AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಗಳಿಗೆ ಅವಮಾನ ಎಂದವರಿಗೆ ಉತ್ತರ ಕೊಟ್ಟ ಸುದೀಪ್

Bigg Boss Kannada season 13: ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಯಸುವವರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರ್ಹರನ್ನು ಟಾಸ್ಕುಗಳ ಮೂಲಕ, ವಿವಿಧ ಸಂದರ್ಶನಗಳ ಮೂಲಕ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ವಿನಯ್ ಗೌಡ, ಚಂದನ್ ಗೌಡ, ಸಂಗೀತ ಶೃಂಗೇರಿ ಮತ್ತು ಶ್ರುತಿ ಅವರುಗಳು ಈ ಶೋನ ಜಡ್ಜ್​​ಗಳಾಗಿದ್ದಾರೆ. ಇಲ್ಲಿ ಆಕಾಂಕ್ಷಿಗಳಿಗೆ ಕಠಿಣವಾದ ಟಾಸ್ಕ್ ಕೊಡಲಾಗುತ್ತಿದೆ. ಸ್ಪರ್ಧಿಗಳ ಬಗ್ಗೆ ಕೇವಲವಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಸುದೀಪ್ ಉತ್ತರ ಕೊಟ್ಟಿದ್ದಾರೆ.

‘ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಗಳಿಗೆ ಅವಮಾನ ಎಂದವರಿಗೆ ಉತ್ತರ ಕೊಟ್ಟ ಸುದೀಪ್
Sudeep Agni
ಮಂಜುನಾಥ ಸಿ.
|

Updated on:Aug 30, 2026 | 7:52 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಅಗ್ನಿಪರೀಕ್ಷೆ ಚಾಲ್ತಿಯಲ್ಲಿದೆ.
  • ಅಗ್ನಿಪರೀಕ್ಷೆಯಲ್ಲಿ ಜಡ್ಜ್​​ಗಳು ಬಲು ಕಠಿಣವಾಗಿ ವರ್ತಿಸುತ್ತಾರೆಂಬ ಟೀಕೆ ಇದೆ.
  • ಆರೋಪದ ಬಗ್ಗೆ ನಟ ಸುದೀಪ್ ಉತ್ತರ ನೀಡಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇಂದು (ಆಗಸ್ಟ್ 30) ಬಿಗ್​​ಬಾಸ್ ಕನ್ನಡ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದೀಪ್ ಅವರು ಬಿಗ್​​ಬಾಸ್ ಶೋ, ‘ಅಗ್ನಿಪರೀಕ್ಷೆ’ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದೇ ಪದೇ ‘ಅಗ್ನಿಪರೀಕ್ಷೆ’ ಕುರಿತು ಪ್ರಶ್ನೆಗಳು ಎದುರಾದವು. ಈ ಬಾರಿ ಬಿಗ್​​ಬಾಸ್​​ಗೆ ಸಾಮಾನ್ಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲು ಅಗ್ನಿಪರೀಕ್ಷೆ ಎಂಬ ವಿಶೇಷ ಟಾಸ್ಕ್​ ಅನ್ನು ಮಾಡಲಾಗುತ್ತಿದೆ. ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ಆದರೆ ಈ ಶೋನಲ್ಲಿ ಬಿಗ್​​ಬಾಸ್​​ ಆಕಾಂಕ್ಷಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ಅವಮಾನ ಮಾಡಲಾಗಿದೆ ಎಂಬ ಟೀಕೆ ಕೇಳಿ ಬಂದಿದೆ.

ಈ ಬಗ್ಗೆ ಸುದೀಪ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯ್ತು. ಪ್ರಶ್ನೆಗೆ ಜಾಣತನದಿಂದ ಉತ್ತರ ನೀಡಿದ ಸುದೀಪ್, ‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೆ ಸ್ವರ್ಗ ಸಿಗುತ್ತದೆ’ ಹಾಗೆಯೇ ಆ ಕಠಿಣವಾದ ಅಗ್ನಿಪರೀಕ್ಷೆಯನ್ನು ದಾಟಿದರೆ ಮಾತ್ರವೇ ಬಿಗ್​​ಬಾಸ್​​ನಲ್ಲಿ ಸ್ವರ್ಗ ಸಿಗಬಹುದು’ ಎಂದರು. ‘ಅಗ್ನಿಪರೀಕ್ಷೆ’ ಹೆಸರೇ ಹೇಳುವಂತೆ ಅದೊಂದು ಕಠಿಣವಾದ ಹಂತ, ಅಲ್ಲಿ ಜಡ್ಜ್​​ಗಳು ತುಸು ಕಠಿಣವಾಗಿಯೇ ಇರಬೇಕಾಗುತ್ತದೆ. ಹಾಗೆಂದು ಅಲ್ಲಿ ನಡೆದಿದ್ದೆಲ್ಲ ಸರಿಯಿದೆ ಎಂದು ನಾನು ಹೇಳಲಾಗದು, ಇನ್ನಷ್ಟು ಸೌಮ್ಯದಿಂದ ಹ್ಯಾಂಡಲ್ ಮಾಡಬಹುದಿತ್ತು’ ಎಂದರು ಸುದೀಪ್.

‘ಯಾರು ಆ ಕಠಿಣತೆಗಳನ್ನು ಎದುರಿಸಿದರೋ ಅವರು ಮುಂದೆ ಬರುತ್ತಿದ್ದಾರೆ. ಬಹುಷಃ ಬಿಗ್​​ಬಾಸ್​​ಗೆ ಬಂದು ವಿಜೇತರೂ ಆಗಬಹುದು. ಯಾರು ದೂರು ಹೇಳಿ ಕಷ್ಟ ಎಂದರೊ ಅವರು ಹೊರಗೆ ಹೋಗಿದ್ದಾರೆ. ಜೀವನದಲ್ಲೂ ಹಾಗೆಯೇ ಕಠಿಣವಾದ ಕ್ಷಣಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ, ಅದಕ್ಕೆ ದೂರುತ್ತಾ ಕೂತರೆ ಅದರ ಮುಂದಿರುವ ಒಳಿತು ಸಿಗದೇ ಹೋಗುತ್ತದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು

‘ಎಲ್ಲ ವಿಚಾರಕ್ಕೂ ಎರಡು ಸೈಡ್ ಇರುತ್ತವೆ. ನಾನೂ ಸಹ ಸಾಕಷ್ಟು ಕಠಿಣ ಸಮಯ, ಕಠಿಣವಾದ ಜವಾಬ್ದಾರಿಗಳನ್ನು ಎದುರಿಸಿಕೊಂಡೇ ಬಂದವನು. ಆಗೆಲ್ಲ ದೊಡ್ಡವರು ಹೇಳುವುದು ಬೈಗುಳ ಎನಿಸುತ್ತಿತ್ತು, ಆದರೆ ಈಗ ಅವರೆಲ್ಲ ಎಷ್ಟು ಸರಿಯಿದ್ದರು ಅನಿಸುತ್ತದೆ. ಇದೂ ಹಾಗೆಯೇ ಈಗ ಜಡ್ಜ್​​ಗಳು ಹೇಳಿರುವುದು ಕಠಿಣವಾಗಿದೆ ಎನಿಸಬಹುದು ಆದರೆ ಆಳೆ ಅದರಿಂದಲೇ ಒಳ್ಳೆಯದೂ ಆಗಬಹುದು’ ಎಂದಿದ್ದಾರೆ ಸುದೀಪ್.

ಬಿಗ್​​ಬಾಸ್ ಅಗ್ನಿಪರೀಕ್ಷೆ ಎಂಬ ಹೊಸ ಎಲಿಮೆಂಟ್ ಅನ್ನು ಈ ಬಾರಿ ಸೇರಿಸಲಾಗಿತ್ತು. ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಯಸುವವರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರ್ಹರನ್ನು ಟಾಸ್ಕುಗಳ ಮೂಲಕ, ವಿವಿಧ ಸಂದರ್ಶನಗಳ ಮೂಲಕ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ವಿನಯ್ ಗೌಡ, ಚಂದನ್ ಗೌಡ, ಸಂಗೀತ ಶೃಂಗೇರಿ ಮತ್ತು ಶ್ರುತಿ ಅವರುಗಳು ಈ ಶೋನ ಜಡ್ಜ್​​ಗಳಾಗಿದ್ದಾರೆ. ಇವರು ಮೆಚ್ಚಿ ಆರಿಸುವ ವ್ಯಕ್ತಿಗಳು ಸಾಮಾನ್ಯರ ಕೋಟಾನಲ್ಲಿ ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Sun, 30 August 26

Follow Us
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಬಿಗ್​​ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಕೆಪಿಎಸ್​ಸಿ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೈಲಿಗೆ!
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಕಂಗಾಲು
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ