AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ಆರಂಭದಲ್ಲಿ ತಾಯಿ ಸರೋಜಾ ಅವರ ನೆನಪಿನಲ್ಲಿ ಭಾವುಕರಾದರು. ತಾಯಿಯ ಶಾಲು ನೀಡಿದಾಗ ಕಣ್ಣೀರಾದ ಸುದೀಪ್, ಎಮೋಷನಲ್ ಆಗಿ ಶೋ ನಡೆಸಲು ಇಷ್ಟವಿರಲಿಲ್ಲ ಎಂದರು. ನಂತರ ಶೋಗೆ ಹೊಸ ಹುರುಪು ತುಂಬಿದರು. ಈ ಸೀಸನ್ 'ಒಂಟಿ ಮತ್ತು ಜಂಟಿ' ಎಂಬ ವಿಶೇಷ ಕಾನ್ಸೆಪ್ಟ್‌ನೊಂದಿಗೆ ಶುರುವಾಗಿದೆ.

‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Sep 28, 2025 | 8:11 PM

Share

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ನ ಯಾವಾಗಲೂ ಜೋಶ್​ನಿಂದ ಆರಂಭಿಸಲು ಇಷ್ಟಪಡುತ್ತಾರೆ. ಈ ಬಾರಿಯೂ ಅವರು ದೊಡ್ಮನೆ ಆಟವನ್ನು ಜೋಶ್​ನಿಂದಲೇ ಪ್ರಾರಂಭಿಸುವವರಿದ್ದರು. ಆದರೆ, ಆ ಒಂದು ವಿಚಾರ ಅವರನ್ನು ಭಾವುಕರನ್ನಾಗಿ ಮಾಡಿಸಿತು. ಅದುವೇ ತಾಯಿ ಶಾಲು. ಬಿಗ್ ಬಾಸ್ ಆರಂಭಕ್ಕೂ ಮೊದಲು ಸುದೀಪ್ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಲಾಯಿತು. ಹೀಗೆ ಬಿಗ್ ಬಾಸ್ ಆರಂಭಿಸೋಕೆ ಅವರಿಗೆ ಇಷ್ಟ ಆಗಿಲ್ಲ.

ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎಪಿಸೋಡ್ ನಡೆಸಿಕೊಡುವಾಗ ಅವರ ತಾಯಿ ಸರೋಜಾ ನಿಧನ ಹೊಂದಿದರು. ಆಗ ಅವರು ಶೋನ ಅರ್ಧಕ್ಕೆ ಬಿಟ್ಟು ತಾಯಿ ನೋಡಲು ಓಡೋಡಿ ಹೋದರು. ಆದರೆ, ಅವರ ತಾಯಿ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಸುದೀಪ್ ಅವರಿಗೆ ನುಂಗಲಾರದ ತುತ್ತಾಯಿತು. ಇದಾದ ಬಳಿಕ ಸುದೀಪ್ ಅವರು ಅನೇಕ ಬಾರಿ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೂ ಮೊದಲು ಸುದೀಪ್ ಅವರ ತಾಯಿಯನ್ನು ಬಿಗ್ ಬಾಸ್ ನೆನಪಿಸಿಕೊಂಡರು. ಸುದೀಪ್ ತಾಯಿ ಸರೋಜಾ ಅವರ ಪ್ರೀತಿಯ ಶಾಲನ್ನು ಸುದೀಪ್​ಗೆ ನೀಡಲಾಯಿತು. ಇದನ್ನು ನೋಡಿ ಸುದೀಪ್ ಭಾವುಕರಾದರು. ಈ ವೇಳೆ ಪರದೆ ಮೇಲೆ ಸುದೀಪ್ ತಾಯಿಯ ಫೋಟೋವನ್ನು ಕೂಡ ಹಾಕಲಾಯಿತು. ಅವರು ಅದೇ ಶಾಲನ್ನು ಹೊದ್ದುಕೊಂಡಿದ್ದರು.

ಇದನ್ನೂ ಓದಿ
Image
‘ಹೀಗೆನೆ ಹನುಮಂತ ಗೆದ್ರು’; ಲುಂಗಿ ಉಟ್ಟು ಬಂದ ಗಿಲ್ಲಿಗೆ ಸುದೀಪ್ ಕೌಂಟರ್
Image
‘ಬಿಗ್ ಬಾಸ್’ಗೆ ಮಂಗಳೂರಿನ ರಕ್ಷಿತಾ ಎಂಟ್ರಿ; ಮಾತು ಕೇಳಿ ಸುದೀಪ್ ಶಾಕ್
Image
ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ನನಗೆ ಎಮೋಷನಲ್​ ಆಗಿ ಶೋನ ಆರಂಭಿಸೋಕೆ ಇಷ್ಟ ಇಲ್ಲ’ ಎಂದು ಹೇಳಿದರು. ಆ ಬಳಿಕ ಫೋಟೋನ ಸ್ಕ್ರೀನ್ ಮೇಲಿನಿಂದ ತೆಗೆಯಲಾಯಿತು. ಆ ಬಳಿಕ ಸುದೀಪ್ ಅವರು ತಮ್ಮ ಎನರ್ಜಿಯೊಂದಿಗೆ ಶೋ ಆರಂಭಿಸಿದರು.

ಇದನ್ನೂ ಓದಿ: ‘ನಿಮ್ಮದು ಫ್ರಾಡ್ ಬಿಸ್ನೆಸಾ’; ಡಾಗ್ ಸತೀಶ್​ಗೆ ನೇರವಾಗಿ ಕೇಳಿದ ಸುದೀಪ್

ಈ ಬಾರಿ ಒಂಟಿ ಹಾಗೂ ಜಂಟಿ ಎಂಬ ಕಾನ್ಸೆಪ್ಟ್​ನೊಂದಿಗೆ ಶೋ ಮಾಡಲಾಗುತ್ತಿದೆ. ‘ಒಂಟಿ, ಒಂಟಿ ಸಲಗ ಆಗಿ ಆಟ ಆಡ್ತಾರೆ. ಜಂಟಿ, ಜಂಟಿಯಾಗಿ ಆಟ ಆಡ್ತಾರೆ. ಇದನ್ನು ಅಲ್ಲಿ ನೆರೆದವರು ನಿರ್ಧಾರ ಮಾಡುತ್ತಾರೆ. ಶೇ. 75 ಮೇಲಿದ್ದರೆ ಒಂಟಿ, ಶೇ.75ಕ್ಕಿಂತ ಕಡಿಮೆ ಇದ್ದರೆ ಜಂಟಿ ಆಗಿ ಎಂಟ್ರಿ ಕೊಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​