AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಮನೆಯಲ್ಲಿ ಒಪ್ಪಂದಗಳಿಗಿಲ್ಲ ಬೆಲೆ; ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ತೆಗೆದುಕೊಳ್ಳಲಿದ್ದಾರೆ ಕ್ಲಾಸ್?

ಈ ರೂಲ್ಸ್ ಮಾಡಿದ ಕೆಲವೇ ನಿಮಿಷಕ್ಕೆ ಇದನ್ನು ಬ್ರೇಕ್ ಮಾಡಿದರು ರಾಕೇಶ್ ಅಡಿಗ. ಎದುರಾಳಿ ತಂಡದ ದಿವ್ಯಾ ಉರುಡುಗ ಬಳಿ ಹೋಗಿ ಗೊಂಬೆಯನ್ನು ಕದ್ದು ತಂದರು. ಇದರಿಂದ ರೂಪೇಶ್ ಶೆಟ್ಟಿ ಮೊದಲಾದವರು ಸಿಟ್ಟಾದರು.

ಬಿಗ್ ಬಾಸ್​ ಮನೆಯಲ್ಲಿ ಒಪ್ಪಂದಗಳಿಗಿಲ್ಲ ಬೆಲೆ; ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ತೆಗೆದುಕೊಳ್ಳಲಿದ್ದಾರೆ ಕ್ಲಾಸ್?
ಸುದೀಪ್
TV9 Web
| Updated By: ಮದನ್​ ಕುಮಾರ್​|

Updated on:Nov 16, 2022 | 7:25 AM

Share

ಬಿಗ್ ಬಾಸ್ (Bigg Boss) ಆಗಾಗ ರಣರಂಗ ಆಗುತ್ತಲೇ ಇರುತ್ತದೆ. ಅನೇಕ ಸ್ಪರ್ಧಿಗಳ ಮಧ್ಯೆ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಕೆಲವು ಬಾರಿ ಒಪ್ಪಂದ ಮಾಡಿಕೊಂಡ ಮರುಕ್ಷಣವೇ ಬ್ರೇಕ್ ಆಗುತ್ತದೆ. ಈ ವಿಚಾರದಲ್ಲಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಅನೇಕ ಬಾರಿ ಕ್ಲಾಸ್ ತೆಗೆದುಕೊಂಡಿದ್ದೂ ಇದೆ. ಈ ವಾರ ಸ್ಪರ್ಧಿಗಳು ಮತ್ತದೇ ತಪ್ಪು ಮಾಡಿದ್ದಾರೆ. ಇದರಿಂದ ವೀಕೆಂಡ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಒಂದನ್ನು ನೀಡಲಾಗಿದೆ. ಈ ಸ್ಪರ್ಧೆಯ ಪ್ರಕಾರ ಎರಡು ಟೀಂ ಮಾಡಲಾಗಿದೆ. ಪ್ರತೀ ಟೀಂನವರು ಬಿಗ್ ಬಾಸ್ ನೀಡಿದ ವಸ್ತುಗಳನ್ನು ಬಳಸಿ ಗೊಂಬೆ ತಯಾರಿಸಬೇಕು. ಈ ಟಾಸ್ಕ್​ ಆರಂಭ ಆಗುವುದಕ್ಕೂ ಮುನ್ನ ಮನೆಯವರೇ ಕೆಲ ನಿಯಮಗಳನ್ನು ಹಾಕಿಕೊಂಡಿದ್ದರು. ಟೀಂನ ಒಬ್ಬರು ಕಾಯಲು ಇದ್ದಾಗ ಗೊಂಬೆಯನ್ನು ಕದಿಯಬಾರದು ಎಂದು ರೂಲ್ಸ್ ಮಾಡಿಕೊಂಡರು.

ಈ ರೂಲ್ಸ್ ಮಾಡಿದ ಕೆಲವೇ ನಿಮಿಷಕ್ಕೆ ಇದನ್ನು ಬ್ರೇಕ್ ಮಾಡಿದರು ರಾಕೇಶ್ ಅಡಿಗ. ಎದುರಾಳಿ ತಂಡದ ದಿವ್ಯಾ ಉರುಡುಗ ಬಳಿ ಹೋಗಿ ಗೊಂಬೆಯನ್ನು ಕದ್ದು ತಂದರು. ಇದರಿಂದ ರೂಪೇಶ್ ಶೆಟ್ಟಿ ಮೊದಲಾದವರು ಸಿಟ್ಟಾದರು. ಇದಾದ ನಂತರ ಮಾಡಿದ ರೂಲ್ಸ್ ಎಲ್ಲವನ್ನೂ ಬ್ರೇಕ್ ಮಾಡುವ ನಿರ್ಧಾರಕ್ಕೆ ಬರಲಾಯಿತು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೂಲ್ಸ್​ ಇಲ್ಲ’ ಎಂದು ಘೋಷಿಸಿದರು ಒಂದು ತಂಡದ ಕ್ಯಾಪ್ಟನ್ ಅರುಣ್ ಸಾಗರ್. ಇದರಿಂದ ಮನೆಯಲ್ಲಿ ಕಿತ್ತಾಟ ಶುರುವಾಯಿತು. ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಮಧ್ಯೆ ಕಿತ್ತಾಟ ಶುರುವಾಯ್ತು. ಅನುಪಮಾ ಗೌಡ ಅವರು ‘ನನ್ನ ಕೂದಲನ್ನು ಗೊಬ್ಬರ ಎಳೆದ. ನಾನು ಎಲ್ಲರ ಹಾಗೆ ಮಾಡ್ತೀನಿ’ ಎಂದು ಎಚ್ಚರಿಕೆ ನೀಡಿದರು. ಅಮೂಲ್ಯ ಗೌಡ ಕೂಡ ಇದೇ ರೀತಿಯ ಆರೋಪ ಮಾಡಿದರು. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ವೈಲೆಂಟ್ ಆದರು.

ಇದನ್ನೂ ಓದಿ: ಹೀಗೆ ಮುಂದುವರಿದ್ರೆ ರಾಕೇಶ್ ಅಡಿಗ ಬಿಗ್ ಬಾಸ್ ವಿನ್ನರ್? ಸ್ಪರ್ಧಿಗಳಿಗೆ ಶುರುವಾಯ್ತು ಭಯ

ವೀಕೆಂಡ್​ ವೇಳೆ ಈ ವಿಚಾರದಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳಬಹುದು. ಶಾಂತ ರೀತಿಯಿಂದ ನಡೆಯಬೇಕಿದ್ದ ಸ್ಪರ್ಧೆಯನ್ನು ರಣರಂಗ ಮಾಡಿದ್ದಕ್ಕೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬಹುದು.

Published On - 10:03 pm, Tue, 15 November 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ