Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ; ಹಾಡಿನ ಮೂಲಕ ತಿಳಿಹೇಳಿದ ಗಾಯಕ ಶಾನ್​

ಫಾದರ್ಸ್​ ಡೇ ಪ್ರಯುಕ್ತ ಗಾಯಕ ಶಾನ್​ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್​ (18 ಲಕ್ಷ) ವೀವ್ಸ್​ ಸಿಕ್ಕಿದೆ.

ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ; ಹಾಡಿನ ಮೂಲಕ ತಿಳಿಹೇಳಿದ ಗಾಯಕ ಶಾನ್​
ಗಾಯಕ ಶಾನ್​
Follow us
ಮದನ್​ ಕುಮಾರ್​
|

Updated on:Jul 06, 2021 | 9:54 AM

ಹೊಸ ಪೀಳಿಗೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಹಲವು ಬಗೆಯ ಹಾಡುಗಳು ತಯಾರಾಗುತ್ತವೆ. ಮದ್ಯಪಾನವನ್ನು ಪ್ರಚೋದಿಸುವ, ಡಬಲ್​ ಮೀನಿಂಗ್​ ಪದ ಪ್ರಯೋಗ ಮಾಡುವ, ಬೈಗುಳಗಳನ್ನೇ ಸಾಹಿತ್ಯವನ್ನಾಗಿ ಮಾಡಿಕೊಳ್ಳುವ ಹಾಡುಗಳ ಸಂಖ್ಯೆ ಹೆಚ್ಚುತ್ತಿದೆ. ಅವು ಮಿಲಿಯನ್​ಗಟ್ಟಲೆ ವೀವ್ಸ್​ ಕೂಡ ಪಡೆದುಕೊಳ್ಳುತ್ತಿವೆ. ಇಂಥ ಟ್ರೆಂಡ್​ಗೆ ವಿರುದ್ಧವಾಗಿ ಜನಪ್ರಿಯ ಗಾಯಕ ಶಾನ್​ ಅವರು ಒಂದು ಹೊಸ ಹಾಡು ರಿಲೀಸ್​​ ಮಾಡಿದ್ದು, ಅದು ಜನರಿಗೆ ತುಂಬ ಇಷ್ಟ ಆಗುತ್ತಿದೆ.

ಸಂಗೀತದ ಮೂಲಕ ಜನರಲ್ಲಿ ಪಾಸಿಟಿವ್​ ವಿಚಾರಗಳನ್ನು ತುಂಬಬೇಕು ಎಂಬುದು ಶಾನ್​ ಉದ್ದೇಶ. ಯುವಜನತೆಯನ್ನು ಕೆರಳಿಸುವಂತಹ ಮತ್ತು ಕೆಟ್ಟ ಸಂದೇಶ ನೀಡುವಂತಹ ಹಾಡುಗಳಿಗೆ ಶಾನ್​ ವಿರೋಧವಿದೆ. ಇಂಥ ಹಾಡುಗಳನ್ನೇ ಜನರು ಇಷ್ಟಪಡುತ್ತಿರುವುದು ಈಗಿನ ಟ್ರೆಂಡ್​ ಆಗಿದ್ದರೂ ಕೂಡ ಅದಕ್ಕೆ ವಿರುದ್ಧವಾಗಿ ಶಾನ್​ ಮಾಡಿದ ಒಂದು ಪಾಸಿಟಿವ್​ ಪ್ರಯತ್ನಕ್ಕೆ ಈಗ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗೆ ಅವರು ಫಾದರ್ಸ್​ ಡೇ ಪ್ರಯುಕ್ತ ಒಂದು ಹಾಡು ಬಿಡುಗಡೆ ಮಾಡಿದ್ದರು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶ ಇರುವ ಆ ಗೀತೆಗೆ ಈವರೆಗೆ 1.8 ಮಿಲಿಯನ್​ (18 ಲಕ್ಷ) ವೀವ್ಸ್​ ಸಿಕ್ಕಿರುವುದು ಅವರಿಗೆ ಸಂತಸ ತಂದಿದೆ.

‘ಅಪ್ಪ-ಅಮ್ಮನ್ನನ್ನು ನೋಡಿಕೊಳ್ಳುವುದು ಮಕ್ಕಳ ಮೊದಲ ಆದ್ಯತೆ ಆಗಬೇಕು. ವಯಸ್ಸಾದ ಪೋಷಕರನ್ನು ತೊರೆಯಬಾರದು. ಅವರ ಭಾವನೆಗಳ ಬಗ್ಗೆ ಈಗ ಮಾತನಾಡುವುದು ಅವಶ್ಯಕವಾಗಿದೆ. ಅವರು ಸಾಯುವವರೆಗೂ ನಾವು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಆಗ ತುಂಬ ತಡವಾಗಿರುತ್ತದೆ’ ಎಂದು ಶಾನ್​ ಹೇಳಿದ್ದಾರೆ. ಈ ಹಾಡಿನ ಮೂಲಕ ಆದಷ್ಟು ಜನರ ಮನಸ್ಸು ಬದಲಾಯಿಸುವುದು ಅವರ ಮುಖ್ಯ ಉದ್ದೇಶ.

‘ತೇರಾ ಹಿಸ್ಸಾ ಹು’ ಎಂಬ ಈ ಹಾಡಿನಲ್ಲಿ ಸ್ವತಃ ಶಾನ್​ ನಟಿಸಿದ್ದಾರೆ. ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡುವ ಈ ಗೀತೆಯಲ್ಲಿ ಅವರ ಪುತ್ರ ಶುಭ್​ ಕೂಡ ಕಾಣಿಸಿಕೊಂಡಿದ್ದಾರೆ. ‘ನನ್ನ ಮಗ ನನ್ನಂತೆಯೇ ಕಾಣುತ್ತಾನೆ. ಅವನು ನನ್ನ ಬಾಲ್ಯದ ಪಾತ್ರ ಮಾಡಿರುವುದರಿಂದ ಅವನಿಗಿಂತ ಉತ್ತಮವಾದ ಬೇರೆ ಆಯ್ಕೆ ಯಾವುದೂ ಇರುವುದಿಲ್ಲ ಎನಿಸಿತು’ ಎಂದು ಶಾನ್​ ಹೇಳಿದ್ದಾರೆ.

ಹೆಚ್ಚು ಜನರು ಈ ಹಾಡನ್ನು ಶೇರ್​ ಮಾಡುತ್ತಿದ್ದು, ವೀಕ್ಷಣೆ ಸಂಖ್ಯೆ 18 ಲಕ್ಷವನ್ನೂ ದಾಟಿ ಮುಂದುವರಿಯುತ್ತಿದೆ.

ಇದನ್ನೂ ಓದಿ:

ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ

Published On - 8:10 am, Tue, 6 July 21

ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್