AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್​ಗೆ ಕೌಂಟರ್ ಕೊಟ್ಟ ಹನುಮಂತ; ಎಲ್ಲರೂ ಶಾಕ್

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರು ತಮ್ಮ ಮೌನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸುದೀಪ್ ಅವರು ಹನುಮಂತರ ಈ ತಂತ್ರವನ್ನು ಗಮನಿಸಿ, ಅವರೊಂದಿಗೆ ಮಾತನಾಡಿದ್ದಾರೆ. ಹನುಮಂತ ತಮ್ಮ ಸಣ್ಣ ಉತ್ತರಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ಸುದೀಪ್ ಅವರು ಹನುಮಂತರನ್ನು ಬುದ್ಧಿವಂತ ಆಟಗಾರ ಎಂದು ಹೊಗಳಿದ್ದಾರೆ.

ಸುದೀಪ್​ಗೆ ಕೌಂಟರ್ ಕೊಟ್ಟ ಹನುಮಂತ; ಎಲ್ಲರೂ ಶಾಕ್
ಹನುಮಂತ-ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Dec 27, 2024 | 7:43 AM

Share

‘ಬಿಗ್ ಬಾಸ್’ ಮನೆಯಲ್ಲಿ ಹನುಮಂತ ಅವರು ಸೈಲೆಂಟ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಸೈಲೆಂಟ್ ಅಲ್ಲವೇ ಅಲ್ಲ. ಅವರು ಸುಮ್ಮನೆ ಇದ್ದುಕೊಂಡೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಮಾತಿನ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಉದ್ದ ಸಾಲುಗಳನ್ನು ಹೇಳದೇ ಒಂದೇ ಒಂದು ವಾಕ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ. ಈಗ ಅವರು ಸುದೀಪ್​ಗೆ ಕೌಂಟರ್ ಕೊಟ್ಟು ಸುದ್ದಿ ಆಗಿದ್ದಾರೆ. ಶನಿವಾರದ (ಡಿಸೆಂಬರ್ 21) ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.

ಸುದೀಪ್ ಅವರು ಯಾವುದೇ ಪ್ರಶ್ನೆ ಮಾಡಿದರೂ, ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಎಂಬ ಉತ್ತರ ಹನುಮಂತ ಅವರ ಕಡೆಯಿಂದ ಬರುತ್ತಿತ್ತು. ಇದನ್ನು ಸುದೀಪ್ ಅವರು ಕೂಡ ಗಮನಿಸಿದ್ದಾರೆ. ಈ ಕಾರಣದಿಂದಲೇ ಸುದೀಪ್ ಅವರು ಹನುಮಂತ ಬಳಿ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿದರು. ‘ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಬಿಟ್ಟು ಬೇರೆ ಮಾತನ್ನು ಹೇಳಬೇಕು’ ಎಂದು ಸುದೀಪ್ ಕಂಡೀಷನ್ ಹಾಕಿದರು. ಇದಕ್ಕೆ ಹನುಮಂತ ಒಪ್ಪಿದರು.

‘ಹೇಗಿತ್ತು ಈ ವಾರ’ ಎಂದು ಸುದೀಪ್ ಕೇಳಿದರು. ‘ಭೇಷ್ ಇತ್ತುರೀ’ ಎಂದರು ಹನುಮಂತ. ಈ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು. ಸುದೀಪ್ ಅವರು ಮಾತು ಬಾರದೆ ಒಂದು ನಿಮಿಷ ಸುಮ್ಮನಿದ್ದರು. ಆ ಬಳಿಕ ಬೇರೆ ಟಾಪಿಕ್​ಗೆ ಹೋದರು.

ಸುದೀಪ್ ಅವರು ಹನುಮಂತ ಅವರನ್ನು ನಿರಂತರವಾಗಿ ಹೊಗಳುತ್ತಾ ಬರುತ್ತಿದ್ದಾರೆ. ‘ಇಡೀ ಮನೆಯಲ್ಲಿ ಹನುಮಂತ ಅವರೇ ಬುದ್ಧಿವಂತ ಆಟಗಾರ’ ಎಂದು ಸುದೀಪ್ ಸಾಕಷ್ಟು ಬಾರಿ ಹೇಳಿದ್ದಾರೆ. ಈ ಮಾತು ಹನುಮಂತ ಅವರಿಗೆ ಸ್ಫೂರ್ತಿ ನೀಡುತ್ತಾ ಇದೆ. ಹನುಮಂತ ಅವರು ವಾರ ಕಳೆದಂತೆ ಆಟ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ.

ಇದನ್ನೂ ಓದಿ: ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್

ಹನುಮಂತ ಅವರು ಗಾಯಕನಾಗಿ ಫೇಮಸ್ ಆದವರು. ಅವರು ಹಾವೇರಿ ಮೂಲದವರು. ಅವರು ಹಲವು ರಿಯಾಲಿಟಿ ಶೋಗಳನ್ನು ನೋಡಿ ಬಂದಿದ್ದಾರೆ. ಈಗ ಬಿಗ್ ಬಾಸ್​ನೂ ಚಾಲಾಕಿತನ ಉಪಯೋಗಿಸಿ ಆಡುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:13 pm, Sat, 21 December 24

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್