AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್

ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ಆರಂಭದಲ್ಲಿ ತಾಯಿ ಸರೋಜಾ ಅವರ ನೆನಪಿನಲ್ಲಿ ಭಾವುಕರಾದರು. ತಾಯಿಯ ಶಾಲು ನೀಡಿದಾಗ ಕಣ್ಣೀರಾದ ಸುದೀಪ್, ಎಮೋಷನಲ್ ಆಗಿ ಶೋ ನಡೆಸಲು ಇಷ್ಟವಿರಲಿಲ್ಲ ಎಂದರು. ನಂತರ ಶೋಗೆ ಹೊಸ ಹುರುಪು ತುಂಬಿದರು. ಈ ಸೀಸನ್ 'ಒಂಟಿ ಮತ್ತು ಜಂಟಿ' ಎಂಬ ವಿಶೇಷ ಕಾನ್ಸೆಪ್ಟ್‌ನೊಂದಿಗೆ ಶುರುವಾಗಿದೆ.

‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on: Sep 28, 2025 | 8:11 PM

Share

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​ನ ಯಾವಾಗಲೂ ಜೋಶ್​ನಿಂದ ಆರಂಭಿಸಲು ಇಷ್ಟಪಡುತ್ತಾರೆ. ಈ ಬಾರಿಯೂ ಅವರು ದೊಡ್ಮನೆ ಆಟವನ್ನು ಜೋಶ್​ನಿಂದಲೇ ಪ್ರಾರಂಭಿಸುವವರಿದ್ದರು. ಆದರೆ, ಆ ಒಂದು ವಿಚಾರ ಅವರನ್ನು ಭಾವುಕರನ್ನಾಗಿ ಮಾಡಿಸಿತು. ಅದುವೇ ತಾಯಿ ಶಾಲು. ಬಿಗ್ ಬಾಸ್ ಆರಂಭಕ್ಕೂ ಮೊದಲು ಸುದೀಪ್ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಲಾಯಿತು. ಹೀಗೆ ಬಿಗ್ ಬಾಸ್ ಆರಂಭಿಸೋಕೆ ಅವರಿಗೆ ಇಷ್ಟ ಆಗಿಲ್ಲ.

ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎಪಿಸೋಡ್ ನಡೆಸಿಕೊಡುವಾಗ ಅವರ ತಾಯಿ ಸರೋಜಾ ನಿಧನ ಹೊಂದಿದರು. ಆಗ ಅವರು ಶೋನ ಅರ್ಧಕ್ಕೆ ಬಿಟ್ಟು ತಾಯಿ ನೋಡಲು ಓಡೋಡಿ ಹೋದರು. ಆದರೆ, ಅವರ ತಾಯಿ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಸುದೀಪ್ ಅವರಿಗೆ ನುಂಗಲಾರದ ತುತ್ತಾಯಿತು. ಇದಾದ ಬಳಿಕ ಸುದೀಪ್ ಅವರು ಅನೇಕ ಬಾರಿ ತಾಯಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೂ ಮೊದಲು ಸುದೀಪ್ ಅವರ ತಾಯಿಯನ್ನು ಬಿಗ್ ಬಾಸ್ ನೆನಪಿಸಿಕೊಂಡರು. ಸುದೀಪ್ ತಾಯಿ ಸರೋಜಾ ಅವರ ಪ್ರೀತಿಯ ಶಾಲನ್ನು ಸುದೀಪ್​ಗೆ ನೀಡಲಾಯಿತು. ಇದನ್ನು ನೋಡಿ ಸುದೀಪ್ ಭಾವುಕರಾದರು. ಈ ವೇಳೆ ಪರದೆ ಮೇಲೆ ಸುದೀಪ್ ತಾಯಿಯ ಫೋಟೋವನ್ನು ಕೂಡ ಹಾಕಲಾಯಿತು. ಅವರು ಅದೇ ಶಾಲನ್ನು ಹೊದ್ದುಕೊಂಡಿದ್ದರು.

ಇದನ್ನೂ ಓದಿ
Image
‘ಹೀಗೆನೆ ಹನುಮಂತ ಗೆದ್ರು’; ಲುಂಗಿ ಉಟ್ಟು ಬಂದ ಗಿಲ್ಲಿಗೆ ಸುದೀಪ್ ಕೌಂಟರ್
Image
‘ಬಿಗ್ ಬಾಸ್’ಗೆ ಮಂಗಳೂರಿನ ರಕ್ಷಿತಾ ಎಂಟ್ರಿ; ಮಾತು ಕೇಳಿ ಸುದೀಪ್ ಶಾಕ್
Image
ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ನನಗೆ ಎಮೋಷನಲ್​ ಆಗಿ ಶೋನ ಆರಂಭಿಸೋಕೆ ಇಷ್ಟ ಇಲ್ಲ’ ಎಂದು ಹೇಳಿದರು. ಆ ಬಳಿಕ ಫೋಟೋನ ಸ್ಕ್ರೀನ್ ಮೇಲಿನಿಂದ ತೆಗೆಯಲಾಯಿತು. ಆ ಬಳಿಕ ಸುದೀಪ್ ಅವರು ತಮ್ಮ ಎನರ್ಜಿಯೊಂದಿಗೆ ಶೋ ಆರಂಭಿಸಿದರು.

ಇದನ್ನೂ ಓದಿ: ‘ನಿಮ್ಮದು ಫ್ರಾಡ್ ಬಿಸ್ನೆಸಾ’; ಡಾಗ್ ಸತೀಶ್​ಗೆ ನೇರವಾಗಿ ಕೇಳಿದ ಸುದೀಪ್

ಈ ಬಾರಿ ಒಂಟಿ ಹಾಗೂ ಜಂಟಿ ಎಂಬ ಕಾನ್ಸೆಪ್ಟ್​ನೊಂದಿಗೆ ಶೋ ಮಾಡಲಾಗುತ್ತಿದೆ. ‘ಒಂಟಿ, ಒಂಟಿ ಸಲಗ ಆಗಿ ಆಟ ಆಡ್ತಾರೆ. ಜಂಟಿ, ಜಂಟಿಯಾಗಿ ಆಟ ಆಡ್ತಾರೆ. ಇದನ್ನು ಅಲ್ಲಿ ನೆರೆದವರು ನಿರ್ಧಾರ ಮಾಡುತ್ತಾರೆ. ಶೇ. 75 ಮೇಲಿದ್ದರೆ ಒಂಟಿ, ಶೇ.75ಕ್ಕಿಂತ ಕಡಿಮೆ ಇದ್ದರೆ ಜಂಟಿ ಆಗಿ ಎಂಟ್ರಿ ಕೊಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ