KBC 13: ಕರೋಡ್​ಪತಿ ಹಾಟ್​ಸೀಟ್​ನಲ್ಲಿ ಗಂಗೂಲಿ, ಸೆಹ್ವಾಗ್​? ​13ನೇ ಸೀಸನ್​ ನಿರೂಪಣೆಗೆ ಅಮಿತಾಭ್​ ರೆಡಿ

| Updated By: Digi Tech Desk

Updated on: Aug 19, 2021 | 2:34 PM

Kaun Banega Crorepati 13: ‘ಕೌನ್​ ಬನೇಗಾ ಕರೋಡ್​ಪತಿ’ 13ನೇ ಸೀಸನ್​ನಲ್ಲಿ ಅನೇಕ ಹೊಸ ಫೀಚರ್​ಗಳನ್ನು ಪರಿಚಯಿಸಲಾಗುತ್ತಿದೆ. ಅದರ ಝಲಕ್​ ತೋರಿಸಲು ಈಗಾಗಲೇ ಕೆಲವು ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

KBC 13: ಕರೋಡ್​ಪತಿ ಹಾಟ್​ಸೀಟ್​ನಲ್ಲಿ ಗಂಗೂಲಿ, ಸೆಹ್ವಾಗ್​? ​13ನೇ ಸೀಸನ್​ ನಿರೂಪಣೆಗೆ ಅಮಿತಾಭ್​ ರೆಡಿ
ವೀರೇಂದ್ರ ಸೆಹ್ವಾಗ್​, ಅಮಿತಾಭ್​ ಬಚ್ಚನ್​, ಸೌರವ್​ ಗಂಗೂಲಿ
Follow us on

ಜನಪ್ರಿಯ ‘ಕೌನ್​ ಬನೇಗಾ ಕರೋಡ್​ಪತಿ’ (Kaun Banega Crorepati) ಕ್ವಿಜ್​ ಕಾರ್ಯಕ್ರಮ ಈವರೆಗೆ ಯಶಸ್ವಿಯಾಗಿ 12 ಸೀಸನ್​ಗಳನ್ನು ಮುಗಿಸಿದೆ. ಈಗ 13ನೇ ಸೀಸನ್​ಗೆ (KBC 13) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜ್ಞಾನ, ಪುರಾಣ, ರಾಜಕೀಯ, ಸಿನಿಮಾ, ಕ್ರೀಡೆ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತ ವೀಕ್ಷಕರ ಜ್ಞಾನ ಹೆಚ್ಚಿಸುವ ಈ ಶೋಗೆ ದೊಡ್ಡ ಪ್ರೇಕ್ಷಕವರ್ಗವಿದೆ. ಅಮಿತಾಭ್​ ಬಚ್ಚನ್​ (Amitabh Bachchan) ನಿರೂಪಣೆಯಲ್ಲಿ ಮೂಡಿಬರಲಿರುವ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ 13ನೇ ಸೀಸನ್​ನಲ್ಲಿ ಸೌರವ್​ ಗಂಗೂಲಿ (Sourav Ganguly) ಮತ್ತು ವೀರೇಂದ್ರ ಸೆಹ್ವಾಗ್​ (Virender Sehwag) ಅವರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಈಗ ಕೇಳಿಬಂದಿದೆ.

ಆ.23ರಿಂದ ಕೌನ್​ ಬನೇಗಾ ಕರೋಡ್​ಪತಿ 13ನೇ ಸೀಸನ್​ ಪ್ರಾರಂಭ ಆಗಲಿದೆ. ಕಳೆದ ಸೀಸಿನ್​ನಲ್ಲಿ ‘ಕರಮ್​ ವೀರ್’ ಎಪಿಸೋಡ್​ ಫೇಮಸ್​ ಆಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜನರನ್ನು ಈ ಸಂಚಿಕೆಗಳಿಗೆ ಅತಿಥಿಗಳಾಗಿ ಕರೆತರಲಾಗುತ್ತಿತ್ತು. ಅದರ ಬದಲು ಈ ಬಾರಿ ‘ಶಾಂದರ್​ ಶುಕ್ರವಾರ್​’ ಎಪಿಸೋಡ್​ ಪರಿಚಯಿಸಲಾಗುತ್ತಿದೆ. ಇದರಲ್ಲಿ ಭಾರತ ಕ್ರಿಕೆಟ್​ ದಿಗ್ಗಜರಾದ ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸೌರವ್​ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್​ ಭಾಗವಹಿಸುವ ಎಪಿಸೋಡ್​ ಆ.27ರಂದು ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸೋನಿ ವಾಹಿನಿ ಸದ್ಯ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಅವರಿಬ್ಬರನ್ನು ಹಾಟ್​ಸೀಟ್​ನಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರ ಪೈಕಿ ಯಾರು ಹೆಚ್ಚು ಹಣ ಗಳಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ವೀಕ್ಷಕರಲ್ಲಿ ಮೂಡಿದೆ.

ಈ ಸೀಸನ್​ನಲ್ಲಿ ಅನೇಕ ಹೊಸ ಫೀಚರ್​ಗಳನ್ನು ಪರಿಚಯಿಸಲಾಗುತ್ತಿದೆ. ಅದರ ಝಲಕ್​ ತೋರಿಸಲು ಈಗಾಗಲೇ ಕೆಲವು ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

ಕೊರೊನಾ ವೈರಸ್​ ಮೊದಲನೇ ಅಲೆ ಕಾರಣದಿಂದ 12ನೇ ಸೀಸನ್​ಗೆ ಕೆಲವು ಅಡೆಚಣೆಗಳು ಉಂಟಾಗಿದ್ದವು, ಸ್ವತಃ ಅಮಿತಾಭ್​ ಬಚ್ಚನ್​ ಅವರು ಕೊವಿಡ್​ನಿಂದ ಚೇತರಿಸಿಕೊಂಡ ನಂತರವೇ ಶೋ ನಿರೂಪಣೆ ಆರಂಭಿಸಿದ್ದರು. ಸರ್ಕಾರ ಜಾರಿಗೊಳಿಸಿದ್ದ ಕೊವಿಡ್​ ಗೈಡ್​ಲೈನ್ಸ್​ ಪ್ರಕಾರ ಸ್ಟುಡಿಯೋದಲ್ಲಿ ಆಡಿಯನ್ಸ್​ ಇಲ್ಲದೆ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಆಡಿಯನ್ಸ್​ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ:

ಅಮಿತಾಭ್​ ಬಚ್ಚನ್‌ ನನ್ನ ಪಾತ್ರ ಮೆಚ್ಚಿದ್ದರು, ಅದೇ ನನಗೆ ದೊಡ್ಡ ಪ್ರಶಸ್ತಿ; ವೈಜನಾಥ್ ಬಿರಾದಾರ್

ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ

Published On - 12:20 pm, Thu, 19 August 21