AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದು ಹೊಸ ದಾಖಲೆ ಬರೆದ ಅರ್ಚನಾ ರವಿಚಂದ್ರನ್

Bigg Boss Winner: ಬಿಗ್​ಬಾಸ್ ತಮಿಳು ಸೀಸನ್ 7 ನಿನ್ನೆ (ಜನವರಿ 14) ಮುಗಿದಿದ್ದು, ವಿಶೇಷ ದಾಖಲೆಯೊಂದಕ್ಕೆ ಅದು ಸಾಕ್ಷಿಯಾಗಿದೆ.

ಬಿಗ್​ಬಾಸ್ ಗೆದ್ದು ಹೊಸ ದಾಖಲೆ ಬರೆದ ಅರ್ಚನಾ ರವಿಚಂದ್ರನ್
ಬಿಗ್​ಬಾಸ್
ಮಂಜುನಾಥ ಸಿ.
|

Updated on:Jan 15, 2024 | 5:34 PM

Share

ಕನ್ನಡ ಬಿಗ್​ಬಾಸ್ (BiggBoss) ಸೀಸನ್ 10 ಮುಗಿಯಲು ಕೆಲವೇ ದಿನಗಳು ಬಾಕಿ ಇದೆ. ಈ ಬಾರಿಯ ವಿನ್ನರ್ ಯಾರಾಗಲಿದ್ದಾರೆ ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ತೆಲುಗು ಬಿಗ್​ಬಾಸ್​ ತಿಂಗಳ ಹಿಂದೆಯೇ ಮುಗಿದು ಸಾಮಾನ್ಯ ರೈತನ ಮಗ ಪ್ರಶಾಂತ್ ವಿನ್ನರ್ ಆಗಿದ್ದರು. ನಿನ್ನೆಯಷ್ಟೆ ತಮಿಳು ಬಿಗ್​ಬಾಸ್ ಮುಗಿದಿದ್ದು ಶೋನ ಮಧ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದ ಅರ್ಚನಾ ರವಿಚಂದ್ರನ್ ವಿಜೇತರಾಗಿ ಗಮನ ಸೆಳೆದಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಬಿಗ್​ಬಾಸ್ ವಿಜೇತರಾದ ಮೊದಲ ಮಹಿಳಾ ಸ್ಪರ್ಧಿ ಎನಿಸಿಕೊಂಡಿದ್ದಾರೆ ಅರ್ಚನಾ ರವಿಚಂದ್ರನ್. ವಿಶೇಷವೆಂದರೆ ಬಿಗ್​ಬಾಸ್ ತಮಿಳಿನ ಫೈನಲ್​ಗೆ ಬಂದ ಇಬ್ಬರೂ ಸಹ ಮಹಿಳೆಯರೇ ಆಗಿದ್ದರು. ಅರ್ಚನಾ ರವಿಚಂದ್ರನ್ ವಿಜೇತರಾದರೆ ಮೊದಲ ರನ್ನರ್ ಅಪ್ ಆಗಿದ್ದು ಮಣಿಚಂದ್ರನ್.

ತಮಿಳು ಬಿಗ್​ಬಾಸ್ ಫಿನಾಲೆ ದಿನ ಮಣಿಚಂದ್ರನ್, ಪ್ರಿಯಾ ಕೃಷ್ಣನ್, ದಿನೇಶ್, ವಿಷ್ಣು ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಟಾಪ್ ಐದು ಸ್ಪರ್ಧಿಗಳಾಗಿ ಉಳಿದಿದ್ದರು. ಅವರಲ್ಲಿ ಮಾಯಾ ಕೃಷ್ಣನ್ ಹಾಗೂ ಅರ್ಚನಾ ರವಿಚಂದ್ರನ್ ಅವರುಗಳು ಕೊನೆಯ ಇಬ್ಬರು ಫೈನಲಿಸ್ಟ್​ಗಳಾದರು. ಆ ಇಬ್ಬರಲ್ಲಿ ಅರ್ಚನಾ ರವಿಚಂದ್ರನ್ ಗೆದ್ದು ಬೀಗಿದರು.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಕೊನೆಯ ಉತ್ತಮ ಯಾರು? ಕಳಪೆ ಯಾರು?

ತಮಿಳು ಬಿಗ್​ಬಾಸ್ ಸೀಸನ್ 7 ಪ್ರಾರಂಭವಾದ 28ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಅರ್ಚನಾ ಬಿಗ್​ಬಾಸ್ ಮನೆ ಪ್ರವೇಶಿಸಿದರು. ಒಳ್ಳೆಯ ಡ್ಯಾನ್ಸರ್, ಹಾಡುಗಾರ್ತಿ ಆಗಿರುವ ಅರ್ಚನಾ ತಮ್ಮ ಪ್ರತಿಭೆ ಮೂಲಕ ಪ್ರೇಕ್ಷಕರ ಮನ ಗೆದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಆದ ಕಾರಣ ಆರಂಭದಲ್ಲಿ ಅರ್ಚನಾ ಮನೆ ಸದಸ್ಯರ ತೀವ್ರ ವಿರೋಧ ಎದುರಿಸಬೇಕಾಯ್ತು. ಮಾಯಾ ಮತ್ತು ಪೂರ್ಣಿಮಾ ಪದೇ ಪದೇ ಅರ್ಚನಾ ಜೊತೆ ಜಗಳ ಮಾಡುವುದು, ಟೀಕೆ ಮಾಡುವುದು ಸುಖಾ ಸುಮ್ಮನೆ ನಾಮಿನೇಟ್ ಮಾಡುವುದು, ಟಾಸ್ಕ್​ ಆಡಲು ಅವಕಾಶ ಕೊಡದೇ ಇರುವುದು ಮಾಡಿದರು. ಕೊನೆಗೆ ಕಮಲ್ ಹಾಸನ್ ಅವರೇ ಆ ಇಬ್ಬರಿಗೂ ಎಚ್ಚರಿಕೆ ಕೊಡಬೇಕಾದ ಪರಿಸ್ಥಿತಿಯೂ ಬಂತು.

ಟ್ರೋಫಿ ಗೆದ್ದ ಬಳಿಕ ಮಾತನಾಡಿರುವ ಅರ್ಚನಾ, ‘ನನಗೆ ಇದು ನಂಬಲು ಸಾಧ್ಯವಾಗುತ್ತಿಲ್ಲ. ಒಂದೆರಡು ವಾರವಷ್ಟೆ ಮನೆಯಲ್ಲಿ ಉಳಿಯಬಹುದೇನೋ ಎಂದು ಕೊಂಡೇ ನಾನು ಬಿಗ್​ಬಾಸ್ ಮನೆಗೆ ಬಂದಿದ್ದೆ. ಆದರೆ ಇದನ್ನು ನಾನು ಊಹಿಸಿರಲಿಲ್ಲ. ನನ್ನ ಶಾಲಾ ದಿನಗಳಿಂದಲೂ ನನಗೆ ಆತ್ಮೀಯ ಗೆಳೆಯರು ಯಾರೂ ಇಲ್ಲ. ಇಷ್ಟೋಂದು ಜನರ ಜೊತೆ ಒಡನಾಡಿದ್ದೇ ಇಲ್ಲ. ಈಗ ಹಿಂತಿರುಗಿ ನೋಡಿದಾಗ ಎಷ್ಟೋಂದು ಜನರು ನನ್ನೊಟ್ಟಿಗೆ ಇದ್ದಾರೆ ಅನಿಸುತ್ತದೆ. ಕಮಲ್ ಸರ್, ನಿಮ್ಮನ್ನು ನಾನು ಮೆಂಟರ್ ಅಂದುಕೊಂಡಿದ್ದೇನೆ. ನನ್ನ ಗೆಲುವಿನ ನಿಮ್ಮ ಪಾತ್ರವೂ ಇದೆ. ನಿಮಗೆ ವಿಶೇಷ ಧನ್ಯವಾದ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 15 January 24

Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು