Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?

Bigg Boss 10: ಬಿಗ್​ಬಾಸ್​ನ ಮನೆಯಲ್ಲಿ ಹಲವು ಸ್ಪರ್ಧಿಗಳು ಆಡುತ್ತಿದ್ದಾರೆ. ಆದರೆ ಆ ಸ್ಪರ್ಧಿಗಳಲ್ಲಿ ರಾಜ ಯಾರು, ರಾಣಿ ಯಾರು? ಗುಲಾಮ, ಜೋಕರ್ ಹಾಗೂ ಎಕ್ಕ ಯಾರು? ಎಂದು ಮನೆಯ ಸದಸ್ಯರೇ ಆರಿಸಿದ್ದಾರೆ.

ಬಿಗ್​ಬಾಸ್ ಮನೆಯ ರಾಜ-ರಾಣಿ-ಗುಲಾಮ-ಜೋಕರ್ ಯಾರು?
Follow us
ಮಂಜುನಾಥ ಸಿ.
|

Updated on:Nov 14, 2023 | 11:23 PM

ಬಿಗ್​ಬಾಸ್ (Bigg Boss) ಮನೆಯ ಕೆಲವು ಸದಸ್ಯರು ಮನೆಯ ಹೊರಗೆ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ತನಿಷಾ ಕುಪ್ಪಂಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರ್ತೂರು ಸಂತೋಷ್ ಅವರ ಮದುವೆಯ ಚಿತ್ರಗಳು ವೈರಲ್ ಆಗಿದ್ದು, ಸಂತೋಷ್ ಅವರ ಮಾವ, ಸಂತೋಷ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಇದ್ಯಾವುದರ ಪರಿವೆ ಇಲ್ಲದೆ ಬಿಗ್​ಬಾಸ್ ಮನೆಯ ಒಳಗೆ ಸ್ಪರ್ಧಿಗಳು ಆರಾಮವಾಗಿ ಬಿಗ್​ಬಾಸ್ ನೀಡಿದ ಟಾಸ್ಕ್​ಗಳನ್ನು ಆಡುತ್ತಿದ್ದಾರೆ.

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಲಾಯ್ತು. ಈ ಮನೆಯ ರಾಜ, ರಾಣಿ, ಗುಲಾಮ, ಜೋಕರ್ ಹಾಗೂ ಎಕ್ಕ ಯಾರು ಎಂಬುದನ್ನು ಸ್ಪರ್ಧಿಗಳು ಹೇಳುವಂತೆ ಬಿಗ್​ಬಾಸ್ ಆದೇಶಿಸಿದರು. ಜೊತೆಗೆ ಆಯ್ಕೆಗೆ ಸೂಕ್ತ ಕಾರಣವನ್ನು ಸಹ ಮನೆಯ ಸದಸ್ಯರು ನೀಡಬೇಕಿತ್ತು.

ಅಂತೆಯೇ ಮನೆಯ ಸದಸ್ಯರು ಮೊದಲಿಗೆ ಭಾಗ್ಯಶ್ರೀ ಅವರಿಗೆ ಜೋಕರ್ ಪಟ್ಟ ನೀಡಿದರು. ಭಾಗ್ಯಶ್ರೀ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಒಮ್ಮೊಮ್ಮೆ ಏನೋ ಮಾತನಾಡಲು ಹೋಗಿ ಇನ್ನೇನೊ ಮಾತನಾಡಿ ತಾವೇ ತಪ್ಪಿಗೆ ಸಿಲುಕಿಕೊಂಡು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ ಎಂದು ಹಲವರು ಹೇಳಿದರು. ಮನೆಯವರು ಕೊಟ್ಟ ಜೋಕರ್ ಬಿರುದನ್ನು ಆರೋಗ್ಯಕರವಾಗಿ ತೆಗೆದುಕೊಳ್ಳುವುದಾಗಿ ಭಾಗ್ಯಶ್ರೀ ಹೇಳಿದರು.

ಇದನ್ನೂ ಓದಿ:ಮೋಸಗಾರ, ವ್ಯಸನಿ, ಮಗಳಿಗೆ ಅನ್ಯಾಯ ಮಾಡಿದ್ದಾನೆ: ವರ್ತೂರು ಸಂತೋಷ್ ವಿರುದ್ಧ ಮಾವ ಆರೋಪ

ಅದಾದ ಬಳಿಕ ತನಿಷಾರನ್ನು ಮನೆಯ ರಾಣಿಯನ್ನಾಗಿ ಸದಸ್ಯರು ಆರಿಸಿದರು. ಸಿರಿ ಅವರ ಹೆಸರನ್ನು ಸಹ ಕೆಲವರು ಹೇಳಿದರು. ತನಿಷಾರ ಎದುರಾಳಿ ತಂಡದ ವಿನಯ್, ನಮ್ರತಾ ಸಹ ತನಿಷಾರನ್ನೇ ಮನೆಯ ರಾಣಿಯನ್ನಾಗಿ ಆಯ್ಕೆ ಮಾಡಿದರು. ತನಿಷಾರ ಖುಷಿಗೆ ಪಾರವೇ ಇರಲಿಲ್ಲ. ಬಳಿಕ ಮನೆಯ ಗುಲಾಮ ಯಾರು ಎಂದು ಆಯ್ಕೆ ಮಾಡುವಾಗ ಮನೆಯ ಹಲವು ಸದಸ್ಯರು ಆಯ್ಕೆ ಮಾಡಿದ್ದು ಇಶಾನಿಯನ್ನು. ವಿನಯ್, ಮೈಖಲ್ ಸಹ ಇಶಾನಿಯನ್ನೇ ಗುಲಾಮ ಎಂದರು. ಇಶಾನಿ ಸಹ ಅದನ್ನು ಖುಷಿಯಿಂದಲೇ ಸ್ವೀಕರಿಸಿದರು.

ಬಳಿಕ ರಾಜನ ಆಯ್ಕೆ ನಡೆಯಿತು. ಮನೆಯ ಹಲವು ಸದಸ್ಯರು ವಿನಯ್​ರ ಹೆಸರನ್ನು ಸೂಚಿಸಿದರು. ಕೆಲವರು ಕಾರ್ತಿಕ್ ಹೆಸರನ್ನು ಸಹ ಹೇಳಿದರು. ಅಂತಿಮವಾಗಿ ವಿನಯ್ ಅವರೇ ಮನೆಯ ರಾಜ ಎನಿಸಿಕೊಂಡರು. ಇದರಿಂದ ಕಾಂಪಿಟೇಷನ್ ಹೆಚ್ಚುತ್ತದೆ, ಒಬ್ಬ ರಾಜನನ್ನು ಇಳಿಸಿಯೇ ಇನ್ನೊಬ್ಬ ರಾಜ ಆಗಬೇಕು, ಮನೆಯ ಎಲ್ಲ ಸದಸ್ಯರು ನನ್ನನ್ನು ಇಳಿಸಲು ಕಾಯುತ್ತಿರಬಹುದು ಎಂದರು ವಿನಯ್.

ಕೊನೆಯಲ್ಲಿ ಎಕ್ಕ ಯಾರೆಂದು ಆಯ್ಕೆ ಮಾಡಲಾಯ್ತು. ಯಾರ ನಡೆಯನ್ನು ಊಹಿಸಲಾಗುವುದಿಲ್ಲ, ತಮ್ಮ ವರ್ತನೆಯಿಂದ, ಪ್ರದರ್ಶನದಿಂದ ಸರ್ಪ್ರೈಸ್ ಕೊಡುತ್ತಿರುತ್ತಾರೋ ಅವರನ್ನು ಎಕ್ಕ ಎಂದು ಆರಿಸಬೇಕಿತ್ತು. ಮನೆಯ ಬಹುತೇಕ ಸದಸ್ಯರು ಸ್ನೇಹಿತ್ ಅನ್ನು ಎಕ್ಕ ಎಂದು ಆರಿಸಿದರು. ಸ್ನೇಹಿತ್ ಹೆಸರನ್ನೂ ಸಹ ಕೆಲವರು ಹೇಳಿದರು. ಆದರೆ ಅಂತಿಮವಾಗಿ ಪ್ರತಾಪ್ ಅವರೇ ಎಕ್ಕ ಆದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Tue, 14 November 23

ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್