AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿವೋರ್ಸ್​ ಪತ್ರಕ್ಕೆ ಸಹಿ ಹಾಕಿಯೇ ಬಿಟ್ಟ ಭುವಿ; ವರುಧಿನಿ ಸಂಚು ಯಶಸ್ವಿ

ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಈ ಪತ್ರಕ್ಕೆ ಸಹಿ ಹಾಕಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಈಗ ಹೊಸ ಎಪಿಸೋಡ್​ನಲ್ಲಿ ವರುಧಿನಿ ಪ್ಲ್ಯಾನ್ ಯಶಸ್ವಿ ಆಗಿರುವುದನ್ನು ತೋರಿಸಿದ್ದಾರೆ.

ಡಿವೋರ್ಸ್​ ಪತ್ರಕ್ಕೆ ಸಹಿ ಹಾಕಿಯೇ ಬಿಟ್ಟ ಭುವಿ; ವರುಧಿನಿ ಸಂಚು ಯಶಸ್ವಿ
ಭುವಿ-ವರು
TV9 Web
| Edited By: |

Updated on:Oct 27, 2022 | 6:18 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಈ ಪತ್ರಕ್ಕೆ ಸಹಿ ಹಾಕಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನ ಮಾಡಿದ್ದಳು. ಈಗ ಹೊಸ ಎಪಿಸೋಡ್​ನಲ್ಲಿ ವರುಧಿನಿ ಪ್ಲ್ಯಾನ್ ಯಶಸ್ವಿ ಆಗಿರುವುದನ್ನು ತೋರಿಸಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಭುವಿಯನ್ನು ಚಿಕ್ಕ ವಯಸ್ಸಿಂದ ನೋಡುತ್ತಾ ಬರುತ್ತಿದ್ದಾಳೆ ವರುಧಿನಿ. ಇಬ್ಬರೂ ಕ್ಲೋಸ್​ಫ್ರೆಂಡ್ಸ್. ಈಗ ಹರ್ಷ ಹಾಗೂ ಭುವಿ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ವರುಧಿನಿ ಮಾಡುತ್ತಾ ಬರುತ್ತಿದ್ದಾಳೆ. ಹರ್ಷ ಹಾಗೂ ಭುವಿ ಅನ್ಯೋನ್ಯವಾಗಿ ಇರುವುದನ್ನು ಸಹಿಸಿಕೊಳ್ಳೋಕೆ ವರುಧಿನಿಗೆ ಸಾಧ್ಯವೇ ಆಗುತ್ತಿಲ್ಲ. ಈಗ ಇಬ್ಬರಿಗೂ ವಿಚ್ಛೇದನ ಕೊಡಿಸಬೇಕು ಎಂಬುದು ವರು ಪ್ಲ್ಯಾನ್. ಇದು ಒಂದು ಹಂತಕ್ಕೆ ಯಶಸ್ವಿಯಾಗಿದೆ. ಒಂದೇ ಏಟಲ್ಲಿ ಎರಡು ಹಕ್ಕಿಯನ್ನು ಆಕೆ ಹೊಡೆದು ಮುಗಿಸಿದ್ದಾಳೆ. ಅಸಲಿ ವಿಚಾರ ಗೊತ್ತಾದರೆ ವರು ವಿರುದ್ಧ ಹರ್ಷ ತಿರುಗಿ ಬೀಳೋದು ಪಕ್ಕಾ.

ಅಸಲಿಗೆ ಆಗಿದ್ದೇನು?

ಹರ್ಷನನ್ನು ವರು ಪ್ರೀತಿಸುತ್ತಿದ್ದಾಳೆ. ಭುವಿಯ ಜತೆ ಆತನ ಮದುವೆ ನೆರವೇರಿದೆ. ಆದಾಗ್ಯೂ ಹರ್ಷನ ಮೇಲೆ ಇರುವ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ದಿನ ಕಳೆದಂತೆ ಆತನ ಮೇಲೆ ವರುಗೆ ಪ್ರೀತಿ ಹೆಚ್ಚುತ್ತಲೇ ಇದೆ. ಭುವಿ ಹಾಗೂ ಹರ್ಷ ಒಟ್ಟಿಗೆ ಇರೋದನ್ನು ಸಹಿಸಿಕೊಳ್ಳೋಕೆ ಆಕೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇಬ್ಬರಿಗೂ ವಿಚ್ಛೇದನ ಕೊಡಿಸಲೇಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಇದಕ್ಕಾಗಿ ಆಕೆ ಪ್ಲ್ಯಾನ್ ಒಂದನ್ನು ಮಾಡಿದ್ದಳು. ಈ ಪ್ಲ್ಯಾನ್ ಈಗ ಯಶಸ್ವಿ ಆಗುವ ಸೂಚನೆ ಸಿಕ್ಕಿದೆ.

ನೋಂದಣಿಯ ಗಿಮಿಕ್

ಹರ್ಷ ಹಾಗೂ ಭುವಿಯ ಮದುವೆ ನಡೆದು ಕೆಲ ತಿಂಗಳು ಕಳೆದಿದೆ. ಆದರೆ, ಇವರ ಮದುವೆ ನೋಂದಣಿ ಕಾರ್ಯ ನಡೆದಿರಲಿಲ್ಲ. ಈ ಕಾರಣಕ್ಕೆ ವರುಧಿನಿಯೇ ಮುಂದೆ ನಿಂತು ಈ ಕೆಲಸವನ್ನು ಮಾಡಿದ್ದಾಳೆ. ಈ ವೇಳೆ ಆಕೆ ಗಿಮಿಕ್ ಒಂದನ್ನು ಮಾಡಿದ್ದಾಳೆ. ಮದುವೆ ನೋಂದಣಿ ಪತ್ರದ ಜತೆಗೆ ಡಿವೋರ್ಸ್​ ಪತ್ರಕ್ಕೂ ಸಹಿ ಹಾಕಿಸಿದ್ದಾಳೆ. ಇದನ್ನು ಇಟ್ಟುಕೊಂಡು ಭುವಿಯನ್ನು ಆಟ ಆಡಿಸೋ ಪ್ಲ್ಯಾನ್​ನಲ್ಲಿ ಆಕೆ ಇದ್ದಾಳೆ. ಒಂದೊಮ್ಮೆ ಹರ್ಷನಿಗೆ ಅಸಲಿ ವಿಚಾರ ಗೊತ್ತಾದರೆ ವರುಧಿನಿಯ ಮೇಲೆ ಕೆಂಡಕಾರೋದು ಪಕ್ಕಾ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಹರ್ಷನ ಮಾತಿಗೆ ರತ್ನಮಾಲಾ ಕಣ್ಣೀರು

ಮಾಲಾ ಸಂಸ್ಥೆಗೆ ರತ್ನಮಾಲಾ ಒಡತಿ. ಆಕೆಯ ಹೆಸರಲ್ಲಿ ಎಲ್ಲಾ ಆಸ್ತಿಯೂ ಇತ್ತು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದವಳು ರತ್ನಮಾಲಾ. ಆದರೆ, ಈಗ ಆ ಆಸ್ತಿಯನ್ನು ಅವಳು ಭುವಿ ಹೆಸರಿಗೆ ಬರೆದಿದ್ದಾಳೆ. ಈ ಸತ್ಯ ಆಕೆ ಹಾಗೂ ವಕೀಲರಿಗೆ ಇಬ್ಬರಿಗೆ ಮಾತ್ರ ಗೊತ್ತಿದೆ. ಹರ್ಷನಿಗೆ ಕೋಪ ಜಾಸ್ತಿ. ಆತನ ಕೈಗೆ ಸಂಸ್ಥೆ ನೀಡಿದರೆ ಎಲ್ಲವೂ ನಾಶವಾಗಬಹುದು ಎಂಬ ಭಯ ರತ್ನಮಾಲಾಳನ್ನು ಹೆಚ್ಚಾಗಿ ಕಾಡುತ್ತಿದೆ. ಈ ಕಾರಣಕ್ಕೆ ಆಕೆ ಭುವಿಯ ಹೆಸರಿಗೆ ಆಸ್ತಿ ಬರೆದಿದ್ದಾಳೆ.

ಇದನ್ನೂ ಓದಿ: ‘ಕಂಪನಿ ನಡೆಸಿಕೊಂಡು ಹೋಗ್ತೀಯಾ?’; ರತ್ನಮಾಲಾ ಕೊಟ್ಟ ಜವಾಬ್ದಾರಿಗೆ ಹಿಗ್ಗಿದ ಸಾನಿಯಾ

ರತ್ನಮಾಲಾ ಮನೆಯಲ್ಲಿ ಫೋಟೋಶೂಟ್ ಇತ್ತು. ಈ ವೇಳೆ ಹರ್ಷ ‘ಆಸ್ತಿಯನ್ನು ಸೊಸೆಯ ಹೆಸರಿಗೆ ಬರೆದು ಮಗನನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗೋದು ಎಷ್ಟು ಸರಿ’ ಎಂದು ನಕ್ಕಿದ್ದಾನೆ. ಇದನ್ನು ಕೇಳಿ ರತ್ನಮಾಲಾಗೆ ಕರುಳು ಕಿವುಚಿದಂತೆ ಆಗಿದೆ. ಹರ್ಷನಿಗೆ ಇದೇ ಸತ್ಯ ಎಂಬ ವಿಚಾರ ಗೊತ್ತಿಲ್ಲ. ಈ ಮಾತನ್ನು ಕೇಳುತ್ತಿದ್ದಂತೆ ರತ್ನಮಾಲಾ ಕಣ್ಣೀರು ಹಾಕಿದ್ದಾಳೆ.

ಶ್ರೀಲಕ್ಷ್ಮಿ ಎಚ್.

Published On - 7:00 am, Wed, 26 October 22

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ