AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ

Kannadathi Serial Update: ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭುವಿ ಜತೆಗೆ ಸಾನಿಯಾ ಕೂಡ ಇದ್ದಳು. ಆಕೆ ಅಧಿಕಾರ ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು. ಹೀಗಾಗಿ, ಗನ್ ತೋರಿಸಿದ್ದಾಳೆ.

Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ
ಕನ್ನಡತಿ ಸೀರಿಯಲ್
TV9 Web
| Edited By: |

Updated on: Dec 14, 2022 | 7:00 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷನಿಗೆ ಡಿವೋರ್ಸ್ ನೋಟಿಸ್ ಬಂದಿದೆ. ವರುಧಿನಿ ಪ್ಲ್ಯಾನ್ ಯಶಸ್ಸು ಕಾಣುವ ಸೂಚನೆ ಸಿಕ್ಕಿದೆ. ಮದುವೆ ನೋಂದಣಿ ಸಂದರ್ಭದಲ್ಲಿ ಆಕೆ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡಿದ್ದಳು. ಈಗ ಈ ನೋಟಿಸ್ ಹರ್ಷನ ಕೈ ಸೇರಿದೆ. ಈ ಸಂಚಿನ ಹಿಂದೆ ಯಾರದ್ದೋ ಕೈವಾಡ ಇದೆ ಎನ್ನುವ ಅನುಮಾನ ಆತನಿಗೆ ಮೂಡಿದೆ. ಹರ್ಷನ ಮೇಲೆ ಭುವಿಗೆ ಅಪಾರ ಪ್ರೀತಿ ಇದೆ. ಅವಳು ಈ ರೀತಿ ಮಾಡಲ್ಲ ಎಂಬುದು ಹರ್ಷನಿಗೆ ಖಚಿತವಾಗಿದೆ.

ಭುವಿಯಲ್ಲಿ ಅಮ್ಮಮ್ಮನ ಕಂಡ ಹರ್ಷ

ವೇದಿಕೆ ಮೇಲೆ ಭುವಿಯನ್ನು ಹರ್ಷ ಸ್ವಾಗತಿಸುವವನಿದ್ದ. ರತ್ನಮಾಲಾ ಜಾಗಕ್ಕೆ ಭುವಿಯನ್ನು ಕೂರಿಸುವ ಕಾರ್ಯಕ್ರಮ ಅದಾಗಿತ್ತು. ಈ ಕಾರ್ಯಕ್ರಮದಲ್ಲಿ ವೇದಿಕೆ ಏರುವುದಕ್ಕೂ ಮೊದಲು ಹರ್ಷನಿಗೆ ಡಿವೋರ್ಸ್ ನೋಟಿಸ್ ಬಂದಿತ್ತು. ಈ ನೋಟಿಸ್ ನೋಡಿ ಇದು ಸಾಧ್ಯವೇ ಇಲ್ಲ ಎಂದು ಕೂಗಿದ್ದ. ಇದನ್ನು ನೋಡಿದ ಅನೇಕರಿಗೆ ಅಚ್ಚರಿ ಆಗಿತ್ತು. ಆದರೆ, ಪ್ಲೇಟ್ ಬದಲಿಸಿದ್ದ ಹರ್ಷ. ‘ನಾನು ಹೀಗೆ ಹೇಳ್ತೀನಿ ಎಂದು ಎಲ್ಲರೂ ಅಂದುಕೊಂಡಿದ್ದೀರಾ? ಆದರೆ, ಆ ರೀತಿ ಇಲ್ಲ. ಭುವಿಯಲ್ಲಿ ಅಧಿಕಾರ ಮಾಡುವ ತಾಕತ್ತು ಇದೆ ಎಂಬುದನ್ನು ಯಾವಾಗಲೋ ಅರಿತಿದ್ದರು ಅಮ್ಮಮ್ಮ. ಈ ಕಾರಣಕ್ಕೆ ಭುವಿ ಅವರಿಗೆ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಭುವಿ ಜೂನಿಯರ್ ಅಮ್ಮಮ್ಮ’ ಎಂದು ಹೇಳಿದ್ದಾನೆ. ಇದನ್ನು ಕೇಳಿ ಮನೆ ಮಂದಿಗೆ ಖುಷಿ ಆಗಿದೆ.

ಹರ್ಷನಿಗೆ ಗೊತ್ತಾಯ್ತು ಅಸಲಿ ವಿಚಾರ

ವೇದಿಕೆ ಇಳಿದ ನಂತರದಲ್ಲಿ ಹರ್ಷ ಗೊಂದಲಕ್ಕೆ ಬಿದ್ದಿದ್ದಾನೆ. ಆ ಸಮಯಕ್ಕೆ ಸರಿಯಾಗಿ ತಂಗಿ ಸುಚಿ ಸಿಕ್ಕಿದ್ದಾಳೆ. ‘ನನ್ನ ಹಾಗೂ ಭುವಿನ ಬೇರೆ ಮಾಡೋಕೆ ಯಾರೋ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹರ್ಷ ಹೇಳಿದ್ದಾನೆ. ಇದಕ್ಕೆ ತಕ್ಷಣಕ್ಕೆ ಸುಚಿ, ವರುಧಿನಿಯ ಹೆಸರನ್ನು ತೆಗೆದುಕೊಂಡಿದ್ದಾಳೆ. ಸುಚಿ ಉತ್ತರ ಹರ್ಷನಿಗೆ ಅಚ್ಚರಿ ತಂದಿದೆ.

ಇದನ್ನೂ ಓದಿ: Kannadathi Serial: ಭುವಿ ಆಡಿದ ಮಾತಿಗೆ ಸಾನಿಯಾಗೆ ಚಳಿ-ಜ್ವರ; ಹಾಸಿಗೆ ಸೇರಿದ ವಿಲನ್

‘ವರುಧಿನಿ ಈ ರೀತಿಯ ಕೆಲಸ ಮಾಡುತ್ತಾಳೆ ಅನ್ನೋದನ್ನು ನನಗೆ ಈಗಲೂ ನಂಬೋಕೆ ಆಗುತ್ತಿಲ್ಲ. ಅವಳು ಈ ರೀತಿ ಮಾಡಲ್ಲ ಅನಿಸುತ್ತದೆ’ ಎಂದು ಹರ್ಷ ಹೇಳಿದ್ದಾನೆ. ಇದಕ್ಕೆ ಸುಚಿ ಸ್ಪಷ್ಟನೆ ನೀಡಿದ್ದಾಳೆ. ‘ನೀನು ವೇದಿಕೆ ಏರಿದ್ದಾಗ ವರುಧಿನಿ ನಮ್ಮ ಜತೆ ನಿಂತು ನಿಮ್ಮ ಬಗ್ಗೆ ಲೂಸ್ ಟಾಕ್​ ಮಾತನಾಡುತ್ತಿದ್ದಳು. ಈ ಕಾರಣಕ್ಕೆ ಅನುಮಾನ ಬಂತು. ಅವಳೇ ಈ ಕೆಲಸ ಮಾಡುತ್ತಿದ್ದಾಳೆ’ ಎಂದು ಸುಚಿ ಹೇಳಿದ್ದಾಳೆ. ಹರ್ಷನಿಗೆ ಈ ಬಗ್ಗೆ ಅನುಮಾನ ಮೂಡಿದೆ.

ಸಾನಿಯಾ ಬ್ಲಾಕ್​ಮೇಲ್

ಸಾನಿಯಾ ಅಧಿಕಾರಕ್ಕಾಗಿ ಯಾವ ಹಂತಕ್ಕೆ ಹೋಗೋಕೂ ರೆಡಿ. ಇದು ಭುವಿಯ ಅನುಭವಕ್ಕೆ ಬಂದಿದೆ. ಆಕೆ ರತ್ನಮಾಲಾಳನ್ನು ಕೊಲ್ಲೋಕೆ ಹೋಗಿದ್ದಳು ಎನ್ನುವ ವಿಚಾರದಲ್ಲಿ ಸಾಕ್ಷಿ ಸಿಕ್ಕಿದೆ. ಹೀಗಾಗಿ, ಆಕೆ ಹೆಚ್ಚು ಎಚ್ಚರಿಕೆಯಿಂದ ಇರೋಕೆ ಮುಂದಾಗಿದ್ದಾಳೆ.

ಇದನ್ನೂ ಓದಿ: ಭುವಿಯಿಂದ ಬಂತು ಡಿವೋರ್ಸ್​ ನೋಟಿಸ್​; ಇದು ಸಾಧ್ಯವಿಲ್ಲ ಎಂದು ಕೂಗಿದ ಹರ್ಷ

ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭುವಿ ಜತೆಗೆ ಸಾನಿಯಾ ಕೂಡ ಇದ್ದಳು. ಆಕೆ ಅಧಿಕಾರ ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು. ಹೀಗಾಗಿ, ಗನ್ ತೋರಿಸಿ ‘ನೀವು ನನಗೆ ಅಧಿಕಾರ ನೀಡಿಲ್ಲ ಎಂದರೆ ಈ ಗನ್​ನ ತೆಗೆದುಕೊಂಡು ಶೂಟ್ ಮಾಡಿಕೊಳ್ಳುತ್ತೇನೆ. ನನಗೆ ಅಧಿಕಾರ ಮುಖ್ಯ ಅಷ್ಟೇ’ ಎಂದು ಹೇಳಿದ್ದಾಳೆ. ರತ್ನಮಾಲಾ ಇರುವ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದಳು ಸಾನಿಯಾ. ಈ ಕಾರಣಕ್ಕೆ ರತ್ನಮಾಲಾ ಅಧಿಕಾರ ನೀಡಿದ್ದಳು. ಈಗ ಭುವಿ ಕೂಡ ಇದೇ ರೀತಿ ಮಾಡುತ್ತಾಳಾ ಅಥವಾ ಬೇರೆಯದೇ ರೀತಿಯ ಪ್ಲ್ಯಾನ್ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ