Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ

| Updated By: ಮದನ್​ ಕುಮಾರ್​

Updated on: Aug 02, 2022 | 11:11 AM

Kichcha Sudeep | Bigg Boss Kannada: ಬಿಗ್​ ಬಾಸ್​ ನಿರೂಪಣೆ ಮಾಡುವಲ್ಲಿ ಸುದೀಪ್​ ಅವರ ಪರಿಶ್ರಮ ಸಾಕಷ್ಟು ಇರುತ್ತದೆ. ಅದು ವೀಕ್ಷಕರಿಗೆ ಕಾಣುವಂಥದ್ದಲ್ಲ. ಆ ಬಗ್ಗೆ ಕಿಚ್ಚ ವಿವರಣೆ ನೀಡಿದ್ದಾರೆ.

Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
ಕಿಚ್ಚ ಸುದೀಪ್​
Follow us on

ನಟ ಸುದೀಪ್ ಅವರು ಕಿರುತೆರೆ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಬಿಗ್​ ಬಾಸ್​ (Bigg Boss Kannada) ನಿರೂಪಣೆ ಮಾಡುವ ಮೂಲಕ ಟಿವಿ ವೀಕ್ಷಕರ ಜೊತೆ ಅವರೊಂದು ನಂಟು ಬೆಳೆಸಿಕೊಂಡಿದ್ದಾರೆ. ಕನ್ನಡದಲ್ಲಿ ಈವರೆಗೆ ಎಲ್ಲ ಸೀಸನ್​ಗಳನ್ನು ನಿರೂಪಣೆ ಮಾಡಿದ ಖ್ಯಾತಿ ಕಿಚ್ಚ ಸುದೀಪ್ (Kichcha Sudeep)​ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವಾಗ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹಲವು ಸಿನಿಮಾ ಕೆಲಸಗಳ ನಡುವೆ ಡೇಟ್ಸ್​ ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲು. ಅದನ್ನು ತುಂಬ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ ಸುದೀಪ್​. ಈಗ ‘ಬಿಗ್​ ಬಾಸ್​ ಒಟಿಟಿ’ (Bigg Boss OTT) ಮೊದಲ ಸೀಸನ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂದಿನ ಉತ್ಸಾಹದಲ್ಲಿ ಅವರು ಈ ಹೊಸ ಸ್ವರೂಪದ ಬಿಗ್​ ಬಾಸ್​ ನಡೆಸಿಕೊಡಲು ಸಜ್ಜಾಗಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಮಾತನಾಡಿದ್ದಾರೆ.

‘ಇಷ್ಟು ಸೀಸನ್​ನಲ್ಲಿ ನಾನು ಯಾವುದೇ ದೇಶದಲ್ಲಿ ಇದ್ದರೂ ಬಿಗ್​ ಬಾಸ್​ ಎಪಿಸೋಡ್​ ಶೂಟಿಂಗ್​ ಮಿಸ್​ ಮಾಡಿಲ್ಲ. ಆನಾರೋಗ್ಯ ಇದ್ದಾಗಲೂ ಬರಲೇಬೇಕು. ಒಂದು ವೇಳೆ ಬರಲಿಲ್ಲ ಎಂದರೆ ಆ ವಾರದಲ್ಲಿ ಸ್ಪರ್ಧಿಗಳಿಗೆ ನ್ಯಾಯ ಸಲ್ಲಿಸೋಕೆ ಆಗಲ್ಲ. ಯಾವ ಯಾವ ಸಮಯದಲ್ಲಿ ಎಷ್ಟು ಜ್ವರ ಇಟ್ಟುಕೊಂಡು ನಾನು ಶೋ ನಡೆಸಿಕೊಟ್ಟಿದ್ದೇನೆ ಎಂಬುದು ಪರಮ್​ ಅವರಿಗೆ ಗೊತ್ತು. ಸೂಟ್​ ಒಳಗೆ ಐಸ್​ ಕ್ಯೂಬ್ ಇಟ್ಟುಕೊಂಡು ಶೂಟಿಂಗ್ ಮಾಡಿದ್ದುಂಟು’ ಎಂದು ಸುದೀಪ್​ ಹೇಳಿದ್ದಾರೆ.

‘ನನಗೆ ಕಳೆದ ಬಾರಿ ಕೊವಿಡ್​ ಪಾಸಿಟಿವ್​ ಆದಾಗ ಮಾತ್ರ ನಾನು ಶೂಟಿಂಗ್​ ಮಿಸ್​ ಮಾಡಿದ್ದು. ಶೋ ನಡೆಯುವಾಗಲೇ ನನ್ನ ಜ್ವರ ಜಾಸ್ತಿ ಆಗಲು ಶುರುವಾಯ್ತು. ಮಧ್ಯದಲ್ಲಿ ಬಂದು ಪರಮ್​ ನನ್ನನ್ನು ಮುಟ್ಟಿದಾಗ ಮೈ ಸುಡುತ್ತಿತ್ತು. ಆದರೂ ಮುಂದುವರಿಸಿದ್ದೆ. ಇಡೀ ವಾರದಲ್ಲಿ ನಾನು ಕೆಲವು ರಿಸ್ಕ್​ ತೆಗೆದುಕೊಳ್ಳೋಕೆ ಹೋಗಲ್ಲ. ಮಳೆ ಫೈಟ್​ ಇದ್ದಾಗ ಆದಷ್ಟು ಬಿಸಿನೀರು ತನ್ನಿ ಅಂತ ಹೇಳುತ್ತೇನೆ. ಜ್ವರ ಬಂದರೆ ಕಷ್ಟ ಆಗುತ್ತದೆ’ ಎಂದಿದ್ದಾರೆ ಸುದೀಪ್​.

ಇದನ್ನೂ ಓದಿ
Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​
BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ

‘ಸಿನಿಮಾ ಶೂಟಿಂಗ್​ ಸಲುವಾಗಿ ಬೇರೆ ಊರಿಗೆ ಹೋದರೆ ವಾಪಸ್​ ಬರಲು ಎರಡು-ಮೂರು ವಿಮಾನದ ಟಿಕೆಟ್​ ಬುಕ್​ ಮಾಡಿರುತ್ತೇವೆ. ಒಂದು ಮಿಸ್​ ಆದರೆ ಇನ್ನೊಂದು ಇರಬೇಕು. ನಾನು ವಾಪಸ್​ ಬರಲೇಬೇಕು. ಎಲ್ಲ ಎಪಿಸೋಡ್​ ನೋಡಿಕೊಂಡು ನಾನು ಶೋ ನಡೆಸಬೇಕು. ಇದು ತುಂಬ ಒತ್ತಡದ ಕೆಲಸ. ಆದರೆ ಅದು ನನ್ನನ್ನು ಉತ್ತಮ ಪ್ಲಾನರ್​ ಆಗಿಸುತ್ತದೆ’ ಎಂದು ಕಿಚ್ಚ ಹೇಳಿದ್ದಾರೆ.

Published On - 11:11 am, Tue, 2 August 22