AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

38 ವರ್ಷ ಕಳೆದರೂ ‘ರಾಮಾಯಣ’ ಧಾರಾವಾಹಿ ದಾಖಲೆ ಯಾರೂ ಮುರಿದಿಲ್ಲ; ಇಲ್ಲಿದೆ ಲೆಕ್ಕ

ಎಷ್ಟೇ ವರ್ಷಗಳು ಕಳೆದರೂ ರಾಮಾಯಣದ ಬಗ್ಗೆ ಜನರಿಗೆ ಇರುವ ಆಸಕ್ತಿ ಕಡಿಮೆ ಆಗುವುದಿಲ್ಲ. ಎಂಥೆಂಥಾ ಶೋಗಳು ಬಂದರೂ ‘ರಾಮಾಯಣ’ವನ್ನು ಹಿಂದಿಕ್ಕಲು ಯಾವುದಕ್ಕೂ ಸಾಧ್ಯವಾಗಿಲ್ಲ. ಬಿಬಿಸಿ ವರದಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಟಿಆರ್​ಪಿ ಪಡೆದ ಧಾರಾವಾಹಿ ಇದು. 38 ವರ್ಷ ಕಳೆದರೂ ಕೂಡ ಆ ದಾಖಲೆ ಹಾಗೆಯೇ ಇದೆ.

38 ವರ್ಷ ಕಳೆದರೂ ‘ರಾಮಾಯಣ’ ಧಾರಾವಾಹಿ ದಾಖಲೆ ಯಾರೂ ಮುರಿದಿಲ್ಲ; ಇಲ್ಲಿದೆ ಲೆಕ್ಕ
Arun Govil, Deepika Chikhalia
ಮದನ್​ ಕುಮಾರ್​
|

Updated on: May 04, 2025 | 12:02 PM

Share

ಭಾರತದಲ್ಲಿ ಕಿರುತೆರೆ ಬಿಸ್ನೆಸ್ ತುಂಬ ದೊಡ್ಡದು. ಪ್ರತಿ ದಿನ ಕೋಟ್ಯಂತರ ಮಂದಿ ಮನೆಯಲ್ಲಿ ಕುಳಿತು ಧಾರಾವಾಹಿ (TV Serial) ನೋಡುತ್ತಾರೆ. ಜನರನ್ನು ಸೆಳೆದುಕೊಳ್ಳಲು ಸೀರಿಯಲ್ ತಂಡಗಳು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತವೆ. ವೀಕ್ಷಕರನ್ನು ಸೆಳೆಯಲು ಹೊಸ ಹೊಸ ಸೀರಿಯಲ್​ಗಳು ಬರುತ್ತಲೇ ಇವೆ. ಆದರೆ ಆ ಯಾವ ಧಾರಾವಾಹಿಗಳು ಕೂಡ ‘ರಾಮಾಯಣ’ (Ramayan) ಮಾಡಿದ ದಾಖಲೆಯನ್ನು ಮುರಿಯಲು ಸಾಧ್ಯವಾಗುತ್ತಿಲ್ಲ! ಹೌದು, ‘ರಾಮಾಯಣ’ ಸೀರಿಯಲ್ ಪ್ರಸಾರವಾಗಿ 38 ವರ್ಷಗಳು ಕಳೆದಿದ್ದರೂ ಸಹ ಅದರ ಟಿಆರ್​ಪಿ (Ramayan TRP) ಹಿಂದಿಕ್ಕಲು ಬೇರೆ ಯಾವುದೇ ಧಾರಾವಾಹಿಗೆ ಸಾಧ್ಯವಾಗಿಲ್ಲ.

ರಮಾನಂದ್ ಸಾಗರ್ ಅವರು ‘ರಾಮಾಯಣ’ ಧಾರಾವಾಹಿಗೆ ನಿರ್ದೇಶನ ಮಾಡಿದ್ದರು. 1987ರ ಜನವರಿ 25ರಿಂದ 1988ರ ಜುಲೈ 31ರ ತನಕ ಈ ಧಾರಾವಾಹಿ ಪ್ರಸಾರ ಆಯಿತು. ಅರುಣ್ ಗೋವಿಲ್ ಅವರು ರಾಮನಾಗಿ ನಟಿಸಿದರು. ದೀಪಿಕಾ ಚಿಕ್ಲಿಯಾ ಅವರು ಸೀತೆಯ ಪಾತ್ರ ಮಾಡಿದರು. ಲಕ್ಷ್ಮಣನಾಗಿ ಸುನಿಲ್ ಲಹರಿ ಕಾಣಿಸಿಕೊಂಡರು. ಅರವಿಂದ್ ತ್ರಿವೇದಿ ಅವರು ರಾವಣನ ಪಾತ್ರಕ್ಕೆ ಜೀವ ತುಂಬಿದರು. ಆಂಜನೇಯನಾಗಿ ಧಾರಾ ಸಿಂಗ್ ಮಿಂಚಿದರು. ಕಿರುತೆರೆ ವೀಕ್ಷಕರು ಈ ಧಾರಾವಾಹಿಯನ್ನು ಸಖತ್ ಇಷ್ಟಪಟ್ಟರು.

‘ರಾಮಾಯಣ’ ಧಾರಾವಾಹಿಯ ಒಟ್ಟು ಎಪಿಸೋಡ್​ಗಳ ಸಂಖೆ 78. ‘ಬಿಬಿಸಿ’ ವರದಿಯ ಪ್ರಕಾರ, 66 ಕೋಟಿ ಜನರು ಈ ಧಾರಾವಾಹಿ ವೀಕ್ಷಿಸಿದ್ದಾರೆ. ಮೊದಲ ಬಾರಿ ಪ್ರಸಾರ ಆದಾಗ ಹಾಗೂ ಮರು ಪ್ರಸಾರ ಆದಾಗ ಸೇರಿ ಭಾರಿ ಸಂಖ್ಯೆಯ ವೀಕ್ಷಕರು ಈ ಸೀರಿಯಲ್ ನೋಡಿದರು. ಇಂದ್ರಜಿತ್-ಲಕ್ಷ್ಮಣನ ನಡುವಿನ ಯುದ್ಧದ ಸಂಚಿಕೆ ಬರೋಬ್ಬರಿ 77 ಟಿವಿಆರ್ (ಟಿಆರ್​ಪಿ) ಪಡೆದಿತ್ತು! ಇದು ಭಾರತದ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು!

ಇದನ್ನೂ ಓದಿ
Image
ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
Image
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
Image
ಸಿಹಿಯ ಆತ್ಮ ಹಿಡಿದುಕೊಂಡ ಅಘೋರಿ; ಪ್ರಯಾಗ್​ರಾಜ್​​ನಲ್ಲಿ ‘ಸೀತಾ ರಾಮ’ ತಂಡ
Image
ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ನಟ

ಇದನ್ನೂ ಓದಿ: ರಾಮಾಯಣ ಸಿನಿಮಾಗೆ ಶೂಟಿಂಗ್ ಆರಂಭಿಸಿದ ರಾಕಿಂಗ್ ಸ್ಟಾರ್​ ಯಶ್

‘ರಾಮಾಯಣ’ಕ್ಕೆ ಹೋಲಿಸಿದರೆ ‘ಮಹಾಭಾರತ’ ಸೀರಿಯಲ್ 22.9 ಟಿಆರ್​ಪಿ ಪಡೆದಿತ್ತು. ನಾಗಿನ್ ಹಾಗೂ ಬಿಗ್ ಬಾಸ್ ಶೋನಗಳು 10ರಿಂದ 12 ಟಿಆರ್​ಪಿ ಪಡೆದವು. ‘ಕ್ಯೂ ಕಿ ಸಾಸ್ ಬಿ ಕಭಿ ಬಹೂ ಥಿ’ ಧಾರಾವಾಹಿ 22.4 ಟಿಆರ್​ಪಿ ಪಡೆಯಿತು. ಆದರೆ ಈ ಯಾವ ಶೋಗಳು ಕೂಡ ‘ರಾಮಾಯಣ’ದ ದಾಖಲೆಯನ್ನು ಮುರಿಯಲು ಸಾಧ್ಯವಾಗಲೇ ಇಲ್ಲ.

ಬೇಸರದ ಸಂಗತಿ ಏನೆಂದರೆ, ‘ರಾಮಾಯಣ’ ಧಾರಾವಾಹಿಗೆ ಇಷ್ಟೆಲ್ಲ ಜನಪ್ರಿಯತೆ ಸಿಕ್ಕರೂ ಕೂಡ ಅದರಲ್ಲಿ ನಟಿಸಿದ ಕಲಾವಿದರಿಗೆ ನಿರೀಕ್ಷಿತ ಪ್ರಮಾಣದ ಸಕ್ಸಸ್ ಸಿಗಲಿಲ್ಲ. ‘ರಾಮಾಯಣ’ ಸೀರಿಯಲ್​ನಲ್ಲಿ ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ ಮುಂತಾದವರು ಮಿಂಚಿದರೂ ಕೂಡ ನಂತರದ ಪ್ರಾಜೆಕ್ಟ್​ಗಳಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಯಾಕೆಂದರೆ, ಅವರನ್ನು ಬೇರೆ ಪಾತ್ರಗಳಲ್ಲಿ ನೋಡಲು ಜನರು ಇಷ್ಟಪಡಲಿಲ್ಲ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ