Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

Bigg Boss Kannada Season 9 | BBK 9 Runner Up: ಹಲವು ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್​ ಅಡಿಗ ಅವರು ಫೇವರಿಟ್​ ಆಗಿದ್ದರು. ಅವರೇ ವಿನ್ನರ್​ ಆಗುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ.

Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​
ರಾಕೇಶ್ ಅಡಿಗ
Follow us
| Updated By: ಮದನ್​ ಕುಮಾರ್​

Updated on: Jan 01, 2023 | 12:28 AM

ಸಖತ್​ ಕಲರ್​ಫುಲ್​ ಆಗಿ ನಡೆದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋಗೆ ತೆರೆ ಬಿದ್ದಿದೆ. 100 ದಿನಗಳ ಏಳು-ಬೀಳಿನ ಪಯಣ ಮುಕ್ತಾಯ ಆಗಿದೆ. ಫಿನಾಲೆಯ ಅಂತಿಮ ಘಟ್ಟದಲ್ಲಿ ರಾಕೇಶ್​ ಅಡಿಗ (Rakesh Adiga) ಮತ್ತು ರೂಪೇಶ್​ ಶೆಟ್ಟಿ ನಡುವೆ ಹಣಾಹಣಿ ನಡೆಯಿತು. ಅಂತಿಮವಾಗಿ ರೂಪೇಶ್​ ಶೆಟ್ಟಿ ಅವರು ಬಿಗ್​ ಬಾಸ್​ ವಿನ್ನರ್​ (Bigg Boss Kannada Winner) ಆಗಿ ಹೊರಹೊಮ್ಮಿದರು. ರನ್ನರ್​ ಅಪ್​ ಸ್ಥಾನಕ್ಕೆ ರಾಕೇಶ್​ ಅಡಿಗ ತೃಪ್ತಿಪಟ್ಟುಕೊಂಡರು. ಕಿಚ್ಚ ಸುದೀಪ್​ ಅವರು ಸಖತ್​ ಎನರ್ಜಿಟಿಕ್​ ಆಗಿ ಫಿನಾಲೆ (Bigg Boss Finale) ಎಪಿಸೋಡ್​ ನಡೆಸಿಕೊಟ್ಟರು. ಪ್ರತಿ ಬಾರಿಯೂ ವಿನ್ನರ್​ ಆಯ್ಕೆಯ ವಿಚಾರದಲ್ಲಿ ಒಂದು ವರ್ಗದ ಪ್ರೇಕ್ಷಕರಿಗೆ ಬೇಸರ ಆಗುವುದು ಖಂಡಿತ. ಅದು ಈ ಬಾರಿ ಕೂಡ ಮುಂದುವರಿದಿದೆ. ರಾಕೇಶ್​ ಗೆಲ್ಲಬೇಕು ಎಂಬುದು ಅನೇಕರ ಬಯಕೆ ಆಗಿತ್ತು. ಅಂಥವರಿಗೆ ನಿರಾಸೆ ಆಗಿದೆ.

ರಾಕೇಶ್​ ಅಡಿಗ ಅವರು ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ನಲ್ಲಿ ಸ್ಪರ್ಧಿಸಿದರು. ಅಲ್ಲಿ ಉತ್ತಮ ಪರ್ಫಾರ್ಮೆನ್ಸ್​ ನೀಡಿ ಟಿವಿ ಸೀಸನ್​ಗೆ ಎಂಟ್ರಿ ಪಡೆದರು. ಎಲ್ಲರ ಜೊತೆಗೂ ಅವರು ಸ್ನೇಹ ಬೆಳೆಸಿದರು. ಯಾರೋ ಒಬ್ಬರ ಜೊತೆ ಮಾತ್ರ ಆಪ್ತವಾಗುವ ತಪ್ಪನ್ನು ಅವರು ಮಾಡಲಿಲ್ಲ. ಹಾಡುಗಳ ಮೂಲಕವೂ ಅವರು ಮನರಂಜನೆ ನೀಡಿದರು. ಎಲ್ಲ ಸಂದರ್ಭವನ್ನೂ ಕೂಲ್​ ಆಗಿ ನಿಭಾಯಿಸಿದರು. ಜಗಳಗಳು ನಡೆದರೂ ಕೂಡ ಅದನ್ನು ದ್ವೇಷದ ಹಂತಕ್ಕೆ ತೆಗೆದುಕೊಂಡು ಹೋಗಲಿಲ್ಲ.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ

ಇದನ್ನೂ ಓದಿ
Image
Roopesh Shetty: ‘ಬಿಗ್​ ಬಾಸ್​ನಿಂದ ಹೊರಬಂದು ಸಾನ್ಯಾನ ತಬ್ಬಿಕೊಂಡು ಈ ವಿಚಾರ ಫಸ್ಟ್​ ಕೇಳ್ತೀನಿ’: ರೂಪೇಶ್​ ಶೆಟ್ಟಿ ಮನದ ಮಾತು
Image
Bigg Boss Finale: ಬಿಗ್​ ಬಾಸ್​ ಫಿನಾಲೆಗಾಗಿ ವಿಶೇಷ ಗೆಟಪ್​ನೊಂದಿಗೆ ಕ್ಯಾಮೆರಾ ಮುಂದೆ ಬಂದ ರಾಕೇಶ್​ ಅಡಿಗ
Image
BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​
Image
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ

ಈ ಎಲ್ಲ ಕಾರಣಗಳಿಂದಾಗಿ ವೀಕ್ಷಕರಿಗೆ ರಾಕೇಶ್​ ಅಡಿಗ ಅವರು ಫೇವರಿಟ್​ ಆಗಿದ್ದರು. ಅವರೇ ವಿನ್ನರ್​ ಆಗುತ್ತಾರೆ ಎಂದು ಇತರೆ ಸ್ಪರ್ಧಿಗಳು ಕೂಡ ನಿರೀಕ್ಷಿಸಿದ್ದರು. ಆದರೆ ಅಂತಿಮವಾಗಿ ರೂಪೇಶ್​ ಶೆಟ್ಟಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ. ಒಟ್ಟಿನಲ್ಲಿ ಇಬ್ಬರೂ ಕೂಡ ಜನಮನ ಗೆದ್ದಿದ್ದಾರೆ. ಇದು ಅವರಿಬ್ಬರ ಸಿನಿಮಾ ಜರ್ನಿಗೆ ಹೊಸ ಮೈಲೇಜ್​ ನೀಡಲಿದೆ. 2ನೇ ರನ್ನರ್​ ಅಪ್​ ಸ್ಥಾನಕ್ಕೆ ದೀಪಿಕಾ ದಾಸ್​ ಹಾಗೂ 3ನೇ ರನ್ನರ್​ ಅಪ್ ಸ್ಥಾನಕ್ಕೆ ರೂಪೇಶ್​ ರಾಜಣ್ಣ ಅವರು ಅವರು ತೃಪ್ತಿಪಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ

ಚಿತ್ರರಂಗದಲ್ಲಿ ರಾಕೇಶ್​ ಅಡಿಗ ಅವರು ಅನೇಕ ವರ್ಷಗಳಿಂದ ಇದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದಾರೆ. ಬಿಗ್​ ಬಾಸ್​ಗೆ ಕಾಲಿಟ್ಟ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ರಾಕೇಶ್​ ಅಡಿಗ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ತಿಳಿಯಲು ಈ ರಿಯಾಲಿಟಿ ಶೋ ಸಹಕಾರಿ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್