AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ.

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
| Edited By: |

Updated on:Apr 29, 2021 | 2:57 PM

Share

ಯಶ್​ ಹಾಗೂ ರಾಧಿಕಾ ಪಂಡಿತ್​ ನಟನೆಯ ಮೊಗ್ಗಿನ ಮನಸು ಸಿನಿಮಾದಲ್ಲಿ ಶುಭಾ ಪೂಂಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​-ಡೂಪರ್​ ಹಿಟ್​ ಆಗಿತ್ತು. ದುನಿಯಾ ವಿಜಯ್​ ನಟನೆಯ ಚಂಡ ಸಿನಿಮಾ ಮೂಲಕ ಶುಭಾ ಪೂಂಜಾ ಹೆಚ್ಚು ಗುರುತಿಸಿಕೊಂಡರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಂಗಕ್ಕೇರಿದ್ದ ಶುಭಾ ಪೂಂಜಾ ನಂತರ ಜೀರೋಗೆ ಬಂದು ಬಿಟ್ಟಿದ್ದರಂತೆ. ಈ ಬಗ್ಗೆ ಶುಭಾ ಅವರೇ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಎರಡುವರೆ ವರ್ಷ ಕಷ್ಟಪಟ್ಟಿದ್ದೆ. ನನ್ನ ನಟನೆಯ ಚಂಡ ಹಾಗೂ ಮೊಗ್ಗಿನ ಮನಸು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆಗ ನನಗೆ ನನ್ನ ಸ್ಟ್ರಗಲ್​ ಮರೆತೇ ಹೋಯಿತು. ಹಣ ಹಾಗೂ ಆಫರ್​ ಎರಡೂ ಹೆಚ್ಚೇ ಬಂದವು. ಆದರೆ, ದೊಡ್ಡ ಸಕ್ಸಸ್​ ನೋಡಿ ಜೀರೋಗೆ ಬರುವುದು ಇದೆಯಲ್ಲ ಅದು ಕಷ್ಟ ಎಂದು ಭಾವುಕರಾದರು ಶುಭಾ.

ದೊಡ್ಡ ಸಕ್ಸಸ್​ ಕಂಡಿದ್ದ ನನ್ನ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು. ನಾನು ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳಲಿಲ್ಲ. ಆಗ ನನಗೆ ಲೈಫ್​​ ಸಾಕಷ್ಟು ಕಲಿಸಿತ್ತು. ಈ ಟೈಮ್​​ನಲ್ಲಿ ನನಗೆ ಸಿಗಂಧೂರು ಚೌಡೇಶ್ವರಿ ಮಹಿಮೆ ಹೆಸರಿನ ಸಿನಿಮಾ ಆಫರ್​ ಬಂತು. ಮೇಡಂ ಇದು ದೇವರ ಸಿನಿಮಾ. ಹೀಗಾಗಿ 50 ಸಾವಿರ ರೂಪಾಯಿ ಮಾತ್ರ ಸಂಭಾವನೆ ಕೊಡ್ತೀವಿ ಅಂದ್ರು. ನಾನು ಅದನ್ನು ಒಪ್ಪಿಕೊಂಡೆ. ನನಗೆ ಬಂದ ಸಂಭಾವನೆ ಕಾರ್​ ಡ್ರೈವರ್​, ಮೇಕಪ್​ಮೆನ್​ಗೆ ಸಾಕಾಯ್ತು.

ಸಿಗಂದೂರಿನ ಬೆಟ್ಟದ ಮೇಲೆ ಕೂತಿದ್ದೆ. ಮುಂದೇನು ಎಂದು ಯೋಚನೆ ಮಾಡುತ್ತಿದ್ದೆ. ಸರಿಯಾಗಿ ಸಿಗ್ನಲ್​ ಸಿಗದ ಜಾಗದಲ್ಲೂ ನನಗೆ ಮೆಸೇಜ್​ ಬಂತು. ಹರ್ಷ ಮಾಸ್ಟರ್​ ಮೆಸೇಜ್​ ಆಗಿತ್ತು. ಕಾಲ್​ ಮಾಡಿ ಎಂದು ಮೆಸೇಜ್​ನಲ್ಲಿ ಬರೆದಿತ್ತು. ಕಾಲ್​ ಮಾಡಿದಾಗ, ‘ಜೈ ಮಾರುತಿ 800’ ಅಂತ ಸಿನಿಮಾ ಮಾಡುತ್ತಾ ಇದೀನಿ. ಅದರಲ್ಲಿ ಇಬ್ಬರು ನಾಯಕಿಯರು​ ಇರುತ್ತಾರೆ. ಒಂದು ಹೀರೋಯಿನ್​ ಆಗಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೊಂಡಿದ್ದೇವೆ ಎಂದರು. ಆ ಸಿನಿಮಾ ಮಾಡಿದ್ಮೇಲೆ ಮತ್ತೆ ಎದ್ದು ನಿಂತೆ. ಮತ್ತೆ ಮೊದಲಿನ ಸ್ಥಿತಿಗೆ ಬಂದೆ ಎಂದು ತಮ್ಮ ಏಳು ಬೀಳಿನ ಜೀವನದ ಬಗ್ಗೆ ಶುಭಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಎದುರು ಶುಭಾ ಪೂಂಜಾ ಇಟ್ಟ ಬೇಡಿಕೆ ನೋಡಿ ಮನೆಯವರಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ

Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

Published On - 2:41 pm, Thu, 29 April 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ