AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಚಿಗುರಿತು ವಿನಯ್-ಕಾರ್ತಿಕ್ ಗೆಳೆತನ: ಸರಿ ಹೋದರೆ ವಿನಯ್-ಸಂಗೀತಾ?

Bigg Boss: ಹೊರಗೆ ಕೆಲವು ವರ್ಷಗಳಿಂದಲೂ ಒಳ್ಳೆಯ ಗೆಳೆಯರಾಗಿದ್ದ ವಿನಯ್ ಹಾಗೂ ಕಾರ್ತಿಕ್ ಗೆಳೆತನ ಮನೆಯ ಒಳಗೆ ಮುರಿದು ಹೋಗಿದೆ. ಆದರೆ ಸುದೀಪ್ ದೆಸೆಯಿಂದಾಗಿ ಆ ಗೆಳೆತನ ಮತ್ತೆ ಚಿಗುರಿದೆ. ಅಂದಹಾಗೆ ಸಂಗೀತಾ ಹಾಗೂ ವಿನಯ್ ಗೆಳೆತನ ಸರಿಹೋಯ್ತಾ?

ಮತ್ತೆ ಚಿಗುರಿತು ವಿನಯ್-ಕಾರ್ತಿಕ್ ಗೆಳೆತನ: ಸರಿ ಹೋದರೆ ವಿನಯ್-ಸಂಗೀತಾ?
ವಿನಯ್ ಗೌಡ
ಮಂಜುನಾಥ ಸಿ.
|

Updated on: Dec 10, 2023 | 11:24 PM

Share

ವಿನಯ್ ಗೌಡ (Vinay Gowda) ಹಾಗೂ ಕಾರ್ತಿಕ್ ಮಹೇಶ್ ಅವರದ್ದು ಹಲವು ವರ್ಷಗಳ ಗೆಳೆತನ. ಬಿಗ್​ಬಾಸ್​ ಮನೆಯಲ್ಲಿ ಇರುವ ಅತ್ಯಂತ ಹಳೆಯ ಗೆಳೆಯರು ವಿನಯ್ ಹಾಗೂ ಕಾರ್ತಿಕ್. ಆದರೆ ಈ ಇಬ್ಬರ ನಡುವೆ ಭೀಕರ ಎಂಬಂತೆ ಜಗಳವಾಗಿತ್ತು. ಇಬ್ಬರ ನಡುವಿನ ಗೆಳೆತನ ಮುರಿದು ಬಿದ್ದಿತ್ತು. ವಿನಯ್, ಕಾರ್ತಿಕ್​ ಮೇಲೆ ಹಲ್ಲೆಗೆ ಯತ್ನಿಸಿದರೆ, ಕಾರ್ತಿಕ್ ಸಹ ವಿನಯ್ ವಿರುದ್ಧ ಚಪ್ಪಲಿ ತೆಗೆದು ನೆಲಕ್ಕೆ ಎಸದು ಸಿಟ್ಟು ತೋರಿಸಿದ್ದರು. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. ನಿನ್ನನ್ನು ಮುಗಿಸುವುದೇ ನನ್ನ ಗುರಿ ಎಂದು ವಿನಯ್ ಹೇಳಿದ್ದರು. ಸ್ನೇಹ ಇಲ್ಲಿಗೆ ಮುಗಿಯಿತು ಎಂದು ಸಹ ಹೇಳಿದ್ದರು. ಆದರೆ ಈಗ ಸುದೀಪ್ ದೆಸೆಯಿಂದ ಇವರಿಬ್ಬರ ಸ್ನೇಹ ಮತ್ತೆ ಚಿಗುರೊಡೆದಿದೆ.

ಕಳೆದ ವಾರ ನಡೆದ ಟಾಸ್ಕ್​ಗಳಿಂದ ಬಿಗ್​ಬಾಸ್ ಸ್ಪರ್ಧಿಗಳ ಮನದಲ್ಲಿ ಎದುರಾಳಿ ತಂಡದ ಪರವಾಗಿ ದ್ವೇಷ ತುಂಬಿಕೊಂಡಿತ್ತು. ಇದನ್ನು ಹೋಗಲಾಡಿಸುವ ಕಾರಣಕ್ಕೆ ಸುದೀಪ್ ಸಣ್ಣ ಟಾಸ್ಕ್​ ಒಂದನ್ನು ನೀಡಿದರು. ಕಾಗದದ ಬಿಳಿ ಗುಲಾಬಿ ಬುಟ್ಟಿ ಇಟ್ಟು, ಯಾರಿಗೆ ಕ್ಷಮೆ ಕೇಳಬೇಕೆನ್ನಿಸುತ್ತದೆಯೋ ಅವರಿಗೆ ಇದನ್ನು ಕೊಟ್ಟು ಕ್ಷಮೆ ಕೇಳಿ ಎಂದರು. ವಿನಯ್, ಕಾರ್ತಿಕ್​ಗೆ ಗುಲಾಬಿ ನೀಡಿ ಕ್ಷಮೆ ಕೇಳಿದರು. ವಿನಯ್ ಕ್ಷಮೆ ಸ್ವೀಕರಿಸಿದ ಕಾರ್ತಿಕ್, ವಿನಯ್​ರನ್ನು ತಬ್ಬಿಕೊಂಡು ಮತ್ತೆ ಗೆಳೆತನ ಮುಂದುವರೆಸಿದರು.

ಇದನ್ನೂ ಓದಿ:‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ ಶೃಂಗೇರಿ

ಆದರೆ ಕಾರ್ತಿಕ್, ಸಂಗೀತಾಗೆ ಹೂವು ನೀಡಿ, ಪರೋಕ್ಷವಾಗಿ ಸಂಗೀತಾ ಬಹಳ ಡಾಮಿನೆಂಟ್ ನೇಚರ್​ನವರು, ಅದನ್ನು ಅವರು ಸರಿ ಮಾಡಿಕೊಳ್ಳಬೇಕು ಎಂದರು. ನಮ್ರತಾ ಸಹ ಸಂಗೀತಾಗೆ ಹೂವು ನೀಡಿ, ಇಬ್ಬರೂ ಮತ್ತೆ ಗೆಳೆಯರಾಗೋಣ ಎಂದರು. ಪವಿ, ಕಾರ್ತಿಕ್ ಹಾಗೂ ಸಂಗೀತಾ ಇಬ್ಬರಿಗೂ ಹೂವು ನೀಡಿ ಕ್ಷಮೆ ಕೇಳಿದರು. ಸಂಗೀತಾ, ಹೂವು ತೆಗೆದುಕೊಂಡು, ವಿನಯ್​ಗೆ ಕೊಡುತ್ತಾರೆ ಎಂದು ಮನೆಯ ಸದಸ್ಯರು ಭಾವಿಸಿದ್ದರು, ಆದರೆ ಅವರು ಕೊಟ್ಟಿದ್ದು ಮೈಖಲ್​ಗೆ. ನಾವಿಬ್ಬರೂ ಗೆಳೆಯರಾಗಿದ್ದೆವು, ಇನ್ನು ಮುಂದೆ ಮತ್ತೆ ಗೆಳೆಯರಾಗೋಣ ಎಂದರು.

ಈ ನಡುವೆ ತುಕಾಲಿ ಸಂತು, ಡ್ರೋನ್ ಪ್ರತಾಪ್​ಗೆ ಹೂವು ಕೊಟ್ಟು ಭಾವುಕರಾಗಿಬಿಟ್ಟರು, ನಾನು ತಪ್ಪು ಮಾಡಿದರೆ ಕ್ಷಮಿಸು, ನನ್ನಿಂದ ನಿನಗೆ ಬಹಳ ಬೇಸರ ಆಗಿದೆ ಎಂದರು. ಪ್ರತಾಪ್, ವರ್ತೂರು ಸಂತೋಷ್​ಗೆ ಹೂ ಕೊಟ್ಟು, ನೀವು ಮೊದಲಿದ್ದಂತೆ ಇಲ್ಲ ಎಂದರು. ಕೊನೆಗೆ ವರ್ತೂರು, ತಮ್ಮ ತಪ್ಪಿನ ಅರಿವು ಮಾಡಿಕೊಂಡು ಡ್ರೋನ್​ಗೆ ಹೂವು ನೀಡಿದರು. ಇಬ್ಬರೂ ತಬ್ಬಿಕೊಂಡರು, ನಂತರ ಇಬ್ಬರೂ ಹೋಗಿ ತುಕಾಲಿಯನ್ನು ತಬ್ಬಿಕೊಂಡು ಮತ್ತೆ ಮೂವರೂ ಒಂದಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ