AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 12 Highlights: ಬಿಗ್​​ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್​​ ಲೈವ್

Bigg Boss Kannada Season 12 Highlights: ಕನ್ನಡ ಬಿಗ್​​ಬಾಸ್ ಸೀಸನ್ 12 ಪ್ರಾರಂಭವಾಗಿದೆ. ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಸುದೀಪ್ ಅವರು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಒಬ್ಬೊಬ್ಬರಾಗಿ ಸ್ಪರ್ಧಿಗಳು ವೇದಿಕೆ ಮೇಲೆ ಬಂದು, ಬಿಗ್​​ಬಾಸ್ ಮನೆ ಸೇರಿಕೊಳ್ಳುತ್ತಿದ್ದಾರೆ. ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗುತ್ತಿರುವವರು ಯಾರು? ಬಿಗ್​​ಬಾಸ್ ಮನೆಯಲ್ಲಿ ಏನಾಗುತ್ತಿದೆ. ಎಲ್ಲವನ್ನೂ ಲೈವ್ ಆಗಿ ಇಲ್ಲಿ ತಿಳಿಯಿರಿ.

Bigg Boss Kannada 12 Highlights: ಬಿಗ್​​ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್​​ ಲೈವ್
Bigg Boss Kannada
ಮಂಜುನಾಥ ಸಿ.
| Updated By: Digi Tech Desk|

Updated on:Sep 29, 2025 | 10:22 AM

Share

Bigg Boss Kannada Season 12 Highlights: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆಗುತ್ತಿದೆ. ಪ್ರತಿ ಬಾರಿಯಂತೆ ಕಿಚ್ಚ ಸುದೀಪ್ ಅವರು ಈ ಬಾರಿಯೂ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಬಿಗ್​​ಬಾಸ್ ಮನೆಯನ್ನು ಪ್ರತಿ ಬಾರಿಯಂತೆ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಈ ಬಾರಿ ಬಿಗ್​​ಬಾಸ್ ಮನೆಯನ್ನು ಕರ್ನಾಟಕದ ಇತಿಹಾಸ, ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿರುವುದು ವಿಶೇಷ. ಈ ಬಾರಿ ಬಿಗ್​​ಬಾಸ್ ಮನೆಗೆ ಯಾರ್ಯಾರು ಹೋಗಲಿದ್ದಾರೆ ಎಂಬುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಸುದೀಪ್ ಅವರು ಬಿಗ್​​ಬಾಸ್ 12 ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಬಿಗ್​​ಬಾಸ್ ವೇದಿಕೆ ಮೇಲೆ ನಡೆದಿದ್ದೆಲ್ಲವೂ ಲೈವ್ ಆಗಿ ಇಲ್ಲಿ ಓದಬಹುದಾಗಿದೆ, ನೋಡಬಹುದಾಗಿದೆ.

LIVE NEWS & UPDATES

The liveblog has ended.
  • 28 Sep 2025 10:35 PM (IST)

    ಬಿಗ್​​ಬಾಸ್​​ಗೆ ಬಂದ ಆರ್​​ಜೆ ಅಮಿತ್

    ಬಿಗ್​​ಬಾಸ್ ಕನ್ನಡ ಸೀಸನ್ 12ಕ್ಕೆ ಬಂದಿದ್ದಾರೆ ಖ್ಯಾತ ಆರ್​​ಜೆ ಅಮಿತ್. ರೇಡಿಯೋ ಮಿರ್ಚಿ ನಲ್ಲಿ ಇವರು ಆರ್​​ಜೆ ಆಗಿ ಕೆಲಸ ಮಾಡುತ್ತಿದ್ದಾರೆ.

  • 28 Sep 2025 10:22 PM (IST)

    ಕನ್ನಡ ಹೋರಾಟಗಾರ್ತಿ ಬಿಗ್​​ಬಾಸ್ ಮನೆಗೆ

    ಖ್ಯಾತ ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿಯೂ ಆಗಿರುವ ಅಶ್ವಿನಿ ಗೌಡ ಅವರು ಇದೀಗ ಬಿಗ್​​ಬಾಸ್ ಮನೆಗೆ ಹೋಗಿದ್ದಾರೆ. 100 ಕ್ಕೂ ಹೆಚ್ಚು ಸಿನಿಮಾ, 25ಕ್ಕೂ ಧಾರಾವಾಹಿಗಳಲ್ಲಿ ಅಶ್ವಿನಿ ನಟಿಸಿದ್ದಾರೆ.

  • 28 Sep 2025 10:09 PM (IST)

    ಬಿಗ್​​ಬಾಸ್ ಮನೆಗೆ ಬಂದ ‘ಸಾಹಿತಿ’

    ಬಿಗ್​​ಬಾಸ್ ಮನೆಗೆ ಧಾರಾವಾಹಿ ನಟಿ ಸ್ಪಂದನ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನ ಈ ಚೆಲುವೆ ಬಿಗ್​​ಬಾಸ್​ಗೆ ಬಂದಿದ್ದಾರೆ.

  • 28 Sep 2025 10:08 PM (IST)

    ಬಿಗ್​​ಬಾಸ್ ಮನೆಗೆ ‘ಡ್ರೈವರ್’

    ‘ನಾ ಡ್ರೈವರ, ನನ ಲವ್ವರ’ ಹಾಡಿನ ಗಾಯಕ ಮಾಳು ನಿಪನಾಳ ಅವರು ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಅವರು ಸುದೀಪ್ ಅವರ ದೊಡ್ಡ ಅಭಿಮಾನಿ.

  • 28 Sep 2025 09:48 PM (IST)

    ಬಿಗ್​​ಬಾಸ್ ಮನೆಗೆ ಬಂದ ಬಾಡಿ ಬಿಲ್ಡರ್

    ಬಿಗ್​​ಬಾಸ್ ಕನ್ನಡ ಸೀಸನ್ 12ರ ಮನೆಗೆ ಬಾಡಿ ಬಿಲ್ಡರ್ ಕರಿಬಸಪ್ಪ ಮನೆಗೆ ಬಂದಿದ್ದಾರೆ. ದಾವಣಗೆರೆಯ ಕರಿಬಸಪ್ಪ, ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು ಆಗಿ ಗುರುತಿಸಿಕೊಂಡಿದ್ದಾರೆ.

  • 28 Sep 2025 09:38 PM (IST)

    ಮಾತುಗಾತಿ ರಕ್ಷಿತಾ ಶೆಟ್ಟಿ

    ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಇದೀಗ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಮುಂಬೈನ ರಕ್ಷಿತಾ, ಯೂಟ್ಯೂಬ್​​ನಲ್ಲಿ ಅಡುಗೆ ರೆಸಿಪಿ ಹಂಚಿಕೊಳ್ಳುತ್ತಾರೆ.

  • 28 Sep 2025 09:18 PM (IST)

    ನಟ ಧ್ರುವಂತ್ ಬಿಗ್​​ಬಾಸ್​​ಗೆ ಎಂಟ್ರಿ

    ಕನ್ನಡದ ಸುಮಾರು ಎಂಟು ಧಾರಾವಾಹಿಗಳಲ್ಲಿ ನಟನಾಗಿ, ನಾಯಕನಾಗಿ ನಟಿಸಿರುವ ಮಂಗಳೂರು ಮೂಲದ ಧ್ರುವಂತ್ ಅವರು ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ.

  • 28 Sep 2025 09:18 PM (IST)

    ಬಿಗ್​​ಬಾಸ್ ಮನೆಗೆ ಬಂದ ಮುದ್ದುಲಕ್ಷ್ಮಿ

    ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿ’ ಧಾರಾವಾಹಿಯ ನಟಿ ಅಶ್ವಿನಿ ಅವರು ಇದೀಗ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ, ಅಶ್ವಿನಿ ಅವರು ಬಹಳ ಕಷ್ಟಪಟ್ಟು ನಟಿ ಆಗಿದ್ದಾರಂತೆ.

  • 28 Sep 2025 08:40 PM (IST)

    ಬಿಗ್​​ಬಾಸ್ ಮನೆಯಲ್ಲಿ ಮಾತುಗಾತಿ ಮಲ್ಲಮ್ಮ

    ಬಿಗ್​​ಬಾಸ್ ಮನೆಗೆ ಮಾತುಗಾತಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ. ಉತ್ತರ ಕನ್ನಡದ ಈ ಮಹಿಳೆ, ತನ್ನ ಮಾತುಗಳಿಂದ ಬಹಳ ಜನಪ್ರಿಯ. ಇದೀಗ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

  • 28 Sep 2025 08:34 PM (IST)

    ಬಿಗ್​​ಬಾಸ್ ಮನೆಗೆ ಬಂದ ಅಭಿಷೇಕ್

    ಬಿಗ್​​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿ ಅಭಿಷೇಕ್ ಅವರು ಮನೆಗೆ ಬಂದಿದ್ದಾರೆ. ಎಂಜಿನಿಯರಿಂಗ್ ಓದಿ, ನಟನಾಗಲು ಬಂದಿದ್ದರು ಅಭಿಷೇಕ್. ಈಗ ನಟನಾಗಿದ್ದಾರೆ, ಈಗ ಬಿಗ್​​ಬಾಸ್​​ಗೆ ಬಂದಿದ್ದಾರೆ.

  • 28 Sep 2025 08:18 PM (IST)

    ಬಿಗ್​​ಬಾಸ್ ಮನೆಗೆ ಬಂದ ನಾಯಕಿ

    ‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಇದೀಗ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಶೆಟ್ಟಿಗೆ ಕೋಪ, ಪ್ರೀತಿ, ಅಳು ಎಲ್ಲವೂ ಹೆಚ್ಚಂತೆ.

  • 28 Sep 2025 08:14 PM (IST)

    ಬಿಗ್​​ಬಾಸ್ ಮನೆಗೆ ಬಂದ ಲಲ್ಲಿ

    ಬಿಗ್​​ಬಾಸ್ ಕನ್ನಡ ಸೀಸನ್ 12ಕ್ಕೆ ಖ್ಯಾತ ನಟಿ ಮಂಜು ಭಾಷಿಣಿ ಅವರು ಎಂಟ್ರಿ ಕೊಟ್ಟಿದ್ದಾರೆ. ‘ಸಿಲ್ಲಿ-ಲಲ್ಲಿ’, ‘ಸಾಧನೆ’, ಈಗ ಪ್ರಸಾರ ಆಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

  • 28 Sep 2025 07:52 PM (IST)

    ಮತ್ತೊಬ್ಬ ಕಾಮಿಡಿ ನಟ ಎಂಟ್ರಿ

    ಗಿಚ್ಚಿ-ಗಿಲಿಗಿಲಿ ಗೆದ್ದಿರುವ ಚಂದ್ರಪ್ರಭಾ ಇದೀಗ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಶೋನಲ್ಲಿ ಮಾತ್ರವೇ ನಾನು ಡಬಲ್ ಮೀನಿಂಗ್, ನಿಜವಾಗಿ ನಾನು ಬಹಳ ಮೃದು ಸ್ವಭಾವದ ವ್ಯಕ್ತಿ ಎಂದಿದ್ದಾರೆ.

  • 28 Sep 2025 07:41 PM (IST)

    ಆರನೇ ಸ್ಪರ್ಧಿಯಾಗಿ ಬಂದ ಧನುಶ್

    ಕಿರುತೆರೆ, ಹಿರಿತೆರೆ ಎರಡರಲ್ಲೂ ನಟಿಸಿರುವ ನಟ ಧನುಶ್ ಆರನೇ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

  • 28 Sep 2025 07:40 PM (IST)

    ಐದನೇ ಸ್ಪರ್ಧಿ ಎಂಟ್ರಿ

    ಬಿಗ್​​ಬಾಸ್ ಕನ್ನಡ 12ಕ್ಕೆ ಐದನೇ ಸ್ಪರ್ಧಿಯಾಗಿ ನಿರೂಪಕಿ, ನಟಿ ಜಾನ್ಹವಿ ಎಂಟ್ರಿ ಕೊಟ್ಟಿದ್ದಾರೆ.

  • 28 Sep 2025 07:25 PM (IST)

    ನಾಲ್ಕನೇ ಸ್ಪರ್ಧಿ ಎಂಟ್ರಿ

    ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​​ಬಾಸ್ ಕನ್ನಡ 12 ರಲ್ಲಿ ಸ್ಪರ್ಧಿಯಾಗಿ ಅವರು ಬಂದಿದ್ದಾರೆ.

  • 28 Sep 2025 07:05 PM (IST)

    ಮೂರನೇ ಸ್ಪರ್ಧಿ ಎಂಟ್ರಿ

    ಡಾಗ್ ಸತೀಶ್ ಅವರು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಅವರು ಖರೀದಿ ಮಾಡುತ್ತಾರೆ ಮಾರಾಟ ಮಾಡುತ್ತಾರೆ.

  • 28 Sep 2025 07:02 PM (IST)

    ಎರಡನೇ ಸ್ಪರ್ಧಿ ಎಂಟ್ರಿ

    ಬಿಗ್​​ಬಾಸ್ ಮನೆಗೆ ಎರಡನೇ ಸ್ಪರ್ಧಿಯ ಎಂಟ್ರಿ ಆಗಿದೆ.  ‘ಕೊತ್ತಲವಾಡಿ’ ಸಿನಿಮಾದ ನಾಯಕಿ ಕಾವ್ಯಾ ಅವರ ಎಂಟ್ರಿ ಆಗಿದೆ.  ಇವರು ಜಂಟಿಯಾಗಿ ಬಿಗ್​​ಬಾಸ್ ಮನೆ ಸೇರಲಿದ್ದಾರೆ.

  • 28 Sep 2025 06:36 PM (IST)

    IND vs PAK Live Score: ದುಬೈ ಹವಾಮಾನ

    ಅಕ್ಯೂವೆದರ್ ಪ್ರಕಾರ, ಸೆಪ್ಟೆಂಬರ್ 28 ರಂದು ದುಬೈನಲ್ಲಿ ತಾಪಮಾನವು ಸುಮಾರು 42°C ಇರಲಿದೆ. ಆದಾಗ್ಯೂ, ಸಂಜೆಯ ತಾಪಮಾನವು 31°C ತಲುಪಬಹುದು. ಪಂದ್ಯಾವಳಿಯಾದ್ಯಂತ ಇಬ್ಬನಿ ಪರಿಣಾಮ ಬೀರಬಹುದು.

  • 28 Sep 2025 06:32 PM (IST)

    ಮೊದಲ ಸ್ಪರ್ಧಿ ಎಂಟ್ರಿ

    ಬಿಗ್​​ಬಾಸ್ 12ರ ಮೊದಲ ಸ್ಪರ್ಧಿಯಾಗಿ ಕಾಕ್ರೂಚ್ ಸುಧಿ ಅವರು ಎಂಟ್ರಿ ಮಾಡಿದ್ದಾರೆ. ಸುದೀಪ್ ಅವರೊಟ್ಟಿಗೆ ಕೆಲಸ ಮಾಡಿರಲಿಲ್ಲವಂತೆ, ಈಗ ಬಿಗ್​​ಬಾಸ್ ವೇದಿಕೆ ಮೇಲೆಯೇ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

  • 28 Sep 2025 06:25 PM (IST)

    ಒಂಟಿ-ಜಂಟಿ

    ಈ ಬಾರಿ ಬರುವ ಸ್ಪರ್ಧಿಗಳು ಒಂಟಿಯಾಗಿ ಅಥವಾ ಜಂಟಿಯಾಗಿ ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ. ಯಾರು ಒಂಟಿ ಆಗಲಿದ್ದಾರೆ, ಯಾರು ಜಂಟಿ ಆಗಲಿದ್ದಾರೆ ಎಂಬುದನ್ನು ವೀಕ್ಷಕರು ಮತದಾನದ ಮೂಲಕ ನಿರ್ಧರಿಸುತ್ತಾರೆ.

  • 28 Sep 2025 06:19 PM (IST)

    ಈ ಬಾರಿ ಜೈಲು ಇಲ್ಲ

    ಪ್ರತಿ ಸೀಸನ್​​ನಲ್ಲೂ ಜೈಲೊಂದು ಬಿಗ್​ಬಾಸ್ ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಈ ಬಾರಿ ಬಿಗ್​​ಬಾಸ್ ಮನೆಯಲ್ಲಿ ಜೈಲು ನಿರ್ಮಿಸಲಾಗಿಲ್ಲ. ಹಾಗಿದ್ದರೆ ಕಳಪೆಗಳಿಗೆ ಈ ಬಾರಿ ಬೇರೆಯದ್ದೇ ಶಿಕ್ಷೆ ಇರಲಿದೆ ಎಂಬ ಅನುಮಾನ ಮೂಡಿದೆ.

  • 28 Sep 2025 06:18 PM (IST)

    ಬಿಗ್​​ಬಾಸ್ ಮನೆ ಪರಿಚಯ

    ಕಿಚ್ಚ ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದರು. ಕರ್ನಾಟಕವನ್ನು ಪ್ರತಿನಿಧಿಸುವ ರೀತಿಯಲ್ಲಿ ಈ ಬಾರಿ ಮನೆಯನ್ನು ವಿನ್ಯಾಸ ಮಾಡಲಾಗಿದೆ.

  • 28 Sep 2025 06:04 PM (IST)

    ಶುರುವಾಯ್ತು ಬಿಗ್​​ಬಾಸ್

    ಬಿಗ್​​ಬಾಸ್ ಕನ್ನಡ 12 ಶುರುವಾಯ್ತು, ತಮ್ಮದೇ ಸಿನಿಮಾದ ಹಾಡುಗಳು ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವಾಗ ಸಖತ್ ಆಗಿ ಎಂಟ್ರಿ ಕೊಟ್ಟರು ಸುದೀಪ್.

  • 28 Sep 2025 05:24 PM (IST)

    ಕಾಮನ್ ಮ್ಯಾನ್ ಎಂಟ್ರಿ

    ಬಿಗ್​​ಬಾಸ್ ಸ್ಪರ್ಧಿಗಳು ಮನೆ ಪ್ರವೇಶಿಸುವ ಮುಂಚೆಯೇ ಕೆಲ ಕಾಮನ್ ಮ್ಯಾನ್​​ಗಳನ್ನು ಬಿಗ್​​ಬಾಸ್ ಮನೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಹಲವಾರು ಮಂದಿ ಸಾಮಾನ್ಯರು ಬಿಗ್​​ಬಾಸ್ ಮನೆ ಪ್ರವೇಶಿಸಿ ಖುಷಿ ಪಟ್ಟಿದ್ದಾರೆ.

  • 28 Sep 2025 05:04 PM (IST)

    ವೇದಿಕೆಯಿಂದಲೇ ಆಟ ಶುರು

    ಈ ಬಾರಿ ಬಿಗ್​​ಬಾಸ್​ ಗ್ರ್ಯಾಂಡ್ ಓಪನಿಂಗ್ ವೇದಿಕೆಯಿಂದಲೇ ಆಟ ಶುರುವಾಗಲಿದೆ. ಜೋಡಿ ಮತ್ತು ಒಂಟಿ ಆಟವನ್ನು ಬಿಗ್​​ಬಾಸ್ ವೇದಿಕೆ ಮೇಲಿಂದಲೇ ಆಡಿಸಲಿದ್ದಾರೆ ಸುದೀಪ್.

  • 28 Sep 2025 04:48 PM (IST)

    ಮಂಗಳೂರಿನ ರಕ್ಷಿತಾ

    ಯುಟ್ಯೂಬರ್ ಆಗಿರುವ, ಭಿನ್ನವಾಗಿ, ಚಿತ್ರ-ವಿಚಿತ್ರವಾದ ರೆಸಿಪಿಗಳನ್ನು ಮಾಡುವ ಬಲು ನಾಟಕೀಯವಾಗಿಯೂ ಮಾತನಾಡುವ ಮಂಗಳೂರಿನ ರಕ್ಷಿತಾ ಸಹ ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ.

  • 28 Sep 2025 04:44 PM (IST)

    ಮೂರು ಸ್ಪರ್ಧಿಗಳು ಕನ್​ಫರ್ಮ್​

    ನಿನ್ನೆ ನಡೆದ ಕ್ವಾಟ್ಲೆ ಕಿಚನ್ ಕಾರ್ಯಕ್ರಮದ ಫಿನಾಲೆ ವೇಳೆ ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲಿರುವ ಮೂವರು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲಾಗಿತ್ತು. ಕಾಕ್ರೂಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರು ಬಿಗ್​​ಬಾಸ್​​ಗೆ ಹೋಗಲಿರುವ ವಿಷಯ ನಿನ್ನೆಯೇ ಬಹಿರಂಗಪಡಿಸಲಾಗಿತ್ತು.

  • 28 Sep 2025 04:43 PM (IST)

    ಬಿಗ್​​ಬಾಸ್ ಮನೆ

    ಈ ಬಾರಿ ಬಿಗ್​ಬಾಸ್ ಮನೆಯನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಬಲು ಅದ್ಧೂರಿಯಾಗಿ ಹಾಗೂ ಇಡೀ ಕರ್ನಾಟಕದ ಪ್ರಾದೇಶಿಕತೆ, ಇತಿಹಾಸ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ನಿರ್ಮಾಣ ಮಾಡಲಾಗಿದೆ.

Published On - Sep 28,2025 4:41 PM

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ