AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ

ವರುಧಿನಿಗೆ ಹರ್ಷ ಹಾಗೂ ಭುವಿ ಪ್ರೀತಿ ವಿಚಾರ ಗೊತ್ತಾಗಿದೆ. ತಾನು ಪ್ರೀತಿಸುವ ಹುಡುಗನನ್ನು ಭುವಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾಳೆ ಎನ್ನುವ ಸಿಟ್ಟು ಆಕೆಯನ್ನು ಆವರಿಸಿದೆ. ಭುವಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಆಕೆ ಪ್ಲ್ಯಾನ್​ ರೂಪಿಸುತ್ತಿದ್ದಾಳೆ.

‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ
ವರು-ಭುವಿ
TV9 Web
| Edited By: |

Updated on: Mar 15, 2022 | 7:57 PM

Share

ಕನ್ನಡತಿ ಧಾರಾವಾಹಿ (Kannadathi Serial) ನಿತ್ಯ ಹೊಸಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಭುವಿ ಹಾಗೂ ಹರ್ಷ ಇಬ್ಬರೂ ಒಂದಾಗುವ ಸಮಯ ಕೂಡಿ ಬಂದಿದೆ. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಾಗಿದೆ. ಆದರೆ, ಇವರಿಬ್ಬರ ಪ್ರೀತಿಗೆ ವಿಲನ್​ ಆಗಿರೋದು ಅವಳ ಕ್ಲೋಸ್​ ಫ್ರೆಂಡ್​ ವರು. ಭುವಿ ವಿರುದ್ಧ ಆಕೆಯನ್ನು ಎತ್ತಿಕಟ್ಟುವ ಕೆಲಸವನ್ನು ಸಾನಿಯಾ ಮಾಡಿದ್ದಾಳೆ. ಈ ಮೂಲಕ ತನ್ನ ದ್ವೇಷವನ್ನು ಸಾಧಿಸಿಕೊಳ್ಳೋಕೆ ಸಾನಿಯಾ ಸಂಚು ರೂಪಿಸಿದ್ದಾಳೆ. ಈ ಮಧ್ಯೆ ಧಾರಾವಾಹಿಯ ಕಥೆ ಹಸಿರುಪೇಟೆಯತ್ತ ಮುಖ ಮಾಡಿದೆ. ಇದಕ್ಕೆ ಕಾರಣವೂ ಇದೆ. ಅಚ್ಚರಿ ಎಂದರೆ ವರು ಕೂಡ ಹಸಿರು ಪೇಟೆಗೆ ಬಂದಿದ್ದಾಳೆ.

ಹಸಿರು ಪೇಟೆ ಇದು ಭುವಿ ಹುಟ್ಟಿ ಬೆಳೆದ ಊರು. ಆಕೆಯ ಜೀವಾಳ ಇರುವುದೇ ಇಲ್ಲಿ. ಈ ಕಾರಣಕ್ಕೆ ಆ ಊರನ್ನು ಕಂಡರೆ ಅವಳಿಗೆ ಎಲ್ಲಿಲ್ಲದ ಪ್ರೀತಿ. ಭುವಿಯ ಅಜ್ಜಿ ಆಕೆಯನ್ನು ಕಂಡರೆ ಆಗುವುದಿಲ್ಲ. ಯಾವುದೇ ವಿಚಾರ ಸಿಕ್ಕರೂ ಭುವಿಗೆ ಬಯ್ಯುವ ಕೆಲಸವನ್ನು ಅವಳು ಮಾಡುತ್ತಾಳೆ. ಇದರಿಂದ ಭುವಿ ತುಂಬಾನೇ ಬೇಸರಗೊಂಡಿದ್ದಾಳೆ. ಆದರೆ, ಅದನ್ನು ತೋರಿಸಿಕೊಳ್ಳುತ್ತಿಲ್ಲ. ಭುವಿ ಹಾಗೂ ಹರ್ಷನ ನಡುವಿನ ಪ್ರೀತಿಯನ್ನು ಮುರಿಯೋಕೆ ಆಕೆ ತುದಿಗಾಲಿನಲ್ಲಿ ನಿಂತಿದ್ದಾಳೆ. ಈ ಮಧ್ಯೆ ಕಥೆಗೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ.

ಹರ್ಷ ಹಾಗೂ ಆತನ ತಾಯಿ ರತ್ನಮಾಲಾ ಹಸಿರು ಪೇಟೆಗೆ ಬಂದಿದ್ದಾರೆ. ಭುವಿ ಮನೆಗೆ ತೆರಳಿ ಆಕೆಯ ಅಜ್ಜಿಯ ಬಳಿ ಹೆಣ್ಣು ಕೇಳಬೇಕು ಎನ್ನುವ ಆಲೋಚನೆ ಇವರದ್ದು. ಜತೆಗೆ ಅಲ್ಲಿಯೇ ಎಂಗೇಜ್​ಮೆಂಟ್​ ಮಾಡಿಕೊಳ್ಳೋಕೆ ಪ್ಲ್ಯಾನ್​ ರೂಪಿಸಿದ್ದಾನೆ ಹರ್ಷ. ಈ ವಿಚಾರವನ್ನು ಭುವಿ ಸಹೋದರಿ ಬಿಂದು, ಹರ್ಷನ ಬಳಿ ಹೇಳಿಕೊಂಡಿದ್ದಾನೆ. ದೂರವಾಣಿ ಕರೆಯಲ್ಲಿ ಈ ವಿಚಾರ ಕೇಳುವಾಗಲೇ ಭುವಿ ಮನೆಗೆ ವರುಧಿನಿ ಎಂಟ್ರಿ ಆಗಿದೆ.

ವರುಧಿನಿಗೆ ಹರ್ಷ ಹಾಗೂ ಭುವಿ ಪ್ರೀತಿ ವಿಚಾರ ಗೊತ್ತಾಗಿದೆ. ತಾನು ಪ್ರೀತಿಸುವ ಹುಡುಗನನ್ನು ಭುವಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾಳೆ ಎನ್ನುವ ಸಿಟ್ಟು ಆಕೆಯನ್ನು ಆವರಿಸಿದೆ. ಭುವಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಆಕೆ ಪ್ಲ್ಯಾನ್​ ರೂಪಿಸುತ್ತಿದ್ದಾಳೆ. ಈ ಕಾರಣಕ್ಕೆ ಆಕೆ ಹಸಿರು ಪೇಟೆಗೆ ಬಂದಿದ್ದಾಳೆ. ಈ ವಿಚಾರ ಭುವಿಗೆ ಅಚ್ಚರಿ ತಂದಿದೆ. ವರುಧಿನಿ ನಡೆದುಕೊಳ್ಳುತ್ತಿರುವ ರೀತಿಯೂ ಭುವಿಯಲ್ಲಿ ಆತಂಕ ಮೂಡುತ್ತಿದೆ.

‘ಹೊರಗೆ ಮಳೆ ಬರೋ ರೀತಿ ಇದೆ’ ಎಂದು ಹೇಳುವ ಭುವಿ ಮಾತಿಗೆ, ‘ಮಳೆ ಏಕೆ ಸುನಾಮಿಯೇ ಬರಬಹುದು’ ಎಂದು ಹೇಳುವ ಮೂಲಕ ವರು ರಂಪಾಟ ಮಾಡುವ ಸೂಚನೆ ನೀಡಿದ್ದಾಳೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಯಾವ ರೀತಿಯಲ್ಲಿ ತಿರುವು ಪಡೆದುಕೊಂಡು ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್