AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​ ಫಿನಾಲೆ ಕಿಚ್ಚು ಶುರು; ಹೆಚ್ಚಿತು ಐವರು ಸ್ಪರ್ಧಿಗಳ ಎದೆಬಡಿತ

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ ನಡೆಯುತ್ತಿದೆ. ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ವೀಕ್ಷಕರು ಅಭಿಪ್ರಾಯಪಟ್ಟಿದ್ದರೆ, ಅರವಿಂದ್​ ಗೆಲ್ಲುತ್ತಾರೆ ಎಂಬುದು ಮತ್ತೊಂದು ವರ್ಗದ ವೀಕ್ಷಕರ ಅಭಿಪ್ರಾಯ. ದಿವ್ಯಾ ಉರುಡುಗ​, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಕೂಡ ಕಣದಲ್ಲಿದ್ದಾರೆ.

Bigg Boss Finale: ಬಿಗ್​ ಬಾಸ್​ ಫಿನಾಲೆ ಕಿಚ್ಚು ಶುರು; ಹೆಚ್ಚಿತು ಐವರು ಸ್ಪರ್ಧಿಗಳ ಎದೆಬಡಿತ
ಬಿಗ್​ ಬಾಸ್​ ಫಿನಾಲೆ ಕಿಚ್ಚು ಶುರು; ಹೆಚ್ಚಿತು ಐವರ ಸ್ಪರ್ಧಿಗಳ ಎದೆಬಡಿತ
TV9 Web
| Updated By: Digi Tech Desk|

Updated on:Aug 07, 2021 | 10:54 AM

Share

115ಕ್ಕೂ ಹೆಚ್ಚು ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ ಕನ್ನಡ ಬಿಗ್​ ಬಾಸ್ (Bigg Boss)​ ಸೀಸನ್​ 8ಕ್ಕೆ ಈಗ ಫಿನಾಲೆ ಸಮಯ. ಆ.7 ಮತ್ತು 8ರಂದು ಅದ್ದೂರಿಯಾಗಿ ಫಿನಾಲೆ (Bigg Boss Finale) ಕಾರ್ಯಕ್ರಮ ನಡೆಯುತ್ತಿದೆ. ನೋಡನೋಡುತ್ತಿದ್ದಂತೆಯೇ ಒಂದು ಕಲರ್​ಫುಲ್​ ಜರ್ನಿಗೆ ತೆರೆ ಬೀಳಲಿದೆ. ಇಷ್ಟು ದಿನಗಳ ಕಾಲ ಎಲ್ಲ ಏಳುಬೀಳುಗಳನ್ನು ಎದುರಿಸಿಕೊಂಡು ಬಂದ ಐವರು ಸ್ಪರ್ಧಿಗಳಿಗೆ ಇಂದು ಮತ್ತು ನಾಳೆ ಬಹುಮುಖ್ಯ ದಿನ. ದಿವ್ಯಾ ಉರುಡುಗ, ಮಂಜು ಪಾವಗಡ (Manju Pavagada), ಅರವಿಂದ್​ ಕೆಪಿ, ಪ್ರಶಾಂತ್​ ಸಂಬರಗಿ ಹಾಗೂ ವೈಷ್ಣವಿ ಗೌಡ ಅವರು ಈಗ ಬಿಗ್​ ಬಾಸ್​ ಮನೆಯಲ್ಲಿ ಇದ್ದಾರೆ. ಯಾರು ವಿನ್ನರ್​ (Bigg Boss Winner) ಎಂದು ಕಿಚ್ಚ ಸುದೀಪ್​ ಘೋಷಿಸುವ ಆ ಕ್ಷಣಕ್ಕಾಗಿ ಕಾತರ ಹೆಚ್ಚಾಗಿದೆ.

ಬಿಡದಿಯಲ್ಲಿರುವ ಇನ್ನೊವೇಟಿವ್​ ಫಿಲ್ಮ್​ ಸಿಟಿಯಲ್ಲಿ ಬಿಗ್​ ಬಾಸ್​ ಫಿನಾಲೆಗೆ ವೇದಿಕೆ ಸಜ್ಜಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಶೂಟಿಂಗ್​ ಆರಂಭ ಆಗಿದೆ. ಸಂಜೆ ಕಲರ್​ಫುಲ್ ಆಗಿ ಬಿತ್ತರ ಆಗುವ ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಯಿಂದಲೇ ಚಿತ್ರಿಸಲಾಗುತ್ತಿದೆ. ವೇದಿಕೆ ಮೇಲೆ ನಟ-ನಟಿಯರ ಡ್ಯಾನ್ಸ್​ ಪರ್ಫಾರ್ಮೆನ್ಸ್​, ಕಿಚ್ಚನ ಮಸ್ತ್​ ನಿರೂಪಣೆ ಸೇರಿದಂತೆ ಅನೇಕ ರಂಗುರಂಗಿನ ಕ್ಷಣಗಳ ಚಿತ್ರೀಕರಣ ನಡೆಯುತ್ತಿದೆ.

ಕಿರುತೆರೆ ವೀಕ್ಷಕರಿಗಂತೂ ಬಿಗ್​ ಬಾಸ್​ ಫಿನಾಲೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಯಾರು ವಿನ್ನರ್​ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಫಿನಾಲೆ ತಯಾರಿಯ ಒಂದು ಫೋಟೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಕಮೆಂಟ್​ ಮಾಡಿದ ಅನೇಕರು ತಮ್ಮ ಕಾತರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಫಿನಾಲೆಗೆ ಬಂದಿರುವ ಎಲ್ಲ 5 ಸ್ಪರ್ಧಿಗಳು ತಮ್ಮದೇ ಪ್ಲಸ್​ ಮತ್ತು ಮೈನಸ್​ ಗುಣಗಳ ಕಾರಣಕ್ಕೆ ಕೌತುಕ ಮೂಡಿಸಿದ್ದಾರೆ. ಮಂಜು ಪಾವಗಡ ಗೆಲ್ಲಬಹುದು ಎಂದು ಒಂದು ವರ್ಗದ ವೀಕ್ಷಕರು ಅಭಿಪ್ರಾಯಪಟ್ಟಿದ್ದರೆ, ಅರವಿಂದ್​ ಗೆಲ್ಲುತ್ತಾರೆ ಎಂಬುದು ಮತ್ತೊಂದು ವರ್ಗದ ವೀಕ್ಷಕರ ಅಭಿಪ್ರಾಯ. ದಿವ್ಯಾ ಉರುಡುಗ​, ವೈಷ್ಣವಿ ಗೌಡ ಹಾಗೂ ಪ್ರಶಾಂತ್​ ಸಂಬರಗಿ ಕೂಡ ವೀಕ್ಷಕರಿಂದ ಹೆಚ್ಚು ವೋಟ್​ಗಳನ್ನು ಪಡೆದಿದ್ದರೆ ಅವರಲ್ಲಿ ಒಬ್ಬರು ಬಿಗ್​ ಬಾಸ್​ ಟ್ರೋಫಿ ಎತ್ತಿಹಿಡಿಯಬಹುದು. ಈ ಎಲ್ಲ ಕೌತುಕಕ್ಕೆ ಭಾನುವಾರ ರಾತ್ರಿ ತೆರೆ ಬೀಳಲಿದೆ.

ಇದನ್ನೂ ಓದಿ:

ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ

Published On - 9:31 am, Sat, 7 August 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!