನನಗೆ ಲೈಫ್​​ ಸಾಕಷ್ಟು ಕಲಿಸಿತ್ತು. ಈ ಟೈಮ್​​ನಲ್ಲಿ ನನಗೆ ಸಿಗಂಧೂರು ಚೌಡೇಶ್ವರಿ ಮಹಿಮೆ ಹೆಸರಿನ ಸಿನಿಮಾ ಆಫರ್​ ಬಂತು. ಮೇಡಂ ಇದು ದೇವರ ಸಿನಿಮಾ. ಹೀಗಾಗಿ 50 ಸಾವಿರ ರೂಪಾಯಿ ಮಾತ್ರ ಸಂಭಾವನೆ ಕೊಡ್ತೀವಿ ಅಂದ್ರು. ನಾನು ಅದನ್ನು ಒಪ್ಪಿಕೊಂಡೆ. ನನಗೆ ಬಂದ ಸಂಭಾವನೆ ಕಾರ್​ ಡ್ರೈವರ್​, ಮೇಕಪ್​ಮೆನ್​ಗೆ ಸಾಕಾಯ್ತು.

ಸಿಗಂದೂರಿನ ಬೆಟ್ಟದ ಮೇಲೆ ಕೂತಿದ್ದೆ. ಮುಂದೇನು ಎಂದು ಯೋಚನೆ ಮಾಡುತ್ತಿದ್ದೆ. ಸರಿಯಾಗಿ ಸಿಗ್ನಲ್​ ಸಿಗದ ಜಾಗದಲ್ಲೂ ನನಗೆ ಮೆಸೇಜ್​ ಬಂತು. ಹರ್ಷ ಮಾಸ್ಟರ್​ ಮೆಸೇಜ್​ ಆಗಿತ್ತು. ಕಾಲ್​ ಮಾಡಿ ಎಂದು ಮೆಸೇಜ್​ನಲ್ಲಿ ಬರೆದಿತ್ತು. ಕಾಲ್​ ಮಾಡಿದಾಗ, ‘ಜೈ ಮಾರುತಿ 800’ ಅಂತ ಸಿನಿಮಾ ಮಾಡುತ್ತಾ ಇದೀನಿ. ಅದರಲ್ಲಿ ಇಬ್ಬರು ನಾಯಕಿಯರು​ ಇರುತ್ತಾರೆ. ಒಂದು ಹೀರೋಯಿನ್​ ಆಗಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೊಂಡಿದ್ದೇವೆ ಎಂದರು. ಆ ಸಿನಿಮಾ ಮಾಡಿದ್ಮೇಲೆ ಮತ್ತೆ ಎದ್ದು ನಿಂತೆ. ಮತ್ತೆ ಮೊದಲಿನ ಸ್ಥಿತಿಗೆ ಬಂದೆ ಎಂದು ತಮ್ಮ ಏಳು ಬೀಳಿನ ಜೀವನದ ಬಗ್ಗೆ ಶುಭಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಎದುರು ಶುಭಾ ಪೂಂಜಾ ಇಟ್ಟ ಬೇಡಿಕೆ ನೋಡಿ ಮನೆಯವರಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ

Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

Published On - 2:41 pm, Thu, 29 April 21

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ