Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮತ್ತು ಉಪೇಂದ್ರ ಮದುವೆ ಬಗ್ಗೆ ಯಶ್​ ಯಾವಾಗಲೂ ಆ ಪ್ರಶ್ನೆ ಕೇಳ್ತಾರೆ; ಪ್ರಿಯಾಂಕಾ ಉಪೇಂದ್ರ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ರಾಜಾ-ರಾಣಿ’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರತಿವಾರ ಸ್ಟಾರ್ ಕಲಾವಿದರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ನನ್ನ ಮತ್ತು ಉಪೇಂದ್ರ ಮದುವೆ ಬಗ್ಗೆ ಯಶ್​ ಯಾವಾಗಲೂ ಆ ಪ್ರಶ್ನೆ ಕೇಳ್ತಾರೆ; ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ-ಉಪೇಂದ್ರ ಮತ್ತು ಯಶ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 09, 2021 | 3:31 PM

ಉಪೇಂದ್ರ ಅವರು ಸಾಕಷ್ಟು ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಅವರು ತುಂಬಾನೇ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ಉಪೇಂದ್ರ ಅವರು ಮನೆಯಲ್ಲಿ ಎಷ್ಟು ರೊಮ್ಯಾಂಟಿಕ್​? ಈ ಪ್ರಶ್ನೆಗೆ ಪ್ರಿಯಾಂಕಾ ಉಪೇಂದ್ರ ಅವರು ಉತ್ತರ ನೀಡಿದ್ದಾರೆ. ಆನ್​​ ಸ್ಕ್ರೀನ್​ನಲ್ಲಿ ಇದ್ದಂತೆ ಅವರು ಆಫ್​​ ​ಸ್ಕ್ರೀನ್​ನಲ್ಲಿ ಇಲ್ಲ ಎಂದಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ರಾಜಾ-ರಾಣಿ’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರತಿವಾರ ಸ್ಟಾರ್ ಕಲಾವಿದರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಅಲ್ಲದೆ, ಅವರಿಗೆ ಕೆಲ ಪ್ರಶ್ನೆಗಳನ್ನು ಕೂಡ ಕೇಳಲಾಗಿದೆ.

‘ಉಪೇಂದ್ರ ಅವರು ಅದ್ಭುತ ನಿರ್ದೇಶಕ ಅನ್ನೋದು ಎಲ್ಲರಿಗೂ ಗೊತ್ತು. ಅವರು ಎಲ್ಲರಿಗೂ ಸ್ಫೂರ್ತಿ. ಮನೆಯಲ್ಲಿ ಪತಿಯಾಗಿ ಅವರು ಹೇಗೆ ಇರ್ತಾರೆ?’ ಎಂದು ನಿರೂಪಕಿ ಅನುಪಮಾ ಗೌಡ ಅವರು ಪ್ರಶ್ನೆ ಮಾಡಿದರು. ಇದಕ್ಕೆ ಜಡ್ಜ್ ಆಸನದಲ್ಲಿ ಕುಳಿತಿದ್ದ ಸೃಜನ್​ ಲೋಕೇಶ್​ ‘ಹೆದರಿಕೊಂಡು ಇರ್ತಾರೆ’ ಎನ್ನುವ ಉತ್ತರ ನೀಡಿದರು. ಇದನ್ನು ಪ್ರಿಯಾಂಕಾ ಉಪೇಂದ್ರ ಅಲ್ಲಗಳೆದರು.

ಮನೆಯಲ್ಲಿ ಯಾರು ಡೈರೆಕ್ಟರ್​ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರಿಯಾಂಕಾ ಕೊಟ್ಟ ಉತ್ತರ ವಿಶೇಷವಾಗಿತ್ತು. ‘ನಮ್ಮ ಮನೆಯಲ್ಲಿ ಡೈರೆಕ್ಟರ್​ ಅಂತ ಯಾರೂ ಇಲ್ಲ. ನಮ್ಮದು ಜಾಯಿಂಟ್​ ಪ್ರೊಡಕ್ಷನ್​. ನಮ್ಮ ಪಾತ್ರಗಳೂ​ ಬದಲಾಗುತ್ತಲೇ ಇರುತ್ತವೆ’ ಎಂದರು ಅವರು.

ಉಪ್ಪಿ ಸರ್​ ಆನ್​ ಸ್ಕ್ರೀನ್​ನಲ್ಲಿ​ ಬಹಳವೇ ರೊಮ್ಯಾಂಟಿಕ್​, ಆಫ್ ಸ್ಕ್ರೀನ್​ನಲ್ಲಿ ಅವರು ಎಷ್ಟು ರೊಮ್ಯಾಂಟಿಕ್? ಎಂದು ಪ್ರಿಯಾಂಕಾ ಮುಂದೆ ಪ್ರಶ್ನೆ ಇಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂತ ಅವರು ಹೇಳಿದ್ದಾರೆ. ಹೀಗಿರುವಾಗ ರೊಮ್ಯಾಂಟಿಕ್​ ಎಲ್ಲಿಂದ ಬಂತು? ಯಶ್​ ಅವರು ಇಂದಿಗೂ ‘ಉಪೇಂದ್ರ ಅವರನ್ನು ಹೇಗೆ ಮದುವೆ ಆದ್ರಿ? ಅವರಿಗೆ  ಏನ್ ಮೋಡಿ​ ಮಾಡಿದ್ರಿ ಅಂತ ಕೇಳ್ತಾರೆ. ಉಪೇಂದ್ರ ಅವರು ಮದುವೆಯನ್ನೇ ಆಗಲ್ಲ ಎಂದು ಯಶ್​ ಭಾವಿಸಿದ್ದರಂತೆ’ ಎಂದರು ಪ್ರಿಯಾಂಕಾ.

ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

ನನಗೆ ಸುಕೃತಾ ಜತೆ ಮದುವೆ ಫಿಕ್ಸ್​ ಆಗಿದೆ ಎಂದ ಬಿಗ್​ ಬಾಸ್​ ಶೈನ್ ಶೆಟ್ಟಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು