AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?

Bigg Boss 10: ಬಿಗ್​ಬಾಸ್​ನ ಮನೆಯಲ್ಲಿ ಹಲವು ಸ್ಪರ್ಧಿಗಳು ಆಡುತ್ತಿದ್ದಾರೆ. ಆದರೆ ಆ ಸ್ಪರ್ಧಿಗಳಲ್ಲಿ ರಾಜ ಯಾರು, ರಾಣಿ ಯಾರು? ಗುಲಾಮ, ಜೋಕರ್ ಹಾಗೂ ಎಕ್ಕ ಯಾರು? ಎಂದು ಮನೆಯ ಸದಸ್ಯರೇ ಆರಿಸಿದ್ದಾರೆ.

ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?
ಮಂಜುನಾಥ ಸಿ.
|

Updated on:Nov 14, 2023 | 11:23 PM

Share

ಬಿಗ್​ಬಾಸ್ (Bigg Boss) ಮನೆಯ ಕೆಲವು ಸದಸ್ಯರು ಮನೆಯ ಹೊರಗೆ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ತನಿಷಾ ಕುಪ್ಪಂಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ಅವರ ಮದುವೆಯ ಚಿತ್ರಗಳು ವೈರಲ್ ಆಗಿದ್ದು, ಸಂತೋಷ್ ಅವರ ಮಾವ, ಸಂತೋಷ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಇದ್ಯಾವುದರ ಪರಿವೆ ಇಲ್ಲದೆ ಬಿಗ್​ಬಾಸ್ ಮನೆಯ ಒಳಗೆ ಸ್ಪರ್ಧಿಗಳು ಆರಾಮವಾಗಿ ಬಿಗ್​ಬಾಸ್ ನೀಡಿದ ಟಾಸ್ಕ್​ಗಳನ್ನು ಆಡುತ್ತಿದ್ದಾರೆ.

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಲಾಯ್ತು. ಈ ಮನೆಯ ರಾಜ, ರಾಣಿ, ಗುಲಾಮ, ಜೋಕರ್ ಹಾಗೂ ಎಕ್ಕ ಯಾರು ಎಂಬುದನ್ನು ಸ್ಪರ್ಧಿಗಳು ಹೇಳುವಂತೆ ಬಿಗ್​ಬಾಸ್ ಆದೇಶಿಸಿದರು. ಜೊತೆಗೆ ಆಯ್ಕೆಗೆ ಸೂಕ್ತ ಕಾರಣವನ್ನು ಸಹ ಮನೆಯ ಸದಸ್ಯರು ನೀಡಬೇಕಿತ್ತು.

ಅಂತೆಯೇ ಮನೆಯ ಸದಸ್ಯರು ಮೊದಲಿಗೆ ಭಾಗ್ಯಶ್ರೀ ಅವರಿಗೆ ಜೋಕರ್ ಪಟ್ಟ ನೀಡಿದರು. ಭಾಗ್ಯಶ್ರೀ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಒಮ್ಮೊಮ್ಮೆ ಏನೋ ಮಾತನಾಡಲು ಹೋಗಿ ಇನ್ನೇನೊ ಮಾತನಾಡಿ ತಾವೇ ತಪ್ಪಿಗೆ ಸಿಲುಕಿಕೊಂಡು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ ಎಂದು ಹಲವರು ಹೇಳಿದರು. ಮನೆಯವರು ಕೊಟ್ಟ ಜೋಕರ್ ಬಿರುದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳುವುದಾಗಿ ಭಾಗ್ಯಶ್ರೀ ಹೇಳಿದರು.

ಇದನ್ನೂ ಓದಿ:ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

ಅದಾದ ಬಳಿಕ ತನಿಷಾರನ್ನು ಮನೆಯ ರಾಣಿಯನ್ನಾಗಿ ಸದಸ್ಯರು ಆರಿಸಿದರು. ಸಿರಿ ಅವರ ಹೆಸರನ್ನು ಸಹ ಕೆಲವರು ಹೇಳಿದರು. ತನಿಷಾರ ಎದುರಾಳಿ ತಂಡದ ವಿನಯ್, ನಮ್ರತಾ ಸಹ ತನಿಷಾರನ್ನೇ ಮನೆಯ ರಾಣಿಯನ್ನಾಗಿ ಆಯ್ಕೆ ಮಾಡಿದರು. ತನಿಷಾರ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಮನೆಯ ಗುಲಾಮ ಯಾರು ಎಂದು ಆಯ್ಕೆ ಮಾಡುವಾಗ ಮನೆಯ ಹಲವು ಸದಸ್ಯರು ಆಯ್ಕೆ ಮಾಡಿದ್ದು ಇಶಾನಿಯನ್ನು. ವಿನಯ್, ಮೈಖಲ್ ಸಹ ಇಶಾನಿಯನ್ನೇ ಗುಲಾಮ ಎಂದರು. ಇಶಾನಿ ಸಹ ಅದನ್ನು ಖುಷಿಯಿಂದಲೇ ಸ್ವೀಕರಿಸಿದರು.

ಬಳಿಕ ರಾಜನ ಆಯ್ಕೆ ನಡೆಯಿತು. ಮನೆಯ ಹಲವು ಸದಸ್ಯರು ವಿನಯ್​ರ ಹೆಸರನ್ನು ಸೂಚಿಸಿದರು. ಕೆಲವರು ಕಾರ್ತಿಕ್ ಹೆಸರನ್ನು ಸಹ ಹೇಳಿದರು. ಅಂತಿಮವಾಗಿ ವಿನಯ್ ಅವರೇ ಮನೆಯ ರಾಜ ಎನಿಸಿಕೊಂಡರು. ಇದರಿಂದ ಕಾಂಪಿಟೇಷನ್ ಹೆಚ್ಚುತ್ತದೆ, ಒಬ್ಬ ರಾಜನನ್ನು ಇಳಿಸಿಯೇ ಇನ್ನೊಬ್ಬ ರಾಜ ಆಗಬೇಕು, ಮನೆಯ ಎಲ್ಲ ಸದಸ್ಯರು ನನ್ನನ್ನು ಇಳಿಸಲು ಕಾಯುತ್ತಿರಬಹುದು ಎಂದರು ವಿನಯ್.

ಕೊನೆಯಲ್ಲಿ ಎಕ್ಕ ಯಾರೆಂದು ಆಯ್ಕೆ ಮಾಡಲಾಯ್ತು. ಯಾರ ನಡೆಯನ್ನು ಊಹಿಸಲಾಗುವುದಿಲ್ಲ, ತಮ್ಮ ವರ್ತನೆಯಿಂದ, ಪ್ರದರ್ಶನದಿಂದ ಸರ್ಪ್ರೈಸ್ ಕೊಡುತ್ತಿರುತ್ತಾರೋ ಅವರನ್ನು ಎಕ್ಕ ಎಂದು ಆರಿಸಬೇಕಿತ್ತು. ಮನೆಯ ಬಹುತೇಕ ಸದಸ್ಯರು ಸ್ನೇಹಿತ್ ಅನ್ನು ಎಕ್ಕ ಎಂದು ಆರಿಸಿದರು. ಸ್ನೇಹಿತ್ ಹೆಸರನ್ನೂ ಸಹ ಕೆಲವರು ಹೇಳಿದರು. ಆದರೆ ಅಂತಿಮವಾಗಿ ಪ್ರತಾಪ್ ಅವರೇ ಎಕ್ಕ ಆದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Tue, 14 November 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು