AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ

ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದರು. ಆದರೆ, ಮದುವೆ ಅರ್ಧಕ್ಕೆ ನಿಂತಿದ್ದು ನೋಡಿ ಬೇಸರಗೊಂಡರು. ಈಗ ಮದುವೆ ನಡೆಯಲಿದೆ ಎನ್ನುವ ವಿಚಾರ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ಆ

ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ
ಕನ್ನಡತಿ ಧಾರಾವಾಹಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 27, 2022 | 10:24 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವಿ ಮದುವೆಗೆ ವಿಘ್ನ ಎದುರಾಗಿದೆ. ಈ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ಮಾಡಲಾಗಿತ್ತು. ಸಾಕಷ್ಟು ಸಿದ್ಧತೆ ಕೂಡ ನಡೆದಿತ್ತು. ಆದರೆ, ಮದುವೆಗೆ ವರುಧಿನಿ ವಿಲನ್ ಆದಳು. ಮದುವೆ ನಡೆಯುವ ಕೆಲವೇ ಗಂಟೆ ಮೊದಲು ಆಕೆ ಕೈ ಕತ್ತರಿಸಿಕೊಂಡಳು. ಅದು ಭುವಿಯ (Bhuvi) ಎದುರೇ. ಈ ಕಾರಣಕ್ಕೆ ವರುಧಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಕೆಲಸ ಭುವಿಯ ಕೈಯಿಂದಲೇ ಆಗಿದೆ. ಹೀಗಾಗಿ, ಮದುವೆ ಅರ್ಧಕ್ಕೆ ನಿಂತಿದೆ. ಮುಹೂರ್ತ ಮೀರಿ ಹೋಗಿದ್ದರಿಂದ ಪೂಜಾರಿಗಳು ಹೊರಟು ಹೋಗಿದ್ದಾರೆ. ಈಗ ಆಸ್ಪತ್ರೆಯಲ್ಲೇ ಮದುವೆ ಮಾಡಲು ಪ್ಲ್ಯಾನ್ ನಡೆದಿದೆ.

ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದರು. ಆದರೆ, ಮದುವೆ ಅರ್ಧಕ್ಕೆ ನಿಂತಿದ್ದು ನೋಡಿ ಬೇಸರಗೊಂಡರು. ಈಗ ಮದುವೆ ನಡೆಯಲಿದೆ ಎನ್ನುವ ವಿಚಾರ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ಆದರೆ, ಈ ಮದುವೆ ನಡೆಯೋದು ಆಸ್ಪತ್ರೆಯಲ್ಲೇ ಅನ್ನೋದು ವಿಶೇಷ.

ಇದನ್ನೂ ಓದಿ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
Image
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

‘ನೀನು ನನ್ನ ಕಣ್ಣೆದುರೇ ಮದುವೆ ಆಗಬೇಕು’ ಎಂದು ಭುವಿಯ ಬಳಿ ವರುಧಿನಿ ಭಾಷೆ ತೆಗೆದುಕೊಂಡಿದ್ದಾಳೆ. ಈ ಕಾರಣಕ್ಕೆ ವರು ಆಸ್ಪತ್ರೆಯ ಸೇರುವ ಪ್ಲ್ಯಾನ್ ಮಾಡಿದಳು. ಹೀಗಾಗಿ, ಭುವಿ ಮದುವೆ ಮಂಟಪಕ್ಕೆ ಹೋಗುವ ಬದಲು ಆಸ್ಪತ್ರೆಗೆ ತೆರಳಿದ್ದಾಳೆ. ಭುವಿಯ ಹಿಂದೆ ಹರ್ಷ ಕೂಡ ತೆರಳಿದ್ದಾನೆ. ಅಲ್ಲಿಗೆ ಹರ್ಷ ಹಾಗೂ ಭುವಿ ಮದುವೆ ನಡೆಯುವುದೇ ಇಲ್ಲ ಎಂದೇ ಹೇಳಲಾಗಿತ್ತು. ಆದರೆ, ಈಗ ಕಥೆಗೆ ಟ್ವಿಸ್ಟ್​ ನೀಡಲಾಗಿದೆ.

‘ಕನ್ನಡತಿ’ಗೆ ‘ರಾಮಾಚಾರಿ’ ಧಾರಾವಾಹಿಯ ಕಥಾನಾಯಕ ರಾಮಾಚಾರಿಯ ಎಂಟ್ರಿ ಆಗಿದೆ. ತಾನೇ ಮುಂದೆ ನಿಂತು ಹರ್ಷ ಹಾಗೂ ಭುವಿಯ ಮದುವೆ ಮಾಡಿಸುತ್ತೇನೆ ಎಂದು ಆತ ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಮದುವೆ ನಡೆಯೋದು ಹರ್ಷನ ತಾಯಿ ರತ್ನಮಾಲಾಗೆ ಕೊಂಚವೂ ಇಷ್ಟವಿಲ್ಲ. ಈ ಕಾರಣಕ್ಕೆ ಆಕೆ ಆಸ್ಪತ್ರೆಯಲ್ಲಿ ಮದುವೆ ಬೇಡ ಎನ್ನುತ್ತಿದ್ದಾಳೆ. ‘ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಸಂದೇಹಗಳಿಗೂ ಪರಿಹಾರ ನೀಡಿಯೇ ಮದುವೆ ಮಾಡಿಸುತ್ತೇನೆ’ ಎನ್ನುವ ಭರವಸೆ ರಾಮಾಚಾರಿ ಕೈಯಿಂದ ಸಿಕ್ಕಿದೆ.

ಇನ್ನು, ಈ ಜೋಡಿಯ ಮದುವೆಯನ್ನು ಆಸ್ಪತ್ರೆಯಲ್ಲಿ ಮಾಡುತ್ತಿರುವುದಕ್ಕೆ ಫ್ಯಾನ್ಸ್ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ‘ಅಷ್ಟು ಕ್ಯೂಟ್ ಜೋಡಿ ಮದ್ವೆನಾ ಆಸ್ಪತ್ರೆಯಲ್ಲಿ ಮಾಡುತ್ತೀರಾ? ನೀವು ಬೇಸರ ಮಾಡಿಸಿ ಬಿಟ್ಟಿರಿ’ ಎಂಬ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ‘ನಾವು ಕನ್ನಡತಿ ಧಾರಾವಾಹಿ ನೋಡಲ್ಲ’; ವೀಕ್ಷಕರಿಗೆ ಬೇಸರ ತರಿಸಿದ ಆ ಒಂದು ಟ್ವಿಸ್ಟ್​

ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ