AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ

ತಮಿಳು ಬಿಗ್​ ಬಾಸ್​ ಸೀಸನ್​ 3ರ ಮೊದಲ ರನ್ನರ್​ ಅಪ್​ ಹಾಗೂ ಕೋರಿಯೋಗ್ರಾಫರ್​ ಸ್ಯಾಂಡಿ ಮಗುವಿನ ಬಗ್ಗೆ ಕೆಲವರು ಕೆಟ್ಟದಾಗಿ ಬರೆದುಕೊಂಡಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ.

ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ
ಮೂರು ವರ್ಷದ ಮಗುವಿಗೂ ಬಾಡಿ ಶೇಮಿಂಗ್; ಕೊಳಕು ಮನಸ್ಥಿತಿಗಳಿಗೆ ಬಿಗ್ ಬಾಸ್ ಸ್ಪರ್ಧಿಯ ಖಡಕ್ ಉತ್ತರ
TV9 Web
| Edited By: |

Updated on: Sep 09, 2021 | 2:36 PM

Share

ಸೆಲೆಬ್ರಿಟಿ ಪಟ್ಟ ಬಂದ ನಂತರದಲ್ಲಿ ಕೆಲವೊಮ್ಮೆ ಓಪನ್​ ಆಗಿಯೇ ಬಾಡಿ ಶೇಮಿಂಗ್​ ಎದುರಿಸುವ ಪರಿಸ್ಥಿತಿ ಬರುತ್ತದೆ. ಇದರಿಂದ ತಪ್ಪಿಸಿಕೊಳ್ಳೋಕೆ ಸೆಲೆಬ್ರಿಟಿಗಳು ಫಿಟ್​ ಆಗಿರೋಕೆ ಪ್ರಯತ್ನಿಸುತ್ತಾರೆ. ಇಲ್ಲವಾದರೆ, ನಟ/ನಟಿಯರ ತೂಕ ಜಾಸ್ತಿ ಆಗಿದೆ ಎಂಬ ವಿಚಾರ ಇಟ್ಟುಕೊಂಡೇ ಟ್ರೋಲ್​ ಮಾಡಲಾಗುತ್ತದೆ. ಆದರೆ, ಕೆಲವರು ಈಗ ಸೆಲೆಬ್ರಿಟಿಗಳ ಮಕ್ಕಳ ಮೇಲೂ ಕಣ್ಣಿಟ್ಟಿದ್ದಾರೆ. ಏನೂ ಅರಿಯದ ಮೂರು ವರ್ಷದ ಕಂದಮ್ಮನಿಗೆ ಬಾಡಿ ಶೇಮಿಂಗ್​ ಮಾಡಿದ್ದಾರೆ. ಕೊಳಕು ಮನಸ್ಥಿತಿ ಬಗ್ಗೆ ದಂಪತಿ ಅಸಮಾಧಾನ ಹೊರ ಹಾಕಿದ್ದಾರೆ.

ತಮಿಳು ಬಿಗ್​ ಬಾಸ್​ ಸೀಸನ್​ 3ರ ಮೊದಲ ರನ್ನರ್​ ಅಪ್​ ಹಾಗೂ ಕೋರಿಯೋಗ್ರಾಫರ್​ ಸ್ಯಾಂಡಿ ಮಗುವಿನ ಬಗ್ಗೆ ಕೆಲವರು ಕೆಟ್ಟದಾಗಿ ಬರೆದುಕೊಂಡಿದ್ದಾರೆ. ಇದು ಅವರಿಗೆ ಬೇಸರ ತರಿಸಿದೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಅನೇಕರು ಈ ನಟನನ್ನು ಬೆಂಬಲಿಸಿದ್ದಾರೆ.

ಸ್ಯಾಂಡಿ 2017ರಲ್ಲಿ ಗೆಳತಿ ಡೊರೊತಿ ಸಿಲ್ವಿಯಾ ಅವರನ್ನು ಮದುವೆ ಆದರು. 2018ರಲ್ಲಿ ಮಗಳು ತಾಶಾ ಜನಿಸಿದರೆ 2021ರಲ್ಲಿ ಗಂಡು ಮಗುವಿನ ಆಗಮನವಾಗಿತ್ತು. ಸ್ಯಾಂಡಿ ಮತ್ತು ಸಿಲ್ವಿಯಾ ಇಬ್ಬರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ವಿಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳಿಗೋಸ್ಕರ ಇಬ್ಬರೂ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಿಲ್ವಿಯಾ ಪತಿ ಸ್ಯಾಂಡಿ ಹಾಗೂ ಮಗಳು ತಾಶಾ ಜತೆ ಇರುವ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅನೇಕರು ಮಗುವಿನ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ‘ತಾಶಾ ತಾಯಿಯಂತೆ ದಪ್ಪವಾಗಿದ್ದಾಳೆ’  ಎಂದು ಕೆಲವರು ಟೀಕಿಸಿದ್ದಾರೆ. ಇದು ಸಿಲ್ವಿಯಾ ಹಾಗೂ ಸ್ಯಾಂಡಿ ಕೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಕೊಂಕಾಗಿ ಬರೆದುಕೊಂಡಿರುವ ಸಿಲ್ವಿಯಾ, ‘ಮಗು ಸ್ಲಿಮ್​ ಆಗಲು ಬಿಡಿ. ಆಗ ಅವಳು ಸ್ಯಾಂಡಿ ಮಾಸ್ಟರ್​ನಂತೆ ಡಾನ್ಸ್​ ಮಾಡಬಹುದು’ ಎಂದಿದ್ದಾರೆ.

ಮುಂದುವರಿದು, ‘ಅವಳು ಈಗಿನ್ನೂ ಮಗು. ಈಗಲೇ ಸಮಾಜ ಅವಳ ಮೇಲೆ ಒತ್ತಡ ಹೇರಲು ಆರಂಭಿಸಿದೆ. ಮುಂದಿನ ಪೀಳಿಗೆಗಾಗಿ ನಾವು ಸ್ವಾಸ್ತ್ಯ ಸಮಾಜ ರಚಿಸಲು ಈಗಲೇ ಪಣ ತೊಡೋಣ’ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ಮಂಜು-ದಿವ್ಯಾ ಫೋಟೋ; ಬಿಗ್​ ಬಾಸ್​ ಬಳಿಕ ಏನಿದು ಕಹಾನಿ?

‘ಬಿಗ್​ ಬಾಸ್​ ಸೀಸನ್​ 8’ ಮರುಸೃಷ್ಟಿ; ಇದನ್ನು ನೋಡಿದ್ರೆ ನೀವು ನಗೋದು ಗ್ಯಾರಂಟಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ