AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

’‘ಓಹ್ ಭ್ರಮೆ‘ ಅಲ್ಲ’’: ಮತ್ತೆ ಒಂದಾದ ಪ್ರೇಮ್-ಸುದೀಪ್

Kichcha Sudeep: ಸುದೀಪ್ ಅವರಿಗಾಗಿ ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನಿರ್ದೇಶಕ ಪ್ರೇಮ್ ಕೋರಿದ್ದಾರೆ. ಅದೇ ವಿಡಿಯೋನಲ್ಲಿ ತಮ್ಮ ಹಾಗೂ ಸುದೀಪ್ ಅವರ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಒಳ್ಳೆಯ ಹಿನ್ನೆಲೆ ಸಂಗೀತ, ಒಳ್ಳೆಯ ಕ್ಯಾರಿಕೇಚರ್ ಮಾದರಿಯ ಚಿತ್ರಗಳನ್ನು ಒಳಗೊಂಡ ವಿಡಿಯೋ ಅದಾಗಿದ್ದು, ವಿಡಿಯೋನಲ್ಲಿ ‘ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ’ ಎಂದು ಬರೆಯಲಾಗಿದ್ದು, ಎಲ್ಲವೂ ಅಕ್ಟೋಬರ್ 20ರಿಂದ ಶುರು ಆಗಲಿದೆ ಎಂದು ಹೇಳಲಾಗಿದೆ.

’‘ಓಹ್ ಭ್ರಮೆ‘ ಅಲ್ಲ’’: ಮತ್ತೆ ಒಂದಾದ ಪ್ರೇಮ್-ಸುದೀಪ್
Prem Sudeep
ಮಂಜುನಾಥ ಸಿ.
|

Updated on:Sep 02, 2026 | 6:34 PM

Share

ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಹೊಸ ಸಿನಿಮಾ ಘೋಷಣೆ
  • ಮತ್ತೆ ನಿರ್ದೇಶಕ ಪ್ರೇಮ್ ಜೊತೆ ಕೈಜೋಡಿಸಿದ ನಟ
  • ಪ್ರೇಮ್ ಹಾಗೂ ಸುದೀಪ್ ಕಾಂಬಿನೇಷನ್ ಸಿನಿಮಾ

ಕಿಚ್ಚ ಸುದೀಪ್ (Sudeep) ಹುಟ್ಟುಹಬ್ಬ ಇಂದು (ಸೆಪ್ಟೆಂಬರ್ 2). ಸುದೀಪ್ ನಟನೆಯ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಹೊಸ ಪೋಸ್ಟರ್ ಇಂದು ಬೆಳಿಗ್ಗೆಯಷ್ಟೆ ಬಿಡುಗಡೆ ಆಗಿದೆ. ತಮಿಳಿನ ಸ್ಟಾರ್ ನಿರ್ದೇಶಕ ಸಮುದ್ರಕಿಣಿ ಅವರು ಸುದೀಪ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೈಟಲ್ ಸಹ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ‘ದೇವರಾಯ’ ಹೆಸರಿನ ಐತಿಹಾಸಿಕ ಸಿನಿಮಾ ಸಹ ಘೋಷಣೆಯಾಗಿದೆ. ಇದೀಗ ಸಂಜೆ ವೇಳೆಗೆ ಸುದೀಪ್ ಅವರ ಹೊಸ ಸಿನಿಮಾ ಘೋಷಿಸಲಾಗಿದ್ದು, ಸುದೀಪ್ ಮತ್ತೊಮ್ಮೆ ಪ್ರೇಮ್ ಜೊತೆ ಕೈ ಜೋಡಿಸಿದ್ದಾರೆ. ಈ ಹಿಂದೆ ‘ವಿಲನ್’ ಸಿನಿಮಾಕ್ಕಾಗಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಸುದೀಪ್ ಅವರಿಗಾಗಿ ಸಿನಿಮಾ ಒಂದನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆ.

ಸುದೀಪ್ ಅವರಿಗಾಗಿ ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನಿರ್ದೇಶಕ ಪ್ರೇಮ್ ಕೋರಿದ್ದಾರೆ. ಅದೇ ವಿಡಿಯೋನಲ್ಲಿ ತಮ್ಮ ಹಾಗೂ ಸುದೀಪ್ ಅವರ ಹೊಸ ಸಿನಿಮಾದ ಘೋಷಣೆಯನ್ನೂ ಸಹ ಮಾಡಿದ್ದಾರೆ. ಒಳ್ಳೆಯ ಹಿನ್ನೆಲೆ ಸಂಗೀತ, ಒಳ್ಳೆಯ ಕ್ಯಾರಿಕೇಚರ್ ಮಾದರಿಯ ಚಿತ್ರಗಳನ್ನು ಒಳಗೊಂಡ ವಿಡಿಯೋ ಅದಾಗಿದ್ದು, ವಿಡಿಯೋನಲ್ಲಿ ‘ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ’ ಎಂದು ಬರೆಯಲಾಗಿದ್ದು, ಎಲ್ಲವೂ ಅಕ್ಟೋಬರ್ 20ರಿಂದ ಶುರು ಆಗಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಪ್ರೇಮ್ ಅವರು ಕಾರ್ಯಕ್ರಮವೊಂದರಲ್ಲಿ ತಾವು ಸುದೀಪ್ ಅವರೊಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಇದೀಗ ಅದು ನಿಜವಾಗಿದೆ. ಅಕ್ಟೋಬರ್ 20ರಿಂದ ಸಿನಿಮಾದ ಕೆಲಸಗಳು ಶುರುವಾಗಲಿವೆ. ಸುದೀಪ್ ಪ್ರಸ್ತುತ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದು, ಅದು ಮುಗಿದ ಬಳಿಕ ಬಹುಷಃ ಹೊಸ ಸಿನಿಮಾದ ಕೆಲಸ ಶುರು ಮಾಡಲಿದ್ದಾರೆ.

ಇದನ್ನೂ ಓದಿ:ತಮಿಳು ನಿರ್ದೇಶಕನೊಟ್ಟಿಗೆ ಸುದೀಪ್ ಸಿನಿಮಾ, ಚಿತ್ರದ ಹೆಸರೇನು?

ಸುದೀಪ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸಿದ್ದ ‘ವಿಲನ್’ ಸಿನಿಮಾ ಅನ್ನು ಪ್ರೇಮ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಆದರೆ ಆ ಸಿನಿಮಾದ ಕೆಲ ಹಾಡುಗಳು ಹಾಗೂ ವಿಶೇಷವಾಗಿ ಸುದೀಪ್ ಅವರ ‘ಓಹ್ ಭ್ರಮೆ’ ಡೈಲಾಗ್ ಬಹಳ ವೈರಲ್ ಆಗಿತ್ತು. ಇದೀಗ ಸುದೀಪ್ ಅವರು ಮತ್ತೊಮ್ಮೆ ಪ್ರೇಮ್ ಜೊತೆ ಕೈಜೋಡಿಸಿದ್ದು, ಈ ಬಾರಿ ಸುದೀಪ್ ಅವರಿಗಾಗಿ ಯಾವ ರೀತಿಯ ಸಿನಿಮಾ ಅನ್ನು ಪ್ರೇಮ್ ಕಟ್ಟುತ್ತಾರೆ ಕಾದು ನೋಡಬೇಕಿದೆ.

ಪ್ರೇಮ್ ಅವರು ದರ್ಶನ್ ಜೊತೆ ಸಿನಿಮಾ ಮಾಡಬೇಕಿತ್ತು. ಸಿನಿಮಾ ಘೋಷಣೆಯೂ ಆಗಿತ್ತು. ಆ ಸಿನಿಮಾವನ್ನೂ ಸಹ ಕೆವಿಎನ್ ನಿರ್ಮಾಣ ಮಾಡಬೇಕಿತ್ತು. ಆದರೆ ಅಷ್ಟರಲ್ಲೇ ದರ್ಶನ್ ಜೈಲು ಸೇರಿದರು. ಪ್ರೇಮ್ ಅವರು ಧ್ರುವ ಸರ್ಜಾ ಜೊತೆ ‘ಕೆಡಿ’ ಸಿನಿಮಾ ಮುಗಿಸಿದರು. ಇದೀಗ ಸುದೀಪ್ ಜೊತೆಗೆ ಹೊಸ ಪ್ರಾಜೆಕ್ಟ್ ಶುರು ಮಾಡಲು ಮುಂದಾಗಿದ್ದಾರೆ.

ಇನ್ನು ಸುದೀಪ್ ಅವರ ಕೈಯಲ್ಲಿ ಈಗ ಐದು ಸಿನಿಮಾಗಳಿವೆ. ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಮುದ್ರಕಿಣಿ ನಿರ್ದೇಶನದ ‘ಸ್ಕೂಲ್ ಬಸ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಶ್ರೀ ಕೃಷ್ಣದೇವರಾಯ ಕತೆ ಒಳಗೊಂಡ ‘ದೇವರಾಯ’ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಕೆಆರ್​​​ಜಿ ನಿರ್ಮಿಸಲಿರುವ ಸಿನಿಮಾನಲ್ಲಿಯೂ ಕಿಚ್ಚ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Wed, 2 September 26

Follow Us
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್