AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannadathi: ಶೀಘ್ರವೇ ಮುಗಿಯಲಿದೆ ‘ಕನ್ನಡತಿ’ ಧಾರಾವಾಹಿ; ಪ್ರಸಾರ ಆಗೋದು ಕೆಲವೇ ದಿನ ಮಾತ್ರ

Colors Kannada | Kannadathi Serial: ಇನ್ನು ಕೆಲವೇ ದಿನಗಳು ಮಾತ್ರ ‘ಕನ್ನಡತಿ’ ಧಾರಾವಾಹಿಯ ಸಂಚಿಕೆಗಳು ಪ್ರಸಾರ ಆಗಲಿವೆ. 2023ರ ಜನವರಿ ವೇಳೆಗೆ ಈ ಸೀರಿಯಲ್​ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ.

Kannadathi: ಶೀಘ್ರವೇ ಮುಗಿಯಲಿದೆ ‘ಕನ್ನಡತಿ’ ಧಾರಾವಾಹಿ; ಪ್ರಸಾರ ಆಗೋದು ಕೆಲವೇ ದಿನ ಮಾತ್ರ
ಕನ್ನಡತಿ ಧಾರಾವಾಹಿ
TV9 Web
| Updated By: ಮದನ್​ ಕುಮಾರ್​|

Updated on:Dec 14, 2022 | 4:55 PM

Share

ಬೇರೆ ಎಲ್ಲ ಸೀರಿಯಲ್​ಗಳಿಗಿಂತಲೂ ‘ಕನ್ನಡತಿ ಸೀರಿಯಲ್’ (Kannadathi Serial)​ ಭಿನ್ನವಾಗಿ ಮೂಡಿಬರುತ್ತಿದೆ. ಇದರಲ್ಲಿನ ಕಥೆ ನೋಡಿ ಕಿರುತೆರೆ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇತ್ತೀಚಿನ ಎಪಿಸೋಡ್​ಗಳಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡಲಾಗಿದೆ. ವೀಕ್ಷಕರು ಇಷ್ಟಪಟ್ಟಿದ್ದ ಅಮ್ಮಮ್ಮನ ಪಾತ್ರ ಅಂತ್ಯವಾಯ್ತು. ಅದರಿಂದ ಕೆಲವರಿಗೆ ಬೇಸರ ಆಗಿದ್ದುಂಟು. ಅದಕ್ಕಿಂತಲೂ ಬೇಸರದ ವಿಚಾರ ಏನೆಂದರೆ, ‘ಕನ್ನಡತಿ’ (Kannadathi) ಧಾರಾವಾಹಿ ಶೀಘ್ರದಲ್ಲೇ ಅಂತ್ಯವಾಗಲಿದೆ. ಇನ್ನೇನು ಕೆಲವೇ ದಿನಗಳು ಮಾತ್ರ ಈ ಸೀರಿಯಲ್​ ಪ್ರಸಾರ ಆಗಲಿದೆ. ನಂತರ ‘ಕಲರ್ಸ್​ ಕನ್ನಡ’ (Colors Kannada) ವಾಹಿನಿಯಲ್ಲಿ ಹೊಸ ಧಾರಾವಾಹಿ ಬಿತ್ತರ ಆಗಲಿದೆ. ‘ಕನ್ನಡತಿ’ ಕಹಾನಿ ದಿ ಎಂಡ್​ ಆಗುತ್ತಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.

ರಂಜನಿ ರಾಘವನ್​ ಅವರು ‘ಕನ್ನಡತಿ’ ಸೀರಿಯಲ್​ನಲ್ಲಿ ಭುವಿ ಎಂಬ ಪಾತ್ರ ಮಾಡಿದ್ದಾರೆ. ನಟ ಕಿರಣ್​ ರಾಜ್​ ಅವರು ಹರ್ಷನಾಗಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಇವರಿಬ್ಬರ ಜೋಡಿಗೆ ಪ್ರತ್ಯೇಕ ಅಭಿಮಾನಿವರ್ಗವಿದೆ. ಟಿಆರ್​ಪಿ ವಿಚಾರದಲ್ಲಿಯೂ ಈ ಧಾರಾವಾಹಿ ಸಮತೋಲನ ಕಾಯ್ದುಕೊಳ್ಳುತ್ತಾ ಬಂದಿದೆ. ಹಾಗಿದ್ದರೂ ಕೂಡ ಸೀರಿಯಲ್​ ಅಂತ್ಯ ಮಾಡಬೇಕು ಎಂಬ ನಿರ್ಧಾರವನ್ನು ‘ಕಲರ್ಸ್​ ಕನ್ನಡ’ ವಾಹಿನಿ ತೆಗೆದುಕೊಂಡಿದೆ.

ಇದನ್ನೂ ಓದಿ: Ranjani Raghavan: ನಟಿ ರಂಜನಿ ರಾಘವನ್​ ಪುಸ್ತಕ ಬರೆಯೋಕೆ ಶುರು ಮಾಡಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ಸಾಮಾನ್ಯವಾಗಿ ಟಿಆರ್​ಪಿ ಕುಸಿದಾಗ ಸೀರಿಯಲ್​ಗಳನ್ನು ಮುಗಿಸಲಾಗುತ್ತದೆ. ಆದರೆ ‘ಕನ್ನಡತಿ’ ವಿಚಾರದಲ್ಲಿ ಹಾಗಾಗಿಲ್ಲ. ಉತ್ತಮ ಟಿಆರ್​ಪಿ ಬರುತ್ತಿದ್ದರೂ ಕೂಡ ಈ ಧಾರಾವಾಹಿ ಅಂತ್ಯವಾಗುತ್ತಿದೆ. ಆರಂಭದಲ್ಲಿ ಅಂದುಕೊಂಡ ರೀತಿಯೇ ಕಥೆ ಈಗ ಮುಕ್ತಾಯ ಹಂತಕ್ಕೆ ಬಂದಿದೆ. ಆ ಕಾರಣದಿಂದ ಸೀರಿಯಲ್​ ಮುಗಿಸಲಾಗುತ್ತಿದೆ ಎಂಬುದು ಮೂಲಗಳ ಮಾಹಿತಿ.

ಇದನ್ನೂ ಓದಿ: Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ಈ ಮೊದಲು ರಂಜನಿ ರಾಘವನ್​ ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ‘ಪುಟ್ಟಗೌರಿ ರಂಜನಿ’ ಎಂದೇ ಅವರು ಫೇಮಸ್​ ಆಗಿದ್ದರು. ಆದರೆ ಆ ಇಮೇಜ್​ ಅನ್ನು ಬದಲಿಸುವ ರೀತಿಯಲ್ಲಿ ‘ಕನ್ನಡತಿ’ ಸೀರಿಯಲ್​ ಮೂಡಿಬಂತು. ‘ಕನ್ನಡತಿ ಭುವಿ’ ಎಂದು ಅವರನ್ನು ಗುರುತಿಸುವ ಹಾಗೆ ಅವರ ಪಾತ್ರ ಜನಪ್ರಿಯತೆ ಪಡೆದುಕೊಂಡಿತು.

ಇನ್ನು ಕೆಲವೇ ದಿನಗಳು ಮಾತ್ರ ‘ಕನ್ನಡತಿ’ ಧಾರಾವಾಹಿಯ ಸಂಚಿಕೆಗಳು ಪ್ರಸಾರ ಆಗಲಿವೆ. 2023ರ ಜನವರಿ ವೇಳೆಗೆ ಈ ಸೀರಿಯಲ್​ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಇತ್ತ ಬಿಗ್​ ಬಾಸ್​ ಕೂಡ ಶೀಘ್ರದಲ್ಲೇ ಮುಗಿಯಲಿದೆ. ಆ ಸಮಯದಲ್ಲಿ ಪ್ರಸಾರವಾಗಲು ‘ತ್ರಿಪುರ ಸುಂದರಿ’ ಹಾಗೂ ‘ಪುಣ್ಯವತಿ’ ಎಂಬ ಎರಡು ಹೊಸ ಸೀರಿಯಲ್​ಗಳು ಸಜ್ಜಾಗಿವೆ. ‘ಕನ್ನಡತಿ’ ಬದಲಿಗೆ ಯಾವ ಧಾರಾವಾಹಿ ಬರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:55 pm, Wed, 14 December 22

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ