AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?

ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರ ಕುರಿತು ಮಾಹಿತಿ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಅನ್ವಿತಾ, 'ಮಲ್ಲಿ' ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಧಾರಾವಾಹಿಯಲ್ಲಿ ಮಲ್ಲಿಯ ಎರಡನೇ ಮದುವೆ ಮತ್ತು ಸರ್ಕಾರಿ ಅಧಿಕಾರಿಯಾಗುವ ತಿರುವು ಅವರ ಪಾತ್ರಕ್ಕೆ ಹೊಸ ಆಯಾಮ ನೀಡಿದೆ.

‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?
ಅನ್ವಿತಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 07, 2026 | 7:55 AM

Share

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ’ ಧಾರಾವಾಹಿ (Amruthadhare Serial) ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಟಿಆರ್ಪಿಯಲ್ಲೂ ಧಾರಾವಾಹಿ ಟಾಪ್ ಐದರಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಈ ಧಾರಾವಾಹಿಯಲ್ಲಿ ಗೌತಮ್ ಹಾಗು ಭೂಮಿಕಾ ಪಾತ್ರ ಮಾಡಿರುವ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಎಷ್ಟು ಗಮನ ಸೆಳೆದಿದ್ದಾರೋ, ಮಲ್ಲಿ ಪಾತ್ರ ಮಾಡಿರುವ ಅನ್ವಿತಾ ಕೂಡ ಮೆಚ್ಚುಗೆ ಪಡೆದಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ಮೊದಲು ರಾಧಾ ಭಗವತಿ ಕಾಣಿಸಿಕೊಂಡಿದ್ದರು. ಅವರಿಗೆ ಕಲರ್ಸ್ ಕನ್ನಡದಲ್ಲಿ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಸಿಕ್ಕಿತು. ಆ ಬಳಿಕ ಅವರು ಧಾರಾವಾಹಿ ಬಿಟ್ಟರು ಮತ್ತು ಈ ಧಾರಾವಾಹಿ ಆಫರ್ ಅನ್ವಿತಾ ಅವರಿಗೆ ಹೋಯಿತು. ಅವರಿಗೆ ಸಾಗರ ಎಂದರೆ ಬಲು ಇಷ್ಟವಂತೆ.

ಅನ್ವಿತಾ ಸಾಗರ್ ಅವರದ್ದು ಮೂಲ ಶಿವಮೊಗ್ಗ ಜಿಲ್ಲೆಯ ಸಾಗರ. ಅವರು ಹುಟ್ಟಿದ್ದು ಇಲ್ಲಿ. ಅವರ ಅಪ್ಪ-ಅಮ್ಮ, ಅಣ್ಣ ಮಂಗಳೂರಿನಲ್ಲೇ ಇದ್ದಾರೆ. ಅವರಿಗೆ ಸಾಗರ ಎಂದರೆ ವಿಶೇಷ ಪ್ರೀತಿ ಇದೆ. ತಾವು ಹುಟ್ಟಿದ ಊರು ಎಂದು ಅವರಿಗೆ ವಿಶೇಷ ಪ್ರೀತಿ ಇದೆ. ಅನ್ವಿತಾ ಸಾಗರ್ ಅವರ ಸಹೋದರ ಅನೂಪ್ ತುಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸಾಗರದ ಇಕ್ಕೇರಿ, ಕೆಳದಿ, ಮನೆ ಜಾಗ ಎಲ್ಲವೂ ಇಷ್ಟ. ಅಲ್ಲಿನ ಹಸಿರು ಪರಿಸರ ಇಷ್ಟ ಆಗುತ್ತದೆ. ಅವರಿಗೆ ಜೋಗ್ ಫಾಲ್ಸ್ ಕೂಡ ಇಷ್ಟ. ಮಂಗಳೂರಿನಲ್ಲಿ ಕುಟುಂಬದವರ ಇದ್ದಾರೆ. ಅವರ ಮನೆಯ ಅಡುಗೆಯನ್ನು ಊಟ ಮಾಡಬಹುದು. ಬೆಂಗಳೂರಲ್ಲಿ ಅವರಿಗೆ ಒಂಟಿತನ ಕಾಡುತ್ತದೆಯಂತೆ. .

ಇದನ್ನೂ ಓದಿ: ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಅನ್ವಿತಾ ಸಾಗರ್ ಅವರು ಮಲ್ಲಿಯಾಗಿ ಎಲ್ಲರಿಗೂ ಇಷ್ಟ ಆಗಿದ್ದಾರೆ. ಅವರ ನಟನೆಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಈಗ ಮಲ್ಲಿಗೆ ಎರಡನೇ ಮದುವೆ ಆಗಿದೆ. ಇಲ್ಲಿಂದ ಅವರ ಜೀವನ ಸಂಪೂರ್ಣ ಬದಲಾಗುವ ನಿರೀಕ್ಷೆ ಇದೆ. ಅವರು ಈಗ ಸಿವಿಲ್ ಪರೀಕ್ಷೆ ಪಾಸ್ ಆಗಿದ್ದು, ಸರ್ಕಾರಿ ಅಧಿಕಾರಿ ಆಗುವ ಸಾಧ್ಯತೆಯೂ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:51 am, Tue, 7 April 26

Follow Us