AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗಾಗಿ 7 ತಿಂಗಳು ಸಿದ್ಧತೆ ಮಾಡಿಕೊಂಡರಾ ಗಿಲ್ಲಿ? ಸುದೀಪ್ ಮಾತಿನಿಂದ ಅನುಮಾನ

ಗಿಲ್ಲಿ ಅವರ ಬಿಗ್ ಬಾಸ್ ಆಟದಲ್ಲಿ ಏರಿಳಿತಗಳು ಸಾಮಾನ್ಯ. ಕಳೆದ ವಾರ ಮನೆಗೆ ಬಂದ ಸ್ಪರ್ಧಿಗಳೊಂದಿಗೆ ವಾದ ಮಾಡಿ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡರು. ಆದರೆ, "ಬಿಗ್ ಬಾಸ್ ನಿಮ್ಮೊಂದಿಗೆ ಮೊದಲು ಒಪ್ಪಂದ ಮಾಡಿಕೊಂಡಿದ್ದರಲ್ಲವೇ?" ಎಂಬ ಸುದೀಪ್ ಅವರ ಪ್ರಶ್ನೆ ದೊಡ್ಡ ಚರ್ಚೆ ಸೃಷ್ಟಿಸಿದೆ. ಏಳು ತಿಂಗಳ ಮುಂಚೆಯೇ ಗಿಲ್ಲಿ ಸಿದ್ಧತೆ ಮಾಡಿಕೊಂಡಿದ್ದರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಬಿಗ್ ಬಾಸ್​ಗಾಗಿ 7 ತಿಂಗಳು ಸಿದ್ಧತೆ ಮಾಡಿಕೊಂಡರಾ ಗಿಲ್ಲಿ? ಸುದೀಪ್ ಮಾತಿನಿಂದ ಅನುಮಾನ
ಗಿಲ್ಲಿ ನಟ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 01, 2025 | 10:45 AM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ನಟ ಅವರು ಒಳ್ಳೆಯ ರೀತಿಯಲ್ಲಿ ಆಡುತ್ತಿದ್ದಾರೆ. ಅವರ ಆಟದಲ್ಲಿ ಸಾಕಷ್ಟು ಏರಿಳತಗಳು ಇವೆ. ಅವರು ಕಳೆದ ವಾರ ಸಾಕಷ್ಟು ತೊಂದರೆ ಅನುಭವಿಸಿದರು. ಇದಕ್ಕೆ ಕಾರಣ ಮನೆಗೆ ಬಂದ ಸ್ಪರ್ಧಿಗಳು. ಮನೆಗೆ ಬಂದವರನ್ನು ಗಿಲ್ಲಿ ಎದುರು ಹಾಕಿಕೊಂಡರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡರು. ಈಗ ಸುದೀಪ್ ಹೇಳಿದ ಒಂದು ಮಾತು ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಏನು? ಸುದೀಪ್ ಹಾಗೆ ಹೇಳಿದರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಗಿಲ್ಲಿ ಅವರು ಹಾಸ್ಯ ಮಾಡಲು ಹೋಗಿ ಲಯ ತಪ್ಪಿದ್ದರು. ಈ ವಿಷಯ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಊಟದ ವಿಷಯ, ಉಗ್ರಂ ಮಂಜು ಅವರ ಮದುವೆ ವಿಷಯದಲ್ಲಿ ಗಿಲ್ಲಿ ನಾಲಿಗೆ ಹರಿಬಿಟ್ಟರು ಮತ್ತು ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಈ ವಿಷಯದಲ್ಲಿ ಸುದೀಪ್ ಅವರು ಪಾಠ ಹೇಳುವಾಗ ಒಂದು ಮಾತನ್ನು ಹೇಳಿದರು. ಆ ಮಾತಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.

ಬಿಗ್ ಬಾಸ್​ನವರು ಮೊದಲು ನಿಮ್ಮ ಜೊತೆಯೇ ಅಲ್ಲವೇ ಒಪ್ಪಂದ ಮಾಡಿಕೊಂಡಿದ್ದು ಎಂದು ಸುದೀಪ್ ಹೇಳಿದರು. ಅದು ಯಾವಾಗ ಎಂಬ ಮಾಹಿತಿ ಕೇಳಿ ಎಲ್ಲರಿಗೂ ಅಚ್ಚರಿ ಆಯಿತು. ಫೆಬ್ರವರಿಯಲ್ಲೇ ಬಿಗ್ ಬಾಸ್ ನಿಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರಲ್ಲವೇ. ನೀವು ಉತ್ತಮವಾಗಿ ಆಡುತ್ತೀರಿ ಎಂದರೆ ಬಿಗ್ ಬಾಸ್​ಗೆ ಸಮಸ್ಯೆ ಏನು ಎಂದು ಸುದೀಪ್ ಅವರು ಗಿಲ್ಲಿಗೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ‘ಈ ವಾರ ನನ್ನ ಹೊರಗೆ ಕಳುಹಿಸಿ’; ಸುಸ್ತಾದ ಧ್ರುವಂತ್, ಬಿಗ್ ಬಾಸ್ ಎದುರು ಕೋರಿಕೆ ಈ ಪ್ರಶ್ನೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಏಳು ತಿಂಗಳ ಹಿಂದೆಯೇ ಗಿಲ್ಲಿ ಜೊತೆ ಒಪ್ಪಂದ ಆಗಿತ್ತು. ಈ ಕಾರಣದಿಂದಲೇ ಗಿಲ್ಲಿ ಅವರು ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು ಎಂದು ಅನೇಕರು ಹೇಳಿದ್ದಾರೆ. ಗಿಲ್ಲಿ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸಿನಿಮಾ ಡೈಲಾಗ್​ಗಳನ್ನು ಹೇಳುತ್ತಿದ್ದಾರೆ. ಕೆಜಿಎಫ್ ಹಾಗೂ ಸೂರ್ಯವಂಶ ಸಿನಿಮಾ ಡೈಲಾಗ್​ಗಳನ್ನು ಅವರು ಹೇಳುತ್ತಿದ್ದಾರೆ. ಇದಕ್ಕೆ ಅವರು ಕಳೆದ ಏಳು ತಿಂಗಳಲ್ಲಿ ಪ್ರಿಪರೇಷನ್ ಮಾಡಿಕೊಂಡಿದ್ದರು ಎಂದು ಅನೇಕರು ಹೇಳಿದ್ದಾರೆ. ಹಾಗೆ ಮಾಡಿದರೂ ತಪ್ಪೇನಿದೆ ಎಂಬುದು ಗಿಲ್ಲಿ ಅಭಿಮಾನಿಗಳ ಪ್ರಶ್ನೆ. ಅಂತಿಮವಾಗಿ ಬಿಗ್ ಬಾಸ್ ವಿನ್ ಆಗೋದು ಮುಖ್ಯವಾಗುತ್ತದೆ. ಅದಕ್ಕೆ ಗಿಲ್ಲಿ ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ ಅಷ್ಟೇ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ