AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashika Shetty Profile: ರಮ್ಯಾ ಇಂದ ನಟಿಯಾದಾಕೆ ಈಗ ಬಿಗ್​​ಬಾಸ್ ಮನೆಯಲ್ಲಿ, ಯಾರು ಈ ರಾಶಿಕಾ?

Bigg Boss Kannada 12 contestant: ಬಿಗ್​​ಬಾಸ್ ಮನೆಗೆ ಬಹುತೇಕ ಟಿವಿ ಕಲಾವಿದರೇ ಹೆಚ್ಚಾಗಿ ಬರುತ್ತಾರೆ. ಸಿನಿಮಾ ನಟ-ನಟಿಯರು ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಬಿಗ್​​ಬಾಸ್​​ಗೆ ಬರುವುದು ಅಪರೂಪ ಆದರೆ ಇದೀಗ ಸಿನಿಮಾ ನಾಯಕಿಯೊಬ್ಬರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಯಾರು ಆ ನಟಿ? ಈ ನಟಿ ನಟಿಸಿರುವ ಸಿನಿಮಾಗಳು ಯಾವುವು? ರಮ್ಯಾಗೂ ಇವರಿಗೂ ಇರುವ ಕನೆಕ್ಷನ್ ಏನು?

Rashika Shetty Profile: ರಮ್ಯಾ ಇಂದ ನಟಿಯಾದಾಕೆ ಈಗ ಬಿಗ್​​ಬಾಸ್ ಮನೆಯಲ್ಲಿ, ಯಾರು ಈ ರಾಶಿಕಾ?
Rashika Shetty
ಮಂಜುನಾಥ ಸಿ.
|

Updated on:Sep 29, 2025 | 1:09 AM

Share

ಬಿಗ್​​ಬಾಸ್ ಮನೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನಟ-ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಪ್ರತಿ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಕಲಾವಿದರಿಗೇ ಆದ್ಯತೆ ಹೆಚ್ಚು. ಈಗಾಗಲೇ ಹಲವು ನಟ-ನಟಿಯರು, ಕಮಿಡಿಯನ್​​ಗಳು ಮನೆಗೆ ಬಂದಿದ್ದಾರೆ. ಬಿಗ್​​ಬಾಸ್ ಮನೆಗೆ ಬಹುತೇಕ ಟಿವಿ ಕಲಾವಿದರೇ ಹೆಚ್ಚಾಗಿ ಬರುತ್ತಾರೆ. ಸಿನಿಮಾ ನಟ-ನಟಿಯರು ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಬಿಗ್​​ಬಾಸ್​​ಗೆ ಬರುವುದು ಅಪರೂಪ ಆದರೆ ಇದೀಗ ಸಿನಿಮಾ ನಾಯಕಿಯೊಬ್ಬರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿರುವ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಮನದ ಕಡಲು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿರುವ ರಾಶಿಕಾ ಶೆಟ್ಟಿ ಅವರು ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ರಾಶಿಕಾ ಅವರು ಸಿನಿಮಾ ನಟಿಯಾಗಿರುವುದಕ್ಕೆ ಖ್ಯಾತ ನಟಿ ರಮ್ಯಾ ಅವರು ಕಾರಣವಂತೆ. ಅದು ಹೇಗೆಂದು ಅವರು ವಿವರಿಸಿದ್ದಾರೆ.

ನಟಿ ರಮ್ಯಾ ಹಾಗೂ ರಕ್ಷಿತಾ ಅವರು ಒಟ್ಟಿಗೆ ನಟಿಸಿದ್ದ ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದ ‘ತನನಂ-ತನನಂ’ ಸಿನಿಮಾನಲ್ಲಿ ರಾಶಿಕಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದರಂತೆ. ಆ ಸಿನಿಮಾದ ಒಂದು ಬಲು ಜನಪ್ರಿಯ ಹಾಡಿನಲ್ಲಿ ರಾಶಿಕಾ ಶೆಟ್ಟಿ ರಮ್ಯಾ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರಂತೆ. ಆ ಒಂದು ಕಾರಣದಿಂದಾಗಿಯೇ ರಾಶಿಕಾ ನಟಿಯಾಗಬೇಕು ಎಂದು ನಿರ್ಧರಿಸಿದರಂತೆ.

ಅದರಂತೆ ಹಲವಾರು ಕಡೆಗಳಲ್ಲಿ ಆಡಿಷನ್​​ಗಳನ್ನು ರಾಶಿಕಾ ಕೊಡುತ್ತಾ ಬಂದಿದ್ದರಂತೆ. ಆದರೆ ಎಲ್ಲ ಕಡೆ ರಿಜೆಕ್ಟ್ ಆಗಿದ್ದಾರೆ ಅಂತಿಮವಾಗಿ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಕಾಲ್ ಬಂದಿದೆ. ಅವರ ನಿರ್ದೇಶನದ ‘ಮನದ ಕಡಲು’ ಸಿನಿಮಾನಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಹಿಟ್ ಆಯ್ತು. ಇದೀಗ ರಾಶಿಕಾ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

ರಾಶಿಕಾಗೆ ಎಲ್ಲವೂ ತುಸು ಹೆಚ್ಚೇ ಅಂತೆ. ಕೋಪ, ಪ್ರೀತಿ, ನಗು, ಮಾತು ಎಲ್ಲವೂ ಹೆಚ್ಚಂತೆ. ಮೊದಲು ಮಾತನಾಡಿ, ಮೊದಲು ಕೋಪ ತೋರಿಸಿ ಆಮೇಲೆ ಆ ಬಗ್ಗೆ ಯೋಚನೆ ಮಾಡುತ್ತಾರಂತೆ. ಅಂದಹಾಗೆ ರಾಶಿಕಾಗೆ ಹೊಟ್ಟೆ ಹಸಿವು ಹೆಚ್ಚಂತೆ, ಪ್ರತಿ ಎರಡು ಗಂಟೆಗೆ ಏನಾದರೂ ತಿನ್ನುತ್ತಲೇ ಇರಬೇಕಂತೆ ಅವರು. ಆದರೆ ಬಿಗ್​​ಬಾಸ್​​ನಲ್ಲಿ ಹಸಿವಿನೊಂದಿಗೆ ಹೇಗೆ ಹೋರಾಡುತ್ತಾರೋ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Sun, 28 September 25

ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?