AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸಾನಿಯಾ; ತಣಿಯಲೇ ಇಲ್ಲ ಅಮ್ಮಮ್ಮನ ಕೋಪ

‘ಕನ್ನಡತಿ’ ಧಾರಾವಾಹಿಗೆ ಸಾನಿಯಾ ವಿಲನ್. ಅವಳು ಎಂಡಿ ಪಟ್ಟವನ್ನು ಅತ್ತು-ಕರೆದು ಪಡೆದುಕೊಂಡಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಸ್ಥಾನದಿಂದ ಆಕೆಯನ್ನು ಇಳಿಸಬೇಕು ಎಂದು ರತ್ನಮಾಲಾ ಉದ್ದೇಶ.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸಾನಿಯಾ; ತಣಿಯಲೇ ಇಲ್ಲ ಅಮ್ಮಮ್ಮನ ಕೋಪ
TV9 Web
| Edited By: |

Updated on: Aug 17, 2022 | 4:40 PM

Share

‘ಕನ್ನಡತಿ’ ಧಾರಾವಾಹಿಗೆ (Kannadathi Serial) ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯ ವಿಲನ್ ಸಾನಿಯಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ರತ್ನಮಾಲಾ ಆಸ್ಪತ್ರೆಗೆ ತೆರಳುವಾಗ ಆಕೆಗೆ ಕೊಲೆ ಬೆದರಿಕೆ ಒಡ್ಡಿದ್ದಳು ಸಾನಿಯಾ. ಅಷ್ಟೇ ಅಲ್ಲ, ಏಕವಚನದಲ್ಲಿ ಬೈದಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಾಳೆ. ಇದೇ ವಿಡಿಯೋ ಇಟ್ಟುಕೊಂಡು ಸಾನಿಯಾಳಿಗೆ ಬುದ್ಧಿ ಕಲಿಸಬೇಕು ಎಂದು ರತ್ನಮಾಲಾ ಪ್ರಯತ್ನಿಸುತ್ತಿದ್ದಾಳೆ. ಈ ಕಾರಣಕ್ಕೆ ರತ್ನಮಾಲಾ ಕಾಲಿಗೆ ಬಿದ್ದು ಸಾನಿಯಾ ಕ್ಷಮೆ ಕೇಳಿದ್ದಾಳೆ.

‘ಕನ್ನಡತಿ’ ಧಾರಾವಾಹಿಗೆ ಸಾನಿಯಾ ವಿಲನ್. ಅವಳು ಎಂಡಿ ಪಟ್ಟವನ್ನು ಅತ್ತು-ಕರೆದು ಪಡೆದುಕೊಂಡಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಸ್ಥಾನದಿಂದ ಆಕೆಯನ್ನು ಇಳಿಸಬೇಕು ಎಂದು ರತ್ನಮಾಲಾ ಉದ್ದೇಶ. ಸೂಕ್ತ ಸಮಯ ಬರಲಿ ಎಂದು ರತ್ನಮಾಲಾ ಕಾದಿದ್ದಳು. ಇದಕ್ಕೆ ಕೊನೆಗೂ ಸಮಯ ಕೂಡಿ ಬಂದಿದೆ. ಸಾನಿಯಾ ಬೆದರಿಕೆ ಒಡ್ಡಿದ ವಿಡಿಯೋ ಇಟ್ಟುಕೊಂಡು ಅವಳನ್ನು ಎಂಡಿ ಪಟ್ಟದಿಂದ ಇಳಿಸಲು ರತ್ನಮಾಲಾ ಪ್ರಯತ್ನಿಸುತ್ತಿದ್ದಾಳೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಈ ಬೆಳವಣಿಗೆ ಮಧ್ಯೆ, ರತ್ನಮಾಲಾಳ ಕಾಲನ್ನು ಹಿಡಿದು ಸಾನಿಯಾ ಕ್ಷಮೆ ಕೇಳಿದ್ದಾಳೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅಂಗಲಾಚಿದ್ದಾಳೆ. ‘ನನ್ನ ಬುದ್ಧಿಗೆ ಮಂಕು ಕವಿದಿತ್ತು. ಅದಕ್ಕಾಗಿ ಆ ರೀತಿ ಮಾಡಿದೆ. ಇನ್ನುಮುಂದೆ ಈ ರೀತಿ ಆಗಲ್ಲ’ ಎಂದು ಸಾನಿಯಾ ಅಂಗಲಾಚಿದ್ದಾಳೆ. ರತ್ನಮಾಲಾ ಇದನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಅಲ್ಲಿಂದ ಎದ್ದು ಹೋಗಿದ್ದಾಳೆ. ಈ ಮೂಲಕ ಸಾನಿಯಾ ವಿರುದ್ಧ ಕೋಪವನ್ನು ಮುಂದುವರಿಸಿದ್ದಾಳೆ.

ರತ್ನಮಾಲಾಳ ಮೊಬೈಲ್ ತೆಗೆದುಕೊಂಡು ಅದರಿಂದ ಎಲ್ಲಾ ಡೇಟಾಗಳನ್ನು ನಾಶ ಮಾಡುವ ಉದ್ದೇಶವನ್ನು ಸಾನಿಯಾ ಹೊಂದಿದ್ದಾಳೆ. ಇದಕ್ಕಾಗಿ ಆಕೆ ಪ್ರಯತ್ನ ಮಾಡುತ್ತಿದ್ದಾಳೆ. ಇದರಲ್ಲಿ ಸಾನಿಯಾ ಯಶಸ್ವಿ ಆಗುತ್ತಾಳಾ ಎಂಬುದು ಸದ್ಯದ ಕುತೂಹಲ. ಇನ್ನು, ರತ್ನಮಾಲಾ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅದಕ್ಕೆ ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡುವ ಭರವಸೆಯನ್ನು ರತ್ನಮಾಲಾ ನೀಡಿದ್ದಾಳೆ. ಹಾಗಾದಲ್ಲಿ, ಸಾನಿಯಾಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ಅಂತೂ ಇಂತು ‘ಕನ್ನಡತಿ’ ಧಾರಾವಾಹಿಗೆ ಅಮ್ಮಮ್ಮ ಬಂದ್ರು; ಕಥೆಗೆ ಸಿಗಲಿದೆ ದೊಡ್ಡ ಟ್ವಿಸ್ಟ್​?

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ಆಗಿದೆ. ರತ್ನಮಾಲಾ ಬರೆದಿಟ್ಟ ವಿಲ್​ನ ಪ್ರಕಾರ ಎಲ್ಲ ಆಸ್ತಿ ಭುವಿ ಹೆಸರಿಗೆ ಸೇರಬೇಕು. ಈ ವಿಚಾರ ಯಾವಾಗ ರಿವೀಲ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ