ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ

ಈ ಚಿತ್ರದಲ್ಲಿ ದೆವ್ವ ಹಾಗೂ ಹೀರೋ ಎರಡೂ ಸುದೀಪ್ ಅವರಂತೆ! ಈ ವಿಚಾರವನ್ನು ಕೂಡ ಆರ್ಯವರ್ಧನ್ ಹೇಳಿದ್ದಾರೆ. ಇಷ್ಟೆಲ್ಲ ಕೇಳಿದ ನಂತರದಲ್ಲಿ ಸಿನಿಮಾದ ಕಥೆ ಏನಿರಬಹುದು ಎನ್ನುವ ಕುತೂಹಲ ಅನೇಕರಲ್ಲಿ ಮೂಡಿತು. ಇದಕ್ಕೆ ರಾಕೇಶ್ ಉತ್ತರಿಸಿದರು.

ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ
ಆರ್ಯವರ್ಧನ್​-ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 19, 2022 | 11:32 AM

ಬಿಗ್ ಬಾಸ್ (Bigg Boss) ಕೊನೆಯ ಹಂತ ತಲುಪಿದೆ. ಕೆಲವೇ ದಿನಗಳಲ್ಲಿ ಈ ಶೋ ಪೂರ್ಣಗೊಳ್ಳಲಿದೆ. ಮನೆಯಲ್ಲಿ ಸದ್ಯ ಎಂಟು ಸ್ಪರ್ಧಿಗಳಿದ್ದಾರೆ. ಈ ಪೈಕಿ ಆರ್ಯವರ್ಧನ್ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಒಟಿಟಿ ಸೀಸನ್ ಮೂಲಕ ಬಿಗ್ ಬಾಸ್ ಜರ್ನಿ ಆರಂಭಿಸಿದರು. ಟಿವಿ ಸೀಸನ್​ಗೆ ಕಾಲಿಟ್ಟು ಆರ್ಯವರ್ಧನ್ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಏನು ಮಾತನಾಡುತ್ತಾರೆ ಎನ್ನುವ ವಿಚಾರ ಕೆಲವೊಮ್ಮೆ ಅವರಿಗೇ ಗೊತ್ತಿರುವುದಿಲ್ಲ. ಈಗ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಿಚಾರ ಹೇಳಿದ್ದಾರೆ. ಆರ್ಯವರ್ಧನ್ ಅವರ ಕಥೆ ಕೇಳಿ ಕಿಚ್ಚ ಸುದೀಪ್ (Kichcha Sudeep) ತಲೆಕೆಡಿಸಿಕೊಂಡಿದ್ದಾರೆ.

ವೀಕೆಂಡ್ ಎಪಿಸೋಡ್​ಗೆ ಕಿಚ್ಚ ಸುದೀಪ್ ಬರುತ್ತಾರೆ. ಈ ವೇಳೆ ಸ್ಪರ್ಧಿಗಳಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದರ ಜತೆಗೆ ಒಂದಷ್ಟು ಫನ್ ಕೂಡ ಇರುತ್ತದೆ. ಕಳೆದ ವಾರದ ಎಪಿಸೋಡ್​ನಲ್ಲೂ ಅದು ಮುಂದುವರಿದಿದೆ. ‘ಬಿಗ್ ಬಾಸ್​ನಲ್ಲಿ 50 ಲಕ್ಷ ರೂಪಾಯಿ ವಿನ್ ಆದರೆ ಆ ಹಣವನ್ನು ಏನು ಮಾಡ್ತೀರಿ’ ಎಂದು ಪ್ರಶ್ನೆ ಮಾಡಿದರು ಸುದೀಪ್. ಇದಕ್ಕೆ ಆರ್ಯವರ್ಧನ್ ಉತ್ತರ ಕೊಟ್ಟರು.

‘ನಾನು ಹಣ ಗೆದ್ದರೆ ಊಟಕ್ಕೆ ಖರ್ಚು ಮಾಡಲ್ಲ. ಈ ಹಣವನ್ನು ನೆನಪಿನ ಕಾಣಿಕೆ ಎಂದುಕೊಳ್ಳುತ್ತೇನೆ. ಒಂದು ದೇವಸ್ಥಾನ ಕಟ್ಟಿಸ್ತೀನಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೊಂದು ಕಥೆ ಬರ್ದಿದೀನಿ. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನನ್ನ ಫ್ರೆಂಡ್. ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ಅವರನ್ನು ಕರೆದುಕೊಂಡು ನಿಮ್ಮ ಮನೆಗೆ ಬಂದು ಕಥೆ ಹೇಳ್ತೀನಿ. ಇದು 300 ಕೋಟಿ ರೂಪಾಯಿ ಬಜೆಟ್ ಸಿನಿಮಾ’ ಎಂದರು ಆರ್ಯವರ್ಧನ್.

ಇದನ್ನೂ ಓದಿ
Image
Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ
Image
ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 
Image
ಮಿತಿ ಮೀರಿದ ಬಜೆಟ್​; ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಸಂಭಾವನೆಯನ್ನೇ ಪಡೆದಿಲ್ಲ ರಣಬೀರ್ ಕಪೂರ್

ಈ ಚಿತ್ರದಲ್ಲಿ ದೆವ್ವ ಹಾಗೂ ಹೀರೋ ಎರಡೂ ಸುದೀಪ್ ಅವರಂತೆ! ಈ ವಿಚಾರವನ್ನು ಕೂಡ ಆರ್ಯವರ್ಧನ್ ಹೇಳಿದ್ದಾರೆ. ಇಷ್ಟೆಲ್ಲ ಕೇಳಿದ ನಂತರದಲ್ಲಿ ಸಿನಿಮಾದ ಕಥೆ ಏನಿರಬಹುದು ಎನ್ನುವ ಕುತೂಹಲ ಅನೇಕರಲ್ಲಿ ಮೂಡಿತು. ಇದಕ್ಕೆ ರಾಕೇಶ್ ಉತ್ತರಿಸಿದರು.

ಇದನ್ನೂ ಓದಿ: ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 

‘ಹೀರೋ ವಿದೇಶದಿಂದ ಹಳ್ಳಿಗೆ ಬರ್ತಾನೆ. ಹಳ್ಳಿಯಲ್ಲಿ ದೆವ್ವದ ಕಾಟ. ದೆವ್ವ ಮನೆನೇ ಎತ್ತಿ ಬೇರೆ ಕಡೆ ಇಡುತ್ತದೆ. ದೆವ್ವನ ಸಾಯಿಸಿದರೆ ಆ ದೆವ್ವಕ್ಕಿಂತ ಪವರ್​ಫುಲ್ ಆಗಬಹುದು ಎನ್ನುವ ವಿಚಾರ ಹೀರೋಗೆ ಗೊತ್ತಾಗುತ್ತದೆ. ಹೀಗಾಗಿ, ಹೀರೋ ದೆವ್ವನ ಕೊಲ್ಲೋಕೆ ಹೋಗುತ್ತಾನೆ. ಹೀಗೆ ಕೊಲ್ಲುವಾಗ ಫೌಲ್ ಆಗುತ್ತದೆ..’ ಎಂದು ರಾಕೇಶ್ ಅವರು ಆರ್ಯವರ್ಧನ್ ಹೇಳಿದ ಕಥೆ ವಿವರಿಸುತ್ತಾ ಹೋದರು. ಇದನ್ನು ಕೇಳಿ ಸುದೀಪ್​ಗೆ ಶಾಕ್ ಆಗಿದೆ. ಅವರು ತಲೆಕೆಡಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Mon, 19 December 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ