AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಚೈತ್ರಾಗೆ ಕಳಪೆ, ಮನೆ ಮಂದಿಯಿಂದ ಟಾರ್ಗೆಟ್ ಆಗುತ್ತಿದ್ದಾರೆಯೇ

Bigg Boss Kannada: ಬಿಗ್​ಬಾಸ್ ಕನ್ನಡದ ಈ ವಾರ ಮತ್ತೆ ಚೈತ್ರಾ ಕುಂದಾಪುರಗೆ ಕಳಪೆ ಪಟ್ಟ ನೀಡಲಾಗಿದೆ. ತ್ರಿವಿಕ್ರಂಗೆ ಉತ್ತಮ ನೀಡಲಾಗಿದೆ. ಕಳಪೆ ಸ್ವೀಕರಿಸಿದ ಚೈತ್ರಾ ಈ ಮನೆಯಲ್ಲಿ ಮೊದಲು ಯಾರಿಗೆ ಕಳಪೆ ನೀಡಬೇಕು ಎಂದು ಗುರುತಿಸುತ್ತಾರೆ ಆ ನಂತರ ಅದಕ್ಕೆ ಕೊಡಬಹುದಾದ ಕಾರಣಗಳನ್ನು ಹುಡುಕುತ್ತಾರೆ ಎಂದು ಟೀಕಿಸುತ್ತಾರೆ.

ಮತ್ತೆ ಚೈತ್ರಾಗೆ ಕಳಪೆ, ಮನೆ ಮಂದಿಯಿಂದ ಟಾರ್ಗೆಟ್ ಆಗುತ್ತಿದ್ದಾರೆಯೇ
Chaithra Kundapura
ಮಂಜುನಾಥ ಸಿ.
|

Updated on: Dec 20, 2024 | 11:19 PM

Share

ಚೈತ್ರಾ ಕುಂದಾಪುರ ಬಿಗ್​ಬಾಸ್ ಮನೆಯ ಭಿನ್ನ ಸ್ಪರ್ಧಿಯಾಗಿದ್ದಾರೆ. ಒಮ್ಮೆ ಈಗಾಗಲೇ ಮನೆ ಬಿಟ್ಟು ಹೋಗಿ ಮತ್ತೆ ಬಂದಿದ್ದಾರೆ. ಆದರೆ ಮನೆಯ ಸದಸ್ಯರಿಂದ ಸತತವಾಗಿ ಟಾರ್ಗೆಟ್ ಆಗುತ್ತಿದ್ದಾರೆಯೇ ಎಂಬ ಅನುಮಾನವೂ ಸಹ ಮೂಡಿದೆ. ಈ ವಾರ ಟಾಸ್ಕ್​ಗಳಲ್ಲಿ ಚೈತ್ರಾ ಅವರಿಂದ ಒಳ್ಳೆಯ ಪ್ರದರ್ಶನ ಬಂದಿಲ್ಲ. ಆದರೆ ಉಸ್ತುವಾರಿಯಾಗಿ ಮನೆಯ ಸದಸ್ಯರಿಗೆ ಬೆವರು ಇಳಿಸಿದ್ದಾರೆ. ಚೈತ್ರಾ ಅವರ ಉಸ್ತುವಾರಿಯನ್ನು ಕೆಲವರು ಒಪ್ಪಿದರೆ ಹಲವರು ಒಪ್ಪಿಲ್ಲ. ಆದರೆ ವಾರಾಂತ್ಯಕ್ಕೆ ಎಲ್ಲರೂ ಸೇರಿ ಚೈತ್ರಾಗೆ ಕಳಪೆ ಕೊಟ್ಟಿದ್ದಾರೆ.

ಮೊದಲೇ ನಿರ್ಣಯ ಮಾಡಿಕೊಂಡಂತೆ ಒಬ್ಬರ ಮೇಲಾದಮೇಲೊಬ್ಬರು ಚೈತ್ರಾಗೆ ಕಳಪೆ ನೀಡಿದರು. ಪ್ರತಿ ವಾರಾಂತ್ಯದಲ್ಲಿ ಚೈತ್ರಾಗೆ ಕಳಪೆ ನೀಡುವ ಕೆಲವರು ಈ ವಾರವೂ ಅದನ್ನೇ ಮುಂದುವರೆಸಿದರು. ಈಗಾಗಲೇ ಮೂರು-ನಾಲ್ಕು ಬಾರಿ ಕಳಪೆ ಸ್ವೀಕಾರ ಮಾಡಿರುವ ಚೈತ್ರಾ ಈ ಬಾರಿಯಂತೂ ನಗು-ನಗುತ್ತಲೇ ಕಳಪೆ ಪಟ್ಟ ಸ್ವೀಕರಿಸಿ ಜೈಲಿಗೆ ಹೋದರು.

ರಜತ್, ಚೈತ್ರಾ ಅವರ ಉಸ್ತುವಾರಿ ಸರಿ ಇರಲಿಲ್ಲ. ಅವರು ಆಟಗಾರರಿಗೆ ನೆಮ್ಮದಿ ಕೊಡಲಿಲ್ಲ ಎಂದರು. ಚೈತ್ರಾ ಸಹ ರಜತ್ ಮಾತಿಗೆ ಪ್ರತ್ಯುತ್ತರಗಳನ್ನು ನೀಡಿದರು. ಧನರಾಜ್, ಹನುಮಂತು, ಭವ್ಯಾ ಗೌಡ, ಮೋಕ್ಷಿತಾ ಅವರುಗಳು ಸಹ ಚೈತ್ರಾಗೆ ಕಳಪೆ ನೀಡಿದರು. ಇದರಿಂದ ಬೇಸರಗೊಂಡ ಚೈತ್ರಾ, ಗುಂಪು ಮಾಡಿಕೊಂಡು ಕಳಪೆ ಕೊಡುತ್ತೀರ ಎಂದು ಆರೋಪ ಮಾಡಿದರು. ಮಾತ್ರವಲ್ಲದೆ ಇಲ್ಲಿ ಮೊದಲು ಯಾವ ವ್ಯಕ್ತಿಗೆ ಕಳಪೆ ಕೊಡಬೇಕು ಎಂದು ಫಿಕ್ಸ್ ಮಾಡುತ್ತಾರೆ ಆ ನಂತರ ಅದಕ್ಕೆ ಕಾರಣ ಹುಡುಕುತ್ತಾರೆ ಎಂದರು. ಚೈತ್ರಾ ಕೊನೆಗೆ ನಗು-ನಗುತ್ತಲೇ ಕಳಪೆ ಪಟ್ಟ ತೆಗೆದುಕೊಂಡು ಜೈಲಿಗೆ ಹೋದರು.

ಇದನ್ನೂ ಓದಿ:ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್

ಚೈತ್ರಾಗೆ ಕಳಪೆ ಸಿಕ್ಕಿತು ಆದರೆ ವಿಕ್ರಂಗೆ ಉತ್ತಮ ಸಿಕ್ಕಿತು. ಅಂದಹಾಗೆ ಕಳೆದ ವಾರ ಚೈತ್ರಾ ಹಾಗೂ ತ್ರಿವಿಕ್ರಂ ಇಬ್ಬರಿಗೂ ಕಳಪೆ ಸಿಕ್ಕು ಇಬ್ಬರೂ ಒಟ್ಟಿಗೆ ಜೈಲು ಸೇರಿದ್ದರು. ಆದರೆ ತಮ್ಮ ಪ್ರದರ್ಶನ ಉತ್ತಮ ಮಾಡಿಕೊಂಡ ತ್ರಿವಿಕ್ರಮ್ ಈ ವಾರ ಕಳಪೆ ಆದರು. ಆದರೆ ಪ್ರದರ್ಶನ ಉತ್ತಮ ಮಾಡಿಕೊಳ್ಳದ ಚೈತ್ರಾ ಈ ವಾರವೂ ಕಳಪೆ ಆಗಿಯೇ ಉಳಿದುಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?