AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​

Junior Super Star Season 4: ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್​ ಬ್ಯಾನ್​ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗುವುದೇ ಇಲ್ಲ ಎಂಬುದನ್ನು ಆ ಸ್ಕಿಟ್​ನಲ್ಲಿ ಹೇಳಲಾಗಿತ್ತು.

ಮಕ್ಕಳ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ: ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​
ನರೇಂದ್ರ ಮೋದಿ
TV9 Web
| Edited By: |

Updated on: Jan 19, 2022 | 9:51 AM

Share

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆಡಳಿತದ ಬಗ್ಗೆ ಪರ-ವಿರೋಧದದ ಚರ್ಚೆ ಇದ್ದೇ ಇದೆ. ಅವರು ಕೈಕೊಂಡ ಕೆಲವು ಕ್ರಮಗಳಿಗೆ ಮೊದಲಿನಿಂದಲೂ ಟೀಕೆ ಕೇಳಿಬಂದಿರುವುದು ಸಹಜ. ನೋಟ್​ ಬ್ಯಾನ್​, ಸಡನ್​ ಲಾಕ್​ಡೌನ್​ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಖಂಡಿಸಿದ್ದುಂಟು. ಈಗ ಡಿಮಾನಿಟೈಸೇಷನ್​ (Demonetization) ಕುರಿತು ಮನರಂಜನಾ ಟಿವಿ ಕಾರ್ಯಕ್ರಮದಲ್ಲಿ ಸ್ಕಿಟ್​ ಮಾಡಲಾಗಿದೆ. ‘ಜೂನಿಯರ್​ ಸೂಪರ್​ ಸ್ಟಾರ್​ ಸೀಸನ್​ 4’ ರಿಯಾಲಿಟಿ ಶೋನಲ್ಲಿ ಮಕ್ಕಳಿಂದ ಅಭಿನಯಿಸಲ್ಪಟ್ಟ ಈ ಕಿರು ನಾಟಕಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ (Information And broadcasting Ministry) ದೂರು ನೀಡಲಾಗಿದೆ. ಹಾಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಖಾಸಗಿ ಟಿವಿ ವಾಹಿನಿಗೆ ನೋಟಿಸ್​ ಜಾರಿ ಆಗಿದೆ. 7 ದಿನದೊಳಗೆ ಪ್ರತಿಕ್ರಿಯಿಸಬೇಕು, ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಸದ್ಯ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.

ತಮಿಳಿನ ಖಾಸಗಿ ವಾಹಿನಿಯಲ್ಲಿ ‘ಜೂನಿಯರ್​ ಸೂಪರ್​ ಸ್ಟಾರ್​ ಸೀಸನ್​ 4’ ಪ್ರಸಾರ ಆಗುತ್ತಿದೆ. ಜ.15ರಂದು ಈ ಶೋನಲ್ಲಿ ಒಂದು ಸ್ಕಿಟ್​ ಅನ್ನು ಮಕ್ಕಳು ಅಭಿನಯಿಸಿ ತೋರಿಸಿದರು. ಅದರಲ್ಲಿ ನರೇಂದ್ರ ಮೋದಿಯರವರ ಡಿಮಾನಿಟೈಸೇಷನ್​ ನಿರ್ಧಾರದ ಬಗ್ಗೆ ತಮಾಷೆ ಮಾಡಲಾಗಿತ್ತು. ಅದನ್ನು ತಮಿಳುನಾಡು ಬಿಜೆಪಿ ಐಟಿ ಮತ್ತು ಸೋಶಿಯಲ್​ ಮೀಡಿಯಾ ಘಟಕ ಖಂಡಿಸಿದೆ. ಘಟಕದ ಸಿಟಿಆರ್​ ನಿರ್ಮಲ್​ ಕುಮಾರ್​ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಅದರ ಅನ್ವಯ ಸಚಿವಾಲಯದಿಂದ ವಾಹಿನಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್​ ಬ್ಯಾನ್​ ಮಾಡುತ್ತಾನೆ. ಆದರೂ ಕಪ್ಪು ಹಣ ತೊಲಗುವುದೇ ಇಲ್ಲ ಎಂಬುದನ್ನು ಆ ಸ್ಕಿಟ್​ನಲ್ಲಿ ಹೇಳಲಾಗಿತ್ತು. ಅದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತಿವಾಗಿದೆ. ಈ ಸ್ಕಿಟ್​ನ ವಿಡಿಯೋ ತುಣುಕು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮಕ್ಕಳಿಂದ ಉದ್ದೇಶಪೂರ್ವಕವಾಗಿಯೇ ಈ ಸ್ಕಿಟ್​ ಮಾಡಿಸಲಾಗಿದೆ ಎಂದು ಸಿಟಿಆರ್​ ನಿರ್ಮಲ್​ ಕುಮಾರ್​ ಆಕ್ಷೇಪಿಸಿದ್ದಾರೆ.

ಮಕ್ಕಳು ಈ ರೀತಿಯ ಸ್ಕಿಟ್​ ಮಾಡಿದಾಗ ಆ ಕಾರ್ಯಕ್ರಮದ ಜರ್ಡ್​ಗಳು ಜೋರಾಗಿ ನಕ್ಕಿರುವ ದೃಶ್ಯ ಪ್ರಸಾರ ಆಗಿದೆ. ಆದರೆ ಅದು ಎಡಿಟೆಡ್​​ ಎಂದು ಹೇಳಲಾಗುತ್ತಿದೆ. ‘ಮಕ್ಕಳ ಸ್ಕಿಟ್​ಗೆ ನಾವು ಹಾಗೆ ಪ್ರತಿಕ್ರಿಯೆ ನೀಡಿರಲಿಲ್ಲ. ವಾಹಿನಿಯ ಫೈನಲ್​ ಎಡಿಟ್​ ನೋಡಿ ನಮಗೆ ಶಾಕ್​ ಆಯ್ತು’ ಅಂತ ಕಾರ್ಯಕ್ರಮದ ಜಡ್ಜ್​ಗಳು ತಮಗೆ ಹೇಳಿದ್ದಾರೆ ಎಂದು ಸಿಟಿಆರ್​ ನಿರ್ಮಲ್​ ಕುಮಾರ್ ಅವರು ವಾಹಿನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ:

ಏಕಾಏಕಿ ರಿಯಾಲಿಟಿ ಶೋನಿಂದ ಹೊರ ನಡೆದ ಖ್ಯಾತ ನಿರೂಪಕ; ಮತ್ತೆ ಮರಳಲ್ಲ ಎಂದ ನಟ

ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?