AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೋದಿ ಮೀಟ್ ಮಾಡೋಕೆ ಎಷ್ಟು ಹಣ ಪಡೆದ್ರಿ’ ಎಂದವರಿಗೆ ಅಯ್ಯೋ ಶ್ರದ್ಧಾ ಕೊಟ್ಟ ಖಡಕ್ ಉತ್ತರ ಇದು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅನುಭವವನ್ನು ಕಾಮಿಡಿಯನ್ ಅಯ್ಯೋ ಶ್ರದ್ಧಾ ಅವರು ಹಂಚಿಕೊಂಡಿದ್ದಾರೆ. ಯಶ್ ಮತ್ತು ರಿಷಬ್ ಶೆಟ್ಟಿ ಅವರೊಂದಿಗೆ ನಡೆದ ಈ ಭೇಟಿಯ ನಂತರ, ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಬಂದ ಕೆಲವು ಪ್ರತಿಕ್ರಿಯೆಗಳು ಅವರನ್ನು ಆಶ್ಚರ್ಯಗೊಳಿಸಿವೆ. ಈ ಬಗ್ಗೆ ಅವರು ವಿವರಿಸಿದ್ದರು.

‘ಮೋದಿ ಮೀಟ್ ಮಾಡೋಕೆ ಎಷ್ಟು ಹಣ ಪಡೆದ್ರಿ’ ಎಂದವರಿಗೆ ಅಯ್ಯೋ ಶ್ರದ್ಧಾ ಕೊಟ್ಟ ಖಡಕ್ ಉತ್ತರ ಇದು
ಶ್ರದ್ಧಾ-ಮೋದಿ
ರಾಜೇಶ್ ದುಗ್ಗುಮನೆ
|

Updated on:Sep 17, 2025 | 12:41 PM

Share

ಪ್ರಧಾನಿ ನರೇಂದ್ರ ಮೊದಿ (Narendra Modi) ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಈ ವಿಶೇಷ ದಿನದಂದು ಅನೇಕ ಸೆಲೆಬ್ರಿಟಿಗಳು ಅವರಿಗೆ ಬರ್ತ್​ಡೇ ವಿಶ್ ತಿಳಿಸುತ್ತಿದ್ದಾರೆ. ಅಲ್ಲದೆ, ಮೋದಿ ಜೊತೆ ನಡೆದ ಹಲವು ಘಟನೆಗಳನ್ನು ವಿವರಿಸುತ್ತಿದ್ದಾರೆ. ಈ ವೇಳೆ ಕಾಮಿಡಿಯನ್ ಅಯ್ಯೋ ಶ್ರದ್ಧಾ ಅವರು ವಿವರಿಸಿದ ಒಂದು ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ಆ ಘಟನೆಯ ಬಗ್ಗೆ ಒಂದು ನೆನಪು.

ಅಯ್ಯೋ ಶ್ರದ್ಧಾ ಅವರು ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದರು. ಈ ಭೇಟಿ ವೇಳೆ ಯಶ್ ಹಾಗೂ ರಿಷಬ್ ಶೆಟ್ಟಿ ಕೂಡ ಇದ್ದರು. ಇದು ಶ್ರದ್ಧಾಗೆ ಸಾಕಷ್ಟು ಎಗ್ಸೈಟಿಂಗ್ ಅನಿಸಿತ್ತು. ಭೇಟಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ಫೋಟೋ ಹಂಚಿಕೊಂಡಿದ್ದರು. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬಂದವು. ಅದರಲ್ಲಿ ಕೆಲವು ಕಮೆಂಟ್​ಗಳು ಶ್ರದ್ಧಾ ಅವರಿಗೆ ಅಚ್ಚರಿ ತಂದಿತ್ತು.

ಶ್ರದ್ಧಾ ಸ್ಟ್ಯಾಂಡಪ್ ಕಾಮಿಡಿ ವಿಡಿಯೋ

ಇದನ್ನೂ ಓದಿ
Image
ಊಟದ ವಿಚಾರದಲ್ಲಿ ಸಖತ್ ಮೂಡಿ ಆಗಿದ್ದ ವಿಷ್ಣುವರ್ಧನ್
Image
‘ಪ್ರಿಯಾಂಕಾ ಗಂಭೀರ ಅಫೇರ್ ಹೊಂದಿದ್ದು ನಿಜ’; ನಿರ್ದೇಶಕನ ದೊಡ್ಡ ಹೇಳಿಕೆ
Image
ಒಟಿಟಿಗೆ ಬಂದರೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’
Image
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?

‘ಮೋದಿ ಭೇಟಿ ಮಾಡಿದ್ದಕ್ಕೆ ಎಷ್ಟು ಹಣ ಕೊಟ್ಟರು’ ಎಂದು ಯಾವುದೋ ವ್ಯಕ್ತಿ ಕೇಳಿದ್ದನಂತೆ. ಈ ವಿಚಾರ ಶ್ರದ್ಧಾಗೆ ಶಾಕ್ ಹಾಗೂ ಅಚ್ಚರಿ ಎರಡನ್ನೂ ತಂದಿತ್ತು. ಹೀಗಾಗಿ, ಅವರು ಈ ಬಗ್ಗೆ ಮಾತನಾಡಿದ್ದರು. ‘ಆ ವ್ಯಕ್ತಿಯ ಕಮೆಂಟ್ ನೋಡಿ ನನಗೆ ಶಾಕ್ ಆಯ್ತು. ಹಣ ಎಷ್ಟು ಕೊಟ್ಟರು ಎಂದು ಕೇಳಿದ್ದ. ನಾನು ಯಶ್ ಹಾಗೂ ರಿಷಬ್​ಗೆ ಕರೆ ಮಾಡಿ ಹಣ ಕೊಡ್ತಾ ಇದ್ರ ಎಂದು ಕೇಳೋಣ ಎಂದುಕೊಂಡಿದ್ದೆ. ಚೆಕ್​ನಲ್ಲಿ ಕೊಟ್ರಾ ಅಥವಾ ಕ್ಯಾಶ್ ಅಲ್ಲಿ ಕೊಟ್ರ ಎಂದು ಕೇಳಬೇಕಿತ್ತು’ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: ಮೋದಿ ವಿಶೇಷ ವ್ಯಕ್ತಿ ಏಕೆ ಎಂಬುದನ್ನು ಸ್ವ ಅನುಭವದಲ್ಲಿ ವಿವರಿಸಿದ ಮಾಧವನ್

‘ಮೀಟಿಂಗ್ ದಿ ಪ್ರೈಮ್ ಮಿನಿಸ್ಟರ್’ ಹೆಸರಿನ ಸ್ಟ್ಯಾಂಡಪ್​ ಕಾಮಿಡಿಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ರಾಜ್ ಭವನದಲ್ಲಿ ಅನಿಲ್ ಕುಂಬ್ಳೆ, ಜಾವಾಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್​ನ ಒಟ್ಟಿಗೆ ಭೇಟಿ ಮಾಡಿದ್ದೆ’ ಎಂದು ಅಯ್ಯೋ ಶ್ರದ್ಧಾ ಹೇಳಿದರು. ರಾಜಭವನದಲ್ಲಿ ಈ ಭೇಟಿ ನಡೆದಿತ್ತು. ಅದು ಸಾಕಷ್ಟು ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:14 pm, Wed, 17 September 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್