AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ; ಹಾಡಿನ ಮೂಲಕ ತಿಳಿಹೇಳಿದ ಗಾಯಕ ಶಾನ್​

ಫಾದರ್ಸ್​ ಡೇ ಪ್ರಯುಕ್ತ ಗಾಯಕ ಶಾನ್​ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್​ (18 ಲಕ್ಷ) ವೀವ್ಸ್​ ಸಿಕ್ಕಿದೆ.

ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ; ಹಾಡಿನ ಮೂಲಕ ತಿಳಿಹೇಳಿದ ಗಾಯಕ ಶಾನ್​
ಗಾಯಕ ಶಾನ್​
ಮದನ್​ ಕುಮಾರ್​
|

Updated on:Jul 06, 2021 | 9:54 AM

Share

ಹೊಸ ಪೀಳಿಗೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಹಲವು ಬಗೆಯ ಹಾಡುಗಳು ತಯಾರಾಗುತ್ತವೆ. ಮದ್ಯಪಾನವನ್ನು ಪ್ರಚೋದಿಸುವ, ಡಬಲ್​ ಮೀನಿಂಗ್​ ಪದ ಪ್ರಯೋಗ ಮಾಡುವ, ಬೈಗುಳಗಳನ್ನೇ ಸಾಹಿತ್ಯವನ್ನಾಗಿ ಮಾಡಿಕೊಳ್ಳುವ ಹಾಡುಗಳ ಸಂಖ್ಯೆ ಹೆಚ್ಚುತ್ತಿದೆ. ಅವು ಮಿಲಿಯನ್​ಗಟ್ಟಲೆ ವೀವ್ಸ್​ ಕೂಡ ಪಡೆದುಕೊಳ್ಳುತ್ತಿವೆ. ಇಂಥ ಟ್ರೆಂಡ್​ಗೆ ವಿರುದ್ಧವಾಗಿ ಜನಪ್ರಿಯ ಗಾಯಕ ಶಾನ್​ ಅವರು ಒಂದು ಹೊಸ ಹಾಡು ರಿಲೀಸ್​​ ಮಾಡಿದ್ದು, ಅದು ಜನರಿಗೆ ತುಂಬ ಇಷ್ಟ ಆಗುತ್ತಿದೆ.

ಸಂಗೀತದ ಮೂಲಕ ಜನರಲ್ಲಿ ಪಾಸಿಟಿವ್​ ವಿಚಾರಗಳನ್ನು ತುಂಬಬೇಕು ಎಂಬುದು ಶಾನ್​ ಉದ್ದೇಶ. ಯುವಜನತೆಯನ್ನು ಕೆರಳಿಸುವಂತಹ ಮತ್ತು ಕೆಟ್ಟ ಸಂದೇಶ ನೀಡುವಂತಹ ಹಾಡುಗಳಿಗೆ ಶಾನ್​ ವಿರೋಧವಿದೆ. ಇಂಥ ಹಾಡುಗಳನ್ನೇ ಜನರು ಇಷ್ಟಪಡುತ್ತಿರುವುದು ಈಗಿನ ಟ್ರೆಂಡ್​ ಆಗಿದ್ದರೂ ಕೂಡ ಅದಕ್ಕೆ ವಿರುದ್ಧವಾಗಿ ಶಾನ್​ ಮಾಡಿದ ಒಂದು ಪಾಸಿಟಿವ್​ ಪ್ರಯತ್ನಕ್ಕೆ ಈಗ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗೆ ಅವರು ಫಾದರ್ಸ್​ ಡೇ ಪ್ರಯುಕ್ತ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್​ (18 ಲಕ್ಷ) ವೀವ್ಸ್​ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆ.

‘ಅಪ್ಪ-ಅಮ್ಮನ್ನನ್ನು ನೋಡಿಕೊಳ್ಳುವುದು ಮಕ್ಕಳ ಮೊದಲ ಆದ್ಯತೆ ಆಗಬೇಕು. ವಯಸ್ಸಾದ ಪೋಷಕರನ್ನು ತೊರೆಯಬಾರದು. ಅವರ ಭಾವನೆಗಳ ಬಗ್ಗೆ ಈಗ ಮಾತನಾಡುವುದು ಅವಶ್ಯಕವಾಗಿದೆ. ಅವರು ಸಾಯುವವರೆಗೂ ನಾವು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಆಗ ತುಂಬ ತಡವಾಗಿರುತ್ತದೆ’ ಎಂದು ಶಾನ್​ ಹೇಳಿದ್ದಾರೆ. ಈ ಹಾಡಿನ ಮೂಲಕ ಆದಷ್ಟು ಜನರ ಮನಸ್ಸು ಬದಲಾಯಿಸುವುದು ಅವರ ಮುಖ್ಯ ಉದ್ದೇಶ.

‘ತೇರಾ ಹಿಸ್ಸಾ ಹು’ ಎಂಬ ಈ ಹಾಡಿನಲ್ಲಿ ಸ್ವತಃ ಶಾನ್​ ನಟಿಸಿದ್ದಾರೆ. ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡುವ ಈ ಗೀತೆಯಲ್ಲಿ ಅವರ ಪುತ್ರ ಶುಭ್​ ಕೂಡ ಕಾಣಿಸಿಕೊಂಡಿದ್ದಾರೆ. ‘ನನ್ನ ಮಗ ನನ್ನಂತೆಯೇ ಕಾಣುತ್ತಾನೆ. ಅವನು ನನ್ನ ಬಾಲ್ಯದ ಪಾತ್ರ ಮಾಡಿರುವುದರಿಂದ ಅವನಿಗಿಂತ ಉತ್ತಮವಾದ ಬೇರೆ ಆಯ್ಕೆ ಯಾವುದೂ ಇರುವುದಿಲ್ಲ ಎನಿಸಿತು’ ಎಂದು ಶಾನ್​ ಹೇಳಿದ್ದಾರೆ.

ಹೆಚ್ಚು ಜನರು ಈ ಹಾಡನ್ನು ಶೇರ್​ ಮಾಡುತ್ತಿದ್ದು, ವೀಕ್ಷಣೆ ಸಂಖ್ಯೆ 18 ಲಕ್ಷವನ್ನೂ ದಾಟಿ ಮುಂದುವರಿಯುತ್ತಿದೆ.

ಇದನ್ನೂ ಓದಿ:

ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ

Published On - 8:10 am, Tue, 6 July 21

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು