AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಟ್ ಔಟ್ ಎಂದ ಕಿಚ್ಚ ಸುದೀಪ್: ಮನೆ ಮಂದಿಗೆ ಕಾದಿದೆ ಗ್ರಹಚಾರ

Kichcha Sudeep: ನಟ ಕಿಚ್ಚ ಸುದೀಪ್ ಶನಿವಾರದ ಎಪಿಸೋಡ್​ ಅನ್ನು ಸಿಟ್ಟಿನಿಂದಲೇ ಆರಂಭ ಮಾಡಿದ್ದಾರೆ. ಮನೆಯ ಸದಸ್ಯರಿಗೆ ಗೆಟೌಟ್ ಅಂದಿದ್ದಾರೆ.

ಗೆಟ್ ಔಟ್ ಎಂದ ಕಿಚ್ಚ ಸುದೀಪ್: ಮನೆ ಮಂದಿಗೆ ಕಾದಿದೆ ಗ್ರಹಚಾರ
ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on: Dec 16, 2023 | 7:46 PM

Share

ಬಿಗ್​ಬಾಸ್ (BiggBoss)​ ಕನ್ನಡ ಸೀಸನ್ 10ರ ಮತ್ತೊಂದು ವೀಕೆಂಡ್ ಪಂಚಾಯ್ತಿ ಬಂದಿದೆ. ಸುದೀಪ್, ಪ್ರತಿಬಾರಿಯಂತೆ ಸಖತ್ ಸ್ಲೈಟಿಷ್ ಆಗಿ ವೇದಿಕೆ ಮೇಲೆ ಬಂದಿದ್ದಾರೆ. ಸುದೀಪ್ ಪ್ರತಿಬಾರಿ ವೇದಿಕೆಗೆ ಬಂದಾಗ ಮನೆಯ ಸದಸ್ಯರು ಲಿವಿಂಗ್ ಏರಿಯಾದಲ್ಲಿನ ಟಿವಿ ಮುಂದೆ ಕುಳಿತಿರುತ್ತಾರೆ, ಸುದೀಪ್ ಬಂದ ಕೂಡಲೇ ಎದ್ದು ನಿಂತು ಎಲ್ಲರೂ ಸಾಮೂಹಿಕಾಗಿ ಚಪ್ಪಾಳೆ ತಟ್ಟುತ್ತಾರೆ. ಆದರೆ ಈ ಶನಿವಾರ ಬೇರೆಯದ್ದೇ ನಡೆದಿದೆ.

ಸುದೀಪ್ ಸಖತ್ ಸ್ಟೈಲಿಷ್ ಆದ ಉಡುಪು, ಕನ್ನಡಕ ಧರಿಸಿ ಸ್ಟೈಲಾಗಿ ವೇದಿಕೆ ಮೇಲೆ ಬಂದಿದ್ದಾರೆ. ಮನೆಯ ಒಳಗಿನ ಸದಸ್ಯರೊಟ್ಟಿಗೆ ಮಾತನಾಡಲು ಮನೆಯ ಒಳಗಿನ ಸದಸ್ಯರು ಕಾಣುವ ಸ್ಕ್ರೀನ್ ಆದಾಗ ಸುದೀಪ್​ಗೆ ಅಚ್ಚರಿ ಆಗಿದೆ. ಸೋಫಾ ಮೇಲೆ ಕೇವಲ ನಾಲ್ಕು ಜನ ಮಾತ್ರವೇ ಇದ್ದರು. ಉಳಿದವರಲ್ಲಿ ಕೆಲವರು ಇನ್ನೂ ರೆಡಿಯಾಗುತ್ತಿದ್ದರು, ಡ್ರೋನ್ ಪ್ರತಾಪ್ ಅಂತೂ ನಿದ್ದೆ ಮಾಡುತ್ತಿದ್ದರು. ಸುದೀಪ್ ಬಂದಿದ್ದು ಗೊತ್ತಾದ ಕೂಡಲೇ ಎದ್ದೆವೋ-ಬಿದ್ದೆವೋ ಎಂದು ಓಡೋಡಿ ಬಂದು ಸುದೀಪ್ ಎದುರು ನಿಂತರು. ಪ್ರತಾಪ್, ತಮ್ಮ ಮೈಖ್ ಅನ್ನೂ ಮರೆತು ಓಡಿ ಬಂದಿದ್ದರು.

ಮನೆಯವರ ಅಶಿಸ್ತು ಕಂಡು ಸಿಟ್ಟಾದ ಸುದೀಪ್, ಲಾಂಗ್ ಬಜರ್ ಆದಾಗಿನಿಂದಲೂ ನಿಮ್ಮ ಚಟುವಟಿಕೆಗಳನ್ನು ನೋಡುತ್ತಿದ್ದೇನೆ, ಇದು ಸರಿಯಲ್ಲ ಎಂದರು. ವಿನಯ್​ ಅನ್ನು ಉದ್ದೇಶಿಸಿ, ಯಾಕೆ ವಿನಯ್ ಶಿಸ್ತು ಹೊರಟು ಹೋಯಿತಾ? ಎಂದು ಪ್ರಶ್ನೆ ಮಾಡಿದರು. ಡ್ರೋನ್ ಪ್ರತಾಪ್​ಗೆ ಮೈಖ್ ಎಲ್ಲಿ ಎಂದು ಕೇಳಿದರು. ತಾವು ಮೈಖ್ ಧರಿಸಿಲ್ಲ ಎಂಬುದು ಅರಿವಾಗಿ ಓಡೋಡಿ ಹೋಗಿ ಮೈಖ್ ತೆಗೆದುಕೊಂಡು ಬಂದರು ಡ್ರೋನ್ ಪ್ರತಾಪ್.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

ಮೈಖಲ್​ಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡ ನಟ ಸುದೀಪ್, ಒಂದು ಒಳ್ಳೆಯ ವೇದಿಕೆ ಸಿಕ್ಕಿ, ಅಲ್ಲಿ ಒಂದಿಷ್ಟು ಮರ್ಯಾದೆ ಸಿಗುತ್ತಿದ್ದ ಹಾಗೆ ಆ ವೇದಿಕೆಯ ಮರ್ಯಾದೆ ಕಳೆಯುವ, ನಿಯಮಗಳನ್ನು ಗಾಳಿಗೆ ತೂರುವುದು ನಿಮ್ಮ ಸ್ಟೈಲ್ ಅಲ್ಲವೆ? ಎಂದು ಪ್ರಶ್ನೆ ಮಾಡಿದರು. ಮುಂದುವರೆದು, ಈಗಲೇ ಮುಖ್ಯ ದ್ವಾರ ತೆಗೆಸುತ್ತೇನೆ ಗೆಟ್ ಔಟ್ ಎಂದರು ಸುದೀಪ್.

ವಾರಾಂತ್ಯದ ಆರಂಭದಲ್ಲಿಯೇ ಸುದೀಪ್, ಬೇಸರ, ಸಿಟ್ಟಿನಿಂದಲೇ ಎಪಿಸೋಡ್ ಆರಂಭ ಮಾಡಿದ್ದಾರೆ. ಶನಿವಾರದ ಎಪಿಸೋಡ್​ನ ಪ್ರೋಮೋ ಮಾತ್ರವೇ ಸದ್ಯಕ್ಕೆ ಹೊರಬಂದಿದೆ. ಎಪಿಸೋಡ್​ನಲ್ಲಿ ಸುದೀಪ್ ಯಾರನ್ನೆಲ್ಲ ಬೈಯ್ಯಲಿದ್ದಾರೆ, ಯಾರ ತಪ್ಪಿಗೆ ಏನು ಶಿಕ್ಷೆ ನೀಡಲಿದ್ದಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು