AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ

ಬಿಗ್ ಬಾಸ್ ತೊರೆದು ಹೊರಗೆ ಹೋಗುವುದಾಗಿ ಅನೇಕ ಸ್ಪರ್ಧಿಗಳು ಹೇಳಿದ್ದಾರೆ. ಈ ಬಾರಿ ನಮ್ರತಾ ಗೌಡ ಅವರ ಸರದಿ. ಸಂಗೀತಾ ಜೊತೆ ಆದ ಜಗಳಕ್ಕೆ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ
ಸಂಗೀತಾ-ನಮ್ರತಾ
ರಾಜೇಶ್ ದುಗ್ಗುಮನೆ
|

Updated on:Dec 16, 2023 | 9:30 AM

Share

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಎಲ್ಲಾ ಮನಸ್ಥಿತಿಗಳ ಜೊತೆ ಒಟ್ಟಿಗೆ ಸಾಗೋದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಕಪ್ ಗೆಲ್ಲಬೇಕು ಎಂದರೆ ಇದೆಲ್ಲವನ್ನೂ ಎದುರಿಸಲೇಬೇಕು. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಾಲೆಂಜ್​ಗಳನ್ನು ಎದುರಿಸುವ ತಾಕತ್ತು ಸ್ವಲ್ಪ ಕಡಿಮೆ ಇದೆ ಎನ್ನುವ ಭಾವನೆ ವೀಕ್ಷಕರಿಗೆ ಬರುತ್ತಿದೆ. ಬಿಗ್ ಬಾಸ್ ತೊರೆದು ಹೊರಗೆ ಹೋಗುವುದಾಗಿ ಅನೇಕ ಸ್ಪರ್ಧಿಗಳು ಹೇಳಿದ್ದಾರೆ. ಈ ಬಾರಿ ನಮ್ರತಾ ಗೌಡ ಅವರ ಸರದಿ. ಸಂಗೀತಾ ಜೊತೆ ಆದ ಜಗಳಕ್ಕೆ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಬಿಗ್ ಬಾಸ್​ನಲ್ಲಿ ಪ್ರತಿ ವಾರ ಲಕ್ಷುರಿ ಬಜೆಟ್ ನೀಡುತ್ತಾರೆ. ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುಗಳಿಗಿಂತ ಬೇರೆ ವಸ್ತುಗಳನ್ನು ಇಲ್ಲಿ ಪಡೆಯಬಹುದು. ಈ ವಾರ 10 ಸಾವಿರ  ಪಾಯಿಂಟ್ಸ್ ಸಿಕ್ಕಿತ್ತು. ಆದರೆ, ಇದನ್ನು ಸ್ಪರ್ಧಿಗಳು ಹಾಳು ಮಾಡಿಕೊಂಡರು. ಕೊಟ್ಟ ಪಾಯಿಂಟ್ಸ್​ಗಿಂತ ಹೆಚ್ಚಿನ ಪಾಯಿಂಟ್ಸ್ ಬರೆದರು ಲಕ್ಷುರಿ ಬಜೆಟ್ ಮಿಸ್ ಆಯಿತು. ಬೋರ್ಡ್​ ಮೇಲೆ ಲೆಕ್ಕ ಬರೆಯಲು ಹೋದ ನಮ್ರತಾ ಹಾಗೂ ಮೈಕಲ್ ವಿರುದ್ಧ ಸಂಗೀತಾ ತಿರುಗಿ ಬಿದ್ದರು.

ಈ ಬಾರಿಯ ಲಕ್ಷುರಿ ಬಜೆಟ್​ನಲ್ಲಿ ಚಿಕನ್, ಪನೀರ್ ಹಾಗೂ ಬ್ರೌನ್ ರೈಸ್ ಬರೆಯಲಾಗಿತ್ತು. ಬ್ರೌನ್ ರೈಸ್ ಸೇರಿಸಿದ್ದರಿಂದಲೇ ಲೆಕ್ಕ ತಪ್ಪಿತು ಎಂದು ಸಂಗೀತಾ ವಾದ ಮಾಡಿದರು. ಜೊತೆಗೆ ಬ್ರೌನ್​ ರೈಸ್​ನ ಯಾರನ್ನು ಕೇಳಿ ಸೇರಿಸಿದಿರಿ ಎಂದು ಕ್ಯಾತೆ ತೆಗೆದರು. ಇದು ನಮ್ರತಾಗೆ ಬೇಸರ ತರಿಸಿತು. ‘ಮನೆಯಲ್ಲಿ ಅಕ್ಕಿ ಕಡಿಮೆ ಬೀಳುತ್ತದೆ ಎನ್ನುವ ಕಾರಣಕ್ಕೆ ಬ್ರೌನ್​ ರೈಸ್ ಸೇರಿಸಿದೆ. ಮನೆಗೋಸ್ಕರ ನಾನು ಇದನ್ನು ಮಾಡಿದೆ. ಪನೀರ್ ನಿಮ್ಮ ಬಿಟ್ಟು ಬೇರೆ ಯಾರಿಗೂ ಬೇಕಿರಲಿಲ್ಲ. ಆದಾಗ್ಯೂ ನಾನು ಪನೀರ್​ನ ಸೇರಿಸಿದೆ’ ಎಂದು ನಮ್ರತಾ ಸ್ಪಷ್ಟನೆ ಕೊಡಲು ಬಂದರು. ಆದರೆ, ಸಂಗೀತಾ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಇದನ್ನೂ ಓದಿ: ‘ಎಲಿಮಿನೇಟ್​ ಆದವರೆಲ್ಲ ನಮ್ಮ ಗುಂಪಿ​ನವರೇ’; ನಮ್ರತಾಗೆ ಕೊನೆಗೂ ಆಯ್ತು ಜ್ಞಾನೋದಯ

ಬೆಡ್​ರೂಂಗೆ ಹೋದ ನಮ್ರತಾ ಕಣ್ಣೀರು ಹಾಕಲು ಶುರು ಮಾಡಿದರು. ‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ. ತುಂಬಾನೇ ನೆಗೆಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾಳೆ. ನನ್ನ ಬಳಿ ಇರೋಕೆ ಆಗುತ್ತಿಲ್ಲ. ನಾನು ಹೊರಹೋಗುತ್ತೇನೆ’ ಎನ್ನುತ್ತಾ ಮತ್ತಷ್ಟು ಕಣ್ಣೀರು ಹಾಕಿದರು. ಮನೆ ಮಂದಿ ಸಮಾಧಾನ ಮಾಡಲು ಪ್ರಯತ್ನಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:35 am, Sat, 16 December 23

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ