AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಗೂ ಬೇಡವಾಯ್ತು ಕಾರ್ತಿಕ್ ಸ್ನೇಹ; ಕಾರಣ ಕೊಟ್ಟು ‘ಫ್ರೆಂಡ್​ಶಿಪ್’ ಬೇಡ ಎಂದ ಸ್ಪರ್ಧಿಗಳು

ಯಾರ ಫ್ರೆಂಡ್​ಶಿಪ್​ನ ಬಿಗ್ ಬಾಸ್ ಮನೆ ಹೊರಗೂ ತೆಗೆದುಕೊಂಡು ಹೋಗುತ್ತೀರಿ, ಯಾರ ಫ್ರೆಂಡ್​ಶಿಪ್ ಇಲ್ಲಿಯೇ ಬಿಟ್ಟು ಹೋಗುತ್ತೀರಿ ಎಂಬುದನ್ನು ಹೇಳಬೇಕಿತ್ತು. ಇದಕ್ಕೆ ಸ್ಪರ್ಧಿಗಳು ಉತ್ತರಿಸಿದ್ದಾರೆ.

ಯಾರಿಗೂ ಬೇಡವಾಯ್ತು ಕಾರ್ತಿಕ್ ಸ್ನೇಹ; ಕಾರಣ ಕೊಟ್ಟು ‘ಫ್ರೆಂಡ್​ಶಿಪ್’ ಬೇಡ ಎಂದ ಸ್ಪರ್ಧಿಗಳು
ಬಿಗ್ ಬಾಸ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 15, 2024 | 8:02 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಎದುರಿಗೆ ಕಾಣೋದು ನಿಜ ಎಂದು ಭಾವಿಸುವುದು ತಪ್ಪು. ಹಿಂದೊಂದು ಮುಂದೊಂದು ಎಂದು ನಡೆದುಕೊಳ್ಳುವ ಸ್ಪರ್ಧಿಗಳು ಅನೇಕರು ಇರುತ್ತಾರೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ. ಆದರೆ, ಅದು ಎಷ್ಟು ದಿನ ಇರುತ್ತದೆ, ಯಾವಾಗ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲೂ ಹಾಗೆಯೇ ಆಗಿದೆ. ಕಾರ್ತಿಕ್ ತಾವು ಆಪ್ತರು ಎಂದುಕೊಂಡವರೆಲ್ಲ ಅವರ ಫ್ರೆಂಡ್​ಶಿಪ್ ಬೇಡ ಎಂದಿದ್ದಾರೆ. ಇದು ಅವರಿಗೆ ಶಾಕಿಂಗ್ ಎನಿಸಿದೆ.

ವೀಕೆಂಡ್ ಎಪಿಸೋಡ್​ನಲ್ಲಿ ಒಂದು ಟಾಸ್ಕ್ ನೀಡಲಾಯಿತು ಪ್ರತಿ ಸ್ಪರ್ಧಿಗೆ ಎರಡು ಫೋಟೋ ನೀಡಲಾಗುತ್ತದೆ. ಪ್ರತಿ ಸ್ಪರ್ಧಿ ಎರಡು ಪ್ರತ್ಯೇಕ ವ್ಯಕ್ತಿಗಳ ಜೊತೆ ನಿಂತಿರುವ ಫೋಟೋ ಇದು. ಈ ಪೈಕಿ ಯಾರ ಫ್ರೆಂಡ್​ಶಿಪ್​ನ ಬಿಗ್ ಬಾಸ್ ಮನೆ ಹೊರಗೂ ತೆಗೆದುಕೊಂಡು ಹೋಗುತ್ತೀರಿ, ಯಾರ ಫ್ರೆಂಡ್​ಶಿಪ್ ಇಲ್ಲಿಯೇ ಬಿಟ್ಟು ಹೋಗುತ್ತೀರಿ ಎಂಬುದನ್ನು ಹೇಳಬೇಕು.

ಸಂಗೀತಾ ಅವರಿಗೆ ವಿನಯ್ ಹಾಗೂ ಕಾರ್ತಿಕ್ ಜೊತೆಗಿನ ಫೋಟೋ ಬಂತು. ಈ ಪೈಕಿ ತಮಗೆ ಇಬ್ಬರ ಫ್ರೆಂಡ್​ಶಿಪ್ ಬೇಡ ಎಂದು ಹೇಳಿದರು. ನಂತರ ತನಿಷಾ ಅವರಿಗೆ ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಜೊತೆ ಇರೋ ಫೋಟೋಗಳು ಬಂದವು.  ಈ ಪೈಕಿ ವರ್ತೂರು ಸಂತೋಷ್ ಅವರ ಫ್ರೆಂಡ್​ಶಿಪ್​ನ ಹೊರಗೆ ತೆಗೆದುಕೊಂಡು ಹೋಗ್ತೀನಿ, ಕಾರ್ತಿಕ್ ಫ್ರೆಂಡ್​ಶಿಪ್​ನ ಇಲ್ಲೇ ಬಿಡುತ್ತೀನಿ ಎಂದರು. ನಂತರ ವಿನಯ್ ಅವರಿಗೆ ನಮ್ರತಾ ಹಾಗೂ ಕಾರ್ತಿಕ್ ಆಯ್ಕೆ ಬಂತು. ಈ ವೇಳೆ ‘ನನ್ನ ಸಿಸ್ಟರ್ ನಮ್ರತಾ ಜೊತೆ ಗೆಳೆತನನ ಮುಂದುವರಿಸಿಕೊಂಡು ಹೋಗ್ತೀನಿ. ಕಾರ್ತಿಕ್ ಫ್ರೆಂಡ್​ಶಿಪ್​ನ ಇಲ್ಲಿಯೇ ಬಿಡ್ತೀನಿ’ ಎಂದರು.

ಕಾರ್ತಿಕ್ ಹಾಗೂ ಸಂಗೀತಾ ಬಿಗ್ ಬಾಸ್ ಆರಂಭದಲ್ಲಿ ಉತ್ತಮವಾಗಿದ್ದರು. ಇಬ್ಬರ ಮಧ್ಯೆ ಆಪ್ತತೆ ಇತ್ತು. ಆದರೆ, ದಿನ ಕಳೆದಂತೆ ಈ ಫ್ರೆಂಡ್​ಶಿಪ್ ಹಾಳಾಯಿತು. ಇಬ್ಬರೂ ದೂರ ಆದರು. ಈಗ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಉಳಿದುಕೊಂಡಿಲ್ಲ. ಕಾರ್ತಿಕ್ ಅವರು ಪ್ಯಾಚಪ್ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಸಂಗೀತಾ ಕೂಡ ಅನೇಕ ಬಾರಿ ಓಪನ್ ಆಗಿ ‘ನಿಮ್ಮ ಫ್ರೆಂಡ್​ಶಿಪ್ ಬೇಡ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫಿನಾಲೆ ಟಿಕೆಟ್ ವಿಚಾರದಲ್ಲಿ ಪ್ರತಾಪ್​ಗೆ ದ್ರೋಹ? ಬಿಗ್ ಬಾಸ್ ಘೋಷಣೆಯಲ್ಲೇ ಇತ್ತು ಸ್ಪಷ್ಟತೆ  

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಅನೇಕ ಬಾರಿ ಜಗಳ ನಡೆದಿದೆ. ಕಾರ್ತಿಕ್​ಗಿಂತ ನಮ್ರತಾ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಹೀಗಾಗಿ, ವಿನಯ್ ಅವರು ನಮ್ರತಾನ ಚ್ಯೂಸ್ ಮಾಡಿದ್ದಾರೆ. ಇನ್ನು ತನಿಷಾ ಹಾಗೂ ಕಾರ್ತಿಕ್ ಕಳೆದ ವಾರದವರೆಗೆ ಉತ್ತಮ ಗೆಳೆಯರಾಗಿಯೇ ಇದ್ದರು. ಆದರೆ, ಕಾರಣವೇ ಇಲ್ಲದೆ ತನಿಷಾ ಹೆಸರನ್ನು ಕಾರ್ತಿಕ್ ನಾಮಿನೇಟ್ ಮಾಡಿದರು. ಇದರಿಂದ ತನಿಷಾಗೆ ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದರು. ‘ವರ್ತೂರು ಸಂತೋಷ್ ಏನೇ ಇದ್ದರೂ ಅದನ್ನು ನೇರವಾಗಿ ಹೇಳುತ್ತಾರೆ’ ಎನ್ನುವ ಅಭಿಪ್ರಾಯ ತನಿಷಾ ಅವರದ್ದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ