AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಯಾವುದೇ ಹುಡುಗಿ ಇಲ್ಲ’; ಗರ್ಲ್​ಫ್ರೆಂಡ್​ ವಿಚಾರದಲ್ಲಿ ಕಾರ್ತಿಕ್ ಮಹೇಶ್ ಸ್ಪಷ್ಟನೆ

ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಿದ್ದರೂ ಅವರು ಸಂಗೀತಾ ಮತ್ತು ನಮ್ರತಾ ಜೊತೆ ಫ್ಲರ್ಟ್ ಮಾಡಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ.

‘ನನಗೆ ಯಾವುದೇ ಹುಡುಗಿ ಇಲ್ಲ’; ಗರ್ಲ್​ಫ್ರೆಂಡ್​ ವಿಚಾರದಲ್ಲಿ ಕಾರ್ತಿಕ್ ಮಹೇಶ್ ಸ್ಪಷ್ಟನೆ
ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on: Jan 29, 2024 | 12:38 PM

ಕಾರ್ತಿಕ್ ಮಹೇಶ್ (Karthik Mahesh) ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದ್ದರು. ಅವರಿಗೆ ಗರ್ಲ್​​ಫ್ರೆಂಡ್​ ಇದ್ದಾರೆ ಎಂದು ಹೇಳಲಾಗಿತ್ತು. ನಮ್ರತಾ ಗೌಡ ಈ ವಿಚಾರವನ್ನು ರಿವೀಲ್ ಮಾಡಿದ್ದರು. ಆದರೆ,  ಆ ರೀತಿ ಯಾರೂ ಇಲ್ಲ ಎಂದಿದ್ದಾರೆ ಕಾರ್ತಿಕ್ ಮಹೇಶ್. ‘ಬಿಗ್ ಬಾಸ್’ ಮನೆಯಿಂದ ಕಪ್ ಗೆದ್ದು ಬಂದ ಬಳಿಕ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಹುಡುಗಿ ಬಗ್ಗೆ ಎದುರಾದ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಕಾರ್ತಿಕ್ ಮಹೇಶ್ ಅವರಿಗೆ ಗರ್ಲ್​ಫ್ರೆಂಡ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಿದ್ದರೂ ಅವರು ಸಂಗೀತಾ ಮತ್ತು ನಮ್ರತಾ ಜೊತೆ ಫ್ಲರ್ಟ್ ಮಾಡಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ಕಾರ್ತಿಕ್ ಅವರು ಉತ್ತರ ನೀಡಿದ್ದಾರೆ. ತಮಗೆ ಗರ್ಲ್​ಫ್ರೆಂಡ್ ಇಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ.

‘ನಿಮ್ಮ ಹುಡುಗಿ ಎಷ್ಟು ಖುಷಿಯಾಗಿದ್ದಾಳೆ’ ಎಂದು ಕೇಳಲಾಯಿತು. ಇದಕ್ಕೆ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ‘ಯಾರೂ ಕನೆಕ್ಟ್ ಆಗದೇ ಇರಲಿ ಎನ್ನುವ ಕಾರಣಕ್ಕೆ ಹಾಗೆ ಹೇಳುತ್ತಿದ್ದೆ. ಫ್ರೆಂಡ್ಸ್ ಸುಮಾರು ಜನರು ಇದ್ದಾರೆ. ಎಲ್ಲರೂ ಮಾತನಾಡುತ್ತಾರೆ. ಫ್ರೆಂಡ್ಸ್​ ಆಗಿ ಕೆಲವರು ಇದ್ದಾರೆ ಅಷ್ಟೇ. ನನಗೆ ಕರಿಯರ್​ಮೇಲೆ ಫೋಕಸ್ ಮಾಡಬೇಕಿದೆ. ಅಮ್ಮ ಒಪ್ಪಿಗೆ ಕೊಟ್ಟರೆ ಫ್ರೆಂಡ್ಸ್ ಸರ್ಕಲ್​ನಲ್ಲೇ ಒಬ್ಬರನ್ನು ತೋರಿಸಿ ಒಪ್ಪಿಗೆ ಪಡೆದು ಮದುವೆ ಆಗುತ್ತೇನೆ’ ಎಂದರು ಕಾರ್ತಿಕ್.

ಇದನ್ನೂ ಓದಿ: ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್​ಗೆ ಬಿದ್ದ ವೋಟ್​ಗಳೆಷ್ಟು? ಎಲ್ಲವೂ ಕೋಟಿಯಲ್ಲಿದೆ ಕಾರ್ತಿಕ್ ಮಹೇಶ್ ಅವರು ಸಂಗೀತಾ ಶೃಂಗೇರಿ ಜೊತೆ ಆಪ್ತವಾಗಿದ್ದರು. ನಂತರ ಇವರ ಸಂಬಂಧ ಕೊನೆ ಆಯಿತು. ಹೀಗಾಗಿ, ಕಾರ್ತಿಕ್ ಅವರಿಂದ ಸಂಗೀತಾ ಅಂತರ ಕಾಯ್ದುಕೊಂಡರು. ಕಾರ್ತಿಕ್ ಹಾಗೂ ತನಿಷಾ ಮಧ್ಯೆಯೂ ಕಿರಿಕ್ ಆಯಿತು. ನಂತರ ನಮ್ರತಾ ಗೌಡ ಕೂಡ ಕಾರ್ತಿಕ್​ನಿಂದ ದೂರ ಆದರು. ಆ ಬಳಿಕ ಒಂಟಿಯಾಗಿ ಕಾರ್ತಿಕ್ ಅವರು ಎಲ್ಲವನ್ನೂ ಎದುರಿಸಿದರು. ಕೊನೆಯಲ್ಲಿ ಅವರು ಕಪ್ ಗೆದ್ದಿದ್ದಾರೆ. ಒಂದು ಮನೆ ಕಟ್ಟಬೇಕು ಎನ್ನುವ ಕನಸನ್ನು ಅವರು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ