AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಟ್ ಔಟ್ ಎಂದ ಕಿಚ್ಚ ಸುದೀಪ್: ಮನೆ ಮಂದಿಗೆ ಕಾದಿದೆ ಗ್ರಹಚಾರ

Kichcha Sudeep: ನಟ ಕಿಚ್ಚ ಸುದೀಪ್ ಶನಿವಾರದ ಎಪಿಸೋಡ್​ ಅನ್ನು ಸಿಟ್ಟಿನಿಂದಲೇ ಆರಂಭ ಮಾಡಿದ್ದಾರೆ. ಮನೆಯ ಸದಸ್ಯರಿಗೆ ಗೆಟೌಟ್ ಅಂದಿದ್ದಾರೆ.

ಗೆಟ್ ಔಟ್ ಎಂದ ಕಿಚ್ಚ ಸುದೀಪ್: ಮನೆ ಮಂದಿಗೆ ಕಾದಿದೆ ಗ್ರಹಚಾರ
ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on: Dec 16, 2023 | 7:46 PM

Share

ಬಿಗ್​ಬಾಸ್ (BiggBoss)​ ಕನ್ನಡ ಸೀಸನ್ 10ರ ಮತ್ತೊಂದು ವೀಕೆಂಡ್ ಪಂಚಾಯ್ತಿ ಬಂದಿದೆ. ಸುದೀಪ್, ಪ್ರತಿಬಾರಿಯಂತೆ ಸಖತ್ ಸ್ಲೈಟಿಷ್ ಆಗಿ ವೇದಿಕೆ ಮೇಲೆ ಬಂದಿದ್ದಾರೆ. ಸುದೀಪ್ ಪ್ರತಿಬಾರಿ ವೇದಿಕೆಗೆ ಬಂದಾಗ ಮನೆಯ ಸದಸ್ಯರು ಲಿವಿಂಗ್ ಏರಿಯಾದಲ್ಲಿನ ಟಿವಿ ಮುಂದೆ ಕುಳಿತಿರುತ್ತಾರೆ, ಸುದೀಪ್ ಬಂದ ಕೂಡಲೇ ಎದ್ದು ನಿಂತು ಎಲ್ಲರೂ ಸಾಮೂಹಿಕಾಗಿ ಚಪ್ಪಾಳೆ ತಟ್ಟುತ್ತಾರೆ. ಆದರೆ ಈ ಶನಿವಾರ ಬೇರೆಯದ್ದೇ ನಡೆದಿದೆ.

ಸುದೀಪ್ ಸಖತ್ ಸ್ಟೈಲಿಷ್ ಆದ ಉಡುಪು, ಕನ್ನಡಕ ಧರಿಸಿ ಸ್ಟೈಲಾಗಿ ವೇದಿಕೆ ಮೇಲೆ ಬಂದಿದ್ದಾರೆ. ಮನೆಯ ಒಳಗಿನ ಸದಸ್ಯರೊಟ್ಟಿಗೆ ಮಾತನಾಡಲು ಮನೆಯ ಒಳಗಿನ ಸದಸ್ಯರು ಕಾಣುವ ಸ್ಕ್ರೀನ್ ಆದಾಗ ಸುದೀಪ್​ಗೆ ಅಚ್ಚರಿ ಆಗಿದೆ. ಸೋಫಾ ಮೇಲೆ ಕೇವಲ ನಾಲ್ಕು ಜನ ಮಾತ್ರವೇ ಇದ್ದರು. ಉಳಿದವರಲ್ಲಿ ಕೆಲವರು ಇನ್ನೂ ರೆಡಿಯಾಗುತ್ತಿದ್ದರು, ಡ್ರೋನ್ ಪ್ರತಾಪ್ ಅಂತೂ ನಿದ್ದೆ ಮಾಡುತ್ತಿದ್ದರು. ಸುದೀಪ್ ಬಂದಿದ್ದು ಗೊತ್ತಾದ ಕೂಡಲೇ ಎದ್ದೆವೋ-ಬಿದ್ದೆವೋ ಎಂದು ಓಡೋಡಿ ಬಂದು ಸುದೀಪ್ ಎದುರು ನಿಂತರು. ಪ್ರತಾಪ್, ತಮ್ಮ ಮೈಖ್ ಅನ್ನೂ ಮರೆತು ಓಡಿ ಬಂದಿದ್ದರು.

ಮನೆಯವರ ಅಶಿಸ್ತು ಕಂಡು ಸಿಟ್ಟಾದ ಸುದೀಪ್, ಲಾಂಗ್ ಬಜರ್ ಆದಾಗಿನಿಂದಲೂ ನಿಮ್ಮ ಚಟುವಟಿಕೆಗಳನ್ನು ನೋಡುತ್ತಿದ್ದೇನೆ, ಇದು ಸರಿಯಲ್ಲ ಎಂದರು. ವಿನಯ್​ ಅನ್ನು ಉದ್ದೇಶಿಸಿ, ಯಾಕೆ ವಿನಯ್ ಶಿಸ್ತು ಹೊರಟು ಹೋಯಿತಾ? ಎಂದು ಪ್ರಶ್ನೆ ಮಾಡಿದರು. ಡ್ರೋನ್ ಪ್ರತಾಪ್​ಗೆ ಮೈಖ್ ಎಲ್ಲಿ ಎಂದು ಕೇಳಿದರು. ತಾವು ಮೈಖ್ ಧರಿಸಿಲ್ಲ ಎಂಬುದು ಅರಿವಾಗಿ ಓಡೋಡಿ ಹೋಗಿ ಮೈಖ್ ತೆಗೆದುಕೊಂಡು ಬಂದರು ಡ್ರೋನ್ ಪ್ರತಾಪ್.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

ಮೈಖಲ್​ಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡ ನಟ ಸುದೀಪ್, ಒಂದು ಒಳ್ಳೆಯ ವೇದಿಕೆ ಸಿಕ್ಕಿ, ಅಲ್ಲಿ ಒಂದಿಷ್ಟು ಮರ್ಯಾದೆ ಸಿಗುತ್ತಿದ್ದ ಹಾಗೆ ಆ ವೇದಿಕೆಯ ಮರ್ಯಾದೆ ಕಳೆಯುವ, ನಿಯಮಗಳನ್ನು ಗಾಳಿಗೆ ತೂರುವುದು ನಿಮ್ಮ ಸ್ಟೈಲ್ ಅಲ್ಲವೆ? ಎಂದು ಪ್ರಶ್ನೆ ಮಾಡಿದರು. ಮುಂದುವರೆದು, ಈಗಲೇ ಮುಖ್ಯ ದ್ವಾರ ತೆಗೆಸುತ್ತೇನೆ ಗೆಟ್ ಔಟ್ ಎಂದರು ಸುದೀಪ್.

ವಾರಾಂತ್ಯದ ಆರಂಭದಲ್ಲಿಯೇ ಸುದೀಪ್, ಬೇಸರ, ಸಿಟ್ಟಿನಿಂದಲೇ ಎಪಿಸೋಡ್ ಆರಂಭ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನ ಪ್ರೋಮೋ ಮಾತ್ರವೇ ಸದ್ಯಕ್ಕೆ ಹೊರಬಂದಿದೆ. ಎಪಿಸೋಡ್​ನಲ್ಲಿ ಸುದೀಪ್ ಯಾರನ್ನೆಲ್ಲ ಬೈಯ್ಯಲಿದ್ದಾರೆ, ಯಾರ ತಪ್ಪಿಗೆ ಏನು ಶಿಕ್ಷೆ ನೀಡಲಿದ್ದಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ