ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು

ಬಿಗ್ ಬಾಸ್ ಫಿನಾಲೆ ವೀಕ್​​ನಲ್ಲಿ ಒಂದು ಕೋರಿಕೆಯನ್ನು ಈಡೇರಿಸುವುದಾಗಿ ಮನೆ ಮಂದಿಗೆ ಹೇಳಿದ್ದರು. ಈ ವೇಳೆ ದಿವ್ಯಾ ಅವರು ಅರವಿಂದ್ ಕೆಪಿ ಮನೆ ಒಳಗೆ ಬರಲಿ ಎಂದು ಕೋರಿದ್ದರು. ದಿವ್ಯಾ ಕೋರಿಕೆಯಂತೆ ಅರವಿಂದ್ ಮನೆ ಒಳಗೆ ಬಂದರು.

ಬಿಗ್ ಬಾಸ್​ನಲ್ಲಿ ಅರವಿಂದ್-ದಿವ್ಯಾ ಉರುಡುಗ ಜೋಡಿ ನೋಡಿ ಮನೆ ಮಂದಿ ಹೇಳಿದ್ದು ಒಂದೇ ಮಾತು
ದಿವ್ಯಾ-ಅರವಿಂದ್
Follow us
| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 2:39 PM

‘ಬಿಗ್ ಬಾಸ್​ ಕನ್ನಡ ಸೀಸನ್​ 9’ರ (BBK 9) ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಕಪ್ ಗೆಲ್ಲೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಎಂದಿನಂತೆ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಫಿನಾಲೆ ಎಪಿಸೋಡ್​ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ಸರ್​ಪ್ರೈಸ್ ನೀಡಲಾಗುತ್ತಿದೆ. ದಿವ್ಯಾ ಉರುಡುಗ ಅವರ ಕೋರಿಕೆಯಂತೆ ಈ ಬಾರಿ ಅರವಿಂದ್ ಕೆಪಿ ಅವರನ್ನು ದೊಡ್ಮನೆ ಒಳಗೆ ಕಳುಹಿಸಲಾಯಿತು. ಈ ಜೋಡಿಯನ್ನು ನೋಡಿ ಮನೆ ಮಂದಿ ಸಖತ್ ಖುಷಿಪಟ್ಟರು.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ‘ಕನ್ನಡ ಬಿಗ್ ಬಾಸ್​ ಸೀಸನ್​ 8’ರಲ್ಲಿ ಮೊದಲ ಬಾರಿಗೆ ಭೇಟಿ ಆದರು. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಫ್ರೆಂಡ್​ಶಿಪ್ ಬಳಿಕ ಪ್ರೀತಿಗೆ ತಿರುಗಿದೆ. ಇದನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ಆದರೆ, ಪರೋಕ್ಷವಾಗಿ ಪ್ರೀತಿ ವಿಚಾರವನ್ನು ಇವರು ಹೇಳುತ್ತಲೇ ಇರುತ್ತಾರೆ. ಈ ಬಾರಿ ದಿವ್ಯಾ ಅವರು ಅರವಿಂದ್ ಇಲ್ಲದೆ ಬಿಗ್ ಬಾಸ್​ಗೆ ಬಂದಿದ್ದರು. ಆರಂಭದಲ್ಲಿ ಡಲ್ ಇದ್ದ ಅವರು ನಂತರ ತಮ್ಮ ನಿಜವಾದ ಆಟ ತೋರಿಸಿದರು.

ಬಿಗ್ ಬಾಸ್ ಫಿನಾಲೆ ವೀಕ್​​ನಲ್ಲಿ ಒಂದು ಕೋರಿಕೆಯನ್ನು ಈಡೇರಿಸುವುದಾಗಿ ಮನೆ ಮಂದಿಗೆ ಹೇಳಿದ್ದರು. ಈ ವೇಳೆ ದಿವ್ಯಾ ಅವರು ಅರವಿಂದ್ ಕೆಪಿ ಮನೆ ಒಳಗೆ ಬರಲಿ ಎಂದು ಕೋರಿದ್ದರು. ದಿವ್ಯಾ ಕೋರಿಕೆಯಂತೆ ಅರವಿಂದ್ ಮನೆ ಒಳಗೆ ಬಂದರು. ಎಲ್ಲರ ಜತೆ ಸಂತೋಷದ ಕ್ಷಣವನ್ನು ಕಳೆದು ಹೋದರು.

ಇದನ್ನೂ ಓದಿ
Image
ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
Image
ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ
Image
Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ಇದನ್ನೂ ಓದಿ: Divya Uruduga: ದಿವ್ಯಾ ಉರುಡುಗ ಸಲುವಾಗಿ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಅರವಿಂದ್ ಕೆಪಿ

ಅರವಿಂದ್ ಕೆಪಿ ಬಂದು ಹೋದ ನಂತರದಲ್ಲಿ ದಿವ್ಯಾ ಅವರಲ್ಲಿ ಉತ್ಸಾಹ ಕಂಡುಬಂತು. ‘ನೀವು ಬೆಸ್ಟ್ ಕಪಲ್’ ಎಂದು ಒಂದೇ ಮಾತಲ್ಲಿ ಈ ಜೋಡಿ ಬಗ್ಗೆ ದೀಪಿಕಾ ದಾಸ್ ಮೆಚ್ಚುಗೆ ಸೂಚಿಸಿದರು. ರೂಪೇಶ್ ಶೆಟ್ಟಿ ಕೂಡ ಅರವಿಂದ್​ನ ಭೇಟಿ ಮಾಡಿ ಖುಷಿ ಆದರು. ‘ಅರವಿಂದ್ ತುಂಬಾ ಗಂಭೀರವಾಗಿ ಇರುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಇಷ್ಟು ಫನ್ನಿಯಾಗಿ ಇರುತ್ತಾರೆ ಎಂದು ಗೊತ್ತಿರಲಿಲ್ಲ. ನನ್ನನ್ನೇ ನೋಡಿದಂತೆ ಆಯ್ತು’ ಎಂದು ರೂಪೇಶ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು