AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕಿರುತೆರೆ ಅತಿಥಿಯಾಗಿ ಬಂದ ಡಿಕೆ ಶಿವಕುಮಾರ್, ಈ ಬಾರಿ ಹಳೆ ಗೆಳೆಯನ ಶೋ

DK Shivakumar: ಕೆಲ ತಿಂಗಳ ಹಿಂದಷ್ಟೆ 'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಆಗಮಿಸಿದ್ದ ಡಿಕೆ ಶಿವಕುಮಾರ್ ಈಗ ಮತ್ತೊಂದು ಕಿರುತೆರೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ತಮ್ಮ ಗೆಳೆಯನಿಗಾಗಿ.

ಮತ್ತೆ ಕಿರುತೆರೆ ಅತಿಥಿಯಾಗಿ ಬಂದ ಡಿಕೆ ಶಿವಕುಮಾರ್, ಈ ಬಾರಿ ಹಳೆ ಗೆಳೆಯನ ಶೋ
ಡಿಕೆ ಶಿವಕುಮಾರ್
ಮಂಜುನಾಥ ಸಿ.
|

Updated on: Aug 15, 2023 | 6:35 PM

Share

ಬಹುತೇಕ ಪ್ರತಿದಿನವೂ ಕಿರುತೆರೆ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಳ್ಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, (DK Shivakumar) ತೀರ ಅಪರೂಪಕ್ಕೆ ಸುದ್ದಿ ಚಾನೆಲ್​ಗಳ ಹೊರತಾಗಿ ಬೇರೆ ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಡಿ.ಕೆ.ಶಿವಕುಮಾರ್, ರಮೇಶ್ ಅರವಿಂದ್ ನಡೆಸಿಕೊಡುವ ‘ವೀಕೆಂಡ್ ವಿತ್ ರಮೇಶ್​’ (Weekend With Ramesh) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಡಿಕೆಶಿಯವರ ಆ ಎಪಿಸೋಡ್​ಗೆ ಒಳ್ಳೆಯ ಟಿಆರ್​ಪಿ ಸಹ ದೊರಕಿತ್ತು.

ಇದೀಗ ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ಕಿರುತೆರೆ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಅದೂ ಅವರ ಹಳೆಯ ಗೆಳೆಯನ ಶೋ. ಡಿ.ಕೆ.ಶಿವಕುಮಾರ್ ಈಗಾಗಲೇ ಶೂಟಿಂಗ್ ಸಹ ಮುಗಿದಿದೆ. ಎಪಿಸೋಡ್​ನ ಪ್ರೋಮೋ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

ಬೊಂಬಾಟ್ ಭೋಜನ ಶೋನಲ್ಲಿ ಡಿಕೆ ಶಿವಕುಮಾರ್

ಡಿ.ಕೆ.ಶಿವಕುಮಾರ್ ಸ್ಟಾರ್ ಸುವರ್ಣ ಚಾನೆಲ್​ನ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ‘ಬೊಂಬಾಟ್ ಭೋಜನ’ ಶೋಗೆ ಅತಿಥಿಯಾಗಿ ಬರಲಿದ್ದಾರೆ. ನಟ, ನಿರೂಪಕ, ಸಿಹಿ ಕಹಿ ಚಂದ್ರು ಈ ಶೋ ಅನ್ನು ನಡೆಸಿಕೊಡುತ್ತಿದ್ದು, ಅಡುಗೆ ಕುರಿತಾದ ಶೋ ಇದಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಇಬ್ಬರೂ ಹಳೆಯ ಮಿತ್ರರು. ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಅದೇ ಸಲುಗೆಯ ಕಾರಣದಿಂದ ಡಿಕೆ ಶಿವಕುಮಾರ್ ಅರು ಸಿಹಿ ಕಹಿ ಚಂದ್ರು ಅವರು ಶೋಗೆ ಅತಿಥಿಯಾಗಿ ಬಂದಿದ್ದಾರೆ.

ಇದನ್ನೂ ಓದಿ:ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

ಮಂಗಳವಾರ ಮಧ್ಯಾಹ್ನವೇ ಶೋ ಪ್ರಸಾರವಾಗಿದ್ದು, ಶೋನಲ್ಲಿ ಸಿಹಿ-ಕಹಿ ಚಂದ್ರು ಹಾಗೂ ಡಿ.ಕೆ.ಶಿವಕುಮಾರ್ ಸಹಜ ಆತ್ಮೀಯತೆಯಿಂದಲೇ ಮಾತನಾಡಿದ್ದಾರೆ. ಇಬ್ಬರೂ ಹಳೆಯ ಮಿತ್ರರಾಗಿರುವ ಕಾರಣ ಪರಸ್ಪರ ಏಕವಚನದಲ್ಲಿಯೇ ಸಂಭೋದನೆ ಮಾಡಿಕೊಂಡು ಆಹಾರದ ಬಗ್ಗೆ, ಹಳೆಯ ದಿನಗಳ ಬಗ್ಗೆ, ರಾಜಕೀಯದ ಬಗ್ಗೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಆದಷ್ಟು ಬೇಗ ದೇಶದ ಪ್ರಧಾನ ಮಂತ್ರಿ ಆಗಲಿ ಎಂದು ಸಿಹಿ ಕಹಿ ಚಂದ್ರು ಹಾರೈಸಿದ್ದಕ್ಕೆ, ‘ಅಯ್ಯೋ ಬೇಡಪ್ಪ, ಸ್ವಲ್ಪ ಲಿಮಿಟ್ಟಿನಲ್ಲಿರೋಣ’ ಎಂದರು, ಸಿಎಂ ಆಗಲಿ ಎಂಬ ಹಾರೈಕೆಯನ್ನು ಮಾತ್ರ ನಗುತ್ತಲೇ ಸ್ವೀಕರಿಸಿದ್ದಾರೆ ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್ ಅವರಿಗಾಗಿ ವಿಶೇಷವಾಗಿ ಅವರೇಕಾಳು ಚಿತ್ರಾನ್ನವನ್ನು ಕಾರ್ಯಕ್ರಮದಲ್ಲಿ ಸಿಹಿ-ಕಹಿ ಚಂದ್ರು ತಯಾರಿಸಿದ್ದರು. ಅದರ ಜೊತೆಗೆ ಡಿಕೆಶಿಗೆ ಇಷ್ಟವಾದ ಹಸಿ ಕಡಲೆ ಬೀಜದ ತಿನಿಸು, ಮಶ್ರೂಮ್ ಫ್ರೈ, ಗೋಬಿ ಫ್ರೈ ಹಾಗೂ ಗುಲಾಬ್ ಜಾಮೂನುಗಳನ್ನು ಸಹ ತಯಾರು ಮಾಡಿದ್ದರು. ಆದರೆ ಇತ್ತೀಚೆಗೆ ಡಯಟ್ ಕಾನ್ಶಿಯಸ್ ಆಗಿರುವ ಡಿಕೆಶಿ, ಮಶ್ರೂಮ್, ಗೋಬಿ ಫ್ರೈಗಳನ್ನು ಪಕ್ಕಕ್ಕೆ ಇರಿಸಿ, ಚಿತ್ರಾನ್ನ, ಕಡಲೆ ಹಾಗೂ ಜಾಮೂನನ್ನು ಮಾತ್ರವೇ ಸೇವಿಸಿದರು.

ಡಿಕೆ ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಒಟ್ಟಿಗೆ ಶಾಲೆ, ಕಾಲೇಜು ಕಲಿತವರು, ‘ವೀಕೆಂಡ್ ವಿತ್ ರಮೇಶ್’ ಶೋಗೆ ಡಿ.ಕೆ.ಶಿವಕುಮಾರ್ ಅತಿಥಿಯಾಗಿ ಆಗಮಿಸಿದ್ದಾಗಲೂ ಸಹ ಸಿಹಿ-ಕಹಿ ಚಂದ್ರು ಆ ಶೋಗೆ ಬಂದು, ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ