AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಪ್ರೇಮ್​ ಕಹಾನಿ; ಅಶ್ಚಿನಿ ಹಿಂದೆ ಸುತ್ತಿ ಟ್ರೋಲ್ ಆದ ಅಭಿಷೇಕ್

Bigg Boss Abhishek: ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಅಭಿಷೇಕ್, ಅಶ್ವಿನಿ ಜೊತೆಗಿನ ಅತಿಯಾದ ಫ್ಲರ್ಟಿಂಗ್​ನಿಂದ ಟ್ರೋಲ್ ಆಗುತ್ತಿದ್ದಾರೆ. ದೊಡ್ಮನೆಯಲ್ಲಿ ಹುಡುಗಿಯರ ಜೊತೆ ಸುತ್ತಾಡುವುದರಲ್ಲೇ ತಮ್ಮ ಎನರ್ಜಿ ವ್ಯಯಿಸುತ್ತಿದ್ದಾರೆ. ಇದರಿಂದಾಗಿ, ಅವರು ಮತ್ತು ಅಶ್ವಿನಿ ಮನೆಯಲ್ಲಿ ಮೂಲೆಗುಂಪಾಗಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ಬಿಗ್ ಬಾಸ್ ಪ್ರೇಮ್​ ಕಹಾನಿ; ಅಶ್ಚಿನಿ ಹಿಂದೆ ಸುತ್ತಿ ಟ್ರೋಲ್ ಆದ ಅಭಿಷೇಕ್
ಅಭಿಷೇಕ್-ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on:Oct 03, 2025 | 10:26 AM

Share

ಅಭಿಷೇಕ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಸ್ಪರ್ಧಿಯಾಗಿದ್ದಾರೆ. ಅವರು ಈ ಮೊದಲು ಅವರು, ‘ಲಕ್ಷಣ’ ಹಾಗೂ ‘ವಧು’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ಅವರು ‘ಮುದ್ದು ಲಕ್ಷ್ಮೀ’ ಧಾರಾವಾಹಿಯ ನಟಿ ಅಶ್ವಿನಿ ಜೊತೆ ಜಂಟಿ ಆಗಿದ್ದಾರೆ. ಆದರೆ, ಅವರು ತಮ್ಮ ಎನರ್ಜಿಯನ್ನು ಫ್ಲರ್ಟ್ ಮಾಡುವುದರಲ್ಲೇ ಕಳೆಯುತ್ತಿದ್ದಾರೆ. ಈ ವಿಚಾರವಾಗಿ ಅವರು ಟ್ರೋಲ್ ಆಗುತ್ತಿದ್ದಾರೆ.

‘ಬಿಗ್ ಬಾಸ್’ನಲ್ಲಿ ಲವ್​ ಸ್ಟೋರಿಗಳು ಹುಟ್ಟಿಕೊಳ್ಳೋದು ಹೊಸದೇನು ಅಲ್ಲ. ಈ ಮೊದಲು ಕೂಡ ಅದೆಷ್ಟೋ ಪ್ರೇಮ ಕಥೆಗಳು ದೊಡ್ಮನೆಯಲ್ಲಿ ಹುಟ್ಟಿಕೊಂಡಿವೆ. ಈ ಸೀಸನ್​ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಈ ರೀತಿಯಲ್ಲಿ ಸುದ್ದಿ ಆಗುವ ಸೂಚನೆ ಸಿಕ್ಕಿದೆ. ಬಂದ ದಿನದಿಂದಲೂ ಅಭಿಷೇಕ್ ಅವರು ಹುಡುಗಿಯರ ಜೊತೆ ಮಾತನಾಡೋದು ಅವರ ಜೊತೆ ಸುತ್ತಾಡೋದು ಬಿಟ್ಟು ಬೇರೆ ಏನನ್ನೂ ಮಾಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ
Image
ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
Image
ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ
Image
‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಸದ್ಯ ಅಭಿಷೇಕ್ ಅವರು ನಡೆದುಕೊಳ್ಳುತ್ತಿರುವ ರೀತಿ ಯಾವ ತರಹ ಇದೆ ಎಂಬ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಪ್ರತಿ ಎಪಿಸೋಡ್​ಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಅಭಿಷೇಕ್ ಹಾಗೂ ಅಶ್ವಿನಿ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುವುದನ್ನು ಮಾತ್ರ ಕಾಣಬಹುದು. ಅವರನ್ನು ಕೆಲವರು ‘ಸಂಗಬುಲ್ಲ’ ಎಂದು ಕರೆದಿದ್ದಾರೆ. ಸಂಗಬುಲ್ಲ ಎಂದರೆ, ಮಹಿಳೆಯರ ಸಹವಾಸವನ್ನು ತುಂಬಾ ಇಷ್ಟಪಡುವ ವ್ಯಕ್ತಿ ಎಂಬರ್ಥವಿದೆ.

ಇದನ್ನೂ ಓದಿ: ಮೊದಲ ವಾರವೇ ಟಾಸ್ಕ್ ರದ್ದು; ಮಿತಿ ಮೀರಿತು ಬಿಗ್ ಬಾಸ್ ಕೋಪ

ಅಭಿಷೇಕ್ ಹಾಗೂ ಅಶ್ವಿನಿ ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಕೂಡ ಮಾಡಿದ್ದಾರೆ. ‘ನಾವಿಬ್ಬರೂ ಹಾಸ್ಯ ಮಾಡುವುದರ ಮೂಲಕ ಸುದ್ದಿ ಆಗುತ್ತಿಲ್ಲ, ಜಗಳ ಕೂಡ ಆಡುತ್ತಿಲ್ಲ. ನಾವು ಮೂಲೆಗುಂಪು ಆಗಿದ್ದೇವೆ ಎಂದು ಅನಿಸುತ್ತಿದೆ’ ಎಂದು ಅಶ್ವಿನಿ ಹೇಳಿದ್ದರು. ಆ ಬಳಿಕ ಅಭಿಷೇಕ್ ಹೋಗಿ ಸುಖಾ ಸುಮ್ಮನೆ ಧ್ವನಿ ಏರಿಸಿ ಮಾತನಾಡಿ ಚರ್ಚೆ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:58 am, Fri, 3 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ