ಬಿಡದಿಯಲ್ಲಿರುವ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಶೂಟಿಂಗ್ ಆರಂಭ ಆಗಿದೆ. ಸಂಜೆ ಕಲರ್ಫುಲ್ ಆಗಿ ಬಿತ್ತರ ಆಗುವ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಯಿಂದಲೇ ಚಿತ್ರಿಸಲಾಗುತ್ತಿದೆ. ವೇದಿಕೆ ಮೇಲೆ ನಟ-ನಟಿಯರ ಡ್ಯಾನ್ಸ್ ಪರ್ಫಾರ್ಮೆನ್ಸ್, ಕಿಚ್ಚನ ಮಸ್ತ್ ನಿರೂಪಣೆ ಸೇರಿದಂತೆ ಅನೇಕ ರಂಗುರಂಗಿನ ಕ್ಷಣಗಳ ಚಿತ್ರೀಕರಣ ನಡೆಯುತ್ತಿದೆ.
ಕಿರುತೆರೆ ವೀಕ್ಷಕರಿಗಂತೂ ಬಿಗ್ ಬಾಸ್ ಫಿನಾಲೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಯಾರು ವಿನ್ನರ್ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಫಿನಾಲೆ ತಯಾರಿಯ ಒಂದು ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕಮೆಂಟ್ ಮಾಡಿದ ಅನೇಕರು ತಮ್ಮ ಕಾತರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಫಿನಾಲೆಗೆ ಬಂದಿರುವ ಎಲ್ಲ 5 ಸ್ಪರ್ಧಿಗಳು ತಮ್ಮದೇ ಪ್ಲಸ್ ಮತ್ತು ಮೈನಸ್ ಗುಣಗಳ ಕಾರಣಕ್ಕೆ ಕೌತುಕ ಮೂಡಿಸಿದ್ದಾರೆ. ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ವೀಕ್ಷಕರು ಅಭಿಪ್ರಾಯಪಟ್ಟಿದ್ದರೆ, ಅರವಿಂದ್ ಗೆಲ್ಲುತ್ತಾರೆ ಎಂಬುದು ಮತ್ತೊಂದು ವರ್ಗದ ವೀಕ್ಷಕರ ಅಭಿಪ್ರಾಯ. ದಿವ್ಯಾ ಉರುಡುಗ, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ಕೂಡ ವೀಕ್ಷಕರಿಂದ ಹೆಚ್ಚು ವೋಟ್ಗಳನ್ನು ಪಡೆದಿದ್ದರೆ ಅವರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯಬಹುದು. ಈ ಎಲ್ಲ ಕೌತುಕಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ.
ಇದನ್ನೂ ಓದಿ:
ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ