AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashika Shetty Profile: ರಮ್ಯಾ ಇಂದ ನಟಿಯಾದಾಕೆ ಈಗ ಬಿಗ್​​ಬಾಸ್ ಮನೆಯಲ್ಲಿ, ಯಾರು ಈ ರಾಶಿಕಾ?

Bigg Boss Kannada 12 contestant: ಬಿಗ್​​ಬಾಸ್ ಮನೆಗೆ ಬಹುತೇಕ ಟಿವಿ ಕಲಾವಿದರೇ ಹೆಚ್ಚಾಗಿ ಬರುತ್ತಾರೆ. ಸಿನಿಮಾ ನಟ-ನಟಿಯರು ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಬಿಗ್​​ಬಾಸ್​​ಗೆ ಬರುವುದು ಅಪರೂಪ ಆದರೆ ಇದೀಗ ಸಿನಿಮಾ ನಾಯಕಿಯೊಬ್ಬರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಯಾರು ಆ ನಟಿ? ಈ ನಟಿ ನಟಿಸಿರುವ ಸಿನಿಮಾಗಳು ಯಾವುವು? ರಮ್ಯಾಗೂ ಇವರಿಗೂ ಇರುವ ಕನೆಕ್ಷನ್ ಏನು?

Rashika Shetty Profile: ರಮ್ಯಾ ಇಂದ ನಟಿಯಾದಾಕೆ ಈಗ ಬಿಗ್​​ಬಾಸ್ ಮನೆಯಲ್ಲಿ, ಯಾರು ಈ ರಾಶಿಕಾ?
Rashika Shetty
ಮಂಜುನಾಥ ಸಿ.
|

Updated on:Sep 29, 2025 | 1:09 AM

Share

ಬಿಗ್​​ಬಾಸ್ ಮನೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನಟ-ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಪ್ರತಿ ಬಾರಿಯೂ ಬಿಗ್​​ಬಾಸ್ ಮನೆಯಲ್ಲಿ ಕಲಾವಿದರಿಗೇ ಆದ್ಯತೆ ಹೆಚ್ಚು. ಈಗಾಗಲೇ ಹಲವು ನಟ-ನಟಿಯರು, ಕಮಿಡಿಯನ್​​ಗಳು ಮನೆಗೆ ಬಂದಿದ್ದಾರೆ. ಬಿಗ್​​ಬಾಸ್ ಮನೆಗೆ ಬಹುತೇಕ ಟಿವಿ ಕಲಾವಿದರೇ ಹೆಚ್ಚಾಗಿ ಬರುತ್ತಾರೆ. ಸಿನಿಮಾ ನಟ-ನಟಿಯರು ಅದರಲ್ಲೂ ಹೊಸದಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಬಿಗ್​​ಬಾಸ್​​ಗೆ ಬರುವುದು ಅಪರೂಪ ಆದರೆ ಇದೀಗ ಸಿನಿಮಾ ನಾಯಕಿಯೊಬ್ಬರು ಬಿಗ್​​ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿರುವ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ‘ಮನದ ಕಡಲು’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿರುವ ರಾಶಿಕಾ ಶೆಟ್ಟಿ ಅವರು ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ರಾಶಿಕಾ ಅವರು ಸಿನಿಮಾ ನಟಿಯಾಗಿರುವುದಕ್ಕೆ ಖ್ಯಾತ ನಟಿ ರಮ್ಯಾ ಅವರು ಕಾರಣವಂತೆ. ಅದು ಹೇಗೆಂದು ಅವರು ವಿವರಿಸಿದ್ದಾರೆ.

ನಟಿ ರಮ್ಯಾ ಹಾಗೂ ರಕ್ಷಿತಾ ಅವರು ಒಟ್ಟಿಗೆ ನಟಿಸಿದ್ದ ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದ ‘ತನನಂ-ತನನಂ’ ಸಿನಿಮಾನಲ್ಲಿ ರಾಶಿಕಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದರಂತೆ. ಆ ಸಿನಿಮಾದ ಒಂದು ಬಲು ಜನಪ್ರಿಯ ಹಾಡಿನಲ್ಲಿ ರಾಶಿಕಾ ಶೆಟ್ಟಿ ರಮ್ಯಾ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರಂತೆ. ಆ ಒಂದು ಕಾರಣದಿಂದಾಗಿಯೇ ರಾಶಿಕಾ ನಟಿಯಾಗಬೇಕು ಎಂದು ನಿರ್ಧರಿಸಿದರಂತೆ.

ಅದರಂತೆ ಹಲವಾರು ಕಡೆಗಳಲ್ಲಿ ಆಡಿಷನ್​​ಗಳನ್ನು ರಾಶಿಕಾ ಕೊಡುತ್ತಾ ಬಂದಿದ್ದರಂತೆ. ಆದರೆ ಎಲ್ಲ ಕಡೆ ರಿಜೆಕ್ಟ್ ಆಗಿದ್ದಾರೆ ಅಂತಿಮವಾಗಿ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಕಾಲ್ ಬಂದಿದೆ. ಅವರ ನಿರ್ದೇಶನದ ‘ಮನದ ಕಡಲು’ ಸಿನಿಮಾನಲ್ಲಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಹಿಟ್ ಆಯ್ತು. ಇದೀಗ ರಾಶಿಕಾ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

ರಾಶಿಕಾಗೆ ಎಲ್ಲವೂ ತುಸು ಹೆಚ್ಚೇ ಅಂತೆ. ಕೋಪ, ಪ್ರೀತಿ, ನಗು, ಮಾತು ಎಲ್ಲವೂ ಹೆಚ್ಚಂತೆ. ಮೊದಲು ಮಾತನಾಡಿ, ಮೊದಲು ಕೋಪ ತೋರಿಸಿ ಆಮೇಲೆ ಆ ಬಗ್ಗೆ ಯೋಚನೆ ಮಾಡುತ್ತಾರಂತೆ. ಅಂದಹಾಗೆ ರಾಶಿಕಾಗೆ ಹೊಟ್ಟೆ ಹಸಿವು ಹೆಚ್ಚಂತೆ, ಪ್ರತಿ ಎರಡು ಗಂಟೆಗೆ ಏನಾದರೂ ತಿನ್ನುತ್ತಲೇ ಇರಬೇಕಂತೆ ಅವರು. ಆದರೆ ಬಿಗ್​​ಬಾಸ್​​ನಲ್ಲಿ ಹಸಿವಿನೊಂದಿಗೆ ಹೇಗೆ ಹೋರಾಡುತ್ತಾರೋ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Sun, 28 September 25

Follow Us
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ