Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ತೀವ್ರ ಅನಾರೋಗ್ಯದಿಂದ ಸಾವು-ಬದುಕಿನ ಮಧ್ಯೆ ಅವಳು ಹೋರಾಡುತ್ತಿದ್ದಾಳೆ. ಹಾಸಿಗೆ ಹಿಡಿದ ರತ್ನಮಾಲಾ ಮೃತಪಟ್ಟರೆ ಹರ್ಷ ಹಾಗೂ ಭುವಿ ಮದುವೆ ನಿಲ್ಲಬಹುದು.

‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
ಭುವಿ-ಹರ್ಷ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 21, 2022 | 3:03 PM

ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿ ಇಬ್ಬರೂ ಮದುವೆ ಆಗುತ್ತಿದ್ದಾರೆ. ಈಗಾಗಲೇ ನಾಂದಿಶಾಸ್ತ್ರ ಪೂರ್ಣಗೊಂಡಿದ್ದು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮದುವೆಗೆ ಇದ್ದ ಒಂದು ಅಡ್ಡಿ ನಿವಾರಣೆ ಆಗಿದೆ. ಆದರೆ, ಮತ್ತೊಂದು ದೊಡ್ಡ ಆತಂಕ ಎದುರಾಗಿದೆ. ಇದರಿಂದ ಹರ್ಷನ (Harsha) ಮದುವೆ ನಿಲ್ಲುವ ಸೂಚನೆ ಸಿಕ್ಕಿದೆ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

ಭುವಿಯ ತಂದೆಯ ಮನೆ ಬೇರೆಯವರ ಕೈಯಲ್ಲಿ ಇತ್ತು. ಇದನ್ನು ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕು ಎಂಬುದು ಭುವಿಯ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹರ್ಷ ಹಸಿರುಪೇಟೆಗೆ ಹೋದಾಗ 32 ಲಕ್ಷ ರೂಪಾಯಿ ಚೆಕ್ ನೀಡಿ ಈ ಮನೆಯನ್ನು ಮರಳಿ ಭುವಿಗೆ ಕೊಡಿಸಿದ್ದ. ಭುವಿ ಮೊದಲಿನಿಂದಲೂ ಸ್ವಾವಲಂಬಿ ಜೀವನ ನಡೆಸುತ್ತಾ ಬಂದವಳು. ಅವಳಿಗೆ ಮದುವೆ ಆಗುವ ಮೊದಲು ಈ ಹಣವನ್ನು ಹರ್ಷನಿಗೆ ಹಿಂದಿರುಗಿಸಬೇಕು ಎಂಬ ಕನಸು ಇತ್ತು. ಅದನ್ನು ಮಾಡಿದ್ದಾಳೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ ಟಚ್; ಹೊಸ ಅವತಾರದಲ್ಲಿ ಹರ್ಷ-ಭುವಿ
Image
ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?
Image
‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಹರ್ಷನ ಬಳಿ ಮಾಡಿದ ಸಾಲವನ್ನು ತೀರಿಸಲು ಭುವಿಗೆ ವರುಧಿನಿ 30 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾಳೆ. ಈ ಹಣವನ್ನು ಹರ್ಷನಿಗೆ ನೀಡಿದ್ದಾಳೆ ಭುವಿ. ಆ ಮೂಲಕ ಹರ್ಷನ ಬಳಿ ಮಾಡಿದ್ದ ಸಾಲವನ್ನು ತೀರಿಸಿದ್ದಾಳೆ. ಇದರಿಂದ ಭುವಿಗೆ ರಿಲೀಫ್ ಫೀಲ್ ಸಿಕ್ಕಿದೆ. ಮದುವೆಗೂ ಮೊದಲು ಒಂದು ದೊಡ್ಡ ಭಾರ ಇಳಿದ ಭಾವನೆಯಲ್ಲಿ ಅವಳಿದ್ದಾಳೆ.

ಮತ್ತೊಂದು ಕಡೆಯಲ್ಲಿ ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ತೀವ್ರ ಅನಾರೋಗ್ಯದಿಂದ ಸಾವು-ಬದುಕಿನ ಮಧ್ಯೆ ಅವಳು ಹೋರಾಡುತ್ತಿದ್ದಾಳೆ. ಹಾಸಿಗೆ ಹಿಡಿದ ರತ್ನಮಾಲಾ ಮೃತಪಟ್ಟರೆ ಹರ್ಷ ಹಾಗೂ ಭುವಿ ಮದುವೆ ನಿಲ್ಲಬಹುದು. ಹೀಗಾಗಿ, ಈ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಒಂದೊಮ್ಮೆ ರತ್ನಮಾಲಾ ಮೃತಪಟ್ಟರೆ ಎಲ್ಲಾ ಭಾರವೂ ಭುವಿಯ ಹೆಗಲು ಏರಲಿದೆ. ಆಕೆ ರತ್ನಮಾಲಾ ನಿಭಾಯಿಸುತ್ತಿದ್ದ ಕಂಪೆನಿಯನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆಗೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ ಬೇರೆ ಧಾರಾವಾಹಿಯ ಕಲಾವಿದರು ಕೂಡ ಆಗಮಿಸಿದ್ದಾರೆ. ಭಾನುವಾರ (ಜೂನ್ 19) ‘ಕನ್ನಡತಿ’ ಧಾರಾವಾಹಿಯ ಮಹಾಸಂಚಿಕೆ ಪ್ರಸಾರ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Tue, 21 June 22