AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಣಿ’ ಧಾರಾವಾಹಿಯಲ್ಲಿ ಮಹತ್ವದ ತಿರುವು; ಅಕ್ಷರ ಲೋಕಕ್ಕೆ ಕಾಲಿಟ್ಟ ರಾಣಿ

ಕಲರ್ಸ್ ಕನ್ನಡದ 'ರಾಣಿ' ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಜೈಲಿನಲ್ಲಿ ಹುಟ್ಟಿ ಶಿಕ್ಷಣದಿಂದ ವಂಚಿತಳಾಗಿದ್ದ ರಾಣಿ, ಈಗ ಅವಳು ಶಾಲೆ ಮೆಟ್ಟಿಲೇರಿದ್ದಾಳೆ. ಸಾಮಾಜಿಕ ವ್ಯಂಗ್ಯ ಹಾಗೂ ಕೌಟುಂಬಿಕ ವಿರೋಧಗಳನ್ನು ಮೆಟ್ಟಿ ನಿಂತು, ‘ಕಲಿಯಲು ವಯಸ್ಸಿನ ಹಂಗಿಲ್ಲ’ ಎಂಬ ಸಂದೇಶ ನೀಡುವ ಮೂಲಕ, ಸಂಸಾರದ ನೊಗ ಹೊತ್ತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ.

‘ರಾಣಿ’ ಧಾರಾವಾಹಿಯಲ್ಲಿ ಮಹತ್ವದ ತಿರುವು; ಅಕ್ಷರ ಲೋಕಕ್ಕೆ ಕಾಲಿಟ್ಟ ರಾಣಿ
ರಾಣಿ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 05, 2026 | 2:57 PM

Share

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ‘ರಾಣಿ’ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಸಂಸಾರದ ಜಗಳ, ಕೌಟುಂಬಿಕ ಬಿಕ್ಕಟ್ಟುಗಳಿಗೆ ಬಹುತೇಕ ಧಾರಾವಾಹಿಗಳು ಸೀಮಿತ ಆಗಿರುತ್ತವೆ. ಆದರೆ, ‘ರಾಣಿ’ ಧಾರಾವಾಹಿ ಆ ರೀತಿ ಅಲ್ಲ. ಯಾವುದೋ ಅನಿವಾರ್ಯ ಕಾರಣಕ್ಕೆ ಬಾಲ್ಯದಲ್ಲಿ ಮೊಟಕಾಗಿದ್ದ ಅವಳ ಶಿಕ್ಷಣದ ಕನಸಿಗೆ ಈಗ ಜೀವ ಬಂದಿದೆ.

ರಾಣಿ ಹುಟ್ಟಿದ್ದು ಜೈಲಿನಲ್ಲಿ. ಅಲ್ಲಿ ಆಕೆ ಶಿಕ್ಷಣ ಪಡೆದಿದ್ದಳು. ಹೊರ ಬಂದ ಬಳಿಕ ಶಿಕ್ಷಣ ನಿಲ್ಲಿಸಿದ್ದಳು. ಈಗ ಹಳೆಯ ಕಹಿ ನೆನಪುಗಳನ್ನು ಮರೆತು ಮತ್ತೆ ಅಕ್ಷರ ಲೋಕಕ್ಕೆ ಮರಳುತ್ತಿದ್ದಾಳೆ. ಇತರ ವಿದ್ಯಾರ್ಥಿಗಳ ಜೊತೆಗೂಡಿ ಬೆಂಚಿನ ಮೇಲೆ ಕುಳಿತು ಪಾಠ ಕಲಿಯಲು ನಿರ್ಧರಿಸಿರುವ ಅವಳ ಧೈರ್ಯ ಮೆಚ್ಚುವಂತದ್ದು. ಸಮವಸ್ತ್ರ ಧರಿಸಿ ಶಾಲಾ ಬಾಲಕಿಯಂತೆ ಕಾಣಿಸಿಕೊಂಡಿರುವ ರಾಣಿಯ ಈ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಆದರೆ ರಾಣಿಯ ಈ ಸಾಹಸಕ್ಕೆ ಮನೆಯೊಳಗೆ ವಿರೋಧದ ಅಲೆ ಎದ್ದಿದೆ. ‘ಈ ವಯಸ್ಸಿನಲ್ಲಿ ಓದು ಬೇಕೆ?’ ಎಂಬ ವ್ಯಂಗ್ಯದ ಮಾತುಗಳು ಹಾಗೂ ಸರಳಾಳಂತಹ ಪಾತ್ರಗಳ ಕುತಂತ್ರಗಳು ಅವಳಿಗೆ ಅಡ್ಡಿಯಾಗುತ್ತಿವೆ. ಈ ಎಲ್ಲಾ ಸಾಮಾಜಿಕ ಮುಜುಗರ ಹಾಗೂ ಟೀಕೆಗಳನ್ನು ಕಡೆಗಣಿಸಿ, “ಕಲಿಯಲು ವಯಸ್ಸಿನ ಹಂಗಿಲ್ಲ” ಎಂಬ ಸಂದೇಶದೊಂದಿಗೆ ಅವಳು ಶಾಲೆಯ ಮೆಟ್ಟಿಲೇರಿದ್ದಾಳೆ. ಶಾಲಾ ಜೀವನದ ಮೊದಲ ಅನುಭವಗಳು ಈ ವಾರದ ಕಥಾಹಂದರದ ಪ್ರಮುಖ ಆಕರ್ಷಣೆಯಾಗಿವೆ.

ಹೊಸ ಪರಿಸರದಲ್ಲಿ ಶಿಕ್ಷಕರ ಪ್ರತಿಕ್ರಿಯೆ ಮತ್ತು ಸಹಪಾಠಿಗಳ ವರ್ತನೆ ರಾಣಿಯ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿ ಸಂಗತಿ. ಮಕ್ಕಳ ನಡುವೆ ಕುಳಿತು ಪಾಠ ಕೇಳುವಾಗ ಅವಳು ಪಡುವ ಸಂಕೋಚ ಮತ್ತು ಆನಂದದ ಕ್ಷಣಗಳು ವೀಕ್ಷಕರನ್ನು ಭಾವುಕರಾಗಿಸುವ ಸಾಧ್ಯತೆ ಇದೆ. ಇದು ಕೇವಲ ಓದು-ಬರಹ ಕಲಿಯುವ ಪ್ರಯತ್ನವಲ್ಲ, ಬದಲಾಗಿ ಕಳೆದುಹೋದ ತನ್ನ ಅಸ್ಮಿತೆಯನ್ನು ಹುಡುಕುವ ಪಯಣವಾಗಿದೆ.

ಇದನ್ನೂ ಓದಿ: ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’

ಈ ಬದಲಾವಣೆಯು ಸಮಾಜದ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿ ನೀಡುವಂತಿದೆ. ಸಂಸಾರದ ನೊಗ ಹೊತ್ತು ತಮ್ಮ ಆಕಾಂಕ್ಷೆಗಳನ್ನು ಮರೆತ ಹೆಣ್ಣುಮಕ್ಕಳಿಗೆ ರಾಣಿ ಈಗ ಮಾದರಿಯಾಗಿದ್ದಾಳೆ. ಅಡೆತಡೆಗಳನ್ನು ಮೆಟ್ಟಿ ನಿಂತು ರಾಣಿ ಜ್ಞಾನದ ಶಿಖರ ಏರುತ್ತಾಳಾ? ಶಾಲಾ ಆವರಣದಲ್ಲಿ ಅವಳಿಗೆ ಎದುರಾಗುವ ಸವಾಲುಗಳು ಮುಂದಿನ ದಿನಗಳಲ್ಲಿ ಹೈಲೈಟ್ ಆಗಲಿವೆ. ‘ರಾಣಿ’ ಧಾರಾವಾಹಿ ಪ್ರತಿ ದಿನ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 am, Tue, 5 May 26

Follow Us
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ