AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು

ಗಿಲ್ಲಿ ನಟ ಬಿಗ್ ಬಾಸ್ ಟಾಸ್ಕ್‌ನಲ್ಲಿ ಗೆಲುವಿಗೂ ಮೊದಲೇ ಸಂಭ್ರಮಿಸಿ ವಿವಾದಕ್ಕೆ ಸಿಲುಕಿದ್ದಾರೆ. ಅಶ್ವಿನಿ ಎದುರು ಸುಲಭ ಗೆಲುವು ಎಂದು ಬೀಗಿದ ಗಿಲ್ಲಿ ಕೊನೆಗೆ ಸೋಲನುಭವಿಸಿದರು. ತಮ್ಮ ಸೋಲನ್ನು ಒಪ್ಪಿಕೊಳ್ಳದ ಗಿಲ್ಲಿ, ಅಶ್ವಿನಿ ಗೆಲುವಿಗೆ ಧನುಷ್ ಕಾರಣ ಎಂದು ವಾದಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು
ಗಿಲ್ಲಿ-ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on:Jan 02, 2026 | 7:02 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ನಟ ಅವರಿಗೆ ಟಾಸ್ಕ್ ಆಡೋಕೆ ಬರೋದಿಲ್ಲ ಎಂದು ಅನೇಕರು ಅಪಸ್ವರ ತೆಗೆದಿದ್ದು ಇದೆ. ಆದರೆ. ಇದನ್ನು ಗಿಲ್ಲಿ ಒಪ್ಪಿಕೊಳ್ಳೋದಿಲ್ಲ. ತಾವು ಒಳ್ಳೆಯ ರೀತಿಯಲ್ಲಿ ಟಾಸ್ಕ್ ಆಡುತ್ತೇವೆ ಎಂದು ಅವರು ವಾದಿಸುತ್ತಲೇ ಬಂದಿದ್ದಾರೆ. ಈಗ ಗಿಲ್ಲಿ ನಟ ಅವರು ಟಾಸ್ಕ್ ಆಡುವಾಗ ಗೆಲ್ಲುವ ಮೊದಲೇ ಸಂಭ್ರಮಿಸಿದ್ದಾರೆ. ಕೊನೆಗೆ ಅವರಿಗೆ ಸಿಕ್ಕಿದ್ದು ಸೋಲು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.

ಫಿನಾಲೆ ಕಂಟೆಂಡರ್ ಟಾಸ್ಕ್​​ಗೆ ಆಯ್ಕೆ ಆಗಲು ಟಾಸ್ಕ್ ಒಂದನ್ನು ನೀಡಲಾಯಿತು. ಗಿಲ್ಲಿ ರಾಶಿಕಾ ಒಂದು ತಂಡವಾದರೆ, ಧನುಷ್ ಹಾಗೂ ಅಶ್ವಿನಿ ಒಂದು ತಂಡದಲ್ಲಿ ಇದ್ದರು. ಆಟ ಆಡುವಾಗ ಗಿಲ್ಲಿ ಒಂದು ಮಾತನ್ನು ಹೇಳಿದರು. ‘ಆಡ್ತಾ ಇರೋದು ತಪ್ಪಲ್ಲ. ಆದರೆ, ಸರಿಯಾದ ವ್ಯಕ್ತಿ ಜೊತೆ ಆಡದೇ ಇರೋದು ತಪ್ಪು’ ಎಂದು ಗಿಲ್ಲಿ ನಟ ಹೇಳಿದ್ದಾರೆ. ಅಶ್ವಿನಿ ಬಲವಾದ ಎದುರಾಳಿ ಅಲ್ಲ ಎಂಬುದು ಇದರ ಅರ್ಥವಾಗಿತ್ತು. ಇದು ರಘು ಕೋಪಕ್ಕೆ ಕಾರಣ ಆಗಿದೆ.

‘ಇದೆಲ್ಲವನ್ನೂ ಗೆದ್ಮೇಲೆ ಇಟ್ಕೋ. ಗೆಲ್ಲುವ ಮೊದಲೇ ಸಂಭ್ರಮಿಸಬಾರದು’ ಎಂದು ರಘು ಕಿವಿಮಾತು ಹೇಳಿದರು. ಆದರೆ, ಗಿಲ್ಲಿ ಕೇಳಲೇ ಇಲ್ಲ. ಅವರು ತಾವೇ ಗೆಲ್ಲುತ್ತೇವೆ ಎಂದುಕೊಂಡು ಸಂಭ್ರಮಿಸಲು ಆರಂಭಿಸಿದರು. ಕೊನೆಗೆ ಅಲ್ಲಾಗಿದ್ದೇ ಬೇರೆ. ಗಿಲ್ಲಿ ತಂಡ ಸೋತಿದೆ. ಧನುಷ್ ಹಾಗೂ ಅಶ್ವಿನಿ ತಂಡ ಗೆದ್ದಿದೆ.

ಇದನ್ನೂ ಓದಿ: ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್

ತಾನು ಸೋತಿದ್ದನ್ನು ಒಪ್ಪಿಕೊಳ್ಳಲು ಗಿಲ್ಲಿ ರೆಡಿ ಇರಲೇ ಇಲ್ಲ. ಅವರು ಅಶ್ವಿನಿ ಗೌಡ ಅವರ ವೀಕ್​​ನೆಸ್ ಪಾಯಿಂಟ್ ತೋರಿಸೋಕೆ ಹೋದರು. ‘ಅಶ್ವಿನಿಗೆ ಗೆಲ್ಲೋಕೆ ಮತ್ತೊಬ್ಬರು ಇರಲೇಬೇಕು. ಧನುಷ್ ಬೆಂಬಲದಿಂದ ಅವರು ಗೆದ್ದಿದ್ದಾರೆ ಅಷ್ಟೇ. ಇಲ್ಲಿಯವರೆಗೆ ನಾನು ಅವರನ್ನು ಕರೆದುಕೊಂಡು ಬಂದಿದ್ದೇನೆ. ಮುಂದೆ ಅವರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು’ ಎಂದು ಧನುಷ್​ಗೆ ಹೇಳಿದರು ಗಿಲ್ಲಿ. ಗಿಲ್ಲಿ ಗೆದ್ದು ತೋರಿಸಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಗಿಲ್ಲಿ ಹಾಗೂ ರಾಶಿಕಾಗೆ ಫಿನಾಲೆ ವಾರಕ್ಕೆ ನೇರವಾಗಿ ತಲುಪುವ ಅವಕಾಶ ಮಿಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Fri, 2 January 26

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ